Wednesday, May 21, 2014

ಮತಯಂತ್ರ(ಇವಿಎಂ) ದುರ್ಬಳಕೆ ಸಾಧ್ಯವೇ?

ಎನ್‌ಡಿಎ ಅಥವಾ ಬಿಜೆಪಿ ಈ ಬಾರಿ ಗೆಲ್ಲುವುದು ತೀರಾ ಅನಿರೀಕ್ಷಿತವಾಗಿರಲಿಲ್ಲ. ಅವರ ಗೆಲುವಿಗೆ ಕಾಂಗ್ರೆಸ್ ಅಥವಾ ಯುಪಿಎ ಸರಕಾರ ಎಲ್ಲ ರೀತಿಯಲ್ಲೂ ದಾರಿಯನ್ನು ಸುಗಮ ಮಾಡಿಕೊಟ್ಟಿತ್ತು. ಮಾಧ್ಯಮಗಳು ಸೃಷ್ಟಿಸಿದ ಮೋದಿ ಅಲೆಯೂತನ್ನ ಪರಿಣಾಮ ಬೀರಲಿರುವುದು ಎಲ್ಲರಿಗೂ ಸ್ಪಷ್ಟವಿತ್ತು.ಇವುಗಳ ನಡುವೆಯೂಮೋದಿಗೆ ಸಿಕ್ಕಿದ ಸುನಾಮಿ ರೂಪದ ಜಯ ಅನೇಕಮುಖಂಡರಿಗೆ ಆಘಾತವನ್ನು ತಂದಿದೆ. ಹಲವರು ಈಗಾಗಲೇ ವಿದ್ಯುನ್ಮಾನ ಮತದಾನ ಯಂತ್ರದ(ಇವಿಎಂ)ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಹಲವೆಡೆ ಭ್ರಷ್ಟ ಅಭ್ಯರ್ಥಿಗಳು ಲಕ್ಷಾಂತರಮತಗಳ ಅಂತರದಿಂದಗೆದ್ದಿರುವುದು ಈ ಅನುಮಾನಕ್ಕೆ ಪುಷ್ಟಿಯನ್ನೂ ನೀಡಿದೆ. ಇದು ಕೇವಲ ಮೋದಿ ಅಲೆಯಿಂದಾದ ಪರಿಣಾಮ ಮಾತ್ರವೆ? ಎನ್ನುವ ಪ್ರಶ್ನೆ ಎಲ್ಲೆಡೆ ಹುಟ್ಟಿಕೊಂಡಿದೆ.
ಹಾಗೆ ನೋಡಿದರೆ ಭಾರತದಲ್ಲಿ ಪ್ರಪ್ರಥಮವಾಗಿ ಇವಿಎಂ ಕುರಿತಂತೆ ಅನುಮಾನ ವ್ಯಕ್ತಪಡಿಸಿದವರು ಬಿಜೆಪಿ ಮುಖಂಡ ಎಲ್. ಕೆ. ಅಡ್ವಾಣಿ. ಭಾರತ ಪ್ರಕಾಶಿಸುತ್ತಿದೆ ಎನ್ನುವಘೋಷಣೆ ವಿಫಲವಾಗಿ ಯುಪಿಎ ಅಧಿಕಾರಕ್ಕೆಬಂದಾಗ ಎಲ್. ಕೆ. ಅಡ್ವಾಣಿಯವರು, ಇವಿಎಂ ದುರ್ಬಳಕೆಯಾಗಿರುವಕುರಿತಂತೆ ಅನುಮಾನ ವ್ಯಕ್ತಪಡಿಸಿದ್ದರು.ಆ ಸಂದರ್ಭದಲ್ಲಿಹೇಗೆಮತಯಂತ್ರ ಕೆಲವುಕಡೆಗಳಲ್ಲಿ ದುರ್ಬಳಕೆಯಾಗಿದೆಎನ್ನುವುದನ್ನು ಅಧಿಕಾರಿಗಳೂ ಪತ್ತೆ ಹಚ್ಚಿದ್ದರು.ಆದರೆಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈ ಬಾರಿ ಮೋದಿಯ ಭರಪೂರವಿಜಯಕೆಲವರಲ್ಲಿಅನುಮಾನವನ್ನು ಹುಟ್ಟಿಸಿದೆ. ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಿಗೇಮತಯಂತ್ರ ದುರ್ಬಳಕೆಯಾಗಿರುವ, ಹ್ಯಾಕ್ ಆಗಿರುವಕುರಿತಂತೆ ಆಪ್ ಅಭ್ಯರ್ಥಿಮೇಧಾ ಪಾಟ್ಕರ್ ದೂರೊಂದನ್ನು ಸಲ್ಲಿಸಿದರು. ಹ್ಯಾಕ್‌ಗೆ ಸಂಬಂಧಪಟ್ಟ ಅಂಶವೊಂದು ಮುಂಬಯಿಯಲ್ಲಿ ಪತ್ತೆಯಾಗಿರುವಬಗ್ಗೆಯೂಅವರು ದೂರಿನಲ್ಲಿ ತಿಳಿಸಿದ್ದಾರೆ.ಇದೀಗ ಒಬ್ಬೊಬ್ಬರೇ ಮತಯಂತ್ರಗಳ ಕುರಿತಂತೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಮತಯಂತ್ರ ಭಾರತದಲ್ಲಿ ಪ್ರಯೋಗಗೊಳ್ಳುವಮೊದಲೇವಿದೇಶಗಳಲ್ಲಿ ಪ್ರಯೋಗಗೊಂಡಿದ್ದು, ಹಲವೆಡೆ ಇದರ ಕುರಿತಂತೆಆಕ್ಷೇಪಗಳು ವ್ಯಕ್ತ ವಾಗಿವೆ.2000ನೆ ಇಸವಿಯಲ್ಲಿ ಫ್ಲೋರಿಡಾದಲ್ಲಿ ನಡೆದಚುನಾವಣೆಯವೇಳೆ ಭಾರೀ ಪ್ರಮಾಣದ ಅವ್ಯವಹಾರ ನಡೆದಂದಿನಿಂದಇವಿಎಂಗಳ ಭದ್ರತಾಸಮಸ್ಯೆ ವ್ಯಾಪಕವಾಗಿ ಜಾಹೀರಾಗಿದೆ.
ಹಲವು ದೇಶಗಳುಇವಿಎಂಗಳಬಳಕೆಗೆಕೊನೆಹಾಡಲುಬಯಸಿವೆ. 2006ರಲ್ಲಿ ಡಚ್ ಟಿ.ವಿ. ಒಂದುಸಾಕ್ಷಚಿತ್ರವನ್ನು ಪ್ರಸಾರಿಸಿದ್ದು, ಅವರ ಮಹಾಚುನಾವಣೆಯಲ್ಲಿಬಳಕೆಯಾಗಲಿದ್ದ ಇವಿಎಂಗಳನ್ನು ಹ್ಯಾಕ್ ಮಾಡುವುದುಎಷ್ಟುಸುಲಭವೆಂಬುದನ್ನು ತೋರಿಸಿತ್ತು.ಬಳಿಕ ಕ್ರಮೇಣ ಮತಯಂತ್ರಗಳನ್ನು ಹಿಂದಕ್ಕೆ ಪಡೆದ ನೆದರ್ಲ್ಯಾಂಡ್, ಬ್ಯಾಲೆಟ್ ಪೇಪರ್‌ಗಳಿಗೆಮರಳಿತ್ತು.
ಜರ್ಮನಿಯುಇವಿಎಂಗಳುಸಂವಿಧಾನ ಬಾಹಿರವೆಂದುಘೋಷಿಸಿದೆ. ಇವಿಎಂಗಳಿಗಾಗಿಸುಮಾರು 75 ದಶಲಕ್ಷ ಡಾಲರ್ ವ್ಯಯಿಸಿದ್ದ ಐರ್ಲ್ಯಾಂಡ್ ಅವುಗಳುಎಷ್ಟುಅಭದ್ರವೆಂದು ತಿಳಿದ ಬಳಿಕ ಅವುಗಳನ್ನು ಅಕ್ಷರಶಃ ರದ್ದುಗೊಳಿಸಿತು.
2009ರಲ್ಲಿ ಸ್ಟೀವ್ ಸ್ಟಿಗಾಲ್ ಎಂಬ ಸಿಬಿಐ ಸೈಬರ್ ಭದ್ರತಾ ಪರಿಣತನೊಬ್ಬ ವೆನಿಝವೆಲಾ, ಮೆಸಿಡೋನಿಯಾ ಹಾಗೂ ಯುಕ್ರೇನ್‌ಗಳಲ್ಲಿ ವಿದ್ಯುನ್ಮಾನ ಮತದಾನದಲ್ಲಿ ಅವ್ಯವಹಾರ ನಡೆಯುವಕಳವಳವಿದೆಯೆಂದು ಅಮೆರಿಕದಚುನಾವಣಾ ಸಹಕಾರ ಆಯೋಗಕ್ಕೆ ತಿಳಿಸಿದ್ದನು.
ಮೆಕ್ಲೆಚಿ ವರದಿಯ ಪ್ರಕಾರ ಸ್ಟೀವ್ ಹೇಳಿದ್ದ ಮಾತುಗಳು ಈ ಕೆಳಗಿನಂತಿವೆ.
ಮತದಾನಮಾಡುವಾಗ, ಬ್ಯಾಲೆಟ್‌ಗಳನ್ನು ಕೇಂದ್ರೀಯಸಂಗ್ರಹಕೇಂದ್ರಕ್ಕೆರವಾನಿಸುವಾಗ, ಅಧಿಕತ ಫಲಿತಾಂಶದತಖ್ತೆ ಸಿದ್ಧಪಡಿಸುವಾಗಹಾಗೂ ಫಲಿತಾಂಶವನ್ನು ಇಂಟರ್ನೆಟ್‌ನಲ್ಲಿ ಹಾಕುವಾಗಚುನಾವಣೆಗಳಲ್ಲಿ ಅವ್ಯವಹಾರ ನಡೆಯಬಹುದು.
ವೆಬ್‌ಸೈಟ್‌ನಲ್ಲಿ ಭಾರತೀಯಚುನಾವಣಾ ಆಯೋಗದಕುರಿತುಆಘಾತಕಾರಿ ಶೋಧನೆಯೊಂದರ ಫಲವಾಗಿ 2009ರ ಚುನಾವಣೆಯಲ್ಲಿ ಭಾರತದಇವಿಎಂಗಳಬಗ್ಗೆ ಭಾಗಶಃ ಕಳವಳವೆದ್ದಿತ್ತು. ನಿಜವಾಗಿಮತದಾನ ನಡೆದಹಾಗೂಮತಎಣಿಕೆ ನಡೆದಹಲವು ದಿನಗಳ ಮೊದಲೇಚುನಾವಣಾ ಫಲಿತಾಂಶವನ್ನು ತೋರಿಸಿದಂತಿದ್ದುದನ್ನು ಚುನಾವಣಾಆಯೋಗದವೆಬ್‌ಸೈಟ್ ಫೈಲ್‌ಗಳಲ್ಲಿ, ಪುಣೆ ನಗರದ ಮುಖ್ಯ ಮಾಹಿತಿ ಆಯುಕ್ತರಾಗಿದ್ದ ಡಾ.ಅನುಪಮ್ ಸರಾಫ್ ಹಾಗೂಮಣಿಪಾಲ್ ಅಡ್ವಾನ್ಸ್‌ಡ್ ರೀಸರ್ಚ್ ಗ್ರೂಪ್‌ನ ಉಪಾಧ್ಯಕ್ಷ ಪ್ರೊ.ಎಂ.ಡಿ.ನಲಪಾಟ್ ಪತ್ತೆ ಹಚ್ಚಿದ್ದರು.
ಭಾರತದಲ್ಲಿ 2009ರ ಚುನಾವಣೆ ಎ.16ರಿಂದ ಮೇ 13ರ ವರೆಗೆ 5 ಹಂತಗಳಲ್ಲಿ ನಡೆದಿತ್ತು. ಎಲ್ಲ ಹಂತಗಳುಮುಗಿಯುವವರೆಗೆಮತಎಣಿಕೆ ನಡೆಯುವಸಾಧ್ಯತೆಯಿಲಿಲ್ಲ. ಮತದಾನಆರಂಭವಾಗುವಮೊದಲು ಸರಾಫ್ ಹಾಗೂ ನಲಪಾಟ್ ಚುನಾವಣೆಯಮೇಲೆ ಕಣ್ಣಿಡಲು ನಿರ್ಧರಿಸಿದರು. ಹಾಗೂಚುನಾವಣಾಆಯೋಗದವೆಬ್‌ಸೈಟ್‌ನ ಎಕ್ಸೆಲ್ ಫೈಲ್‌ಗಳಿಂದ ಮಾಹಿತಿ ಮೂಲವನ್ನು ಪಡೆದುಕ್ಷೇತ್ರಗಳಹಾಗೂಅಭ್ಯರ್ಥಿಗಳ ವಿಕಿ ಒಂದನ್ನು ಸಷ್ಟಿಸಲು ನಿರ್ಧರಿಸಿದರು.
ಇಸಿಇಯಸ್ಪ್ರೆಡ್‌ಶೀಟ್‌ನಲ್ಲಿ ನೀವು ನಿರೀಕ್ಷಿಸಿರಬಹುದಾದುದೇ ಇತ್ತು. ಅಭ್ಯರ್ಥಿಗಳ ಹೆಸರು, ಲಿಂಗ, ವಿಳಾಸ, ಪಕ್ಷ ಇತ್ಯಾದಿ. ಆದರೆ, ಮೇ 6ರ ಬಳಿಕ ಸ್ಪ್ರೆಡ್‌ಶೀಟ್ ಬದಲಾಯಿತುಹಾಗೂಅನಿರೀಕ್ಷಿತವಾದ ಕೆಲವುವಿಷಯಗಳು ಸೇರ್ಪಡೆಗೊಂಡವು.
ಮೇ 6ರ ಬಳಿಕ, ಅಭ್ಯರ್ಥಿಯ ಹೆಸರಿಗೆಇವಿಎಂನಲ್ಲಿ ಆತನ ಸ್ಥಾನವನ್ನು ಅನುಸರಿಸಿಸಂಕೇತವನ್ನು ನೀಡಲಾಯಿತು. ಹಾಗೂಚಲಾವಣೆಯಾದಮತಗಳ ಸಂಖ್ಯೆಯನ್ನು ಸೇರಿಸಲಾಯಿತು.ಆದರೆ, ಅನೇಕಕ್ಷೇತ್ರಗಳಲ್ಲಿಮತದಾನ ಇನ್ನಷ್ಟೇಆಗಬೇಕಿತ್ತು ಹಾಗೂಮತದಾನ ನಡೆದಲ್ಲೂಮತಗಳ ಎಣಿಕೆಯಾಗಿರಲಿಲ್ಲ.ಇನ್ನೂ ವಿಚಿತ್ರವೆಂದರೆ, ಕ್ರಮೇಣ ಸ್ಪ್ರೆಡ್‌ಶೀಟ್‌ಗಳಲ್ಲಿ ‘ಚಲಾವಣೆಯಾದಮತಗಳ’ ಸಂಖ್ಯೆಯನ್ನು ಫಲಿತಾಂಶ ಪ್ರಕಟಿಸುವಮೊದಲುಹೊಂದಾಣಿಕೆಮಾಡಲಾಯಿತು.
ಚುನಾವಣೆ  ಪೂರ್ಣಗೊಳ್ಳುವ ಮೊದಲೇಆಯೋಗದವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಿದಂತೆತೋರುತ್ತಿದೆ ಎಂಬುದರ ಕುರಿತುತಂಡವು ತಕ್ಷಣವೇ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಹಾಗೂ ಭಾರತದಚುನಾವಣಾಆಯೋಗವನ್ನು ಎಚ್ಚರಿಸಿತು.
 ಮೇ 16ರಂದು ಚುನಾವಣಾ ಫಲಿತಾಂಶ ಘೋಷಿಸಲಾಯಿತು. ಆ ದಿನ, ಆಯೋಗದಸ್ಪ್ರೆಡ್‌ ಶೀಟ್‌ನಲ್ಲಿ ಎ.16ರಂದು ಇದ್ದಂತೆಯೇಅಭ್ಯರ್ಥಿಯಹೆಸರು, ಲಿಂಗ, ವಿಳಾಸ, ಪಕ್ಷ ಇತ್ಯಾದಿಗಳಿದ್ದವು.ಆದರೆ, ಚಲಾವಣೆಯಾದ ಮತಗಳಅಂಕಿ-ಅಂಶವಿರಲಿಲ್ಲ.ಇದರಿಂದಾಗಿ ‘ವಿಚಿತ್ರವಾದಚಲಾಯಿತಮತ’ ಸಂಖ್ಯೆಯೊಂದಿಗೆಚುನಾವಣಾ ಪೂರ್ವಹಾಗೂ ಬಳಿಕದ ಹೋಲಿಕೆಅಸಾಧ್ಯವಾಯಿತು.
 ಬಳಿಕ, ಮಿಚಿಗನ್ ವಿವಿಯಜೆ.ಅಲೆಕ್ಸ್ ಹಾಲ್ಡರ್ಮನ್, ಇಲೆಕ್ಟ್ರಾನಿಕ್ ಫ್ರಂಟಿಯರ್ ಫೌಂಡೇಶನ್‌ನ ಸ್ಥಾಪಕ ಪ್ರಶಸ್ತಿ ವಿಜೇತ ಹರಿ ಕೆ.ಪ್ರಸಾದ್ ಹಾಗೂಡಚ್ ಇಂಟರ್ನೆಟ್ ಆದ್ಯ ರೋಪ್ ಗೋಂಗಿಜ್ಪ್ ಸಹಿತಐಟಿವಿಶೇಷಜ್ಞರತಂಡವೊಂದು ಭಾರತೀಯಇವಿಎಂಒಂದನ್ನು ಬಳಿಸಿ, ಅದನ್ನು 2 ಮಾರ್ಗಗಳಲ್ಲಿಹೇಗೆ ಹ್ಯಾಕ್ ಮಾಡಬಹುದೆಂಬುದರ ಪ್ರಾತ್ಯಕ್ಷಿಕೆಯೊಂದನ್ನು ನಡೆಸಿದರು.
ಫ್ಲೊರಿಡಾದಮತದಾರರು (ಹಾಗೂ ಅವ್ಯವಹಾರ ವೀಕ್ಷಕರು) ತಿಳಿದಿರುವಂತೆ, ಆಗಾಗ, ಕೆಲವುಕ್ಷೇತ್ರಗಳಕೆಲವುಎಲ್ಲೆಕಟ್ಟುಗಳಲ್ಲಿಚುನಾವಣೆಅವ್ಯವಹಾರಗಳು ನಡೆಯುತ್ತಿರುತ್ತವೆ.ಚುನಾವಣಾವಂಚನೆಮಾಡಲುಬಯಸುವವರಿಗೆಕೆಲವು ಆರಿಸಿದ ಮತಯಂತ್ರಗಳಲ್ಲಿಕೌಶಲವನ್ನು ತೋರಿಸಿದರೆಸಾಕಾಗುತ್ತದೆ. ಅದಕ್ಕಿಂತಕಡಿಮೆಯೆಂದರೆ, ನಿರ್ದಿಷ್ಟವ್ಯಕ್ತಿಗೆ ಲಾಭ ಆಗುವಂತೆ ಅಥವಾ ಆತನ ಸ್ಥಾನ ಉಳಿಯುವಂತೆಮಾಡಬಹುದು.
ತಮ್ಮ ಪ್ರಜಾಪ್ರಭುತ್ವದಸುರಕ್ಷೆಯಬಗ್ಗೆ ಚಿಂತಿತರಾದ ನಾಗರಿಕರು ಅದರಲ್ಲಿ ಕೈಜೋಡಿಸಿದರು.ಮಾಜಿಕಾನೂನು, ವಾಣಿಜ್ಯಹಾಗೂ ನ್ಯಾಯಸಚಿವ ಡಾ.ಸುಬ್ರಹ್ಮಣ್ಯನ್ ಸ್ವಾಮಿ, ಇದರ ನೇತತ್ವ ವಹಿಸಿ ಸುಪ್ರೀಂ ಕೋರ್ಟ್‌ಗೆಹೋದರು.ನ್ಯಾಯಾಲಯ ಭಾರತದಇವಿಎಂಗಳುಕನಿಷ್ಠ ಕಾಗದದ ದಾಖಲೆಯೊಂದನ್ನು ನೀಡುವಂತಿರಬೇಕೆಂದು ತೀರ್ಪು ನೀಡಿತು.
ಆದಾಗ್ಯೂ, ಈ ಚುನಾವಣೆಯಲ್ಲಿ 543ರಲ್ಲಿ ಕೇವಲ 8 ಕ್ಷೇತ್ರಗಳಲ್ಲಷ್ಟೇವೋಟ್ ವೆರಿಫೈಯರ್ ಪೇಪರ್ ಆಡಿಟ್ ಟ್ರೈಲ್ (ಎವಿಪಿಎಟಿ) ವ್ಯವಸ್ಥೆ ಇತ್ತು.ಎರಡು ಮತಯಂತ್ರಗಳೂ ಚಲಾಯಿಸಿದ ಎಲ್ಲ ಮತಗಳನ್ನು ಕಾಂಗ್ರೆಸ್‌ಗೆ ವರ್ಗಾಯಿಸುತ್ತಿದೆಯೆಂಬ ಆರೋಪ ಸಹಿತ ಇವಿಎಂಗಳಕಾರ್ಯಾಚರಣೆ ದೋಷದ ಬಗ್ಗೆ ಗಂಭೀರ ವರದಿಗಳಿದ್ದವು. ಇದು ಮತದಾರರ ಯಾದಿಯ ತಪ್ಪುಗಳಿಗೆ ಹೊರತಾದುದಾಗಿದೆ. ಮತದಾರರ ಪಟ್ಟಿಯಿಂದ ನೂರಾರು, ಸಾವಿರಾರುಹೆಸರುಗಳುಕಾಣೆಯಾಗಿದ್ದವು.ಇದಕ್ಕೆಆಯೋಗಕ್ಷಮೆ ಯಾಚನೆಯಹೊರತು, ಮರುಚುನಾವಣೆಯನ್ನೇನೂಮಾಡಿಲ್ಲ.
ಈ ಚುನಾವಣೆಯಲ್ಲಿಏನೇ ನಡೆದಿರಲಿ, ಭಾರತದಲ್ಲಿ ಚುನಾವಣಾಆಯೋಗ ಹಾಗೂಚುನಾವಣೆಗಳುಹೇಗೆ ನಡೆಯುತ್ತಿವೆಎಂಬುದರ ಗಂಭೀರ ಮರುಚಿಂತನೆ ನಡೆಯುವಸಾಧ್ಯತೆಯಿದೆ. ಈ ಸಲ ಮೇಲುಗೈಸಾಧಿಸಿದವರು ಮುಂದಿನ ಸಲ ಅಂತಹ ಅದಷ್ಟವಂತರಾಗಲಾರರು. ಪ್ರಜಾಪ್ರಭುತ್ವದಲ್ಲಿವಿಶ್ವಾಸವಿರಿಸಿರುವ ದೇಶವೊಂದರಲ್ಲಿ ವಿದ್ಯುನ್ಮಾನ ಯಂತ್ರಗಳಲ್ಲಿವಂಚನೆ ನಡೆಸುವುದೆಂದರೆಕೇವಲಮತಗಳನ್ನು ಕದಿಯುವುದಲ್ಲ. ಅದು ದೇಶದ ಆತ್ಮವನ್ನೇ ಕದ್ದಂತೆ.
ಸಿಐಎ ಸೈಬರ್ ಭದ್ರತಾ ತಜ್ಞ ಸ್ಟೀವ್ ಸ್ಟಿಗಾಲ್‌ನ ಅಭಿಪ್ರಾಯದಂತೆ: ಎಲ್ಲಿ ಮತವುಇಲೆಕ್ಟ್ರಾನ್ ಆಗಿ ಕಂಪ್ಯೂಟರ್ ಒಂದನ್ನು ಮುಟ್ಟುತ್ತದೆಯೋ, ಅದು ದುರುದ್ದೇಶ ಹೊಂದಿರುವವ್ಯಕ್ತಿಯೊಬ್ಬನಿಗೆಕೆಟ್ಟಸಂಗತಿಗಳು ನಡೆಯುವಂತೆಮಾಡುವಒಂದುಅವಕಾಶವಾಗಿರುತ್ತದೆ.
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅದ್ಭುತಗಳಲ್ಲೊಂದಾಗಿದೆ. ಎಲ್ಲ ಪ್ರಜಾಪ್ರಭುತ್ವಗಳಂತೆಯೇ, ಮತದಾನಮಾಡುವ ಪವಿತ್ರಕರ್ತವ್ಯದ ವೇಳೆಎಲ್ಲರೂಸಮಾನರು, ಎಲ್ಲರಿಗೂವೌಲ್ಯವಿದೆ. ಎಲ್ಲರೂ ದೇಶದ ಭಾಗ ಹಾಗೂ ಎಲ್ಲರ ಧ್ವನಿಯೂ ಕೇಳಲ್ಪಡುತ್ತದೆ.
ಆ ಧ್ವನಿಯು ಅದುಮಲ್ಪಟ್ಟರೆ ಅಥವಾ ಅಪಹರಿಸಲ್ಪಟ್ಟರೆ, ಸುರಕ್ಷಾಕೂಟ ಮುಚ್ಚಲ್ಪಟ್ಟರೆ, ವ್ಯಕ್ತಿ ಮತ್ತು ದೇಶದ ನಡುವಿನ ಸಂಬಂಧಹಾಳಾದರೆ, ಆ ಸೂಕ್ಷ್ಮವಾದ ಸಂಬಂಧಕಡಿಯುತ್ತದೆ ಹಾಗೂ ವ್ಯಕ್ತಿಗೂ ದೇಶಕ್ಕೂ ಸಂಬಂಧವಿರುವುದಿಲ್ಲ. ಅದುಸ್ಟೀವ್ ಹೇಳಿದಂತೆ ಖಂಡಿತವಾಗಿ ಕೆಟ್ಟದ್ದು ನಡೆಯುವಂತೆ ಮಾಡಬಹುದು.

(ಆಧಾರ)

No comments:

Post a Comment