Tuesday, October 30, 2012

ನೀನೊಬ್ಬನಿದ್ದೀಯೆಂದು...

1
ನನ್ನ  ದೊರೆಯೇ
ಧರ್ಮ ಪಂಡಿತರು
ನಿನ್ನ ಆರಾಧನೆಗೆಂದು
ನಮಾಜಿಗೆ ನಿಂತರು
ಇದೀಗ ನಿನ್ನನ್ನು ಮರೆತು
ನಮಾಜನ್ನೆ ಆರಾಧಿಸ ತೊಡಗಿದ್ದಾರೆ
ಹಣ್ಣು ಕೊಯ್ಯಲೆಂದು
ಮರಕ್ಕೆ ಏಣಿ ಇಟ್ಟವರು
ಹಣ್ಣನ್ನು ಮರೆತು
ಏಣಿಯನ್ನೇ ತಬ್ಬಿಕೊಂಡಿದ್ದಾರೆ...!
2
ಧರ್ಮ  ಪಂಡಿತರು
ನಿನ್ನ ನೆನೆದು
ಭಯ ಪೀಡಿತರಾಗಿದ್ದಾರೆ
ನನ್ನ ದೊರೆಯೇ...
ನಾನೋ ಅಜ್ಞಾನಿ,
ನೀನೋಬ್ಬನಿದ್ದೀಯೆಂದು
ನಿರ್ಭಯನಾಗಿದ್ದೇನೆ...
3
ಸೈತಾನನಿಗೆಂದು ಎಸೆದ ಕಲ್ಲು
ಅವನ ಬೆರಳ ಉಗುರನ್ನೂ ನೋಯಿಸಲಿಲ್ಲ...
ಕಳ್ಳ ನಮ್ಮ ಮನೆಯ
ಅಡುಗೆ ಕೋಣೆಯಲ್ಲಿ
ಬಚ್ಚಿಟ್ಟು ಕೊಂಡಿದ್ದಾನೆ
ನಾವೋ ಮನೆಯಂಗಳದಲ್ಲಿ
ಅವನನ್ನು ಹುಡುಕುತ್ತಿದ್ದೇವೆ...

No comments:

Post a Comment