tag:blogger.com,1999:blog-3037848766175505211.post3694117976042077818..comments2023-08-24T07:51:41.030-07:00Comments on ಗುಜರಿ ಅಂಗಡಿ: ಕಮಲ್ ಹಾಸನ್ ಅವರ ವಿಶ್ವ ವಿ-ರೂಪಂB.M.BASHEERhttp://www.blogger.com/profile/14436644887076126519noreply@blogger.comBlogger2125tag:blogger.com,1999:blog-3037848766175505211.post-80958878277485892812013-02-14T08:31:01.719-08:002013-02-14T08:31:01.719-08:00ಬಶೀರ್, ಗುಜರಿಯಂಗಡಿಯು ಪ್ರಾರಂಭವಾದ ಮೊದಮೊದಲಲ್ಲಿ ನಮ್ಮಲ್ಲ...ಬಶೀರ್, ಗುಜರಿಯಂಗಡಿಯು ಪ್ರಾರಂಭವಾದ ಮೊದಮೊದಲಲ್ಲಿ ನಮ್ಮಲ್ಲಿ ನಿಮ್ಮ ಬಗ್ಗೆ "ವಿಷಯಗಳನ್ನು ಸಾವಧಾನದಿಂದ ಕೂಲಂಕುಶವಾಗಿ ನೋಡುವ ಬದ್ಧತೆ ಮತ್ತು ತಾಕತ್ತು -ಎರಡೂ ಇರುವ ಸಮಚಿತ್ತದ ವ್ಯಕ್ತಿ" ಎಂದು ಭರವಸೆಯಾಗಿತ್ತು. ಈಗೀಗ ನಿಮ್ಮ ಲೇಖನಗಳು ಮತ್ತು ಕ್ರಿಯೆಗಳು ತಳೆಯುತ್ತಿರುವ ಏಕಪಕ್ಷೀಯ ನಿಲುವುಗಳನ್ನು ಕಂಡಾಗ ನಮಗೆ ಬರೀ ಭ್ರಮನಿರಸನವಾದಂತೆ ಅನಿಸುತ್ತಿದೆ. ನೀವು ಲಂಕೇಶರ ಉಡಾಫೆ, ಹುಂಬತನ, ಏಕಪಕ್ಷೀಯತೆಗಳನ್ನ ಆದರ್ಶವಾಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೀರೇನೋ... ಆದರೆ ನಿಮ್ಮ ಲೇಖನಗಳು ಪ್ರತಾಪಸಿಂಹರ ಮುಸ್ಲಿಂ ಅವತರಣಿಕೆಯಾಗಿ ಮಾತ್ರ ಕಾಣಿಸುತ್ತವೆ; ದೂರದರ್ಶಿತ್ವ ಇಲ್ಲವಾಗಿದೆ. ಈ ತರಹದ ಏಕಪಕ್ಷೀಯತೆಯಿಂದ ಮುಸ್ಲಿಮರನ್ನ/ಶೋಷಿತರನ್ನ ಮೇಲೆತ್ತಲು ಸಾಧ್ಯ ಅಂತ ನೀವು ಭಾವಿಸಿದ್ದರೆ ಅದಕ್ಕಿಂತ ಬಾಲಿಶತನ, ದಡ್ಡತನ ಬೇರೆಯಿಲ್ಲ.<br /><br />ಈ ಲೇಖನದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನೋಡಿ:<br /><br />೧)ನೀವು ಹೇಳಿದ್ದೀರಿ: "ಕಮಲ್ನ ತಂದೆ ...ತಮಿಳುನಾಡಿನಲ್ಲಿ ಬ್ರಾಹ್ಮಣರು ಎದುರಿಸಿದ ದ್ರಾವಿಡ ಚಳವಳಿ, ಪೆರಿಯಾರ್ ಬೆಂಬಲಿಗರಿಂದ ನಡೆದ ಪ್ರತಿಭಟನೆಗಳು ಪರೋಕ್ಷವಾಗಿ ಆ ಚಿತ್ರದಲ್ಲಿ ತನ್ನ ಪರಿಣಾಮವನ್ನು ಬೀರಿರುವುದರಲ್ಲಿ ಯಾವ ಸಂಶಯವೂ ಇಲ್ಲ......ಇದೆಲ್ಲದರ ಅರ್ಥ, ಭಾರತವನ್ನು ಬಿಡಲು ವರ್ಷಗಳ ಹಿಂದೆಯೇ ಕಮಲ್ ನಿರ್ಧರಿಸಿದ್ದಾರೆ. ಮತ್ತು ವಿಶ್ವರೂಪಂ ಚಿತ್ರದ ಮೂಲಕ ಅದಕ್ಕೊಂದು ವಾತಾವರಣವನ್ನು, ವೇದಿಕೆಯನ್ನು ನಿರ್ಮಿಸಿದ್ದಾರೆ."<br />ಚಿತ್ರ ನೋಡಿದಾಗಲಂತೂ ನನಗೆ ಇದಕ್ಕೆ ತದ್ವಿರುದ್ಧವಾಗಿಯೇ ಅನ್ನಿಸಿತು. ಪುರಾವೆಗಳಿಲ್ಲದ ಇಂತಹ 'ಕೇವಲ ವೈಯಕ್ತಿಕ ಅನುಮಾನ'ಗಳನ್ನ ಸಾರ್ವಕಾಲಿಕ ಸತ್ಯಗಳಂತೆ ಘಂಟಾಘೋಷವಾಗಿ ಕೂಗುವುದು, ಚಿಂತನಾಶಕ್ತಿಯಿಲ್ಲದವರನ್ನು ದಾರಿತಪ್ಪಿಸುವ, ಒಂದು ವರ್ಗವನ್ನು ತುಷ್ಟೀಕರಿಸುವ, ಅಭದ್ರ ಮನಸ್ಥಿತಿಯ ಬಡಬಡಿಕೆಗಳಂತೆಯೂ ಕಾಣುತ್ತಿವೆ. ("ಹೌದು, ನಾನು ಅಭದ್ರನೇ; -ಮುಸ್ಲಿಮರೆಲ್ಲರೂ ಕೂಡಾ!" ಅಂತೇನಾದರೂ ಅನ್ನುವಿರಾದರೆ ನಿಮ್ಮೊಂದಿಗೆ ಒಂದು ಸಮುದಾಯವನ್ನೂ ಅನಾವಶ್ಯಕ ದೈನ್ಯಕ್ಕೆಳೆದ ಅಪರಾಧಿಗಳಾಗುತ್ತೀರಷ್ಟೇ.)<br /><br />೨)ನಿಮ್ಮ ಅಂಬೋಣ: "ಕಮಲ್ನ ಪ್ರಕಾರ ಭಾರತೀಯ ಮುಸ್ಲಿಮರು ಒಳ್ಳೆಯವರಾಗಿ ಗುರುತಿಸಲ್ಪಡಬೇಕಾದರೆ ಒಂದೋ ಕಥಕ್ ಕಲಿಯಬೇಕು. ಇಲ್ಲವೇ ರಾ ಏಜೆಂಟ್ ಆಗಬೇಕು. ಇದರ ಜೊತೆ ಜೊತೆಗೆ ನಮಾಝ್ ಮಾಡಿದರೆ ಅದು ಸಹಿಸಲಾರ್ಹ."<br />-ಹಾಸ್ಯಾಸ್ಪದ ತೀರ್ಪು ಇದು. ರಾ ಏಜೆಂಟನಾಗಿರುವುದು ಅವನ ಆಯ್ಕೆಯಷ್ಟೇ . ಮುಸ್ಲಿಮರೆಲ್ಲ ರಾ ಎಜೆಂಟರಾಗಿ, ಕಥಕ್ ಕಲಿಯಿರಿ ಅಂತೆಲ್ಲಿ ಹೇಳಿದ್ದಾನೆ? 'ರಾ ಏಜೆಂಟನಾದರೂ - ಕಥಕ್ ಕಲಿತರೂ ತನ್ನ ಧರ್ಮಕ್ಕೆ ಚ್ಯುತಿಯಾಗದು" ಅಂತನ್ನುವ ಉದಾರಿ. ಸಾಂಧರ್ಭಿಕವಾಗಿ ಕಥಕ್ ಮಾಸ್ತರನ ವೇಷದಲ್ಲಿದ್ದಾಗ ತಾನು ಚಿಕನ್ ತಿನ್ನಲಾರ; -ತನ್ನ ಪ್ರೀತಿಯ ಹೆಂಡತಿಗಾಗಿ ಚಿಕನ್ ತಯಾರಿಸದೆಯೂ ಇರಲಾರ. ಭಯೋತ್ಪಾದನೆಯ ಅತಿರೇಕವನ್ನ್ ತಡೆಯಲಿಕ್ಕೆ ಹೋಗುವುದು ದೇಶಭಕ್ತಿಗಿಂತಲೂ ಹೆಚ್ಚಾಗಿ ಮಾನವೀಯತೆಯ ಪರವಾಗಿ ಆ ಸಂದರ್ಭದಲ್ಲಿ ಅನಿವಾರ್ಯ ಆಯ್ಕೆಯಾಗಿ ಮೂಡಿಬರುತ್ತದೆಯಷ್ಟೇ. ಸರಿಯಾಗಿ ನೋಡಿ, ಚಿತ್ರದಲ್ಲಿ ನಾಯಕನು ಎಂಥ ಸಂದರ್ಭದಲ್ಲೂ ನಮಾಝ್ ಬಿಡದ ಧಾರ್ಮಿಕ ಕಟ್ಟಾಳು.<br /><br />೩) "ಒಂದಾನೊಂದು ಕಾಲದಲ್ಲಿ ಅಮೆರಿಕವೆನ್ನುವ ಅಮೆರಿಕವೇ ತಾಲಿಬಾನ್ಗಳನ್ನು ಸ್ವಾತಂತ್ರ ಯೋಧರು ಎಂದು ಕರೆದಿತ್ತು. ಯಾಕೆಂದರೆ ತಾಲಿಬಾನರನ್ನು ಸೃಷ್ಟಿಸಿದ್ದೇ ಅಮೆರಿಕ. ರಷ್ಯನ್ನರ ವಿರುದ್ಧ ಅಫ್ಘಾನಿಸ್ತಾನ ಹೋರಾಟ ನಡೆಸಿದಾಗ ಅದನ್ನು ಮೆಚ್ಚಿದ ಅಮೆರಿಕವೇ ಇಂದು ವಿಶ್ವರೂಪಂನಲ್ಲಿ, ತನ್ನ ವಿರುದ್ಧದ ಅಫ್ಘಾನಿಗಳ ಹೋರಾಟವನ್ನು, ಭಯೋತ್ಪಾದಕರ ಕ್ರೌರ್ಯವಾಗಿ ಬಿಂಬಿಸಿದೆ." --ಅಮೆರಿಕವೇ ಬಿಂಬಿಸಿದೆ ಅನ್ನುವುದು ಇತ್ಯಾದಿ ಎಲ್ಲಾ ಓಕೆ, ಆದರೆ ವಿಶ್ವರೂಪಂನಲ್ಲಿ ಅಮೆರಿಕನ್ ಹಿತಾಸಕ್ತಿಗಳೇ ಬಂದು ಬಿಂಬಿಸಿವೆ ಅನ್ನುವುದು ಮಾತ್ರಾ ಪುರಾವೆಯಿಲ್ಲದ ಹುಚ್ಚುಹುಚ್ಚಾದ ಬಡಬಡಿಕೆ. ಇದೇ ರೀತಿ ವಾದಿಸುವುದೇ ಸಿಂಧುವಾಗುತ್ತದೆ ಅಂತಾದರೆ ಯಾವುದೋ ಕುಗ್ರಾಮದ ನನ್ನ ಹಿಂದೆಯೂ ಅಮೇರಿಕನ್ ಹಿತಾಸಕ್ತಿಗಳೇ ಚಿತಾವಣೆ ನಡೆಸಿ ಈ ಪ್ರತಿಕ್ರಿಯೆಯನ್ನ ಬರೆಸಿವೆ ಅಂತಲೂ, ಅಲ್-ಖೈದಾವೇ ನಿಮ್ಮ ಹಿಂದೆ ಇವೆಯಂತಲೂ ವಿತಂಡವಾದ ಹೂಡಬಹುದು. <br /><br />ಅನಿವಾರ್ಯವಾಗಿ ಆತ್ಮಹತ್ಯಾ ಬಾಂಬರ್ ಆಗುವ ಬಾಲಕ ಇನ್ನೂ ಉಯ್ಯಾಲೆಯಲ್ಲಿ ಆಡಲು ಬಯಸುವಂಥ ಮುಗ್ಢನಾಗಿರುವ, ಅಮೇರಿಕದ ದಾಳಿಗಳಲ್ಲಿ ಒಬ್ಬ ಉಗ್ರನಿಗೆ ಹತ್ತು ನಾಗರೀಕರು ಅನಾವಶ್ಯವಾಗಿ ಬಲಿಯಾಗುವ, ನಾಯಕ "ತಾನೇ ವಿಲನ್ -ತನ್ನ ಪಾಪಗಳೇ ಅಗಣಿತ -ತನಗೆಲ್ಲೂ ಕ್ಷಮೆಯಿಲ್ಲ" ಎಂದೆಲ್ಲಾ ಹಲಬುವಂತಹ ದೃಷ್ಯಗಳು, ಈ ತರಹದ ಹತ್ತಾರು ಮಾನವೀಯ ಚಿತ್ರಣಗಳು ನಿಮ್ಮ ಕಣ್ಣಿಗೆ ಬೀಳಲಿಲ್ಲ. ಬದಲಿಗೆ, ಚಿತ್ರವನ್ನು ಸರಿಯಾಗಿ - ಇಡಿಯಾಗಿ ನೋಡದೇ, ಅಸಹನೆಯಿಂದ ಪೂರ್ವಾಗ್ರಹಗಳಿಂದ ನೋಡುವ ಮೂಲಕ, ಹೇಗೆಲ್ಲಾ ತಪ್ಪು ತಪ್ಪಾಗಿ ಅರ್ಥೈಸಲು ಬರುತ್ತೆ ಅಂತ ತೋರಿಸಿದ್ದೀರ ಅಷ್ಟೆ. <br /><br />ನೀವು ಹೀಗೆ ಪ್ರತಾಪಸಿಂಹರ ಮಾದರಿಯ ವಾದಗಳನ್ನು ಮಾಡುತ್ತಾ ಇರುವುದು ವಿಚಾರಶಕ್ತಿಯುಳ್ಳವರೇ ಆದ ನಿಮ್ಮಿಂದ ಆಗಬಹುದಾದ ಎಷ್ಟೊ ಅರ್ಥಪೂರ್ಣ ಕೆಲಸಗಳನ್ನ ಅಸಾಧ್ಯವಾಗಿಸುತ್ತಿದೆಯಷ್ಟೆ. ~~@#@$Anonymousnoreply@blogger.comtag:blogger.com,1999:blog-3037848766175505211.post-28191712216673784522013-02-11T09:52:14.271-08:002013-02-11T09:52:14.271-08:00>>ಒಬ್ಬ ತನ್ನ ಕಮರ್ಶಿಯಲ್ ಚಿತ್ರವನ್ನು ಯಶಸ್ವಿಗೊಳಿಸ... >>ಒಬ್ಬ ತನ್ನ ಕಮರ್ಶಿಯಲ್ ಚಿತ್ರವನ್ನು ಯಶಸ್ವಿಗೊಳಿಸಲು ಬೇಕಾಬಿಟ್ಟಿಯಾಗಿ ಅಶ್ಲೀಲ ದೃಶ್ಯಗಳನ್ನು ಹಾಕುವುದು ಹೇಗೆ ಅಭಿವ್ಯಕ್ತಿ ಸ್ವಾತಂತ್ರದ ವ್ಯಾಪ್ತಿಯಲ್ಲಿ ಬರುವುದಿಲ್ಲವೋ ಹಾಗೆಯೇ, ವಿವಾದ ಮಾಡುವುದಕ್ಕಾಗಿಯೇ ಕೆಲವೊಮ್ಮೆ ಹಿಂಸೆ, ಕ್ರೌರ್ಯ, ವಿದ್ವೇಷಗಳನ್ನು ತುರುಕುವುದೂ ಅಭಿವ್ಯಕ್ತಿ ಸ್ವಾತಂತ್ರದ ವ್ಯಾಪ್ತಿಯಲ್ಲಿ ಬರುವುದಿಲ್ಲ.<<<br />ತಪ್ಪು!! ಸೊಲ್ಲೀಳಿಗೆ(ಅಭಿವ್ಯಕ್ತಿ ಸ್ವಾತಂತ್ರ) ಒಂದು ಚಿತ್ರದಲ್ಲಿರುವ ಅಶ್ಲೀಲ, ಕ್ರವ್ರಿಯ, ವಿದ್ವೇಶಗಳಿಂದಿಡಿದು ಕೋರ್ಟು, ಸೇನೆ, ಸರಕಾರದ, ಮತಗಳ ತೆಗಳಿಕೆಯವರೆಗೆ ವಿಸ್ತಾರವಾದುದ್ದು! ಸೊಲ್ಲೀಳಿಗೆಗೆ ಮಿತಿಯಿಲ್ಲ! ಮಿತಿಯಿದ್ದರೆ ಅದು ಸೊಲ್ಲೀಳಿಗೆಯಲ್ಲ!! <br />ಇರಾಕ್ ಆಪ್ಗನಿಸ್ತಾನಗಳಲ್ಲಿ ಅಮೇರಿಕಾ ನಡೆಸುತ್ತಿರುವುದು 'ಅನ್ಯಾಯ' ಎಂದುಕೊಂಡಿರುವ ನಿಮ್ಮದೂ ಸರಳ ಚಿಂತನೆಯೇ. ಎಮ್. ಓಸ್ಬೋರ್ನ್ ಮತ್ತು ಲೀ ಅಂದರೆ ಅಮೇರಿಕಾವಲ್ಲ. ಇವರುಗಳ ಜೊತೆ ಕಮಲ್ ಮಾತಾಡಿದ್ದಾರೆ ಅಂದರೆ ಅಮೇರಿಕಾದ ಜೊತೆ ಸೇರಿ ಹೂಟ ಹೂಡಿದ್ದಾರೆ ಅಂತಲ್ಲ!! ಮಿಗಿಲಾಗಿ, ಅಮೇರಿಕಾದಲ್ಲಿ ನೆಲೆಸಿರುವ ಬಾಲಿವುಡ್ನಲ್ಲಿ ಅಮೇರಿಕಾದ ಯುದ್ದನೀತಿ ವಿರೋದಿಗಳೇ ಹೆಚ್ಚು!ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡhttps://www.blogger.com/profile/04780606694934190610noreply@blogger.com