Tuesday, January 28, 2014

ಭಾರತಿ ಕಂಡ ಬದುಕು ಮತ್ತು ಸಾವು

ಬದುಕಿನ ಸಾರ್ಥಕತೆಯಿರುವುದು ನಾವು ಸಾವನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರಲ್ಲಿ. ಮನುಷ್ಯ ತನ್ನ ಬದುಕನ್ನು ಅರ್ಥಪೂರ್ಣಗೊಳಿಸುತ್ತಾ ಹೋದ ಹಾಗೆಯೇ ತನ್ನ ಸಾವನ್ನೂ ಅರ್ಥಪೂರ್ಣಗೊಳಿಸುತ್ತಾ ಹೋಗುತ್ತಾನೆ. ಸಾವನ್ನು ಗೆಲ್ಲುವುದೆಂದರೆ ಬದುಕನ್ನು ಗೆಲ್ಲುವುದೂ ಹೌದು. ಬದುಕು ಕಲಿಸಿದಂತೆಯೇ ಸಾವೂ ಬದುಕನ್ನು ಕಲಿಸುತ್ತದೆ. ಭಾರತಿ ಬಿ. ವಿ. ಅವರ ‘ಸಾಸಿವೆ ತಂದವಳು’ ಕತಿ ಈ ಸಾವು-ಬದುಕಿನ ನಡುವಿನ ಈ ಜಗ್ಗಾಟವನ್ನು ಹದಯ ಮುಟ್ಟುವ ಹಾಗೆ ಹೇಳುತ್ತದೆ. ಇದು ಆರೋಗ್ಯವಂತ ಮನುಷ್ಯನೊಬ್ಬ ತನಗೆ ಬಂದ ಕಾಯಿಲೆಯನ್ನು ಗೆಲ್ಲುವ ಕತೆ. ಕಾಯಿಲೆಯೆನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದೇ ಆಗಿರಬೇಕಾಗಿಲ್ಲ. ಅದು ಮನಸ್ಸಿಗೆ ಸಂಬಂಧಿಸಿದ್ದೂ ಹೌದು. ಮನಸ್ಸು ದೇಹ ಜೊತೆಗೂಡಿ ಕ್ಯಾನ್ಸರ್ ಕಾಯಿಲೆಯ ಜೊತೆಗೆ ನಡೆಸಿದ ಹೋರಾಟ ಭಾರತಿ ಅವರ ಸಾಸಿವೆ ತಂದವಳು ಕತಿಯ ವಸ್ತು. ಇದು ಆತ್ಮಕತೆಯೂ ಹೌದು. ಆತ್ಮದ ಜೊತೆಗೆ ದೇಹದ ಕತೆಯೂ ಹೌದು. ‘ಸಾಸಿವೆ ತಂದವಳು’ ಎನ್ನುವ ಹೆಸರೇ ಸಾವಿನ ಸಾಮಿಪ್ಯವನ್ನು ಹೇಳುತ್ತದೆ. ‘‘ಸಾವಿಲ್ಲದ ಮನೆಯ ಸಾಸಿವೆ ತಾ’ ಎಂಬ ಬುದ್ಧನ ಮಾತಿನಿಂದ, ಪ್ರತಿ ಮನೆಯ ಬಾಗಿಲನ್ನು ತಟ್ಟಿ ತಾಯಿ ತನ್ನ ಮಗುವನ್ನು ಬದುಕಿಸಲು ಯತ್ನಿಸುತ್ತಾಳೆ. ಆದರೆ ಎಲ್ಲೂ ಸಾವಿಲ್ಲದ ಮನೆಯೇ ಇಲ್ಲ. ಅವಳಿಗೆ ಸಾಸಿವೆ ಸಿಗಲೇ ಇಲ್ಲ. ಆದರೆ ಇಲ್ಲಿ, ಭಾರತಿ ತನ್ನದೇ ಎದೆಯ ಬಾಗಿಲನ್ನು ತಟ್ಟಿ ಅಲ್ಲಿಂದ ಸಾಸಿವೆ ತಂದು ಬುದ್ಧನ ಕೈಗಿಡುತ್ತಾರೆ. ಕ್ಯಾನ್ಸರ್‌ನಿಂದ ಪಾರಾಗುತ್ತಾರೆ.
  ಅದರರ್ಥ ಸಾವಿನಿಂದ ಪಾರಾದರೂ ಎಂದಲ್ಲ. ಕ್ಯಾನ್ಸರ್ ಎಂದರೆ ಸಾವು ಎಂದು ಭಾವಿಸಿಕೊಂಡು, ತಕ್ಷಣ ಶರಣಾಗತರಾಗುವವರಿಗೆ ಈ ಕತಿಯಲ್ಲಿ ಸ್ಫೂರ್ತಿಯಿದೆ. ಯಾವುದೇ ರೋಗಗಳು ಮನಸ್ಸಿಗೆ ಆವರಿಸಲು ಬಿಡಬಾರದು ಎನ್ನುವ ಸಂದೇಶವೊಂದು ಇಲ್ಲಿದೆ. ಅತ್ಯಂತ ಜೀವಪರವಾದ, ಬದುಕಿಗೆ ಮುಖಕೊಟ್ಟು ಮಾತನಾಡುವ ಕತಿ ಇದು. ಅನಂತ ಮೂರ್ತಿ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ ‘‘ಕ್ಯಾನ್ಸರಿನಂತಹ ಒಂದು ಕಾಯಿಲೆಯನ್ನು ಗೆಲ್ಲುವ ಪ್ರಯತ್ನದಲ್ಲಿ ಗೆಲುವು, ಸೋಲು ಎರಡೂ ಒಟ್ಟೊಟ್ಟಿಗೆ ಎದುರಾಗುವ ಭರವಸೆಯೂ ಇದೆ. ಸಂಕಟವೂ ಇದೆ. ಇದನ್ನು ಬರೆಯುವಾಗ ಬರಹಗಾರ್ತಿಗೆ ಜೀವನದ ಪ್ರೀತಿ ಇರಬೇಕು. ಆದರೆ ಅದು ಆತ್ಮರತಿಯಾಗಬಾರದು. ಅಥವಾ ಆತ್ಮ ಮರುಕದ ಉತ್ಕಟತೆಯಲ್ಲಿ ಸಾಯಬೇಕೆಂಬ ಅಪೇಕ್ಷೆಯೂ ಆಗಕೂಡದು. ಭಾರತಿ ಇದನ್ನು ಅಪೂರ್ವವೆಂಬಂತೆ ಸಾಧಿಸುತ್ತಾಳೆ’’
ಬದುಕುವುದಕ್ಕೆ ಅಪಾರ ಸ್ಫೂರ್ತಿಯನ್ನು ಕೊಡುವ ಈ ಕತಿಯನ್ನು ಎಲ್ಲರೂ ಓದಬೇಕು. ಅಹರ್ನಿಶಿ ಪ್ರಕಾಶನ(94491 74662, 94486 28511) ಶಿವಮೊಗ್ಗ ಹೊರತಂದಿರುವ ಈ ಕತಿಯ ಮುಖಬೆಲೆ 100 ರೂಪಾಯಿ.

4 comments:

  1. inspiration lines....life

    ReplyDelete
  2. ನೋವು......................ನೋವಲ್ಲಿ.....ಬೆಂದವ್ರಿಗೆ...ಅಥವಾಗೋದು..................

    ReplyDelete
  3. a very good book to read and give it to those who are suffering from the cancer thinking there is no answer. It can give them lease of life and inspire them to be positive kudos to you and the writer BV Bharathi

    ReplyDelete