Monday, February 11, 2013

ತಿಹಾರ್ ಜೈಲಿನಲ್ಲೀಗ ವಿಷಾದದ ನೆರಳು

ಸೋಮವಾರ (ಫೆಬ್ರವರಿ 11ರ ಸಂಚಿಕೆ) ದಿ ಹಿಂದೂ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ವರದಿ. ಇದನ್ನು ನನ್ನ ಗೆಳೆಯರೊಬ್ಬರು ಕನ್ನಡಕ್ಕೆ ಇಳಿಸಿದ್ದಾರೆ. ಜೈಲಾಧಿಕಾರಿಗಳು ಹಿಂದೂ ಪತ್ರಿಕೆಯ ವರದಿಗಾರರೊಂದಿಗೆ ಹಂಚಿಕೊಂಡ ಕೆಲವು ಮಾತುಗಳು ಇಲ್ಲಿವೆ...................
***
ಹಿಂದೂ-ಇಸ್ಲಾಮ್ ತತ್ವಗಳನ್ನು ಆಳವಾಗಿ ಅರಿತಿದ್ದ ಅಫ್ಝಲ್!

 
ಎರಡುಗಂಟೆಗೆ ಮೊದಲು ಆತನಿಗೆ ಗಲ್ಲಿಗೇರಿಸುವ ವಿಷಯ ಅರುಹಲಾಯಿತು!


ಸುಮಾರು ಎರಡು ಗಂಟೆ ಜೈಲಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದ ಅಫ್ಝಲ್!

‘‘ಆತನ ಅಧ್ಯಾತ್ಮಿಕತೆಯೇ ಆತನಿಗೆ ಸಾವನ್ನು ಎದುರಿಸಲು ಬೇಕಾದ ಬಲವನ್ನು ನೀಡಿದೆ. ಆತ ಸುಶಿಕ್ಷಿತನಾಗಿದ್ದ. ಆತ ಇಸ್ಲಾಂ ಹಾಗೂ ಹಿಂದೂಧರ್ಮದ ತತ್ವಗಳನ್ನು ಅಳವಾಗಿ ಅರಿತಿದ್ದ. ಈ ಎರಡು ಧರ್ಮಗಳ ನಡುವೆ ಇರುವ ಸಾಮ್ಯತೆಯ ಬಗ್ಗೆಯೂ ಆತ ಆಗಾಗ್ಗೆ ಹೇಳುತ್ತಿದ್ದ. ಜನರು ಸಾಮಾನ್ಯವಾಗಿ ದುಷ್ಟಶಕ್ತಿಯ ಅಂತ್ಯವನ್ನು ಸಂಭ್ರಮಿಸುತ್ತಾರೆ. ಆದರೆ ಧರ್ಮಶ್ರದ್ಧೆಯಿಂದ ಕೂಡಿದ ಆತ್ಮವೊಂದು ನಿರ್ಗಮಿಸಿದಾಗ, ವಿಷಾದದ ನೋವುಂಟಾಗುತ್ತದೆ’’ ಎಂದು ತಿಹಾರ್‌ನ ಜೈಲಿನ ಅಧಿಕಾರಿಯೊಬ್ಬರು ಮ್ಲಾನವದನರಾಗಿ ಹೇಳುತ್ತಾರೆ.
ಹೌದು, ಅವರು ಮಾತನಾಡುತ್ತಿದ್ದದ್ದು ಶನಿವಾರ ಮುಂಜಾವು ಗಲ್ಲಿಗೇರಿದ್ದ ಅಫ್ಝಲ್ ಗುರುವಿನ ಕುರಿತಂತೆ.


‘ಅಲ್ವಿದಾ...!’
   ಸಂಸತ್‌ಭವನ ದಾಳಿ ಪ್ರಕರಣದ ದೋಷಿ ಅಫ್ಝಲ್‌ಗುರು ತನ್ನನ್ನು ಗಲ್ಲಿಗೇರಿಸಲಿರುವವನಿಗೆ ಅಂತಿಮ ವಿದಾಯ ಹೇಳಿದ್ದು ಹೀಗೆ. ಇದಕ್ಕೂ ಕೆಲವು ಸೆಕೆಂಡ್‌ಗಳ ಮೊದಲು ಫಾಶಿಗಾರ ಕೂಡಾ ಅದೇ ಪದಗಳಿಂದ ಅಫ್ಝಲ್‌ಗೆ ಗುಡ್‌ಬೈ ಹೇಳಿದ್ದ. ಆತ ಸನ್ನೆಗೋಲನ್ನು ಎಳೆಯುತ್ತಿದ್ದಂತೆಯೇ, ಅಫ್ಧಲ್‌ನ ದೇಹ ನೇಣು ಗಂಬದಲ್ಲಿ ನೇತಾಡತೊಡಗಿತು.
ಗಲ್ಲಿಗೇರಿಸಲ್ಪಟ್ಟ ಒಂದೇ ನಿಮಿಷದಲ್ಲಿ ಅಫ್ಝಲ್ ಹೆಣವಾದರೂ, ಜೈಲಿನ ನಿಯಮಗಳ ಪ್ರಕಾರ ಆತನ ಮೃತದೇಹವನ್ನು, ಭರ್ತಿ ಅರ್ಧತಾಸಿನವರೆಗೆ ಗಲ್ಲುಗಂಬದಲ್ಲೇ ನೇತಾಡಿಸಲಾಯಿತೆಂದು, ಈ ಗಲ್ಲುಶಿಕ್ಷೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆ ಬಳಿಕ ಅಫ್ಝಲ್‌ನ ಮೃತದೇಹವನ್ನು ನೇಣುಗಂಬದಿಂದ ಇಳಿಸಲಾಯಿತು ಹಾಗೂ ಜೈಲ್ ಕಟ್ಟಡ ನಂ.3ರ ಬಳಿ ಇಸ್ಲಾಂ ಧಾರ್ಮಿಕ ವಿಧಿಗಳೊಂದಿಗೆ ಆತನ ಮೃತದೇಹವನ್ನು ದಫನಮಾಡಲಾಯಿತು. ತಿಹಾರ್ ಜೈಲಿನಲ್ಲಿ 30 ವರ್ಷಗಳ ಹಿಂದೆ ಗಲ್ಲಿಗೇರಿಸಲ್ಪಟ್ಟ ಕಾಶ್ಮೀರದ ಪ್ರತ್ಯೇಕವಾದಿ ಹೋರಾಟಗಾರ ಮಕ್ಬೂಲ್ ಭಟ್ಟ್‌ನ ಸಮಾಧಿಯ ಪಕ್ಕದಲ್ಲೇ ಅಫ್ಧಲ್‌ನನ್ನು ಸಮಾಧಿ ಮಾಡಲಾಯಿತು.
‘‘ಆದರೆ ಇವರಿಬ್ಬರ ನಡುವೆ ಒಂದು ವ್ಯತ್ಯಾಸವಿದೆ. ಮಕ್ಬೂಲ್ ಭಟ್ ಪ್ರತ್ಯೇಕತಾವಾದಿ ನಾಯಕನಾಗಿದ್ದರೆ, ಅಫ್ಝಲ್ ಎಂದು ಕೂಡಾ ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಗೊಳಿಸುವ ಮಾತನ್ನು ಆಡಿರಲಿಲ್ಲ. ವಾಸ್ತವವಾಗಿ ತನ್ನನ್ನು ಈ ವಿಷಯದಲ್ಲಿ ಅನಗತ್ಯವಾಗಿ ಎಳೆಯಲಾಗಿದೆಯೆಂದೇ ಆತ ಹೇಳುತ್ತಿದ್ದ’’ ಎಂದು ಆ ಅಧಿಕಾರಿ ನೆನಪಿಸಿಕೊಳ್ಳುತ್ತಾರೆ.

 ‘‘ಅಫ್ಝಲ್‌ನನ್ನು ಗಲ್ಲಿಗೇರಿಸಿದ್ದನ್ನು ದೇಶಾದ್ಯಂತ ಬಲಪಂಥೀಯ ಕಾರ್ಯಕರ್ತರು ಸಂಭ್ರಮೋಲ್ಲಾಸಗಳೊಂದಿಗೆ ಆಚರಿಸಿದರು. ಆದರೆ ತಿಹಾರ್ ಜೈಲಿನಲ್ಲಿ ಅಂತಹ ಯಾವುದೇ ಸಂಭ್ರಮವೂ ಕಂಡುಬರಲಿಲ್ಲ. ಬದಲಿಗೆ ಅಲ್ಲಿನ ಸಿಬ್ಬಂದಿಯ ಮುಖಗಳಲ್ಲಿ ವಿಷಾದದ ಕಳೆಯಿತ್ತು.‘‘ ಅತ ಧರ್ಮಶ್ರದ್ಧೆಯುಳ್ಳವನಾಗಿದ್ದ ಹಾಗೂ ಉತ್ತಮ ನಡವಳಿಕೆಯನ್ನು ಹೊಂದಿದ್ದ. ಆತನನ್ನು ಗಲ್ಲುಗಂಬದೆಡೆಗೆ ಕೊಂಡೊಯ್ಯುವಾಗಲೂ ಆತ ಜೈಲು ಸಿಬಂ್ಬದಿಯ ಹೆಸರು ಹಿಡಿದು ಕರೆಯುತ್ತಾ ಅವರಿಗೆ ಶುಭಕೋರುತ್ತಿದ್ದ. ತಾನು ಗಲ್ಲಿಗೇರುವ ಮೊದಲು ಆತನ ಒಂದೇ ಒಂದು ಕೋರಿಕೆಯೆಂದರೆ‘‘ಮುಜೆ ಉಮಿದ್ ಹೈ ಅಪ್ ಮುಜೆ ದರ್ಧ್ ನಹಿ ಕರೇಂಗೆ(ನನಗೆ ತಾವು ನೋವುಂಟು ಮಾಡುವುದಿಲ್ಲವೆಂದು ಆಶಿಸುವೆ) ಎಂದಾಗಿತ್ತು. ಆ ಮಾತನ್ನು ಕೇಳಿ ಅಫ್ಝಲ್‌ನ ಮುಖಕ್ಕೆ ಕಪ್ಪುಬಟ್ಟೆಯ ಹೊದಿಕೆಯನ್ನು ತೊಡಿಸುತ್ತಿದ್ದ ಫಾಶಿಗಾರ ಕೂಡಾ ಒಂದು ಕ್ಷಣ ಭಾವುಕನಾದ. ಆಬಳಿಕ ಸಾವಿನೆಡೆಗೆ ಅಫ್ಝಲ್‌ನ ಸುಗಮ ಪಯಣ ಆರಂಭವಾಯಿತು’’.
 ಅಫ್ಧಲ್‌ನನ್ನು ಗಲ್ಲಿಗೇರಿಸುವ ವಿಷಯವನ್ನು ಆತನಿಗೆ ಅಂದು ಬೆಳಗ್ಗಿನ ವೇಳೆಗಷ್ಟೇ ತಿಳಿಸಲಾತು.ಆದರೆ ಕೆಲವು ಮಾಧ್ಯಮಗಳು ಅಫ್ಝಲ್‌ಗೆ ಹಿಂದಿನ ದಿನ ಸಂಜೆಯೇ ಆತನನ್ನು ಗಲ್ಲಿಗೇರಿಸುವ ಬಗ್ಗೆ ಜೈಲು ಅಧಿಕಾರಿಗಳು ತಿಳಿಸಿದ್ದರೆಂದು ವರದಿ ಮಾಡಿದ್ದವು.
ಅಂದು ಬೆಳಗ್ಗೆ ಆತ ಒಂದು ಕಪ್ ಚಹಾ ಮಾತ್ರ ಸೇವಿಸಿದ್ದ. ಯಾಕೆಂದರೆ ಆತನಿಗೆ ಅಂದು ಯಾವುದೇ ಆಹಾರವನ್ನು ನೀಡಿರಲಿಲ್ಲ. ಆತ ಎಷ್ಟು ಸಹಜವಾಗಿದ್ದನೆಂದರೆ, ಒಂದು ವೇಳೆ ಆತನಿಗೆ ಆಹಾರ ನೀಡಿದ್ದಲ್ಲಿ ಅದನ್ನು ಆತ ಅದನ್ನು ಎಂದಿನಂತೆ ಸೇವಿಸಿಬಿಡುತ್ತಿದ್ದ.
ಅಂದು ಬೆಳಗ್ಗೆ ಅಫ್ಝಲ್ ಫೆರಾನ್ ಅಥವಾ ಕಾಶ್ಮೀರಿ ನಿಲುವಂಗಿಯೊಂದನ್ನು ಧರಿಸಿದ್ದ.ಆತ ಸ್ನಾನ ಮಾಡಿದ ಬಳಿಕ ಬಿಳಿ ಕುರ್ತಾ ಹಾಗೂ ಪೈಜಾಮ ಧರಿಸಿ ನಮಾಝ್ ಸಲ್ಲಿಸಿದನು.


 ‘‘ತಿಹಾರ್ ಜೈಲಿನಲ್ಲಿ ಈವರೆಗೆ ಸುಮಾರು 25 ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಅಲ್ಲಿ ಈಗ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು 10 ಮಂದಿಯನ್ನು ಗಲ್ಲಿಗೇರಿಸಿದ್ದನ್ನು ಕಂಡಿದ್ದಾರೆ. ಆದರೆ ಅಫ್ಝಲ್‌ನಂತೆ ಗಲ್ಲುಗಂಬವನ್ನು ಏರುವವರೆಗೂ ಶಾಂತಭಾವನೆಯನ್ನು ಪ್ರದರ್ಶಿಸಿದ ಒಬ್ಬನೇ ಒಬ್ಬ ಕೈದಿಯನ್ನು ತಾವು ಕಂಡಿಲ್ಲವೆಂದು ಅವರು ಹೇಳುತ್ತಾರೆ.
  ತನ್ನ ಬದುಕಿನ ಕೊನೆಯ ಎರಡು ತಾಸುಗಳನ್ನು ಅಫ್ಝಲ್ ಜೈಲಿನ ಕೆಲವು ಅಧಿಕಾರಿಗಳೊಂದಿಗೆ ಕಳೆದನು. ಜೀವನ ಮತ್ತು ಮೃತ್ಯುವಿನ ಬಗ್ಗೆ ತನ್ನ ಚಿಂತನೆಗಳನ್ನು ಆತ ಅವರ ಮುಂದೆ ವಿವರಿಸಿದ.‘‘ಆತ ವಿಶ್ವಭಾತೃತ್ವ ಹಾಗೂ ಮನುಕುಲದ ಏಕತೆಯ ಬಗ್ಗೆ ಮಾತನಾಡಿದ.ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಒಳ್ಳೆಯವರೇ ಆಗಿರುತ್ತಾರೆ ಹಾಗೂ ಪ್ರತಿಯೊಬ್ಬನಲ್ಲಿರುವ ಆತ್ಮವೂ ಒಂದೇ ದೇವರ ಸೃಷ್ಟಿಯಾಗಿದೆಯೆಂದು ಎಂಬ ಬಗ್ಗೆ ಆತ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದ. ನೀವು ಸತ್ಯದ ದಾರಿಯಲ್ಲಿ ನಡೆದರೆ, ಅದುವೇ ನಿಮ್ಮ ಜೀವನದ ಅತಿ ದೊಡ್ಡ ಸಾಧನೆಯಾಗುವುದು’’ ಎಂದು ಅಫ್ಜಲ್ ಹೇಳಿದನೆಂದು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.
ಅಂದು ಬೆಳಗ್ಗೆ ಆತ ಎಷ್ಟು ಶಾಂತಚಿತ್ತನಾಗಿದ್ದನೆಂದರೆ, ತನ್ನ ಕೆಲವು ಚಿಂತನೆಗಳನ್ನು ಆತ ಹಾಳೆಯೊಂದರಲ್ಲಿ ಬರೆದಿದ್ದ. ಅದರಲ್ಲಿ ಆತ ಅಂದಿನ ದಿನಾಂಕ ನಮೂದಿಸಿದ್ದ ಹಾಗೂ ತನ್ನ ಸಹಿ ಕೂಡಾ ಹಾಕಿದ್ದ.
 ಆತನ ಕುಟುಂಬವನ್ನು ಯಾರು ಸಲಹುತ್ತಾರೆಂದು ಜೈಲಿನ ಸಿಬ್ಬಂದಿ ಅಫ್ಝಲ್‌ನಲ್ಲಿ ಪ್ರಶ್ನಿಸಿದಾಗ, ಪ್ರತಿಯೊಬ್ಬರನ್ನು ದೇವರು ಸಲಹುತ್ತಾನೆಂದು ಆತ ಉತ್ತರಿಸಿದ.


ಗಲ್ಲಿಗೇರುವಾಗಲೂ ಅಫ್ಝಲ್ ಹರ್ಷಚಿತ್ತನಾಗಿದ್ದ ಮತ್ತು ಶಾಂತಚಿತ್ತನಾಗಿದ್ದ ಎಂದವರು ಹೇಳುತ್ತಾರೆ. ಈ ಹಿಂದೆ ಗಲ್ಲುಗಂಬದೆಡೆಗೆ ತೆರಳುವ ಕೈದಿಗಳು ಭಯದಿಂದ ನಡುಗುತ್ತಿರುವುದನ್ನು ತಾವು ಕಂಡಿದ್ದೆವು.ಆದರೆ ಗಲ್ಲುಗಂಬದೆಡೆಗೆ ನಸುನಗುತ್ತಾ ತೆರಳುತ್ತಿದ್ದ ವ್ಯಕ್ತಿಗಳ ಬಗ್ಗೆ ನಾವು ಕೇಳಿದ್ದ ಕಥೆಗಳು ಅಫ್ಧಲ್ ವಿಷಯದಲ್ಲೂ ನಿಜವಾಗಿದೆ’’


  ಭಯೋತ್ಪಾದನೆಯ ಅಪರಾಧಗಳಿಗಾಗಿ ನೇಣಿಗೇರಿಸಲಾದ ಇತರ ಕೈದಿಗಳು ಹಾಗೂ ಅಫ್ಝಲ್ ನಡುವೆ ಇರುವ ಇನ್ನೊಂದು ವ್ಯತ್ಯಾಸವೆಂದರೆ, ಬಹುತೇಕ ಮಂದಿ ಗಲ್ಲಿಗೇರುವಾಗ ಧಾರ್ಮಿಕ ಅಥವಾ ರಾಜಕೀಯ ಘೋಷಣೆಗಳನ್ನು ಕೂಗುತ್ತಿರುತ್ತಾರೆ. ಆದರೆ ಅಫ್ಝಲ್ ತನ್ನ ಸೆಲ್‌ನಿಂದ ಗಲ್ಲುಗಂಬದವರೆಗೆ ಇರುವ 100 ಹೆಜ್ಜೆಗಳಷ್ಟು ಅಂತರವನ್ನು ಕ್ರಮಿಸುವಾಗ ತನ್ನ ಸುತ್ತಮುತ್ತಲಿರುವ ಎಲ್ಲರಿಗೂ ಶುಭ ಹಾರೈಸುತ್ತಿದ್ದ ಎಂದು ಆ ಅಧಿಕಾರಿ ಹೇಳುತ್ತಾರೆ.

1 comment:

  1. ಗಲ್ಲು ಶಿಕ್ಶೆ ವಿಳಂಬವಾದರೂ ಆಯಿತಲ್ವ ಅದೇ ಸಂತೋಷದ ವಿಷಯ.

    ReplyDelete