Saturday, April 2, 2011

ಚಲಂ ಮತ್ತು ಯಮುನಕ್ಕ ಒಂದೇ ವೇದಿಕೆಯಲ್ಲಿ


ನನ್ನ ಸಹೋದ್ಯೋಗಿ, ಹಿರಿಯ ಕಥೆಗಾರ ಮುಹಮ್ಮದ್ ಕುಳಾಯಿ ಅವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ನೀಡುವ ರಾಜ್ಯಮಟ್ಟದ ಅನುವಾದ ಪ್ರಶಸ್ತಿ ದೊರಕಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಜ್ಞಾನಭಾರತಿ ಆವರಣದ ಕಲಾಗ್ರಾಮದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಆ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಕನ್ನಡದ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರು ತಮ್ಮ ‘ಚಲಂ’ ಕೃತಿಗಾಗಿ ಅನುವಾದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸಮಾರಂಭದ ಬಳಿಕ ಕುಳಾಯಿ ಹಾಗೂ ರವಿಬೆಳಗೆರೆಯವರು ಜೊತೆಯಾಗಿ ಫೋಟೋ ತೆಗೆಸಿಕೊಂಡರು. ಆ ಫೋಟೋವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಅಂದ ಹಾಗೆ, ಕುಳಾಯಿ ಅನುವಾದಿಸಿದ್ದು ಡಿ. ಕೆ. ಚೌಟ ಅವರ ತುಳು ಕಾದಂಬರಿ ‘ಮಿತ್ತಬೈಲ್ ಯಮುನಕ್ಕ’ಳನ್ನು. ತುಳು ಯಮುನಕ್ಕನನ್ನು ಕನ್ನಡಕ್ಕೆ ತರುವುದೆಂದರೆ ಸಾಮಾನ್ಯ ಕೆಲಸವಲ್ಲ. ಅದನ್ನು ಕುಳಾಯಿ ಸಮರ್ಥವಾಗಿ ಮಾಡಿದ್ದಾರೆ. ತುಳುವಿನ ಹೆಣ್ಣು ಮಕ್ಕಳ ಕಾರುಬಾರು, ಗತ್ತು, ಗೈರತ್ತುಗಳಿಗೆ ಒಂದಿಷ್ಟು ಧಕ್ಕೆ ಬಾರದಂತೆ ಅದನ್ನು ಕನ್ನಡಕ್ಕಿಳಿಸಿದ್ದಾರೆ. ‘ಚಲಂ’ ಕುರಿತಂತೆ ನಿಮಗೆ ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಮನುಷ್ಯನ ಒಳ-ಹೊರಗಿನ ಅರಾಜಕತೆಯ ವಿರುದ್ಧದ ಎರಡು ಹೋರಾಟಗಳು ಚಲಂ-ಯುಮುನಕ್ಕ ಅವರ ಪಾತ್ರಗಳ ಪ್ರಧಾನ ಗುಣಗಳಾಗಿವೆ.

No comments:

Post a Comment