Sunday, October 26, 2014

ಹೊಳೆದದ್ದು ಹೊಳೆದಂತೆ-5

 1
ಅಡುಗೆ ಮಾಡಲು ಬಾರದವರು ಅಡುಗೆ ಮಾಡಲು ಹೊರಟರೆ ಮಾತ್ರ ಹೊಸ ಹೊಸ ಅಡುಗೆಗಳು ಹುಟ್ಟಲು ಕಾರಣವಾದೀತು. ಆದುದರಿಂದ ಸಿದ್ದ ಅಡುಗೆಗಳನ್ನು ಮಾಡಲು ಗೊತ್ತಿರುವವರ ಜೊತೆ ಅಡುಗೆ ಮಾಡಲು ಬಾರದವರೂ ಅಡುಗೆ ಮನೆಗೆ ಹೆಚ್ಚು ಪ್ರವೇಶಿಸುವಂತಾಗ ಬೇಕು. ಅಡುಗೆ ವೈವಿಧ್ಯಗಳು ಹೆಚ್ಚಬೇಕು
2
ಸೃಜನ ಶೀಲ ಬರಹಗಾರನೊಬ್ಬ ಕಮ್ಯುನಿಸಂ ನ ಬೆಂಕಿಯನ್ನು ತನ್ನೊಳಗೆ ಇಟ್ಟುಕೊಂಡು ಬರೆದರೆ ಮಾತ್ರ ಅದು ನೆಲದ ಜನರ ಅಭಿವ್ಯಕ್ತಿ ಯಾದೀತು. ಇದೆ ಸಂದರ್ಭದಲ್ಲಿ ತನ್ನೊಳಗೆ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತನನ್ನು ಇಟ್ಟುಕೊಂಡು ಬರೆದರೆ ಅದು ಪಕ್ಷದ ಚುನಾವಣಾ ಪ್ರಣಾಳಿಕೆ ಆದೀತು. ಸೃಜನ್ ಶೀಲ ಬರಹಗಾರನೊಬ್ಬ ತನ್ನೊಳಗಿರುವ ಕಮ್ಯುನಿಸಂನ ಬೆಂಕಿಯನ್ನು ಆರದಂತೆ ನೋಡಿಕೊಳ್ಳೋದು ಎಷ್ಟು ಮುಖ್ಯವೋ, ತನ್ನೊಳಗಿರುವ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತನನ್ನು ಒದ್ದು ಹೊರ ಹಾಕೋದು ಅಷ್ಟೇ ಮುಖ್ಯ
3
ಕೆಲವೊಮ್ಮೆ ಒಂಟಿತನ ನಮಗೆ ಕೊಡುವ ದಿಟ್ಟತನ,ಶಕ್ತಿ ಮತ್ತು ಸ್ವಾತಂತ್ರ್ಯ ಸಮೂಹದೊಂದಿಗೆ ಇದ್ದಾಗ ಸಿಗೋದಿಲ್ಲ ಅನ್ನಿಸತ್ತೆ. ಸಮೂಹ ನಮ್ಮನ್ನು ತನಗೆ ಬೇಕಾದಂತೆ ನಿಯಂತ್ರಿಸಲು ಪ್ರಯತ್ನಿಸತ್ತೆ. ನಮ್ಮೊಳಗಿನ ಧ್ವನಿ ಸಮೂಹದ ಧ್ವನಿಯ ಸದ್ದಿಗೆ ಮೆದುವಾಗತ್ತೆ. ಗುಂಪಿನೊಳಗೆ ಇದ್ದೂ ಇಲ್ಲದಂತೆ ಬದುಕುವ ಶಕ್ತಿಯನ್ನು ನಮ್ಮದಾಗಿಸಿ ಕೊಳ್ಳೋದು ಇಂದಿನ ದಿನಗಳಲ್ಲಿ ಅತ್ಯಗತ್ಯ

No comments:

Post a Comment