Friday, September 16, 2016

ಮಿನಿ ಕತೆ: ಆದೇಶ

ವಿಶ್ವ ವಿದ್ಯಾಲಯದ ಮಹಿಳಾ ಶೌಚಾಲಯದಲ್ಲಿ ಕ್ಯಾಮರ ಪತ್ತೆಯಾಯಿತು. 
ಯಾರು? ಏನು? ಹೇಗೆ? ಗುಲ್ಲೆ ಗುಲ್ಲು. 
ಕೊನೆಗೂ ಜನರ ಆಕ್ರೋಶಕ್ಕೆ ಮಣಿದು ನಿಜವಾದ ಆರೋಪಿಯನ್ನು ಪತ್ತೆ ಮಾಡಲಾಯಿತು.
ಆದರೆ ಬಂಧಿಸಿದ ಸಂಜೆಯೇ ಆರೋಪಿಗೆ ಜಾಮೀನು ನೀಡಲಾಯಿತು.
ಜಾಮೀನಿಗಾಗಿ ಮಂಡಿಸಿದ ಕಾರಣಗಳು ಕೆಳಗಿನಂತಿದ್ದವು.
೧. ಮಾಂಸಾಹಾರ ಮಾತ್ರ ತಾಮಸ ಗುಣಗಳನ್ನು ಸೃಷ್ಟಿಸುತ್ತವೆ. ಈ ಕುರಿತು ಪೇಜಾವರರ ಪ್ರಮಾಣ ಪತ್ರವೂ ಇದೆ. ಹುಡುಗ ಹುಟ್ಟಿನಿಂದಲೇ ಸಸ್ಯಾಹಾರಿ ಆದುದರಿಂದ ಅವನಲ್ಲಿ ತಾಮಸ ಗುಣಗಳು ಇರುವ ಸಾಧ್ಯತೆ ಇಲ್ಲ. ಆದುದರಿಂದ ಅವನು ಕ್ಯಾಮರ ಇಟ್ಟಿರೋದು ಹುಡುಗಾಟಿಕೆಗೆ ಎನ್ನೋದು ಗೊತ್ತಾಗುತ್ತದೆ
೨. ಹುಡುಗ ಗೋಮಾಂಸ ವಿರೋಧಿಯಾಗಿದ್ದಾನೆ. ಆದುದರಿಂದ ಅವನಲ್ಲಿ ರಾಕ್ಷಸ ಗುಣ ಇಲ್ಲ ಎನ್ನೋದು ರಾಘವೇಶ್ವರ ಶ್ರೀ ಗಳ ಪ್ರಮಾಣ ಪತ್ರದಿಂದ ತಿಳಿದು ಬಂದಿದೆ. ಮಹಿಳೆಯರ ವಿಷಯದಲ್ಲಿ ಹುಡುಗ ರಾಘವೇಶ್ವರ ಶ್ರೀಗಳಷ್ಟೇ ಅಮಾಯಕನಾಗಿದ್ದಾನೆ.
೩. ಆರೋಪಿಗೆ ಆರೆಸ್ಸೆಸ್ ಹಿನ್ನೆಲೆ ಇರೋದರಿಂದ, ಹಿಂದೂ ಮಾತೆಯರ ರಕ್ಷಣೆಗಾಗಿ ಆ ಕ್ಯಾಮರಾ ವನ್ನು ಶೌಚಾಲಯದಲ್ಲಿ ಇಟ್ಟಿದ್ದಾನೆ ಎಂದೂ ಪರಿಗಣಿಸ ಬಹುದು.
ಮೇಲಿನೆಲ್ಲ ಸಾಕ್ಷ್ಯಾಧಾರಗಳನ್ನ ಪರಿಗಣಿಸಿದ ನ್ಯಾಯಾಧೀಶರು ಇಂತೆಂದು ತೀರ್ಪು ನೀಡಿದರು;
"ಆರೋಪಿಗೆ ತಕ್ಷಣ ನ್ಯಾಯಾಲಯ ಜಾಮೀನು ನೀಡಿದೆ. ಹಾಗು ಪೊಲೀಸರು ನ್ಯಾಯಯುತವಾದ ತನಿಖೆ ನಡೆಸಿ ತಕ್ಷಣ ಗೋಮಾಂಸಾಹಾರಿಯೊಬ್ಬನನ್ನು ಬಂಧಿಸಿ, ಅವನ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ನ್ಯಾಯ ನೀಡಬೇಕು ಎಂದು ಆದೇಶಿಸುತ್ತದೆ"

1 comment:

  1. ಚೆನ್ನಾಗಿಯೇ ಬರೆದಿದ್ದೀರಾ ಬಷೀರ್ ರವರೇ...☆☆☆

    ReplyDelete