Friday, January 31, 2014

ಅಂಬೇಡ್ಕರ್ ಮೂಲಕ ಉತ್ತರ

 ಪ್ರಜಾಪ್ರಭುತ್ವ ದುರ್ಬಲಗೊಂಡಂತೆಲ್ಲ ನಾವು ಹತಾಶೆಯ ಮಾತನಾಡುವ ಬದಲು, ಅಂಬೇಡ್ಕರ್ ಚಿಂತನೆಗಳನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವ ಮೂಲಕ ಅದರ ಉಳಿವಿಗೆ ಪ್ರಯತ್ನಿಸಬೇಕಾಗಿದೆ. ಅಂತಹದೊಂದು ಪ್ರಯತ್ನವನ್ನು ಡಾ. ಎಚ್. ಎಸ್. ಅನುಪಮಾ ಮತ್ತು ಬಸೂ ಅವರ ಜಂಟಿ ಪ್ರಯತ್ನವಾಗಿರುವ ‘ಭೀಮಯಾನ’ ಮೂಲಕ ನಡೆದಿದೆ. ಡಾ. ಬಿ. ಆರ್. ಅಂಬೇಡ್ಕರ್ ಚಿಂತನೆಗಳ ಸಂಗ್ರಹವಾಗಿರುವ ಇದು, ಇಂದಿನ ಸಾಮಾಜಿಕ ಬೆಳವಣಿಗೆಗೆ ಅನುಗುಣವಾಗಿ ಅಂಬೇಡ್ಕರ್ ಮರು ಓದನ್ನು ಬಯಸುತ್ತದೆ. ಹಲವು ಮೂಲಗಳಿಂದ ಅಂಬೇಡ್ಕರ್ ಚಿಂತನೆಗಳನ್ನು ತಂದು ಇಲ್ಲಿ ಒಟ್ಟಾಗಿಸಲಾಗಿದೆ. ಚರಿತ್ರೆಯ ಮರೆಗೆ ಸರಿದಿರುವ ಅನೇಕ ಮಹತ್ವದ ಘಟನೆಗಳನ್ನು ಹೊರಗೆಳೆದು, ಅದನ್ನು ಯುವ ಪೀಳಿಗೆಯ ಮುಂದಿಡುವ ಮೂಲಕ, ಹೊಸ ಸಮಾಜ, ಹೊಸ ನಾಯಕನ ಮುಂಚೂಣಿಯಲ್ಲಿ ಸಾಗಬೇಕಾದ ತುರ್ತನ್ನು ಈ ಕೃತಿ  ಹೇಳುತ್ತದೆ.

ಮಹಾಡ್ ಹೋರಾಟ, ಗಾಂಧೀ ಅಂಬೇಡ್ಕರ್ ಮೊದಲ ಭೇಟಿ, ಬ್ರಾಹ್ಮಣ್ಯದ ಕುರಿತಂತೆ ಅಂಬೇಡ್ಕರ್ ಅನಿಸಿಕೆ, ಮದರಾಸ್ ಜಸ್ಟಿಸ್ ಪಾರ್ಟಿಯ ಕುರಿತು, ಬುದ್ಧನ ಕುರಿತಂತೆ ಅಂಬೇಡ್ಕರ್ ನಿಲುವು, ಕೊನೆಯ ಪ್ರಾರ್ಥನೆ ಸೇರಿದಂತೆ ಹಲವು ಅಪರೂಪದ ಘಟನೆಗಳು, ಚಿಂತನೆಗಳು, ಚರಿತ್ರೆಯ ಚೂರುಗಳು ಈ ಕೃತಿಯ ಮೂಲಕ ಬೆಳಕಿಗೆ ಬಂದಿದೆ. ಕನ್ನಡದ ಪಾಲಿಗೆ ಅಂಬೇಡ್ಕರ್‌ರನ್ನು ಮುಟ್ಟಿಸುವ ಗಟ್ಟಿ ಪ್ರಯತ್ನ ಇದು. ಇಂದಿನ ಸಮಾಜದ ಸಮಸ್ಯೆಗಳಿಗೆ ಹೇಗೆ ಅಂಬೇಡ್ಕರ್ ಮೂಲಕ ಉತ್ತರವನ್ನು ಪಡೆಯಬಹುದು ಎನ್ನುವುದನ್ನು ಈ ಕೃತಿ  ಯಶಸ್ವಿಯಾಗಿ ಹೇಳುತ್ತದೆ. ಲಡಾಯಿ ಪ್ರಕಾಶನ (9480286844) ಹೊರತಂದಿರುವ ಕತಿಯ ಮುಖಬೆಲೆ 70 ರೂ.

No comments:

Post a Comment