Monday, February 6, 2012

ಕ್ಷಮೆ ಇರಲಿ.....

ನಕ್ಸಲ್ ಚಳುವಳಿಯ ಹೆಸರಲ್ಲಿ ಪೊಲೀಸರಿಗೆ ಆಹುತಿಯಾದ ಪಾರ್ವತಿ, ಹಾಜಿಮಾರನ್ನು ನೆನೆದು ಬರೆದದ್ದು...

ಸುರಿಯುತ್ತಿದೆ ಬೆಂಕಿಯ ಮಳೆ
ಹರಡಿಕೊಂಡ
ಕಾರಿರುಳ ಛತ್ರಿ ಚಿಂದಿಯಾಗಿದೆ

ಆಸರೆಗೆಂದು

ಒಂದೇ ಸಮನೆ ಬಾಗಿಲು ತಟ್ಟುತ್ತಿದ್ದಿರಿ
ಸದ್ದಿಗೆ ಮನೆ ಅದುರುತ್ತಿದ್ದವು
ಮರ, ಗಿಡ, ಗಾಳಿ
ಅರಳುತ್ತಿದ್ದ ಹೂಗಳೂ
ಅರೆಗಳಿಗೆ ಸ್ತಬ್ಧವಾಗಿದ್ದವು
ನಾನೋ...
ಚಿಲುಕ ಸರಿಸಲೋ ಬೇಡವೋ
ಎಂದು ಬಾಗಿಲ ಬಳಿ ತಡವರಿಸುತ್ತಿದ್ದೆ

ಕ್ಷಮೆ ಇರಲಿ ತಂಗಿಯರೇ...

ನೀವು ಅಣ್ಣಾ ಎಂದು
ಧರೆಗುರುಳಿದ ಕ್ಷಣ
ಚಿಲಕ ಸರಿಸಲಾಗದ
ಅವಮಾನದಿಂದ ಬಾಗಿಲ ಬುಡದಲ್ಲಿ
ಕುಸಿದು ಕುಳಿತಿದ್ದೆ!

ನನ್ನ ರಾತ್ರಿಯನ್ನು

ಬೆಳಗಲೆಂದು ನೀವು
ಹಣತೆ ಹಿಡಿದು ಬಂದಿರಿ
ನಾನು ಬಾಗಿ ಉಫ್
ಎಂದು ಆರಿಸಿದ್ದೆ!

No comments:

Post a Comment