Friday, November 28, 2014

ಆರ್ಯ ಸಮಾಜದ ವಿರುದ್ಧ ಬಂಡೆದ್ದ ಸ್ವಘೋಷಿತ ಸಂತ ರಾಮ್ ಪಾಲ್

ಈ ದೇಶ ಸ್ವ ಘೋಷಿತ ದೇವಮಾನವರಿಂದ ಗಬ್ಬೆದ್ದು ಹೋಗಿದೆ. ಇಲ್ಲಿ ಹಲವು ಮೊಕದ್ದಮೆಗಳನ್ನು, ಆರೋಪಗಳನ್ನು ಹೊತ್ತ ಬಾಬ ರಾಮ ದೇವ್ ನಂತಹ ಕಪಟ ರಾಜಕೀಯ ಸನ್ಯಾಸಿಗಳಿಗೆ ಸರಕಾರದ ವತಿಯಿಂದ ವಿಶೇಷ ಭದ್ರತೆ ನೀಡಲಾಗುತ್ತದೆ. ಅತ್ಯಾಚಾರ ಆರೋಪಿ ಸ್ವಾಮೀಜಿಗಳನ್ನು ರಕ್ಷಿಸಲು ನ್ಯಾಯಾಂಗವನ್ನೆ ದುರ್ಬಳಕೆ ಮಾಡಲಾಗುತ್ತದೆ. ಆದರೆ ಇವುಗಳ ನಡುವೆಯೂ ಹಿಸ್ಸಾರ್ ನ ದೇವ ಮಾನವ ರಾಮ್ ಪಾಲ್ ವಿರುದ್ಧ ಸರಕಾರ ಸೇನೆಯನ್ನು ಬಳಸಿ ಅವನನ್ನು ಜೈಲಿಗೆ ತಳ್ಳಿತು. ಇಂತಹ ದಿಟ್ಟ ನಿಲುವನ್ನು ಸರಕಾರ ತಳೆಯೂದಕ್ಕೆ ಹೇಗೆ ಸಾಧ್ಯವಾಯಿತು? ಈ ಕಾರ್ಯಾಚರಣೆಯ ಹಿಂದೆ ಯಾರಿದ್ದಾರೆ ? ಎನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ, ನಮಗೆ ಎದುರಾಗೋದು ರಾಮ್ ಪಾಲ್ ಮತ್ತು ಆರೆಸ್ಸೆಸ್ ನಡುವಿನ ಶೀತಲ ಸಮರ. ಆರ್ಯ ಸಮಾಜವನ್ನು ರಾಮ್ ಪಾಲ್ ಎದುರು ಹಾಕಿಕೊಂಡ ಒಂದೇ ಕಾರಣಕ್ಕೆ, ಆತನನ್ನು ಸರಕಾರ ಮಟ್ಟ ಹಾಕಲು ಯೋಚಿಸಿತು. ಆರ್ಯ ಸಮಾಜವನ್ನು ಎದುರು ಹಾಕಿಕೊಳ್ಳದೆ ಆರೆಸ್ಸೆಸ್ ಮೂಗಿನ ನೇರಕ್ಕೆ ತನ್ನ ಆಶ್ರಮವನ್ನು ಬೆಳೆಸಿದ್ದರೆ ರಾಂಪಾಲ್ ಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ? ರಾಮಪಾಲ್ ಮತ್ತು ಆರ್ಯ ಸಮಾಜದ ನಡುವಿನ ತಿಕ್ಕಾಟದ ಕುರಿತಂತೆ ಜಸ್ಪಾಲ್ ಸಿದ್ದು ಅವರು ಬರೆದಿರುವ ಲೇಖನ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಸ್ವಘೋಷಿತ ದೇವಮಾನವ ರಾಮ್ ಪಾಲ್ ಬಂಧನದ ಇನ್ನೊಂದು ಮುಖವನ್ನು ಈ ಲೇಖನ ಹೇಳುತ್ತದೆ. 
 
ಲೇಖಕ-ಜಸ್ಪಾಲ್ ಸಿದ್ದು

ಸ್ವಘೋಷಿತ ‘ದೇವಮಾನವ’, 63 ವರ್ಷ ವಯಸ್ಸಿನ ರಾಮ್‌ಪಾಲ್‌ನನ್ನು ಹಿಸ್ಸಾರ್‌ನ ಬರ್ವಾಲಾದಲ್ಲಿರುವ ಆತನ ಆಶ್ರಮದಿಂದ ಬಂಧಿಸುವುದರೊಂದಿಗೆ ಎರಡುವಾರಗಳಿಂದ ಭಾರೀಪ್ರಚಾರ ಪಡೆದಿದ್ದ, ಹರ್ಯಾಣ ಪೊಲೀಸರುವ್ ಯವಸ್ಥಿತವಾಗಿ ಹೆಣೆದಿದ್ದ ನಾಟಕಕ್ಕೆಅಂತಿಮ ತೆರೆಬಿದ್ದಿದೆ. ಆದರೆ ಈ ಘಟನೆಯು ಪ್ರಾಂತ್ಯದ ಜನತೆಯ ನಡುವಿನ ಸಾಮಾಜಿಕ ಹಾಗೂ ಧಾರ್ಮಿಕ ಅಂತರವನ್ನು ಇನ್ನಷ್ಟು ವಿಸ್ತರಿಸಿದೆ. ರಾಮ್‌ಪಾಲ್‌ರ ಸತ್‌ಲೋಕ್ ಅಶ್ರಮದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯು ಐವರು ಮಹಿಳೆಯರು ಹಾಗೂ ಒಂದು ಮಗುವಿನ ಪ್ರಾಣವನ್ನು ಬಲಿಪಡೆದುಕೊಂಡಿದೆ. ಈ ಘಟನೆಯನ್ನು ವರದಿ ಮಾಡುತ್ತಿದ್ದ ಎರಡು ಡಜನ್‌ಗೂ ಅಧಿಕ ಪತ್ರಕರ್ತರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿ ರಾಮ್‌ಪಾಲ್ ನ್ಯಾಯಾಲಯದ ಮುಂದೆ ಹಾಜರಾಗಲು ಪದೇಪದೇ ನಿರಾಕರಿಸಿದ್ದರೆಂಬಕಾರಣಕ್ಕಾಗಿ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಿ, ಅವರ ಬಂಧನಕ್ಕೆ ಆದೇಶಿಸಿತ್ತು.
ಮಾಧ್ಯಮಗಳಲ್ಲಿ  ಪ್ರಕಟವಾದ ವಿಷಯಗಳಿಗಿಂತಲೂ ಹೆಚ್ಚಿನ ಒಳಸುಳಿಗಳು ಬಾರ್ವಾಲಾ ಘಟನೆಯ ಹಿಂದೆ ಅಡಗಿದೆ. ಆರ್ಯಜನಾಂಗೀಯ ಹಾಗೂ ಆರ್ಯೇತರರೆಂದು ಭಾರತೀಯರನ್ನು ವಿಭಜಿಸುವ ಸಂಘಪರಿವಾರದ ಸಿದ್ಧಾಂತವನ್ನು ರಾಮ್‌ಪಾಲ್ ತಿರಸ್ಕರಿಸಿದ್ದರು.ಬರ್ವಾಲಾ ಘಟನೆಯ ಹಿಂದಿರುವ ಮೂಲಕಾರಣಕ್ಕೆ ಕನಿಷ್ಠ ಒಂದೂವರೆ ಶತಮಾನದ (150 ವರ್ಷ) ಇತಿಹಾಸವಿದೆ. ಹರ್ಯಾಣವು ಪ್ರತ್ಯೇಕ ರಾಜ್ಯವಾಗುವ ಮುನ್ನ ಅದು ಪಂಜಾಬ್‌ನ ಒಂದು ಭಾಗವೇ ಆಗಿತ್ತು. ಆ ಕಾಲಘಟ್ಟದಲ್ಲಿ ಪಂಜಾಬ್‌ನಲ್ಲಿ ಆರ್ಯಸಮಾಜವು ಪ್ರಬಲವಾಗಿತ್ತು. ಆರ್ಯಸಮಾಜವು, ಏಕದೇವ ಸಿದ್ಧಾಂತವನ್ನು ಪ್ರತಿಪಾದಿಸುವ ಇತರ ಎಲ್ಲಾಧರ್ಮಗಳನ್ನು ದೂಷಿಸುತ್ತಿತ್ತು. ಆರ್ಯಸಮಾಜದ ಸ್ಥಾಪಕ ದಯಾನಂದಸರಸ್ವತಿ 1870ರಲ್ಲಿ ಪಂಜಾಬ್‌ಗೆ ಆಗಮಿಸಿ, ಆರ್ಯಸಮಾಜದ ಸಿದ್ಧಾಂತಗಳನ್ನು ಪ್ರಚಾರಮಾಡಿದರು. ಅವರು ವೇದ,ಶಾಸಗಳಲ್ಲಿ ನಂಬಿಕೆಯಿಡದ ಜೈನ, ಬೌದ್ಧ ಹಾಗೂ ಸಿಖ್ಖ್ ಮತ್ತಿತರ ಧರ್ಮಗಳನ್ನು ಪ್ರಬಲವಾಗಿ ಖಂಡಿಸುತ್ತಿದ್ದರು. ಈ ಧರ್ಮಗಳು ತಮ್ಮ ವಿಚಾರಗಳನ್ನು ಬೋಧಿಸಲು ಸ್ಥಳೀಯ ಭಾಷೆಗಳನ್ನು ಬಳಸಿರುವುದನ್ನೂ ಅವರು ಹೀಗಳೆದಿದ್ದರು. ವೇದಗಳ ಶ್ರೇಷ್ಠತೆಯನ್ನು ಸಾರುತ್ತಿದ್ದ ದಯಾನಂದ ಸರಸ್ವತಿಯವರು ಸಂಸ್ಕೃತವೊಂದೇ ಅಧ್ಯಾತ್ಮ, ತತ್ವ ಶಾಸ್ತ್ರ ಹಾಗೂ ಉನ್ನತವಾದ ಚಿಂತನೆಗಳ ಪ್ರಸಾರಕ್ಕೆ ಸಮರ್ಥವಾದ ಭಾಷೆಯೆಂದು ಪ್ರತಿಪಾದಿಸುತ್ತಿದ್ದರು. 1875ರಲ್ಲಿ ಸ್ವಾಮಿದಯಾನಂದಸರಸ್ವತಿ ‘ಸತ್ಯಾರ್ಥಪ್ರಕಾಶ’ ಗ್ರಂಥವನ್ನುಪ್ರಕಟಿಸಿದರು.ಈ ಕೃತಿಯಲ್ಲಿ ಅವರು ಗುರುನಾನ್‌ಕರನ್ನು ಕಟುವಾಗಿ ನಿಂದಿಸಿದ್ದಾರೆ ಹಾಗೂ ಆತ ಓರ್ವಧೂರ್ತನೆಂದು ಟೀಕಿಸಿದ್ದಾರೆ. ಸಿಖ್ಖರ ಪರಮಪವಿತ್ರ ಧಾರ್ಮಿಕಗ್ರಂಥ ‘ಗುರುಗ್ರಂಥಸಾಹೇಬ್’ ಸುಳ್ಳುಗಳಿಂದ ಕೂಡಿದೆಯೆಂದು ಅವರು ದೂಷಿಸಿದ್ದರು ಮತ್ತುಸಿಖ್ ಧರ್ಮದ ನಂಬಿಕೆಗಳನ್ನು ಅವರು ಟೀಕಿಸಿದ್ದರು. ದಯಾನಂದ ಅವರಸಿಖ್ಖ್ ಧರ್ಮನಿಂದನೆಯು, ಆರ್ಯಸಮಾಜದ ಬೆಂಬಲಿಗರು ಹಾಗೂಸಿಖ್ಖ್ ಧರ್ಮೀಯರ ನಡುವೆ ಘರ್ಷಣೆಗೆ ಕಾರಣವಾಯಿತು. ಆರ್ಯಸಮಾಜದ ಬೆಂಬಲಿಗರಲ್ಲಿ ಹೆಚ್ಚಿನವರು ಮೇಲ್ಜಾತಿಯ ಹಿಂದುಗಳಾಗಿದ್ದು ಅವರಲ್ಲಿ ಅನೇಕ ಮಂದಿ ಲಾಹೋರ್ ಮತ್ತು ಅಮೃತಸರಗಳಲ್ಲಿ ನೆಲೆಸಿರುವ ಉದ್ಯಮಿಗಳಾಗಿದ್ದರು.ಸಿಖ್ಖರುಹಾಗೂ ಅರ್ಯಸಮಾಜದ ಧಾರ್ಮಿಕಚಿಂತನೆಗಳನ್ನು ಬೆಂಬಲಿಸುತ್ತಿರುವ ಪಂಜಾಬಿ ಹಿಂದೂಗಳ ನಡುವಣ ಸಂಘರ್ಷವು ಈಗಲೂ ಮುಂದುವರಿದಿದೆ. ಇತ್ತೀಚಿನ ಪಂಜಾಬ್ ಸಮಸ್ಯೆ ಹಾಗೂ 1984ರಲ್ಲಿ ನಡೆದಸಿಖ್ ಹತ್ಯಾಕಾಂಡ ಸೇರಿದಂತೆ ವಿವಿಧಕಾಲ ಘಟ್ಟಗಳಲ್ಲಿ ಈ ಸಂಘರ್ಷವು ಅಭಿವ್ಯಕ್ತಗೊಂಡಿದೆ.
ಸಿಖ್ಖರ ಪವಿತ್ರಗ್ರಂಥ ಗುರುಗ್ರಂಥ ಸಾಹೇಬ್, ಸಂತ ಕಬೀರ್ ರಚಿಸಿದ ನೂರಕ್ಕೂ ಅಧಿಕ ದೋಹೆ (ದ್ವಿಪದಿ)ಗಳನ್ನು ಒಳಗೊಂಡಿದೆ. ವೇದಾಂತ ಹಾಗೂ ವೈಷ್ಣವಪಂಥವು ಪ್ರತಿಪಾದಿಸುವ ಜಾತಿವ್ಯವಸ್ಥೆ, ಮಡಿವಂತಿಕೆ ಹಾಗೂ ವೈರಾಗ್ಯವನ್ನು ಗುರುಗ್ರಂಥಸಾಹೇಬ್ ಬಲವಾಗಿ ವಿರೋಧಿಸುತ್ತದೆ.
1877-78ರಲ್ಲಿ ದಯಾನಂದ ಸರಸ್ವತಿ ಪಂಜಾಬ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಖ್ಖ್ ಧರ್ಮಕ್ಕೆ ಮತಾಂತರಗೊಂಡಿದ್ದ ಕ್ರೈಸ್ತರನ್ನು ಹಿಂದೂಧರ್ಮಕ್ಕೆ ಸೇರ್ಪಡೆಗೊಳಿಸಲು ಶುದ್ಧೀಕರಣ ಚಳವಳಿಯನ್ನು ಆರಂಭಿಸಿದರು. ಆನಂತರ ಅವರ ಉತ್ತರಾಕಾರಿಗಳು ಬಡಸಿಖ್ಖರನ್ನು ಸಾರ್ವಜನಿಕ ಸಮಾರಂಭಗಳಲ್ಲಿ ನೇರವಾಗಿ ಹಿಂದೂಧರ್ಮಕ್ಕೆ ಮತಾಂತರಿಸುವ ಕಾರ್ಯವನ್ನು ಆರಂಭಿಸಿದರು.ಆ ಮೂಲಕ ಆರ್ಯಸಮಾಜವು ಹಿಂದೂಗಳು ಹಾಗೂ ಸಿಕ್ಖರ ಬಾಂಧವ್ಯಗಳಿಗೆ ಶಾಶ್ವತವಾಗಿ ದ್ವೇಷದಬೀಜಗಳನ್ನು ಬಿತ್ತಿತು.
ರಾಮ್‌ಪಾಲ್‌ರನ್ನು ಅವರಶಿಷ್ಯರುಪೂಜ್ಯಭಾವನೆಯಿಂದಾಗಿ ‘ಸಂತ ರಾಮ್‌ಪಾಲ್’ ಎಂದುಕರೆಯುತ್ತಾರೆ. ಆರ್ಯಸಮಾಜದ ಯಜಮಾನಿಕೆಯ ಧೋರಣೆಯನ್ನು ಪ್ರಶ್ನಿಸುವ ಮೂಲಕ ರಾಮ್‌ಪಾಲ್ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ಆರೆಸ್ಸೆಸ್‌ನ ನಿಕಟಮಿತ್ರನಾದ ಆರ್ಯಸಮಾಜವು ಈಗಹರ್ಯಾಣದಲ್ಲಿ ಮುಖ್ಯಮಂತ್ರಿ ಮೋಹನ್‌ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರಕಾರದ ಮೇಲೆ ನೇರವಾದ ನಿಯಂತ್ರಣವನ್ನು ಹೊಂದಿದೆ. 1947ರಲ್ಲಿ ದೇಶವಿಭಜನೆಯಾದ ಬಳಿಕಆರೆಸ್ಸೆಸ್ ಸಿದ್ಧಾಂತವನ್ನು ವಸ್ತುಶಃ ಆರ್ಯಸಮಾಜವು ಒಪ್ಪಿಕೊಂಡು, ಸಂಘಪರಿವಾರದೊಂದಿಗೆವಿಲೀನಗೊಂಡಿತ್ತು.
25 ವರ್ಷಗಳಕಾಲ ರಾಮ್‌ಪಾಲ್ ಅವರು ಹಿಂದೂ ದೇವತೆಗಳಾದ ಹನುಮಾನ್ ಹಾಗೂ ಶ್ರೀಕೃಷ್ಣನ ಮಹಾಭಕ್ತರಾಗಿದ್ದರು. ಅವರು ತಾಸುಗಟ್ಟಲೆ ದೇವರಧ್ಯಾನದಲ್ಲಿ ನಿರತರಾಗಿರುತ್ತಿದ್ದರು ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಚಾಚೂತಪ್ಪದೆ ಆಚರಿಸುತ್ತಿದ್ದರು. ಆದರೆರಾಮ್‌ಪಾಲ್‌ಗೆ ಅವರು ಹಂಬಲಿಸುತ್ತಿದ್ದ ಅಧ್ಯಾತ್ಮಿಕ ಶಾಂತಿದೊರೆಯಲೇ ಇಲ್ಲ. ಆಗ ಅವರು ಹರ್ಯಾಣದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿದ್ದರು. ಈ ಸಮಯದಲ್ಲಿ ಅವರಿಗೆ 13ನೆ ಶತಮಾನದಲ್ಲಿ ಜೀವಿಸಿದ್ದ ಸಂತ, ಏಕದೇವವಾದವನ್ನು ಬೋಧಿಸಿದ ಕಬೀರನ ಭಕ್ತರಾದ, ಸ್ವಾಮಿರಾಮ್‌ ದೇವಾನಂದ ಅವರ ಪರಿಚಯವಾಯಿತು.
ಸ್ವಾಮಿ ರಾಮದೇವಾನಂದರ ವಿಚಾರಧಾರೆಗಳಿಂದ ರಾಮ್‌ಪಾಲ್ ಪ್ರಭಾವಿತರಾಗಿ, ಅವರ ಶಿಷ್ಯರಾದರು.1994ರಲ್ಲಿ ರಾಮದೇವಾನಂದರು ರಾಮ್‌ಪಾಲ್‌ಗೆ ಕಬೀರನ ಸಂದೇಶಗಳನ್ನು ಪ್ರಚಾರಪಡಿಸುವಂತೆ ಆದೇಶನೀಡಿದ ಹಿನ್ನೆಲೆಯಲ್ಲಿ ಅವರು ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು.
‘ದೇವಮಾನವ’ನಾಗಿ ರಾಮ್‌ಪಾಲ್‌ ಅವರ ಬಾಳ ಪಯಣವು ರೋಹ್ಟಕ್‌ನಿಂದ 15 ಕಿ.ಮೀ. ದೂರದಲ್ಲಿರುವ ಕರೊಂತಾ ಗ್ರಾಮದಲ್ಲಿರುವ 4 ಎಕರೆ ಜಮೀನಿನಲ್ಲಿ ಆರಂಭಗೊಂಡಿತು.ಈ ಪ್ರದೇಶದಲ್ಲಿಈಗಲೂ ಆರ್ಯಸಮಾಜದ ಪ್ರಭಾವವು ದಟ್ಟವಾಗಿದೆ.
ರಾಮ್‌ಪಾಲ್‌ರ ಬೋಧನೆಗಳಿಂದಾಗಿ ಸಹಜವಾಗಿಯೇ ಈ ಪ್ರದೇಶದಲ್ಲಿಕಬೀರ್ ಪಂಥವು ಚಿಗುರೊಡೆಯ ತೊಡಗಿತು. ಈ ಸನ್ನಿವೇಶದಲ್ಲಿ ರಾಮ್‌ಪಾಲ್‌ರ ಆಶ್ರಮ ಹಾಗೂ ಆರ್ಯ ಸಮಾಜದ ನಡುವೆ ನೇರಸಂಘರ್ಷ ಏರ್ಪಟ್ಟಿತು. ರಾಮ್‌ಪಾಲ್ ಹಾಗೂ ಆರ್ಯ ಸಮಾಜದ ಬೆಂಬಲಿಗರ ನಡುವೆ ಘರ್ಷಣೆಯಲ್ಲಿ 20 ವರ್ಷ ವಯಸ್ಸಿನ ಸೋನುಎಂಬ ಯುವಕ ಹತ್ಯೆಯಾದ. ಈ ಕೊಲೆಪ್ರಕರಣಕ್ಕೆ ಸಂಬಂಧಿಸಿ ರಾಮ್‌ಪಾಲ್ 18 ತಿಂಗಳು ಜೈಲಿನಲ್ಲಿಬೇಕಾಯಿತು.ಈಗಲೂ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. 2006ರಲ್ಲಿ ನಡೆದ ಈ ಕೊಲೆಪ್ರಕರಣದ ಬಳಿಕ ರಾಮ್‌ಪಾಲ್‌ ರಕಬೀರ್‌ಪಂಥ ಹಾಗೂಆರ್ಯ ಸಮಾಜದ ಬೆಂಬಲಿಗರ ನಡುವೆ ಹಲವು ಬಾರಿ ಘರ್ಷಣೆಗಳು ನಡೆದಿವೆ.ಈ ಸಂಘರ್ಷಗಳಿಂದಾಗಿ ಪ್ರದೇಶದ ಜನತೆಯ ನಡುವೆ ತೀವ್ರವಾದ ಸಾಮಾಜಿಕ ಹಾಗೂ ಧಾರ್ಮಿಕ ವಿಭಜನೆಉಂಟಾಗಿದೆ.
ವಿವಾಹಿತರಾದ ರಾಮ್‌ಪಾಲ್‌ಗೆ ಇಬ್ಬರುಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಇವರೆಲ್ಲರೂವಿವಾಹವಾಗಿದ್ದಾರೆ. ರಾಮ್‌ಪಾಲ್ ಅವರು ಕಬೀರ್ ಭಜನೆಗಳ ಗಾಯಕರಾಗಿ ಹರ್ಯಾಣದಲ್ಲಿ ಪ್ರವಾಸಮಾಡಿದ ಬಳಿಕ ಜನಪ್ರಿಯರಾದರೆಂದು ಅವರ ಅಧಿಕೃತ ವೆಬ್‌ಸೈಟ್ ಹೇಳಿಕೊಂಡಿದೆ. 1999ರಲ್ಲಿ ಸತ್ಲೋಕ್ ಅಶ್ರಮವನ್ನುಸ್ ಸ್ಥಾಪಿಸಿದ ಬಳಿಕ ರಾಮ್‌ಪಾಲ್‌ರ ಅನುಯಾಯಿಗಳ ಸಂಖ್ಯೆಯು ಹೆಚ್ಚಿತೆಂದು ವೆಬ್‌ಸೈಟ್ ಹೇಳಿದೆ.
ರಾಮ್‌ಪಾಲ್ ಅವರು  ದೇವದೇವತೆಗಳ ಅಸ್ತಿತ್ವವನ್ನು ಪ್ರಶ್ನಿಸಿದ್ದರು ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಪ್ರತಿಪಾದಿಸುವ ವಿಚಾರಗಳನ್ನು ಟೀಕಿಸುತ್ತಿದ್ದರು.
ತನ್ನ ಎಲ್ಲಾಪ್ರವಚನ ಸಭೆಗಳಲ್ಲಿ ರಾಮ್‌ಪಾಲ್ ಅಕ್ರಮಣಕಾರಿಯಾದ ರೀತಿಯ ಭಾಷೆಯನ್ನು ಬಳಸುತ್ತಿದ್ದರು. ಪುರಾತನಕಾಲದಲ್ಲಿ ಧಾರ್ಮಿಕಗ್ರಂಥಗಳ ವ್ಯಾಖ್ಯಾನವನ್ನು ಮಾಡಿರುವ ಗುರುಗಳು ಹಾಗೂ ಚಿಂತಕರು, ನಿಜವಾದ ಸತ್ಯವನ್ನು ಬಚ್ಚಿಟ್ಟಿದ್ದಾರೆಂದು ಹೇಳುತ್ತಿದ್ದರು. ದಲಿತರು, ಜಾಟ್‌ ಸಮದಾಯಕ್ಕೆ ಸೇರಿರದ ಹಿಂದುಳಿದವರ್ಗಗಳು ಸೇರಿದಂತೆ ಮೇಲ್ಜಾತಿಯಿಂದ ಶೋಷಿತರಾದ ಪಂಗಡಗಳವರು ರಾಮ್‌ಪಾಲ್ ಅವರ ಬೋಧನೆಗಳಿಂದ ಆಕರ್ಷಿತರಾಗಿದ್ದರು.
ಮಾನವರೆಲ್ಲರೂ ಒಂದೇಕುಲಕ್ಕೆ ಸೇರಿದವರು. ಹಿಂದೂ, ಮುಸ್ಲಿಂ, ಸಿಖ್ಖ್, ಕ್ರೈಸ್ತರೆಲ್ಲರೂ ಒಬ್ಬನೇ ಸೃಷ್ಟಿಕರ್ತನ ಮಕ್ಕಳು ಎಂದು ಅವರು ತನ್ನ ವೆಬ್‌ಸೈಟ್‌ನಲ್ಲಿ ಹೇಳಿದ್ದಾರೆ.
ಸಾಂಪ್ರದಾಯಿಕ ವೈದಿಕತತ್ವಜ್ಞಾನದಲ್ಲಿ ನಂಬಿಕೆಯಿರಿಸಿರುವ ಆರ್ಯಸಮಾಜದ ಚಿಂತನೆಗಳನ್ನು ರಾಮ್‌ಪಾಲ್ ಪ್ರಬಲವಾಗಿ ವಿರೋಸಿದ್ದರು. ಆರ್ಯಸಮಾಜದ ಸ್ಥಾಪಕ ದಯಾನಂದಸರಸ್ವತಿಯರ ವಿಚಾರಧಾರೆಗಳನ್ನು ಒಳಗೊಂಡಿರುವ ಗ್ರಂಥವಾದ ಸತ್ಯರ್ಥಪ್ರಕಾಶವನ್ನು 2006ರಲ್ಲಿ ರಾಮ್‌ಪಾಲ್ ಟೀಕಿಸಿದ ಬಳಿಕ, ಆರ್ಯಸಮಾಜದ ಬೆಂಬಲಿಗರು ಅವರ ವಿರುದ್ಧ ಸಂಘರ್ಷಕ್ಕಿಳಿದಿದ್ದರು.
ಸತ್ಯಾರ್ಥಪ್ರಕಾಶ ಗ್ರಂಥವು ಸತ್ಯದಬೆಳಕನ್ನು ಚೆಲ್ಲುವುದಿಲ್ಲ ಬದಲು ಅದು ಮಿಥ್ಯೆಯ ಪ್ರಕಾಶವಾಗಿದೆಯೆಂದು ಎಂದುರಾಮ್‌ಪಾಲ್ ಟೀಕಿಸಿದ್ದುದು ಭಾರೀ ವಿವಾದಕ್ಕೆಕಾರಣವಾಗಿತ್ತು. 2006ರ ಜುಲೈನಲ್ಲಿ ಕರೊಂತಾದ ಆಶ್ರಮದಲ್ಲಿ ನಡೆದ ಘರ್ಷಣೆಯ ಬಳಿಕ ರಾಮ್ ಹಾಗೂ ಅವರ 38 ಬೆಂಬಲಿಗರ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿತ್ತು. 2008ರಲ್ಲಿ ರಾಮ್‌ಪಾಲ್ ಜಾಮೀನಿನಲ್ಲಿ ಬಿಡುಗಡೆಗೊಂಡರು.
ಆದರೂ ಹಿಮ್ಮೆಟ್ಟದ ರಾಮ್‌ಪಾಲ್ ಆನಂತರ ಹರ್ಯಾಣದ ಹಿಸ್ಸಾರ್‌ನಲ್ಲಿ ಇನ್ನೊಂದು ದೇರಾ (ಆಶ್ರಮ) ವನ್ನು ಸ್ಥಾಪಿಸಿದರು. ಇಂದು ಕರೊಂತಾದಲ್ಲಿರುವ ರಾಮ್‌ಪಾಲ್ ಅವರಸತ್ಲೋಕ್ ಅಶ್ರಮವು 71 ಎಕರೆಜಮೀನನ್ನು ಹೊಂದಿದೆ. ಪಂಜಾಬ್, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲೂ ರಾಮ್‌ಪಾಲ್ ಸಾವಿರಾರು ಅನುಯಾಯಿಗಳನ್ನು ಹೊಂದಿದ್ದಾರೆ.
ಕಳೆದವಾರ ಹಿಸ್ಸಾರ್ ಆಶ್ರಮದಲ್ಲಿ ರಾಮ್‌ಪಾಲ್ ಬಂಧನವನ್ನು ವಿರೋಧಿಸುತ್ತಿದ್ದ ಅವರ ಬೆಂಬಲಿಗರನ್ನು ಹರ್ಯಾಣ ಪೊಲೀಸರು ವಿದ್ಯುತ್ ಹಾಗೂ ನೀರು ಪೂರೈಕೆಯನ್ನು ಕಡಿತ ಹಾಗೂ ಆಹಾರ ಪೂರೈಕೆ ಸ್ಥಗಿತಗೊಳಿಸುವುದು ಮತ್ತಿತರ ತಂತ್ರಗಾರಿಕೆಯನ್ನು ಅನುಸರಿಸಿ ಆಶ್ರಮದಿಂದ ಹೊರಹೋಗುವಂತೆ ಮಾಡಿದ್ದಾರೆ. ಇನ್ನು ಕೆಲವು ಅನುಯಾಯಿಗಳನ್ನು ಬಸ್‌ನಿಲ್ದಾಣ ಹಾಗೂ ರೈಲು ನಿಲ್ದಾಣಗಳಿಗೆ ಬಲವಂತವಾಗಿ ಎಳೆದೊಯ್ಯಲಾಗಿದೆ.
ಭಾರತೀಯ ಸಮಾಜವು ಜಾತಿಆಧಾರಿತವಾಗಿದ್ದು, ಬದಲಾವಣೆಯನ್ನುಬಯಸುವುದಿಲ್ಲವೆಂಬ ನಂಬಿಕೆಯನ್ನು ಈ ಬೆಳವಣಿಗೆಗಳು ಪ್ರಶ್ನಿಸಿವೆ.
ಕೃಪೆ: ಕೌಂಟರ್ ಕರೆಂಟ್ಸ್. ಆರ್ಗ್

No comments:

Post a Comment