tag:blogger.com,1999:blog-30378487661755052112024-03-05T19:42:50.945-08:00ಗುಜರಿ ಅಂಗಡಿB.M.BASHEERhttp://www.blogger.com/profile/14436644887076126519noreply@blogger.comBlogger430125tag:blogger.com,1999:blog-3037848766175505211.post-71780118744343749192017-11-20T10:25:00.000-08:002017-11-20T10:25:36.866-08:00ಕುಂಡದೊಳಗಿಟ್ಟು ನಾವು ಸಾಕುತ್ತಿರುವ ಸೌಹಾರ್ದ!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEg5KuxZGq9UW10YdAfOZQbauxFZtwwZM1Enao7qT69DftpP9LCg4TWq8RaASB7Oj02f6vpyRewVEGF-nUidFYDnBVWOCF6L903h0D62AU-W4QIpEpJGTYeqoFKenjoKWRFZL_F7CjvXzGkT/s1600/1176882_Wallpaper2.jpg" imageanchor="1" style="margin-left: 1em; margin-right: 1em;"><b><span style="color: blue; font-size: large;"><img border="0" data-original-height="1200" data-original-width="1600" height="240" src="https://blogger.googleusercontent.com/img/b/R29vZ2xl/AVvXsEg5KuxZGq9UW10YdAfOZQbauxFZtwwZM1Enao7qT69DftpP9LCg4TWq8RaASB7Oj02f6vpyRewVEGF-nUidFYDnBVWOCF6L903h0D62AU-W4QIpEpJGTYeqoFKenjoKWRFZL_F7CjvXzGkT/s320/1176882_Wallpaper2.jpg" width="320" /></span></b></a></div>
<b><span style="color: blue; font-size: large;">ಇತ್ತೀಚೆಗೆ ಕರಾವಳಿಯಲ್ಲಿ ಜಿಲ್ಲಾ ಮಟ್ಟದ ಒಂದು ಕ್ರಿಕೆಟ್ ಪಂದ್ಯ ‘ಸೌಹಾರ್ದ’ ಕಾರಣಕ್ಕಾಗಿ ಸುದ್ದಿಯಾಯಿತು. ಈ ಪಂದ್ಯದ ಪ್ರಮುಖ ನಿಯಮಾವಳಿ ಏನೆಂದರೆ ‘ಭಾಗವಹಿಸುವ ಪ್ರತೀ ತಂಡದಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಆಟಗಾರರು ಇರಬೇಕು” ಎನ್ನುವುದು. ಪತ್ರಿಕೆಗಳಲ್ಲೂ ಈ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಶ್ಲಾಘಿಸಿ ಲೇಖನಗಳು ಪ್ರಕಟವಾದವು. ೨೦ ವರ್ಷಗಳ ಹಿಂದಿನ ಮಾತು. ನಮ್ಮ ಊರಿನ ಮೈದಾನದಲ್ಲಿ ಆಟದ ಖುಷಿಗಾಗಿ ಆಟಗಾರರು ಸೇರುತ್ತಿದ್ದರೇ ಹೊರತು, ಅವರು ತಮ್ಮ ಧರ್ಮದ ಪ್ರತಿನಿಧಿಗಳಾಗಿ ಅಲ್ಲಿ ಸೇರುತ್ತಿರಲಿಲ್ಲ. ಸಂಜೆಯಾದಾಕ್ಷಣ ಕ್ರಿಕೆಟ್ ಬ್ಯಾಟುಗಳ ಜೊತೆಗೆ ಸೇರುವ ನಝೀರ್, ಮೋಹನ, ರಾಮಕೃಷ್ಣ, ಮಜೀದ್, ಪಿಂಟೋ...ಇವರೆಲ್ಲ ತಮ್ಮ ಆಟದ ಸಾಮರ್ಥ್ಯಕ್ಕನುಗುಣವಾಗಿ ಅಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತಿದ್ದರು. ಸಂಜೆ ಏಳರವರೆಗೂ ಆಡಿ, ಬಳಿಕ ಒಂದು ಅರ್ಧ ಗಂಟೆ ‘ಪಟ್ಟಾಂಗ’ ಹೊಡೆದು ಅವರವರ ಮನೆಗೆ ತೆರಳುವುದು ಹದಿಹರೆಯದ ಹುಡುಗರ ಒಂದು ದಿನಚರಿಯೇ ಆಗಿತ್ತು. ಮುಖ್ಯವಾಗಿ, ಎಲ್ಲ ಜಾತಿ ಧರ್ಮಗಳನ್ನು ಮೀರಿ ನಾವಿಲ್ಲಿ ಒಂದಾಗಿದ್ದೇವೆ ಎನ್ನುವ ಅರಿವೂ ಅವರಿಗಿರಲಿಲ್ಲ. ಶಾಲೆಗಳನ್ನು ಹೊರತು ಪಡಿಸಿದರೆ, ನಮ್ಮೆಲ್ಲರನ್ನು ಜಾತಿ ಧರ್ಮದಾಚೆಗೆ ಒಂದಾಗಿಸುತ್ತಿದ್ದುದು ಈ ಮೈದಾನವೇ ಆಗಿತ್ತು. ಯಾವ ಸೌಹಾರ್ದದ ಭಾಷಣಗಳು, ದೇಶಭಕ್ತಿಯ ಘೋಷಣೆಗಳು ನಮಗೆ ಒಂದಾಗುವುದಕ್ಕೆ ಅಗತ್ಯವಿರಲಿಲ್ಲ. ಮನೆಯ ಬಳಿಕ ನಾವು ಹೊರಜಗತ್ತನ್ನು ಮುಖಾಮುಖಿಯಾಗುವುದೇ ಊರಿನ ಈ ಮೈದಾನಗಳ ಮೂಲಕ. ನಮ್ಮನ್ನು ಆ ಊರಿನ ಅಧಿಕೃತ ಸದಸ್ಯನಾಗಿ ಘೋಷಿಸುವುದು ಈ ಮೈದಾನಗಳೇ ಆಗಿದ್ದವು.</span></b><br />
<b><span style="color: blue; font-size: large;">ನಮ್ಮ ಮನೆಯ ಹೊರಗಿನ ಸಮಾಜ ನಮಗೆ ಮೊದಲು ತೆರೆದುಕೊಳ್ಳುವುದು ಶಾಲೆಗಳ ಮೂಲಕ. ಇಲ್ಲಿ ಬೇರೆ ಬೇರೆ ಧರ್ಮ, ಸಂಸ್ಕೃತಿ, ಭಾಷೆಗಳ ಮುಖಾಮುಖಿಯಾಗುತ್ತದೆ. ಯಾರೂ ನಮಗೆ ಇನ್ನೊಂದು ಧರ್ಮವನ್ನು, ಭಾಷೆಯನ್ನು ಪರಿಚಯಿಸಬೇಕಾಗಿರಲಿಲ್ಲ. ನಾವೆಲ್ಲ ತುಳು ಭಾಷೆಯನ್ನು ಯಾವುದೇ ಶಾಲೆಯಲ್ಲಿ ಅಥವಾ ಗುರುಗಳಲ್ಲಿ ಕಲಿತಿರುವುದಲ್ಲ. ಮನೆ ಭಾಷೆ ಬ್ಯಾರಿಯಾಗಿದ್ದರೆ, ಊರ ಹುಡುಗರ ಜೊತೆಗೆ ಮೈದಾನದಲ್ಲಿ, ಶಾಲೆಯಲ್ಲಿ ಆಟವಾಡುತ್ತಲೇ ತುಳುವನ್ನು ನಮ್ಮದಾಗಿಸಿಕೊಂಡೆವು. ಜಾತ್ರೆಗಳಲ್ಲಿ, ಉರೂಸುಗಳಲ್ಲಿ ಓಡಾಡುತ್ತಾ ವಿವಿಧ ಸಂಸ್ಕೃತಿಗಳನ್ನು ಸಹಜವಾಗಿ ನಮ್ಮೊಳಗೆ ಇಳಿಸಿಕೊಳ್ಳತೊಡಗಿದೆವು. ಶಾಲೆಯಲ್ಲಿ ಒಟ್ಟಾಗಿ ಓದುತ್ತಾ, ಜಗಳ ಮಾಡುತ್ತಾ, ಆಡುತ್ತಾ ಎಲ್ಲರೂ ನಮ್ಮವರಾದರು. ನಾನು ಓದಿರುವುದು ಚರ್ಚ್ ಶಾಲೆಯಾಗಿತ್ತು. ಆ ಕಾಲದಲ್ಲಿ ಎಲ್ಲ ಧರ್ಮೀಯರು ಆದ್ಯತೆಯ ಮೇಲೆ ಚರ್ಚ್ ಶಾಲೆಗಳಿಗೇ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದರು. ಆದರೆ ಎಂದಿಗೂ ಅದು ಒಂದು ಧರ್ಮೀಯರ ಶಾಲೆ ಎಂದು ನಮಗಾಗಲಿ, ನಮ್ಮ ಪಾಲಕರಿಗಾಗಲಿ ಅನಿಸಿರಲಿಲ್ಲ. ನಾವ್ಯಾರೂ ಆ ಶಾಲೆಯಲ್ಲಿ ಕಲಿತ ಕಾರಣಕ್ಕೆ ಮತಾಂತರ ಹೊಂದಲಿಲ್ಲ. ಶಾಲೆಯಲ್ಲಿ ಕ್ರಿಸ್ಮಸ್, ದೀಪಾವಳಿ ಆಚರಿಸಿದ ಸಂದರ್ಭಗಳಲ್ಲಿ, ಅದೆಲ್ಲ ಬೇರೆಯವರದು ಎಂದೆನಿಸದೇ ನಾವೆಲ್ಲರೂ ತುಂಬು ಖುಷಿಯಿಂದ ಆಚರಿಸುತ್ತಿದ್ದೆವು. ಇಂದಿಗೂ ದೀಪಾವಳಿ ಹಬ್ಬ ಬಂದಾಗ ಹೃದಯದಲ್ಲೇನೋ ಅರಳಿದಂತಾಗುವುದು ಇದೇ ಕಾರಣಕ್ಕೆ ಇರಬಹುದು. ಇಲ್ಲಿ, ಯಾವುದೇ ಭಾಷಣ, ಸಮ್ಮೇಳನ, ಧಾರ್ಮಿಕ ಪುಸ್ತಕಗಳು ನಮ್ಮನ್ನು ಪರಸ್ಪರ ಪರಿಚಯಿಸಿ ಒಂದಾಗಿಸಿರುವುದಲ್ಲ. ಒಂದು ರೀತಿಯಲ್ಲಿ, ಸೌಹಾರ್ದವೆನ್ನುವುದು ನಮ್ಮ ಕಾಲಕ್ಕೆ, ಸಹಜವಾಗಿ ಹರಡಿಕೊಂಡ ಕಾಡುಗಳಾಗಿದ್ದವು. ಅದಕ್ಕೆ ಯಾರೂ ನೀರುಣಿಸಿರಲಿಲ್ಲ, ಯಾರೂ ಗೊಬ್ಬರ ಹಾಕಿರಲಿಲ್ಲ. ಆದರೂ ಅದು ಯಥೇಚ್ಛವಾಗಿ, ಸಮೃದ್ಧವಾಗಿ ಹರಡಿಕೊಳ್ಳುತ್ತಾ ಹೋಯಿತು. ಆದುದರಿಂದಲೇ ನಮ್ಮ ಪಾಲಿಗೆ ಯಾರೂ ಅನ್ಯರಲ್ಲ, ಯಾವುದೂ ಅನ್ಯವಾಗಿರಲಿಲ್ಲ. ನಮಗೆ ಆಗ ‘ಗೆಳೆಯ’ರಷ್ಟೇ ಇದ್ದರು. ಇಂದಿನ ಹಾಗೆ, ಮುಸ್ಲಿಮ್ ಗೆಳೆಯರು, ಹಿಂದೂ ಗೆಳೆಯರು, ಕ್ರಿಶ್ಚಿಯನ್ ಗೆಳೆಯರು ಇದ್ದಿರಲಿಲ್ಲ. ಹಿಂದೂ ಆಟಗಾರ, ಮುಸ್ಲಿಮ್ ಆಟಗಾರ ಎನ್ನುವ ಭಾಷೆಯೂ ಆಗ ಚಾಲ್ತಿಯಲ್ಲಿರಲಿಲ್ಲ. ವಿಪರ್ಯಾಸವೆಂದರೆ, ಇಂದು ಅಂತಹ ಸಹಜವಾಗಿ ಬೆಳೆದ, ಬೆಳೆಯುತ್ತಿರುವ ಕಾಡುಗಳನ್ನೆಲ್ಲ ಸಮಾಜ ಭಾಗಶಃ ಕಡಿದು ಹಾಕಿದೆ. ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ಪುಟಾಣಿ ಮಕ್ಕಳು ಒಟ್ಟು ಸೇರುವ ಎಲ್ಲ ಮೈದಾನಗಳನ್ನು, ವೇದಿಕೆಗಳನ್ನು ನಾಶ ಮಾಡಿ, ನಾವು ನಮ್ಮ ನಮ್ಮ ಕಾಂಪೌಂಡ್ನೊಳಗೆ ಕುಂಡದಲ್ಲಿ ಸೌಹಾರ್ದ ಗಿಡಗಳನ್ನು ನೆಟ್ಟು ಬೆಳೆಸಲು ಹೊರಟಿದ್ದೇವೆ. </span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">ಇತ್ತೀಚೆಗೆ ಎಂಟನೆ ತರಗತಿಯಲ್ಲಿ ಕಲಿಯುತ್ತಿರುವ ನನ್ನ ಪರಿಚಯದ ಹುಡುಗನ ಜೊತೆಗೆ ನಾನು ಮಾತನಾಡಿದೆ. ಅವನು ಓದುತ್ತಿರುವ ಶಾಲೆಯ ಹೆಸರು ಕೇಳಿದೆ. ಅದು ಧಾರ್ಮಿಕ ಹಿನ್ನೆಲೆಯಿರುವ ಸಂಘಟನೆಯೊಂದು ನಡೆಸುವ ಶಾಲೆ. ಎಲ್ಕೆಜಿಯಿಂದ ಹಿಡಿದು ಎಂಟನೆಯ ತರಗತಿಯವರೆಗೂ ಅವನು ಅದೇ ಶಾಲೆಯಲ್ಲಿ ಕಲಿಯುತ್ತಾ ಬಂದಿದ್ದಾನೆ. ‘ನಿನ್ನ ಶಾಲೆಯಲ್ಲಿ ಬೇರೆ ಧರ್ಮೀಯರು ಎಷ್ಟಿದ್ದಾರೆ?” ಎಂಬ ಪ್ರಶ್ನೆಗೆ ಆಘಾತಕಾರಿ ಉತ್ತರ ದೊರಕಿತು. ಅವನ ಶಾಲೆಯಲ್ಲಿ ಒಬ್ಬನೇ ಒಬ್ಬ ಬೇರೆ ಧರ್ಮೀಯ ವಿದ್ಯಾರ್ಥಿಯಿರಲಿಲ್ಲ. ಈ ವಿದ್ಯಾರ್ಥಿ ತನ್ನ ಮನೆಯಿಂದ ಹೊರಗೆ, ಸಮಾಜಕ್ಕೆ ತೆರೆದುಕೊಳ್ಳುವುದು ಈ ಶಾಲೆಯ ಮೂಲಕವಾಗಿದೆ. ಶಾಲೆಯಿಂದ ನೇರವಾಗಿ ಈತ ಮನೆಗೆ ಬರುತ್ತಾನೆ. ಮನೆಯಿಂದ ಟ್ಯೂಶನ್ಗೆ ಹೋಗುತ್ತಾನೆ. ಬಳಿಕ ಮತ್ತೆ ಮನೆಗೆ. ತನ್ನ ಧರ್ಮೀಯರನ್ನು ಬಿಟ್ಟರೆ ಇನ್ನೊಂದು ಧರ್ಮದ ವಿದ್ಯಾರ್ಥಿಯನ್ನು ಭೇಟಿಯಾಗುವ ಅವಕಾಶವೇ ಅವನಿಗೆ ಈವರೆಗೆ ಸಿಕ್ಕಿಲ್ಲ. ಎಲ್ಲೋ ನೆರೆಯಲ್ಲಿ ಅಥವಾ ಹೊರಗಡೆ ಸಿಕ್ಕಿದರೂ ಅದು ಅತ್ಯಲ್ಪ. ಹಿಂದಿನಂತೆ ಮಕ್ಕಳನ್ನು ಹೊರಗಡೆ ಸಾರ್ವಜನಿಕ ಮೈದಾನಕ್ಕೆ ಆಟ ಆಡಲು ಸ್ವತಂತ್ರವಾಗಿ ಕಳುಹಿಸುವ ಪರಿಪಾಠವೂ ಈಗ ಇಲ್ಲ. ಈ ಹುಡುಗ ಹತ್ತನೇ ತರಗತಿಯವರೆಗೂ ಆ ಶಾಲೆಯಲ್ಲಿ ಕಲಿತು, ಬಳಿಕ ಕಾಲೇಜಿಗೆ ಕಾಲಿಡುತ್ತಾನೆ. ಅಂದರೆ ಹೊರಗಿನ ಸಮಾಜಕ್ಕೆ ಈತ ನಿಜವಾದ ಅರ್ಥದಲ್ಲಿ ಕಾಲಿಡುವುದು ತನ್ನ ಹತ್ತನೇ ತರಗತಿಯ ಬಳಿಕ. ಕಾಲೇಜಿಗೆ ಕಾಲಿಡುವುದೆಂದರೆ, ಈವರೆಗೆ ಅವನ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ಒಮ್ಮೆಲೆ ಬಿಚ್ಚಿದಂತೆ. ತನ್ನೆದುರು ಕಾಣುತ್ತಿರುವುದೆಲ್ಲವೂ ಅವನಿಗೆ ‘ಅನ್ಯ’ ಅನ್ನಿಸತೊಡಗುತ್ತದೆ. ಇನ್ನೊಂದು ಧರ್ಮೀಯರ ಹೆಸರು, ಮಾತು, ಸಂಸ್ಕೃತಿ ಯಾವುದೂ ಅವನಿಗೆ ಪರಿಚಿತವಲ್ಲ. ಅವನು ಅದನ್ನು ಆ ಹೊತ್ತಿನಲ್ಲಿ ಹೊಸದಾಗಿ ತನ್ನದಾಗಿಸಲು ಪ್ರಯತ್ನಿಸಬೇಕು. ಬಾಲ್ಯದಲ್ಲೇ ಅವರ ಜೊತೆ ಜೊತೆಯಾಗಿ ಬಾಳುತ್ತಾ ತನ್ನದಾಗಿಸಿಕೊಳ್ಳುವುದಕ್ಕೂ, ಅನಿವಾರ್ಯ ಎನ್ನುವ ಕಾರಣಕ್ಕಾಗಿ ಇನ್ನೊಬ್ಬರನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನಕ್ಕೂ ವ್ಯತ್ಯಾಸವಿದೆ. ಯಾವುದನ್ನೂ ಅವನಿಗೆ ಸಹಜವಾಗಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಆದುದರಿಂದ, ಆತ ಬೆರೆಯುವುದಕ್ಕಾಗಿ ತನ್ನ ಧರ್ಮೀಯನನ್ನೇ ಹುಡುಕಿಕೊಂಡು ಹೋಗುತ್ತಾನೆ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರುವ ಅಪಾಯ ಅಲ್ಲ. ವಿಪರ್ಯಾಸವೆಂದರೆ, ಒಂದು ಕಾಲದಲ್ಲಿ ಲಕ್ಷಾಂತರ ಶಿಕ್ಷಿತರನ್ನು ಸೃಷ್ಟಿಸಿದ ಕ್ರಿಶ್ಚಿಯನ್ ಶಾಲೆಗಳಿಗೂ ಇದೀಗ ಧರ್ಮದ ಕಳಂಕವನ್ನು ಅಂಟಿಸಲಾಗಿದೆ. ಕ್ರಿಶ್ಚಿಯನ್ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿದರೆ ಅವರು ತಮ್ಮ ಧರ್ಮವನ್ನು ಮಕ್ಕಳ ತಲೆಯೊಳಗೆ ತುಂಬುತ್ತಾರೆ ಎಂಬ ಅಪಪ್ರಚಾರ ಹಿಂದೂಗಳಲ್ಲೂ, ಮುಸ್ಲಿಮರಲ್ಲೂ ತಿಳಿದೂ ತಿಳಿಯದಂತೆ ಹರಡಿಕೊಂಡಿದೆ. ಇತ್ತೀಚೆಗೆ ಒಬ್ಬ ಪುಟಾಣಿ ವಿದ್ಯಾರ್ಥಿಯ ಬಳಿ ಕೇಳಿದ್ದೆ “ನಿಮ್ಮ ಮನೆಯ ಹತ್ತಿರವೇ ಆ ಶಾಲೆಯಿರುವಾಗ ನೀನೇಕೆ ಅಷ್ಟು ದೂರ ಹೋಗಿ ಕಲಿಯಬೇಕು?”. ಆತ ತಕ್ಷಣ ನೀಡಿದ ಉತ್ತರ “ಅದು ಮುಸ್ಲಿಮರ ಶಾಲೆ ಅಲ್ಲವಾ?”. </span></b><br />
<b><span style="color: blue; font-size: large;">ಇಷ್ಟೇ ಅಲ್ಲ, ಕಲ್ಲಡ್ಕದಲ್ಲಿ ಪ್ರಭಾಕರಭಟ್ಟರಂತಹ ಸಂಘಪರಿವಾರ ನಾಯಕನ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕಲಿತ ವಿದ್ಯಾರ್ಥಿ ಈ ಸಮಾಜವನ್ನು ಹೇಗೆ ನೋಡಬಹುದು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳೋಣ. ಬಹು ಸಂಸ್ಕೃತಿಯ ನಾಡು ಹೀಗೆ, ತನ್ನ ಬೇರಿನಲ್ಲೇ ವಿಭಜನೆಯ ರೋಗವನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಇಂದು ಎಲ್ಲ ಧರ್ಮಗಳು, ಜಾತಿಗಳು ತಮ್ಮ ತಮ್ಮ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತಲು ತುದಿಗಾಲಿನಲ್ಲಿ ನಿಂತಿವೆ. ಆದುದರಿಂದಲೇ ಮದ್ರಸ, ಚರ್ಚು, ದೇವಸ್ಥಾನಗಳ ಅಂಗಳಗಳಲ್ಲೇ ಶಾಲೆಗಳು ತೆರೆಯುತ್ತಿವೆ. ಶಾಲೆಗಳು ತೆರೆಯುತ್ತಿರುವುದೇನೋ ಸರಿ. ಆದರೆ ಆ ಮೂಲಕ ಮಕ್ಕಳು ಧರ್ಮ, ಜಾತಿಯ ಹೆಸರಲ್ಲಿ ಸಂಪೂರ್ಣ ಬೇರ್ಪಟ್ಟು ಪರಸ್ಪರ ಅಪರಿಚಿತರಾಗಿ ಓದುವುದಕ್ಕೆ ಶುರು ಹಚ್ಚಿದರೆ ಈ ನಾಡಿನ ಬಹುತ್ವ ಉಳಿಯುವುದು ಹೇಗೆ?</span></b><br />
<b><span style="color: blue; font-size: large;">ಇನ್ನೊಂದು ವಿಪರ್ಯಾಸವನ್ನೂ ನಾವು ಗಮನಿಸಬೇಕು. ಹೀಗೆ ವಿದ್ಯಾರ್ಥಿಗಳನ್ನು ವಿಭಜಿಸುವ ಧಾರ್ಮಿಕ ಸಂಘಟನೆಗಳೇ, ವರ್ಷಕ್ಕೊಮ್ಮೆ ಬೇರೆ ಬೇರೆ ಉತ್ಸವದ ಸಂದರ್ಭದಲ್ಲಿ ಸೌಹಾರ್ದ ಸಮ್ಮೇಳನಗಳನ್ನೂ ಹಮ್ಮಿಕೊಳ್ಳುತ್ತಿವೆ. ಮುಸ್ಲಿಮ್ ಧಾರ್ಮಿಕ ಸಂಘಟನೆಗಳ ಸಮಾವೇಶದಲ್ಲಿ ಪೇಜಾವರ ಶ್ರೀಗಳಂತಹ ಹಿರಿಯ ಧಾರ್ಮಿಕ ನಾಯಕರು ಭಾಗವಹಿಸುತ್ತಾರೆ. ಹಾಗೆಯೇ ಪೇಜಾವರ ಶ್ರೀಗಳ ಪರ್ಯಾಯ ಉತ್ಸವದ ಸರ್ವಧರ್ಮ ಸೌಹಾರ್ದ ಸಮ್ಮೇಳನದಲ್ಲಿ ಸಿ. ಎಂ. ಇಬ್ರಾಹೀಂರಂತಹ ಮುಸ್ಲಿಮ್ ಮುಖಂಡರು ಮಾತನಾಡಿ ಸೌಹಾರ್ದದ ಮಹತ್ವವನ್ನು ವಿವರಿಸುತ್ತಾರೆ. ಇಂತಹ ಸಮಾವೇಷಗಳಲ್ಲಿ, ಎಲ್ಲ ಧಾರ್ಮಿಕ ಮುಖಂಡರೂ ತಮ್ಮ ತಮ್ಮ ಧರ್ಮಗಳಲ್ಲಿರುವ ಸೌಹಾರ್ದದ ಮೌಲ್ಯಗಳನ್ನು ಸಮಾಜಕ್ಕೆ ಸಾರುತ್ತಾರೆ. ನಿಜ, ವಿವಿಧ ಧಾರ್ಮಿಕ ಸಂಘಟನೆಗಳು ಇಂದು ಸೌಹಾರ್ದಕ್ಕಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಾಕುತ್ತಿವೆ. ಸಮಾವೇಶಗಳನ್ನು ನಡೆಸುತ್ತಿವೆ. ಆದರೆ ಇದೊಂದು ರೀತಿ, ಸಹಜವಾಗಿ ಹರಡಿ ನಿಂತ ಸೌಹಾರ್ದದ ಕಾಡುಗಳನ್ನು ಕಡಿದು, ನಮ್ಮ ನಮ್ಮ ಕಾಂಪೌಂಡ್ಗಳೊಳಗೆ ಕುಂಡದಲ್ಲಿಟ್ಟು ಅದನ್ನು ಸಾಕಿದ ಹಾಗೆ. ಇಂತಹ ಸೌಹಾರ್ದಗಳು ಹೆಚ್ಚು ಸಮಯ ಬಾಳುವುದಿಲ್ಲ ಎನ್ನುವ ಎಚ್ಚರಿಕೆ ಬೇಕು. ಗಿಡಗಳನ್ನಾಗಲಿ, ಸೌಹಾರ್ದವನ್ನಾಗಲಿ ಕುಂಡದೊಳಗಿಟ್ಟು ಸಾಕುವುದು ದುಬಾರಿ. ಒಂದಿಷ್ಟು ಕಣ್ಣು ತಪ್ಪಿದರೂ ಆ ಗಿಡ ಬಾಡಿ ಹೋಗಬಹುದು ಅಥವಾ ಸತ್ತು ಹೋಗಬಹುದು. ಬಹುತೇಕ ಧಾರ್ಮಿಕ ಸಂಘಟನೆಗಳು ಹಮ್ಮಿಕೊಳ್ಳುವ ಸೌಹಾರ್ದ ಸಮಾವೇಶಗಳ ಉದ್ದೇಶ ತಾವು ತಮ್ಮ ಕಾಂಪೌಂಡ್ನೊಳಗೆ ಸಾಕಿರುವ ಸೌಹಾರ್ದದ ಕುಂಡಗಳ ಪ್ರದರ್ಶಿಸುವುದಷ್ಟೇ ಆಗಿರುತ್ತದೆ. ಈ ಮೂಲಕ, ತಮ್ಮ ಧರ್ಮದ ಸೌಹಾರ್ದ ಸಂದೇಶಗಳ ‘ಗೊಬ್ಬರ’ದ ಹಿರಿಮೆಯನ್ನು ಪ್ರದರ್ಶಿಸುವುದಾಗಿದೆ. ಅಂದರೆ “ನೋಡಿ, ನಮ್ಮ ಧರ್ಮದ ಗೊಬ್ಬರ ಹಾಕಿ ಬೆಳೆಸಿದ ಸೌಹಾರ್ದದ ಗಿಡಗಳು ಎಷ್ಟು ಸೊಂಪಾಗಿವೆ?” ಎನ್ನುವ ಮೂಲಕ ತಮ್ಮ ತಮ್ಮ ಧರ್ಮಗಳ ಗೊಬ್ಬರಗಳನ್ನು ಮಾರ್ಕೆಟ್ ಮಾಡುವ ಪರೋಕ್ಷ ಉದ್ದೇಶ ಅದರ ಹಿಂದೆ ಇರುತ್ತದೆ. ಇಷ್ಟಕೂ ಸಹಜವಾಗಿ ಹಬ್ಬಬಲ್ಲ ಸೌಹಾರ್ದದ ಎಲ್ಲ ಬಾಗಿಲುಗಳನ್ನು ಮುಚ್ಚಿ, ಉಪದೇಶಗಳ ಮೂಲಕ, ಪುಸ್ತಕಗಳ ಮೂಲಕ, ಭಾಷಣಗಳ ಮೂಲಕ ಸಮಾಜದಲ್ಲಿ ಸೌಹಾರ್ದವನ್ನು ನಿರ್ಮಿಸಲು ಹೊರಡುವುದೇ ಒಂದು ದೊಡ್ಡ ವ್ಯಂಗ್ಯವಾಗಿದೆ.</span></b><br />
<b><span style="color: blue; font-size: large;">ವಿದ್ಯಾರ್ಥಿ ಕಾಲದಲ್ಲಿ ರಾಮಾಯಣ, ಮಹಾಭಾರತ ಕತೆಗಳೆಂದರೆ ನಮಗೆ ಹಬ್ಬ. ಅಮರ ಚಿತ್ರಕತೆಗಳಿಂದ ಆರಂಭವಾದ ಮಹಾಭಾರತದ ಓದು ಪಂಪ, ರನ್ನರ ಮೂಲಕ ಮೂಲ ವ್ಯಾಸನವರೆಗೂ ನಿರಂತರವಾಗಿ ನಡೆಯುತ್ತಿತ್ತು. ಮಹಾಭಾರತ, ರಾಮಾಯಣ ಈ ದೇಶದ ಎರಡು ಮಹಾಕಾವ್ಯಗಳು ಎಂದು ನಮ್ಮ ಮೇಷ್ಟ್ರು ನಮಗೆ ಬೋಧಿಸಿದ್ದರು. ಇಂದಿಗೂ ನಮಗದು ಅದ್ಭುತ ಮಹಾಕಾವ್ಯಗಳೇ ಆಗಿವೆ. ಎಲ್ಲ ಭಾರತೀಯರಿಗೆ ಸೇರಿದ ಕೃತಿಗಳು ಅವು. ಇದೇ ಸಂದರ್ಭದಲ್ಲಿ, ವಿಳಾಸ ಕಳುಹಿಸಿದರೆ ಬೈಬಲ್ ಕತೆ ಪುಸ್ತಕಗಳ ಕಟ್ಟು ಕಳುಹಿಸುವ ಸಂಸ್ಥೆಯೊಂದಿತ್ತು. ನಾವೆಲ್ಲ ಪದೇ ಪದೇ ಆ ವಿಳಾಸಕ್ಕೆ ಪತ್ರ ಬರೆಯುತ್ತಿದ್ದೆವು. ಅಂಚೆಯಲ್ಲಿ ಬೈಬಲ್ ಕತೆಗಳ ಕಟ್ಟು ಬರುವುದೇ ಒಂದು ಸಂಭ್ರಮ. ಬೈಬಲ್ ಧಾರ್ಮಿಕ ಪುಸ್ತಕವೇ ಆಗಿದ್ದರೂ ನಮಗದು ಆಗ ಕತೆಪುಸ್ತಕಗಳೇ. ನನ್ನ ವಿದ್ಯಾರ್ಥಿ ಕಾಲದಲ್ಲಿ, ಕನ್ನಡ ಪಂಡಿತರಾದ ವಿ. ಆರ್. ಹೆಗಡೆ ನನ್ನ ಮೇಲೆ ವಿಶೇಷ ಪ್ರೀತಿಯಿಟ್ಟುಕೊಂಡಿರುವುದಕ್ಕೆ ‘ಮಹಾಭಾರತದ ಯಾವುದೇ ಪ್ರಶ್ನೆಗಳಿಗೂ ಚಕಚಕನೇ ಉತ್ತರಿಸುವುದೂ’ ಕಾರಣವಾಗಿರಬೇಕು. ರಾಮಾಯಣ, ಮಹಾಭಾರತ, ಬೈಬಲ್ನಲ್ಲಿ ಬರುವ ಕೆಲವು ನೀತಿಕತೆಗಳಿಂದ ನಾನು ಇನ್ನಷ್ಟು ಒಳ್ಳೆಯ ಮುಸ್ಲಿಮನಾಗಲು ಸಾಧ್ಯವಾಯಿತೇ ಹೊರತು, ಹಿಂದೂ ಅಥವಾ ಕ್ರೈಸ್ತನಾಗಿ ನಾನೆಂದಿಗೂ ಬದಲಾಗಲಿಲ್ಲ. </span></b><br />
<b><span style="color: blue; font-size: large;">ಇತ್ತೀಚೆಗೆ ನಾನು ಮಹಾಭಾರತದ ಒಂದು ಪಾತ್ರವನ್ನು ವಿಶ್ಲೇಷಣೆ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿದ್ದೆ. ಕೆಲವೇ ಕ್ಷಣದಲ್ಲಿ ಒಬ್ಬ ತರುಣ ಆಕ್ರೋಶಿತನಾಗಿ “ನಮ್ಮ ಧರ್ಮದ ಗ್ರಂಥದ ಬಗ್ಗೆ ಮಾತನಾಡಲು ನೀನು ಯಾರು?” ಎಂದವನೇ ವಾಚಾಮಗೋಚರವಾಗಿ ಕುರ್ಆನ್ ಗ್ರಂಥವನ್ನು ನಿಂದಿಸತೊಡಗಿದ. ನಾನು ಸಹನೆಯಿಂದಲೇ ಆ ತರುಣನಿಗೆ ಮಹಾಭಾರತದ ಕೆಲವು ಪ್ರಶ್ನೆಗಳನ್ನು ಕೇಳಿದೆ. ‘ದ್ರೌಪದಿಯ ಅಣ್ಣನ ಹೆಸರು ಏನು ಗೊತ್ತಾ?’ ಎಂದು ಕೇಳಿದೆ. ಅವನಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರವಿರಲಿಲ್ಲ. ಅವನು ಮಹಾಭಾರತವನ್ನೇ ಸರಿಯಾಗಿ ಓದಿರಲಿಲ್ಲ. ಆದರೆ ಮಹಾಭಾರತವೆಂದರೆ ‘ಹಿಂದೂಗಳ ಧರ್ಮ ಗ್ರಂಥ’ ಎಂದು ಅವನ ತಲೆಗೆ ಯಾರೋ ತುಂಬಿಸಿದ್ದರು. </span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">ಮೇಲಿನೆಲ್ಲದರ ಅರ್ಥ, ಧಾರ್ಮಿಕ, ಜಾತಿ ಸಂಘಟನೆಗಳು ತಮ್ಮ ತಮ್ಮ ಪ್ರತ್ಯೇಕ ಶಾಲೆಗಳನ್ನು, ವಿದ್ಯಾರ್ಥಿ ಹಾಸ್ಟೆಲ್ಗಳನ್ನು ಕಟ್ಟಬಾರದು ಎಂದಲ್ಲ. ದುರ್ಬಲ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಕಾಲಿಡುತ್ತಿರುವುದು ಅಭಿನಂದನೀಯ. ಇದು ಇಂದಿನ ಅಗತ್ಯವೂ ಕೂಡ. ಹಾಗೆಂದು ಆ ಶಾಲೆಗಳು, ಹಾಸ್ಟೆಲ್ಗಳು ತಮ್ಮದೇ ಜಾತಿ, ಸಮುದಾಯದ ಘೆಟ್ಟೋಗಳು ನಿರ್ಮಾಣವಾಗಲು ಕಾರಣವಾದರೆ ಅದರಿಂದ ಸಮುದಾಯಕ್ಕೆ ಭವಿಷ್ಯದಲ್ಲಿ ಇನ್ನಷ್ಟು ಅಪಾಯವಿದೆ. ಈ ಕಾರಣಕ್ಕೇ, ದುರ್ಬಲ ವರ್ಗದ ಸಮುದಾಯಗಳನ್ನು ಪ್ರತಿನಿಧಿಸುವ ಶಾಲೆಗಳು ಕೇವಲ ತಮ್ಮ ಧರ್ಮ, ಜಾತಿಯ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗುವಂತಹ ಸ್ಥಿತಿಯನ್ನು ಅಲ್ಲಿ ನಿರ್ಮಾಣ ಮಾಡಬಾರದು. ಇದಕ್ಕೂ ಕೆಲವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಒಂದು ಧರ್ಮದ ಸಂಘಟನೆ ನಡೆಸುವ ಶಾಲೆಯ ಮುಖ್ಯಸ್ಥರು ನನ್ನೊಂದಿಗೆ ಹೀಗೆ ಹಂಚಿಕೊಂಡರು “ನೋಡಿ, ನಮ್ಮ ಶಾಲೆಯಲ್ಲಿ ಬೇರೆ ಧರ್ಮೀಯರಿಗೂ ಧಾರಾಳ ಅವಕಾಶವಿದೆ. ಬೇರೆ ಧರ್ಮೀಯರು ಬಂದರೆ ಅವರಿಗೆ ಶುಲ್ಕದಲ್ಲೂ ನಾವು ವಿನಾಯಿತಿಯನ್ನು ಇಟ್ಟಿದ್ದೇವೆ. ಆದರೂ ಬರುತ್ತಿಲ್ಲ. ಇದು ನಮ್ಮ ತಪ್ಪೇ?”. ಅವರ ತಪ್ಪಲ್ಲ ನಿಜ. ಆದರೆ ಬೇರೆ ಧರ್ಮೀಯರು ಬರುತ್ತಿಲ್ಲ ಎನ್ನುವುದೂ ನಿಜ. ಅದರಿಂದ ಭವಿಷ್ಯದಲ್ಲಿ ಸಮಾಜ ಸಂಪೂರ್ಣವಾಗಿ ಒಡೆದು ಹೋಗಲಿದೆ ಎನ್ನುವುದೂ ಅಷ್ಟೇ ನಿಜ. ಆದುದರಿಂದ ‘ನಮ್ಮ ತಪ್ಪೇ?’ ಎನ್ನುವ ಅಸಹಾಯಕತೆ ಇದಕ್ಕೆ ಖಂಡಿತಾ ಪರಿಹಾರವಲ್ಲ. ಶಾಲೆಯೊಳಗೆ ಒಂದು ವೈವಿಧ್ಯವನ್ನು ಕಾಪಾಡಲು ಸಂಘಟಕರು ಗರಿಷ್ಠ ಪ್ರಮಾಣದಲ್ಲಿ ಶ್ರಮಿಸಿದರೆ ‘ಮುಸ್ಲಿಮ್ ಶಾಲೆ’ ‘ಹಿಂದೂ ಶಾಲೆ’ ಎನ್ನುವ ವ್ಯತ್ಯಾಸ ನಿಧಾನಕ್ಕಾದರೂ ಅಳಿಸಿ ಹೋಗಬಹುದು. ಈ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ನಡೆಸುವ ಶಾಲೆಗಳಲ್ಲಿ ‘ಕಡ್ಡಾಯವಾಗಿ’ ಇತರ ಧರ್ಮೀಯರು ‘ಇಷ್ಟು ಶೇಕಡ ಇರಲೇ ಬೇಕು’ ಎಂಬ ನಿಯಮವನ್ನಾದರೂ ಸರಕಾರ ತರಬೇಕು. ಇದೇ ಸಂದರ್ಭದಲ್ಲಿ, ಇದಕ್ಕಿರುವ ಇನ್ನೊಂದು ಅತ್ಯುತ್ತಮ ಪರಿಹಾರವೆಂದರೆ, ಸರಕಾರವು ಸರಕಾರಿ ಶಾಲೆಗಳನ್ನು ಮೇಲೆತ್ತುವುದು. ಮಠ, ಮಾನ್ಯಗಳಿಗೆ ಸರಕಾರ ಕೋಟಿ ಗಟ್ಟಳೆ ಅನುದಾನ ನೀಡಿ ಅದನ್ನು ಸದೃಢಗೊಳಿಸಲು ಅತ್ಯುತ್ಸಾಹ ವ್ಯಕ್ತಪಡಿಸುವಾಗ, ಅದೇ ಉತ್ಸಾಹದಲ್ಲಿ ಸರಕಾರಿ ಶಾಲೆಗಳನ್ನು ಮೇಲೆತ್ತಲು ಯಾಕೆ ಪ್ರಯತ್ನಿಸುತ್ತಿಲ್ಲ? ರಾಜ್ಯದಲ್ಲಿರುವ ಎಲ್ಲ ಸರಕಾರಿ ಶಾಲೆಗಳನ್ನು ಗುರುತಿಸಿ, ಯಾವುದೇ ಖಾಸಗಿ ಶಾಲೆಗಳಿಗಿಂತ ಅತ್ಯಾಧುನಿಕವಾಗಿ ರೂಪಿಸುವ ಮೂಲಕ ಎಲ್ಲ ಜಾತಿ ಧರ್ಮಗಳ ವಿದ್ಯಾರ್ಥಿಗಳನ್ನು ಅದರೆಡೆಗೆ ಆಕರ್ಷಿಸುವಂತೆ ಮಾಡುವುದರಿಂದ ಸಮಾಜಕ್ಕೆ ನೂರಾರು ಬಗೆಯ ಲಾಭಗಳಿವೆ. ಇಂದು ನಮ್ಮ ಮಕ್ಕಳು ಯಾವ ಮಾಧ್ಯಮಗಳಲ್ಲಿ ಕಲಿಯಬೇಕು ಎನ್ನುವುದನ್ನಷ್ಟೇ ನಾವು ಚರ್ಚಿಸುತ್ತಿದ್ದೇವೆ. ಯಾವ ಮಾಧ್ಯಮಗಳಲ್ಲಿ ಬೇಕಾದರೂ ಕಲಿಯಲಿ, ಆದರೆ ಎಲ್ಲ ಧರ್ಮ, ಜಾತಿಯ ಮಕ್ಕಳು ಒಟ್ಟಾಗಿ ಕಲಿಯುವಂತಹ ಶಾಲೆಗಳು ಇಂದಿನ ಅಗತ್ಯ. ಒಂದನೇ ತರಗತಿಯಿಂದಲೇ ಒಟ್ಟಾಗಿ ಆಡುತ್ತಾ, ಕಲಿಯುತ್ತಾ, ಜಗಳವಾಡುತ್ತಾ, ಪ್ರೀತಿಸುತ್ತಾ, ಮಧ್ಯಾಹ್ನದ ಬಿಸಿಯೂಟವನ್ನು ಒಂದೇ ಪಂಕ್ತಿಯಲ್ಲಿ ಉಣ್ಣುತ್ತಾ ಬೆಳೆಯಲಿ. ಆಗ ಯಾವ ಧರ್ಮೀಯರೂ “ನಮ್ಮ ಧರ್ಮ ಶಾಂತಿಯ ಧರ್ಮ” “ನಾವೂ ನಿಮ್ಮಂತೆಯೇ ಮನುಷ್ಯರು” ಎಂದೆಲ್ಲ ಪರಿಚಯಿಸಿಕೊಳ್ಳುವ ಅಗತ್ಯ ಬರುವುದಿಲ್ಲ. ಇಂದು ಪರಸ್ಪರ ಅನ್ಯರಂತೆ ಬಾಳುತ್ತಿರುವವರನ್ನು ಭವಿಷ್ಯದಲ್ಲಿ ಒಂದಾಗಿಸುವುದಕ್ಕೆ ಇರುವ ದಾರಿ ಇದೊಂದೆ. ಬಹುಸಂಸ್ಕೃತಿಯ ಭಾರತವನ್ನು ಉಳಿಸಿಕೊಳ್ಳಬೇಕಾದರೂ ನಮಗೆ ಇರುವ ದಾರಿ ಇದೊಂದೆ.</span></b><br />
<div>
<br /></div>
</div>
B.M.BASHEERhttp://www.blogger.com/profile/14436644887076126519noreply@blogger.com1tag:blogger.com,1999:blog-3037848766175505211.post-51122941509197896172017-11-09T09:05:00.002-08:002017-11-09T09:08:11.247-08:00ಹೌದು, ಗೌರಿ- ಲಂಕೇಶರಂತಾಗಲಿಲ್ಲ ... <div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiHZzU6fk_X2NEwqxIDoW8XTlVvl_SdwmiIYpChHLaqPEYtTrbP83iyPPUB1KD8YvLb6mYl4F0Sl5tFYV1T7EHs9eU9ZQ5bLvxXowePgNFafKlBudEnHbWl1af62_R-_VzC7aybyiownXOC/s1600/gauri+2+750.jpeg" imageanchor="1" style="margin-left: 1em; margin-right: 1em;"><img border="0" data-original-height="500" data-original-width="750" height="213" src="https://blogger.googleusercontent.com/img/b/R29vZ2xl/AVvXsEiHZzU6fk_X2NEwqxIDoW8XTlVvl_SdwmiIYpChHLaqPEYtTrbP83iyPPUB1KD8YvLb6mYl4F0Sl5tFYV1T7EHs9eU9ZQ5bLvxXowePgNFafKlBudEnHbWl1af62_R-_VzC7aybyiownXOC/s320/gauri+2+750.jpeg" width="320" /></a></div>
<b style="font-size: x-large;"><span style="color: purple;">ಗೌರಿ ಲಂಕೇಶ್ ತೀರಿದ ದಿನ ಒಂದೇ ಉಸಿರಲ್ಲಿ ಬರೆದ ಲೇಖನ. ಒಂದಿಷ್ಟು ಹಸಿಯಾಗಿದೆ. ಇವತ್ತು ಯಾಕೋ ಮತ್ತೆ ಕಣ್ಣಿಗೆ ಬಿತ್ತು. ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. </span></b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅದು ಪಿ. ಲಂಕೇಶರು ‘ಲಂಕೇಶ್ ಪತ್ರಿಕೆ’ಯನ್ನು ನಡೆಸುತ್ತಿದ್ದ ಕಾಲ. ಲಂಕೇಶ್ ಪತ್ರಿಕೆಯ ಆತ್ಮೀಯರು ಯಾರಾದರೂ ಭೇಟಿಯಾದರೆ ನಾನು ಮೊದಲು ಕೇಳುತ್ತಿದ್ದ ಪ್ರಶ್ನೆ ‘‘ಲಂಕೇಶ್ರ ಆನಂತರ ಲಂಕೇಶ್ ಪತ್ರಿಕೆ ಯನ್ನು ನಡೆಸುವವರು ಯಾರು?’’ </b></span><br />
<span style="color: blue; font-size: large;"><b>ಆಗಾಗ ಲಂಕೇಶ ರನ್ನು ಕಾಡುತ್ತಿದ್ದ ತೀವ್ರ ಅನಾರೋಗ್ಯ ನಮ್ಮನ್ನೆಲ್ಲ ಇಂತಹ ಪ್ರಶ್ನೆ ಕೇಳುವಂತೆ ಮಾಡುತ್ತಿತ್ತು. ನಮಗೆಲ್ಲ ಲಂಕೇಶ್ ಪತ್ರಿಕೆ ಓದೋದು ಬದುಕಿನ ಅವಿಭಾಜ್ಯವಾಗಿ ಹೋಗಿದ್ದುದರಿಂದ ಇಂತಹ ಪ್ರಶ್ನೆ ನಮ್ಮನ್ನು ಪದೇ ಪದೇ ಕಾಡುತ್ತಿತ್ತು. ಅದು ನಾನು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಕಾಲ. ಮುಂಬೈ ಯ ನ್ಯಾಯಾಲಯದಲ್ಲಿ ಲಂಕೇಶರ ವಿರುದ್ಧ ಒಂದು ವರದಿಗೆ ಸಂಬಂಧಿಸಿ ದೂರು ದಾಖಲಾಗಿತ್ತು. ಈ ಸಂಬಂಧ ದ್ವಾರಕಾನಾಥ್, ತ್ಯಾಗರಾಜ್ ಆಗಾಗ ಮುಂಬೈಗೆ ಬರು ತ್ತಿದ್ದರು. ತ್ಯಾಗರಾಜ್ ಒಂದೆರಡು ಬಾರಿ ನನ್ನ ಜೊತೆ ಉಳಿದುಕೊಂಡಿದ್ದರು. ಆಗ ಅವರ ಜೊತೆಗೂ ಇಂತಹದೇ ಪ್ರಶ್ನೆಯನ್ನು ನಾನು ಇಟ್ಟಿದ್ದೆ. ಆಗ ಅವರು ತಡವರಿಸದೇ ಖಂಡತುಂಡವಾಗಿ ಹೇಳಿದ್ದರು ‘‘ಲಂಕೇಶ್ ಬಳಿಕ ಪತ್ರಿಕೆ ಮುಚ್ಚುತ್ತೆ ಬಶೀರ್’’. ಆಳದಲ್ಲಿ ಇದು ನಮ್ಮ ಅರಿವಿನಲ್ಲೂ ಇತ್ತು. ಯಾಕೆಂದರೆ ಲಂಕೇಶರ ಹೆಸರಿನ ಮೂಲಕವೇ ನಡೆಯುತ್ತಿರುವ ಪತ್ರಿಕೆಯನ್ನು ಇನ್ನಾರೂ ಮುನ್ನಡೆಸುವುದು ಕಷ್ಟ. ಯಾರೇ ಮುನ್ನಡೆಸಿದರೂ ಅದು ಲಂಕೇಶ್ ಪತ್ರಿಕೆ ಯಾಗಿ ಉಳಿಯುವುದು ಸಾಧ್ಯವಾಗುವ ಮಾತೇ ಅಲ್ಲ. </b></span><br />
<span style="color: blue; font-size: large;"><b>ಮುಂಬೈಯ ನ್ಯಾಯಾಲಯವೊಂದು ಪಿ. ಲಂಕೇಶರಿಗೆ ಬಂಧನ ವಾರಂಟ್ನ್ನು ಹೊರಡಿಸಿದಾಗ, ಬೆಂಗಳೂರಿನಿಂದ ನನಗೆ ಒಂದು ಕರೆ ಬಂದಿತ್ತು. ‘‘ನಾನು ಗೌರಿ ಲಂಕೇಶ್ ಮಾತನಾಡ್ತ ಇದ್ದೇನೆ. ನ್ಯಾಯಾಲಯದಲ್ಲಿ ಏನು ಬೆಳವಣಿ ಗೆಯಾಗಿದೆ?’’ ಎಂದು ಕೇಳಿದ್ದರು. ನಾನೂ ಸಂಕ್ಷಿಪ್ತವಾಗಿ ಮಾತನಾಡಿ ಮುಗಿಸಿದ್ದೆ. ಆ ಧ್ವನಿಯ ಹಿಂದಿರುವ ಮುಖ ವನ್ನು ಕಂಡದ್ದು ಅದಾದ ಹತ್ತು ವರ್ಷಗಳ ಬಳಿಕ. ಲಂಕೇಶ್ ನಿಧನರಾದಾಗ ಗೌರಿ ಮುನ್ನೆಲೆಗೆ ಬಂದರು. ಲಂಕೇಶ್ ಪತ್ರಿಕೆಯ ಸಂಪಾದಕರಾಗಿ ಗೌರಿ ಹೊಣೆ ಹೊತ್ತು ಕೊಳ್ಳುತ್ತಾರೆ ಎನ್ನುವಾಗ ಬಹಳಷ್ಟು ಅನುಮಾನಗಳಿದ್ದವು. ಮೊತ್ತ ಮೊದಲಾಗಿ, ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಗೌರಿ ಕೆಲಸ ಮಾಡುತ್ತಿದ್ದರು. ಆ ಕೆಲಸವನ್ನು ತೊರೆದು, ಈ ಪತ್ರಿಕೆಯನ್ನು ಬೆನ್ನಿಗೆ ಕಟ್ಟಿಕೊಳ್ಳುವುದೆಂದರೆ ಅಪಾಯಗಳನ್ನು ತಾನಾಗಿಯೇ ಬೆನ್ನಿಗೆ ಕಟ್ಟಿಕೊಂಡಂತೆ. ಜೊತೆಗೆ ಗೌರಿಗೆ ಅತೀ ದೊಡ್ಡ ಸವಾಲು ಸ್ವತಃ ಲಂಕೇಶ್ ಆಗಿದ್ದರು. ಲಂಕೇಶ್ ಬರೇ ಪತ್ರಕರ್ತರಲ್ಲ. ಅವರಲ್ಲೊಬ್ಬ ಕವಿ, ಸಾಹಿತಿ, ಲೇಖಕನಿದ್ದ. ಪತ್ರಿಕಾ ಬರಹಗಳಿಗೆ ಪದ್ಯದ ಲಾಲಿತ್ಯವನ್ನು ನೀಡಿದವರು ಲಂಕೇಶ್. ತಮ್ಮ ವಿಶಿಷ್ಟ ಬರಹಗಳ ಮೂಲಕ ಅವರು ಅದಾಗಲೇ ಒಂದು ಪ್ರಭಾವಳಿಯನ್ನು ತನ್ನ ಸುತ್ತ ಸೃಷ್ಟಿಸಿಕೊಂಡಿದ್ದರು. ಲಂಕೇಶರಿಗಾಗಿಯೇ ‘ಲಂಕೇಶ್ ಪತ್ರಿಕೆ’ಯನ್ನು ಕೊಂಡುಕೊಳ್ಳುತ್ತಿದ್ದವರು ಅಧಿಕ. ಅಷ್ಟೇ ಅಲ್ಲ, ಲಂಕೇಶರ ಜೊತೆಗಿದ್ದ ಬಸವರಾಜು, ನಟರಾಜ್, ತ್ಯಾಗರಾಜ್, ದ್ವಾರಕಾನಾಥ್, ರೇಷ್ಮೆ, ಗಂಗಾಧರ ಕುಷ್ಠಗಿಯಂತಹ ಪ್ರತಿಭೆಗಳನ್ನು ನಿಭಾಯಿಸುವುದು ಗೌರಿ ಲಂಕೇಶರಿಗೆ ಅಷ್ಟು ಸುಲಭವಿರಲಿಲ್ಲ. ಕನ್ನಡ ಪತ್ರಿಕೋದ್ಯಮಕ್ಕೇ ಹೊಸಬರಾಗಿದ್ದ ಗೌರಿ ಲಂಕೇಶ್ರ ನಿರ್ಧಾರಗಳನ್ನು, ಲಂಕೇಶರ ನಿರ್ಧಾರಗಳಂತೆ ಸ್ವೀಕರಿಸುವುದು ಈ ಹಿರಿಯರಿಗೆ ಕಷ್ಟವೇ ಸರಿ. ಇದರ ಜೊತೆ ಜೊತೆಗೇ ಅವರ ಸೋದರ ಇಂದ್ರಜಿತ್ ಇನ್ನೊಂದು ಸವಾಲಾಗಿದ್ದರು. ಗೌರಿ ಲಂಕೇಶ್ ಒಂದು ರೀತಿ ಲಂಕೇಶ್ ಪತ್ರಿಕೆಯ ಹಲವು ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರೇ ಹೊರತು, ಅವರೇ ಅದರ ಮಾಲಕರಾಗಿರಲಿಲ್ಲ. ಇಂದ್ರಜಿತ್ ಮತ್ತು ಗೌರಿ ಇವರಿಬ್ಬರ ನಡುವಿನ ಅಭಿರುಚಿಗಳೇ ಬೇರೆ. ಬದುಕನ್ನು ಶೋಕಿಯಾಗಿ ಸ್ವೀಕರಿಸಿರುವ ಇಂದ್ರಜಿತ್, ಅದನ್ನು ಸಂಘರ್ಷವಾಗಿ ಸ್ವೀಕರಿಸಿರುವ ಗೌರಿ ಜೊತೆಗೂಡಿ ಪತ್ರಿಕೆಯನ್ನು ಮುನ್ನಡೆಸುವುದು ಅಸಾಧ್ಯವಾಗಿತ್ತು.</b></span><br />
<span style="color: blue; font-size: large;"><b>ಒಂದು ರೀತಿಯಲ್ಲಿ, ಪತ್ರಿಕೆ ಮುನ್ನಡೆಯಬೇಕಾದರೆ ಎಲ್ಲವನ್ನೂ ಹೊಸದಾಗಿಯೇ ಕಟ್ಟಬೇಕಾದಂತಹ ಸವಾಲು ಗೌರಿ ಅವರ ಮುಂದಿತ್ತು. ಬರೇ ಸಹೋದ್ಯೋಗಿಗಳಿಗಷ್ಟೇ ಇದು ಸೀಮಿತವಾದ ವಿಚಾರವಲ್ಲ. ಇಡೀ ಓದುಗಬಳಗವನ್ನೂ ಹೊಸದಾಗಿಯೇ ಕಟ್ಟಬೇಕಾಗಿತ್ತು. ಯಾಕೆಂದರೆ, ಲಂಕೇಶರಿಗಾಗಿ ಲಂಕೇಶನ್ನು ಓದುತ್ತಿದ್ದ ಕರ್ನಾಟಕದ ವಿದ್ವತ್ ಮಂದಿಗಳು ಲಂಕೇಶರು ತೀರಿದ ದಿನವೇ ಲಂಕೇಶ್ ಪತ್ರಿಕೆಯ ಕೈ ಬಿಟ್ಟಿದ್ದರು. ಈ ಎಲ್ಲ ಕಾರಣದಿಂದ ಲಂಕೇಶರಿಲ್ಲದ ಮೊದಲ ಸಂಚಿಕೆಗಾಗಿ ನಾನು ಚಾತಕ ಪಕ್ಷಿಯಂತೆ ಕಾದಿದ್ದೆ ಮತ್ತು ಅನಿರೀಕ್ಷಿತ ರೀತಿಯಲ್ಲಿ, ಅವರ ಸಂಪಾದಕೀಯದ ಸರಳ ಭಾಷೆ, ಸರಳ ಕನ್ನಡ ಇಷ್ಟವಾಯಿತು. ಬಳಿಕ ಅಪ್ಪ ಎನ್ನುವ ಕಾಲಂ ಕೆಲವು ವಾರಗಳ ಕಾಲ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು. ಬಹಳಷ್ಟು ಆತ್ಮೀಯ ಬರಹ ಅದಾಗಿದ್ದರೂ, ಆ ಕಥಾನಕವನ್ನು ಅರ್ಧದಲ್ಲೇ ಅವರು ನಿಲ್ಲಿಸಿದರು. ಆದರೆ ಲಂಕೇಶ್ ಪತ್ರಿಕೆ ನಿರಂತರವಾಗಿ ಮುಂದುವರಿಯಿತು. ಲಂಕೇಶರ ಪ್ರಭಾವಳಿಯಿಂದ ಪತ್ರಿಕೆಯನ್ನು ಹೊರಗೆ ತರುವಲ್ಲೂ ಅವರು ಹಂತಹಂತವಾಗಿ ಯಶಸ್ವಿಯಾದರು. ಭಾರೀ ಆರ್ಥಿಕ ಅಡಚಣೆಗಳ ನಡುವೆಯೂ ಅದನ್ನು ತನ್ನ ಕೊನೆಯ ಉಸಿರಿರುವವರೆಗೆ ಮುನ್ನಡೆಸಿದರು. ಲಂಕೇಶ್ ಎನ್ನುತ್ತಿದ್ದ ನಾಡಿನ ಜನರು, ಗೌರಿ ಲಂಕೇಶ್ ಎನ್ನುವ ಹೊಸ ಹೆಸರನ್ನು ರೂಢಿ ಮಾಡಿಕೊಳ್ಳತೊಡಗಿದರು.</b></span><br />
<span style="color: blue; font-size: large;"><b>ಲಂಕೇಶರು ಮತ್ತು ಗೌರಿ ನಡುವೆ ವ್ಯಕ್ತಿತ್ವದಲ್ಲಿ ಭಾರೀ ಅಂತರವಿದೆ. ಲಂಕೇಶ್ ತನ್ನ ಗುಹೆಯಲ್ಲಿದ್ದುಕೊಂಡೇ ಕೆಲಸ ಮಾಡಿದವರು. ಪತ್ರಿಕೆಗಳಲ್ಲಿ ಅವರಿಂದ ಎಡವಟ್ಟುಗಳಾದರೂ, ಅವರಿಗೆ ಬಚ್ಚಿಟ್ಟುಕೊಳ್ಳುವುದಕ್ಕೆ ಸಾಹಿತ್ಯ, ನಾಟಕ, ಸಿನೆಮಾ, ಕಾವ್ಯ ಹೀಗೆ ಹಲವು ಜಾಗಗಳಿವೆ ಮತ್ತು ಇವುಗಳನ್ನು ಅವರು ಕವಚವಾಗಿಟ್ಟುಕೊಂಡೇ ಪತ್ರಿಕೆಯ ವಾರದ ಯುದ್ಧದಲ್ಲಿ ಭಾಗಿಯಾಗುತ್ತಿದ್ದರು. ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿ ಪತ್ರಿಕೆಯನ್ನು ಇಷ್ಟಪಡುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ವ್ಯವಹಾರ ದಲ್ಲಿ ಅವರು ಚತುರರಾಗಿದ್ದರು. ಯಾವುದೇ ವಿಷಯಗಳಲ್ಲೂ ಒಂದು ಸಣ್ಣ ಅಂತರವನ್ನು ಅವರು ಕಾಯ್ದುಕೊಳ್ಳುತ್ತಿದ್ದರು. ಸಂಪೂರ್ಣವಾಗಿ ಯಾವುದಕ್ಕೂ ಅವರು ತನ್ನನ್ನು ತೆತ್ತುಕೊಂಡಿರಲಿಲ್ಲ. ರಾಜಕಾರಣಿಗಳ ವಿರುದ್ಧ ಹಿಗ್ಗಾಮುಗ್ಗ ಬೀಳುತ್ತಿದ್ದರೂ, ಪಾರಾಗುವ ಸಣ್ಣ ದೊಂದು ‘ಜಾಗ’ವನ್ನು ಅವರು ಉಳಿಸಿ ಕೊಳ್ಳುತ್ತಿದ್ದರು. ಈ ಕಾರಣದಿಂದಲೇ, ಅವರ ವಿಪತ್ತಿನ ಸಂದರ್ಭದಲ್ಲಿ ಅವರಿಗೆ ಹಲವು ರಾಜಕಾರಣಿಗಳು ನೆರವಾದ ಉದಾಹರಣೆಗಳೂ ಇವೆ. ಆದರೆ ಗೌರಿ ಅವರು ರಕ್ತದಲ್ಲೇ ಹೋರಾಟದ ಗುಣವನ್ನು ಬೆಳೆಸಿಕೊಂಡು ಬಂದವರು. ಲಂಕೇಶ್ ಅವರ ಹತ್ತಿರದಲ್ಲಿದ್ದವರು ಹೇಳುವಂತೆ ಅವರು ಆಳದಲ್ಲಿ ತುಸು ಪುಕ್ಕರಾಗಿದ್ದರು. ಆದರೆ ಲಂಕೇಶರಿಗೆ ಹೋಲಿಸಿದರೆ ಗೌರಿ ಅಪಾರ ಧೈರ್ಯವನ್ನು ಮೈಗೂಡಿಸಿಕೊಂಡವರು. ಲಂಕೇಶರು ಒಂದು ರಾಜಕೀಯ ಪಕ್ಷವನ್ನು ಕಟ್ಟಲು ಬೀದಿಗಿಳಿದರಾದರೂ, ಅದು ಅಸಾಧ್ಯ ಎಂದು ಕಂಡಾಗ ತಕ್ಷಣವೇ ಸಾಹಸದಿಂದ ಹಿಂಜರಿದರು. ಆದರೆ ಗೌರಿ ಬೀದಿಯಲ್ಲಿ ನಿಂತೇ ತನ್ನ ಪತ್ರಿಕೆ ಕಟ್ಟ ತೊಡಗಿದರು. ಗೌರಿಯನ್ನು ಹಳಿಯುವುದಕ್ಕೋಸ್ಕರವೇ ಹಲವರು ‘ಲಂಕೇಶ್ ತೀರಿ ಹೋದ ಮೇಲೆ ಆ ಪತ್ರಿಕೆ ಸತ್ತು ಹೋಯಿತು’ ಎಂದದ್ದಿದೆ. ನಾನಾಗ ಅದನ್ನು ಒಪ್ಪುತ್ತಲೇ ಹೇಳುತ್ತಿದ್ದೆ ‘‘ಲಂಕೇಶ್ ಬೇರೆ, ಗೌರಿ ಬೇರೆ. ಲಂಕೇಶರನ್ನು ಗೌರಿಯಲ್ಲಿ ಹುಡುಕೋದನ್ನು ಬಿಡೋಣ. ಗೌರಿಯಲ್ಲಿರುವ ಸ್ವಂತಿಕೆಯನ್ನು ಗುರುತಿಸಿ ಸಾಧ್ಯವಾದರೆ ಇಷ್ಟಪಡೋಣ. ಇದು ಲಂಕೇಶ್ ಪತ್ರಿಕೆ ಅಲ್ಲ. ಇದು ಗೌರಿ ಲಂಕೇಶ್ ಪತ್ರಿಕೆ’’. ಇದಾದ ಎಷ್ಟೋ ದಿನಗಳ ಬಳಿಕ, ಇಂದ್ರಜಿತ್ ಜೊತೆ ಭಿನ್ನಾಭಿಪ್ರಾಯ ಹೊಂದಿ, ಗೌರಿಯವರು ತಮ್ಮದೇ ಹೆಸರಲ್ಲಿ ಪತ್ರಿಕೆ ನಡೆಸಿದರು ಮತ್ತು ತನ್ನದೇ ವ್ಯಕ್ತಿತ್ವದ ಮೂಲಕ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು. </b></span><br />
<span style="color: blue; font-size: large;"><b>ಲಂಕೇಶರ ಕಾಲಕ್ಕೂ ಗೌರಿಯ ಕಾಲಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಲಂಕೇಶರ ಕಾಲದಲ್ಲಿ ‘ಟ್ಯಾಬ್ಲಾಯಿಡ್’ ಓದುಗರ ಸಂಖ್ಯೆ ದೊಡ್ಡ ಮಟ್ಟದಲ್ಲಿತ್ತು ಮತ್ತು ಅದನ್ನು ಗಂಭೀರವಾಗಿಯೂ ಸ್ವೀಕರಿಸುತ್ತಿದ್ದರು. ಆದರೆ ಗೌರಿಯ ಕಾಲದಲ್ಲಿ ‘ಟ್ಯಾಬ್ಲಾಯಿಡ್’ ಪತ್ರಿಕೆಗಳನ್ನು ಓದುವ ಓದುಗರ ಸಂಖ್ಯೆಯೇ ಇಳಿಮುಖವಾಗಿತ್ತು. ಲಂಕೇಶರ ಕಾಲದಲ್ಲಿ ಸಂಘಪರಿವಾರ ಗಳು ಈ ಮಟ್ಟಿಗೆ ನಾಡಲ್ಲಿ ಮುಕ್ತವಾಗಿ ಬೇರಿಳಿಸಿಕೊಂಡಿರಲಿಲ್ಲ. ಗೌರಿಯ ಕಾಲ ದಲ್ಲಿ, ಸಂಘಪರಿವಾರದ ಜನರು ಕೂಗು ಮಾರಿಗಳಾಗಿ ರಾಜ್ಯಾದ್ಯಂತ ಹರಡಿ ಕೊಳ್ಳತೊಡಗಿದ್ದರು. ಇಂತಹ ಸಂದರ್ಭ ದಲ್ಲಿ ಪತ್ರಿಕೆಯನ್ನು ತನ್ನ ಹೋರಾಟದ ಅಸ್ತ್ರವಾಗಿಸಿಕೊಂಡ ವರು ಗೌರಿ ಲಂಕೇಶ್. ಅನೇಕ ಬಾರಿ, ಹಿಂದಿನ ಲಂಕೇಶ್ನ ಲೇಖಕರು ‘‘ಲಂಕೇಶರಿದ್ದಿದ್ದರೆ ಈ ರೀತಿ ಬರೆಯು ತ್ತಿರಲಿಲ್ಲ’’ ‘‘ಲಂಕೇಶರು ಈ ಕುರಿತಂತೆ ಬೇರೆಯೇ ನಿಲುವು ತಳೆಯುತ್ತಿದ್ದರು’’ ಎನ್ನುತ್ತಾ ಗೌರಿಯ ಬರಹಗಳಿಗೆ, ಹೋರಾಟಗಳಿಗೆ ಅಡ್ಡಗಾಲು ಹಾಕಿರುವುದನ್ನೂ ನಾನು ಗಮನಿಸಿದ್ದೇನೆ. ಲಂಕೇಶರ ವ್ಯಕ್ತಿತ್ವವನ್ನೇ ಗೌರಿಯ ವಿರುದ್ಧ ಎತ್ತಿಕಟ್ಟುವ ಹುನ್ನಾರಗಳೂ ನಡೆದಿದ್ದವು. ಆದರೆ ಈ ಎಲ್ಲ ಹುನ್ನಾರಗಳನ್ನೂ ಮೀರಿ, ಕರ್ನಾಟಕದ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಗೌರಿಯ ವರು ತೊಡಗಿಸಿಕೊಂಡರು. ಬಾಬಾಬುಡಾನ್ಗಿರಿಯ ಹೋರಾಟದಲ್ಲಿ ಗೌರಿ ಲಂಕೇಶ್ನ ಪಾತ್ರ ದೊಡ್ಡ ಮಟ್ಟದ್ದು. ಬಾಬಾಬುಡಾನ್ಗಿರಿ ಚಳವಳಿಗಾರರನ್ನು ಪೊಲೀಸರು ಅಲ್ಲಲ್ಲಿ ಬಂಧಿಸತೊಡಗಿದಾಗ ಲಾರಿಯಲ್ಲಿ ಹತ್ತಿ ಬಾಬಾಬುಡಾನ್ಗಿರಿಗೆ ಹೋಗಿ, ಅಲ್ಲಿಯ ಸಭೆಯಲ್ಲಿ ಭಾಗವಹಿಸಿದವರು ಮತ್ತು ಜೈಲು ಸೇರಿ, ಅಲ್ಲಿಂದಲೇ ಪತ್ರಿಕೆಯ ಸಂಪಾದಕೀಯ ಬರೆದವರು. ಕಳೆದ ಒಂದು ದಶಕದ ಈಚೆಗಿನ ಬಹುತೇಕ ಚಳವಳಿ ಹೋರಾಟಗಳಲ್ಲಿ ಗೌರಿ ಲಂಕೇಶ್ ಸಕ್ರಿಯರಾಗಿದ್ದರು. ಮುಖ್ಯವಾಗಿ, ನಕ್ಸಲೀಯರನ್ನು ಮುಖ್ಯವಾಹಿನಿಗೆ ತರುವ ಮಹತ್ತರ ಕೆಲಸವನ್ನು ಅವರು ಮಾಡಿದರು. ಎನ್ಕೌಂಟರ್ಗಳ ರಾಜ್ಯದಲ್ಲಿ ಸಾಲುಸಾಲಾಗಿ ನಕ್ಸಲರ (ಪಶ್ಚಿಮಘಟ್ಟದ ಆದಿವಾಸಿ ಹುಡುಗರು ಇವರು) ಹೆಣಗಳು ಬೀಳುತ್ತಿರುವಾಗ, ಹಿಂಸೆಯ ವಿರುದ್ಧ ಮಾತನಾಡುತ್ತಲೇ, ಹೋರಾಟದ ಹೊಸ ದಾರಿಯನ್ನು ಅವರಿಗೆ ತೆರೆದುಕೊಡಲು ಶ್ರಮಿಸಿದವರು ಗೌರಿ. ಹೀಗೆ ಇವರು ಮತ್ತು ಸಹವರ್ತಿ ಗಳ ಅಪಾರ ಶ್ರಮದಿಂದ ಕಾಡಿನಿಂದ ನಾಡಿಗೆ ಬಂದ ತರುಣರು ಇಂದು ಪ್ರಜಾಸತ್ತಾತ್ಮಕವಾಗಿ ಸಾಮಾಜಿಕ ಹೋರಾಟಗಳನ್ನು ನಡೆಸುತ್ತಾ, ನಾಡಿಗೆ ಹೊಸ ಸ್ಫೂರ್ತಿ ಯನ್ನು ಬಿತ್ತಿದ್ದಾರೆ. ಹೊಸ ಸಾಮಾಜಿಕ ಹೋರಾಟಗಳ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ. ವೌಢ್ಯಗಳ ವಿರುದ್ಧ ಕಾನೂನು ಜಾರಿಗಾಗಿ ಹೋರಾಟ, ಜನನುಡಿ, ಉಡುಪಿ ಚಲೋ, ಕಲಬುರ್ಗಿ ಪರ ಹೋರಾಟ, ಆದಿವಾಸಿಗಳ ಭೂ ಹೋರಾಟ, ಕೋಮುವಾದಿಗಳ ವಿರುದ್ಧ ಹೋರಾಟ... ಹೀಗೆ ನಾಡಿನ ಎಲ್ಲ ಪ್ರಗತಿಪರ ಹೋರಾಟಗಳಲ್ಲಿ ಪಕ್ಷಭೇದ ನೋಡದೆ ಕೈಜೋಡಿಸುತ್ತಾ ಬಂದವರು ಗೌರಿ. ಒಬ್ಬ ಹೆಣ್ಣು ಮಗಳು ಒಂದು ಪ್ರಖರ ವಿಚಾರಗಳ ಪತ್ರಿಕೆಯೊಂದರ ಸಂಪಾದಕಿಯಾಗಿ ಕೋರ್ಟು, ಕಚೇರಿಗಳನ್ನು ಎದುರಿಸುತ್ತಾ, ಸಾಮಾಜಿಕ ಹೋರಾಟಗಳಲ್ಲಿ ದಿಟ್ಟವಾಗಿ ಭಾಗವ ಹಿಸಿದ ರೀತಿ ವಿಸ್ಮಯ ಹುಟ್ಟಿಸುವಂತಹದು. ಎರಡು ತಿಂಗಳ ಹಿಂದೆ ವಾರ್ತಾಭಾರತಿ ಪತ್ರಿಕೆ ಕಚೇರಿಗೆ ಗೌರಿಯವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತನ್ನ ಪತ್ರಿಕೆ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಹಂಚಿಕೊಂಡಿದ್ದರು. ಲಂಕೇಶರು, ಹೆಣ್ಣು ಮಕ್ಕಳಿಗಾಗಿ ವಿಶೇಷವಾದ ಆಸ್ತಿಯನ್ನೂ ಬಿಟ್ಟು ಹೋಗಿರಲಿಲ್ಲ. ಅಷ್ಟೇ ಏಕೆ, ಗೌರಿಗೆ ನಡುಬೀದಿಯಲ್ಲಿ ನಿಂತು ಬಡಿದಾಡುವುದಷ್ಟೇ ಗೊತ್ತಿತ್ತು. ಇವುಗಳ ನಡುವೆ ವ್ಯವಸ್ಥೆಯೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸುವ ಕೆಲವು ‘ಜಾಣ’ ಸಂಗತಿಗಳ ಅರಿವು ಅವರಿಗಿರಲಿಲ್ಲ. ಇದ್ದಿದ್ದರೆ ಗೌರಿ ಲಂಕೇಶ್ ಪತ್ರಿಕೆಯನ್ನು ಇಟ್ಟುಕೊಂಡೇ ಸಾಕಷ್ಟು ಹಣ, ಹೆಸರು ಮಾಡಬಹುದಿತ್ತೇನೋ. ಪತ್ರಿಕೆಯೂ ಉಳಿಯುತ್ತಿತ್ತು, ಅವರ ಪ್ರಾಣವೂ ಉಳಿಯುತ್ತಿತ್ತು, ಜೊತೆಗೆ ಈ ನಾಡಿನ ಬಹುಸಂಖ್ಯೆಯ ‘ಸಜ್ಜನ’ ‘ಸೃಜನಶೀಲ’ ‘ಸಂವೇದನಾಶೀಲ’ ಕವಿಗಳು, ಕಥೆಗಾರರು, ಸಾಹಿತಿಗಳ ಮೆಚ್ಚುಗೆ, ಮಾನ್ಯತೆಯೂ ಸಿಗುತ್ತಿತ್ತು.</b></span><br />
<span style="color: blue; font-size: large;"><b>ಗೌರಿ ಇನ್ನೊಂದು ಲಂಕೇಶ್ ಆಗದೇ ಪತ್ರಿಕೆಯನ್ನೂ, ತನ್ನನ್ನೂ ಸಮಾಜಕ್ಕೆ ಸಂಪೂರ್ಣ ಅರ್ಪಿಸಿದ ಕಾರಣಕ್ಕೆ ಇಂದು ದೇಶದ ಲಕ್ಷಾಂತರ ಮನಸ್ಸುಗಳು ಆ ತಾಯಿ ಮನಸ್ಸಿಗಾಗಿ ಕಣ್ಣೀರಿಡುತ್ತಿವೆ. ಗೌರಿಯವರು ಲಂಕೇಶ್ ಆಗದೇ ಇದ್ದುದು ಅವರ ಹೆಗ್ಗಳಿಕೆಯೇ ಹೊರತು ದೌರ್ಬಲ್ಯವಲ್ಲ. ಗೌರಿಯವರ ಬಲಿದಾನ ಖಂಡಿತ ವಾಗಿಯೂ ವ್ಯರ್ಥವಾಗುವುದಿಲ್ಲ. ಅದು ನಾಡಿನಲ್ಲಿ ಇನ್ನಷ್ಟು ಗೌರಿಯರನ್ನು ಹುಟ್ಟಿಸುತ್ತದೆ. ಹೊಸ ಕನ್ನಡ ನಾಡೊಂದನ್ನು ಕಟ್ಟಲು ತರುಣರ ತಂಡ ಗೌರಿಯವರ ನೆನಪಿನ ಬೆಳಕಿನಲ್ಲಿ ಮುನ್ನಡೆಯುತ್ತದೆ.</b></span><br />
<span style="color: blue; font-size: large;"><b> ...............................................</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಮೂರು ವರ್ಷಗಳ ಹಿಂದೆ, ಗೌರಿ ಲಂಕೇಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾನೊಂದು ಶುಭಾಶಯ ಪದ್ಯವನ್ನು ಬರೆದಿದ್ದೆ. ಅದನ್ನು ಇದೀಗ ಶ್ರದ್ಧಾಂಜಲಿ ರೂಪದಲ್ಲಿ ಮತ್ತೆ ನೆನಪಿಸಿಕೊಂಡಿದ್ದೇನೆ. </b></span><br />
<span style="color: blue; font-size: large;"><b>ದಾರಿ ಹೋಕರು ಎಸೆದ ನೂರು</b></span><br />
<span style="color: blue; font-size: large;"><b>ಕಲ್ಲುಗಳ ತಾಳಿಕೊಂಡು </b></span><br />
<span style="color: blue; font-size: large;"><b>ಹುಳಿ ಮಾವಿನ ಮರದಲ್ಲಿ ತೂಗುತ್ತಿರುವ ಹಣ್ಣು </b></span><br />
<span style="color: blue; font-size: large;"><b>ಲಂಕೇಶರ ಕನಸುಗಳ </b></span><br />
<span style="color: blue; font-size: large;"><b>ಕಣ್ಣ ರೆಪ್ಪೆಯೊಳಗೆ ಜೋಪಾನ ಮಾಡಿ </b></span><br />
<span style="color: blue; font-size: large;"><b>ಕಾವು ಕೊಡುತ್ತಾ </b></span><br />
<span style="color: blue; font-size: large;"><b>ಎರಗುವ ಹದ್ದುಗಳ ಜೊತೆಗೆ </b></span><br />
<span style="color: blue; font-size: large;"><b>ಬೀದಿಗಿಳಿದು ಬಡಿದಾಡುತ್ತಾ </b></span><br />
<span style="color: blue; font-size: large;"><b>ಕೋರ್ಟು ಕಚೇರಿ ಎಂದು ಅಲೆದಾಡುತ್ತ </b></span><br />
<span style="color: blue; font-size: large;"><b>ಟೀಕೆ-ಟಿಪ್ಪಣಿಗಳ ಬಾಣಕ್ಕೆ ಎದೆಗೊಟ್ಟ </b></span><br />
<span style="color: blue; font-size: large;"><b>ಮುಸ್ಸಂಜೆ ಕಥಾ ಪ್ರಸಂಗದ ರಂಗವ್ವ </b></span><br />
<span style="color: blue; font-size: large;"><b>ಕೆಲವರ ಪಾಲಿಗೆ ಅಕ್ಕ </b></span><br />
<span style="color: blue; font-size: large;"><b>ಹಲವರ ಪಾಲಿಗೆ ಅವ್ವ </b></span><br />
<span style="color: blue; font-size: large;"><b>ಸಾವಂತ್ರಿ, ರಂಗವ್ವ, ಸುಭದ್ರೆ, ದೇವೀರಿ </b></span><br />
<span style="color: blue; font-size: large;"><b>ನೀಲು, ನಿಮ್ಮಿ... ಎಲ್ಲರೊಳಗೂ </b></span><br />
<span style="color: blue; font-size: large;"><b>ಚೂರು ಚೂರಾಗಿ ನೀವು...</b></span><br />
<span style="color: blue; font-size: large;"><b>ನಿಮ್ಮಿಳಗೆ ಲಂಕೇಶರು </b></span><br />
<span style="color: blue; font-size: large;"><b>ಹೊಸದಾಗಿ ಹುಟ್ಟಿದರು </b></span><br />
<span style="color: blue; font-size: large;"><b>ಪತ್ರಿಕೆ ನಿಮ್ಮನ್ನು ಸಿಗರೇಟಿನಂತೆ </b></span><br />
<span style="color: blue; font-size: large;"><b>ಸೇದುತ್ತಿದೆ... </b></span><br />
<span style="color: blue; font-size: large;"><b>ಪ್ರತಿವಾರ ಸುಡು ಕೆಂಡ</b></span><br />
<span style="color: blue; font-size: large;"><b>ವಿಷ ಹೀರಿದ ನಂಜುಂಡ </b></span><br />
<span style="color: blue; font-size: large;"><b>ಮಾತಿಲ್ಲದವರ ಪಾಲಿಗೆ </b></span><br />
<span style="color: blue; font-size: large;"><b>ಪತ್ರಿಕೆಯೇ ನಾಲಗೆ </b></span><br />
<span style="color: blue; font-size: large;"><b>ನಿರೀಕ್ಷೆ, ಸಮತೆಯ ನಾಳೆಗೆ</b></span><br />
<span style="color: blue; font-size: large;"><b>ಇಂದು ನಿಮಗೆ ಹುಟ್ಟಿದ ದಿನ </b></span><br />
<span style="color: blue; font-size: large;"><b>ನಾಡು, ನುಡಿಯನ್ನು ನೀವು ಮುಟ್ಟಿದ ದಿನ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b><br /></b></span>
</div>
B.M.BASHEERhttp://www.blogger.com/profile/14436644887076126519noreply@blogger.com1tag:blogger.com,1999:blog-3037848766175505211.post-7066857912711482002017-09-17T05:14:00.000-07:002017-09-17T05:14:48.669-07:00ಗೌರಿಯ ಪದಗಳು <div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiptYI-RSbJ_zh8lTyhgp8du9nq-WsvG05GQvRYto1ZX4yEMNzJiKmPFofdNYYQfhC-oMWGhB3psO03v4-BgEuRYs8kxmnYvqOOjZTwgbV85ZGvo27ipQDD0a4SgAGsK5xn0c6zjAk38F0g/s1600/timmakka.jpg" imageanchor="1" style="margin-left: 1em; margin-right: 1em;"><img border="0" data-original-height="464" data-original-width="620" height="239" src="https://blogger.googleusercontent.com/img/b/R29vZ2xl/AVvXsEiptYI-RSbJ_zh8lTyhgp8du9nq-WsvG05GQvRYto1ZX4yEMNzJiKmPFofdNYYQfhC-oMWGhB3psO03v4-BgEuRYs8kxmnYvqOOjZTwgbV85ZGvo27ipQDD0a4SgAGsK5xn0c6zjAk38F0g/s320/timmakka.jpg" width="320" /></a></div>
<span style="color: blue; font-size: large;"><b><br /></b></span>
<span style="color: purple; font-size: large;"><b>1</b></span><br />
<span style="color: blue; font-size: large;"><b>ಅವರು ಒಳ್ಳೆಯ ಭಾಷಣಕಾರರಾಗಿರಲಿಲ್ಲ </b></span><br />
<span style="color: blue; font-size: large;"><b>ಆದರೂ ಅವರು ಒಳ್ಳೆಯದನ್ನು ಮಾತನಾಡಿದರು</b></span><br />
<span style="color: blue; font-size: large;"><b>ಅವರು ಪ್ರಕಾಂಡ ಲೇಖಕಿಯಾಗಿರಲಿಲ್ಲ </b></span><br />
<span style="color: blue; font-size: large;"><b>ಅಕ್ಷರ ಅಕ್ಷರಗಳನ್ನು ಜೋಡಿಸಿ </b></span><br />
<span style="color: blue; font-size: large;"><b>ಬರೆದು, ತಾನೇ ಮಾದರಿ ಪುಸ್ತಕವಾದರು</b></span><br />
<span style="color: blue; font-size: large;"><b>ವ್ಯವಹಾರ ಗೊತ್ತಿರಲಿಲ್ಲ </b></span><br />
<span style="color: blue; font-size: large;"><b>ಸಾಲ ಸೋಲಗಳ ಶಿಲುಬೆ ಹೊತ್ತು </b></span><br />
<span style="color: blue; font-size: large;"><b>ನಡುಗು ಹೆಜ್ಜೆಯಲ್ಲಿ ಮುಂದೆ ನಡೆದರು, </b></span><br />
<span style="color: blue; font-size: large;"><b>ಪತ್ರಿಕೆಯ ಲಾಭದ </b></span><br />
<span style="color: blue; font-size: large;"><b>ಕೊಯ್ಲನ್ನು ನಮಗೆಂದು ಬಿಟ್ಟು ಹೋದರು</b></span><br />
<span style="color: blue; font-size: large;"><b>ಸಂಸಾರವಂದಿಗಳಲ್ಲ</b></span><br />
<span style="color: blue; font-size: large;"><b>ಒಂಟಿ ಹೆಣ್ಣು ಆಕೆ </b></span><br />
<span style="color: blue; font-size: large;"><b>ಆದರೂ, ಇಂದು ಜಗದ ಮಕ್ಕಳು </b></span><br />
<span style="color: blue; font-size: large;"><b>ಅನಾಥರಾದೆವೆಂದು ಅಳುತ್ತಿದ್ದಾರೆ</b></span><br />
<span style="color: blue; font-size: large;"><b>ಆಕೆ ದೈಹಿಕವಾಗಿ </b></span><br />
<span style="color: blue; font-size: large;"><b>ದುರ್ಬಲರಾಗಿದ್ದರು </b></span><br />
<span style="color: blue; font-size: large;"><b>ಆದರೂ ಅವರನ್ನು ಕೊಲ್ಲಲು </b></span><br />
<span style="color: blue; font-size: large;"><b>ಏಳು ಗುಂಡುಗಳು ಬೇಕಾಯಿತು !</b></span><br />
<span style="color: purple; font-size: large;"><b>2</b></span><br />
<span style="color: blue; font-size: large;"><b>ಹೌದು, ನಾನು ಅತ್ತಿದ್ದೇನೆ</b></span><br />
<span style="color: blue; font-size: large;"><b>ಹೀಗೆನ್ನಲು ನಾನು ನಾಚೂದಿಲ್ಲ </b></span><br />
<span style="color: blue; font-size: large;"><b>ನೆಲಕ್ಕೆ ಬಿದ್ದ ನನ್ನ ಕಣ್ಣ ಹನಿಗಳು </b></span><br />
<span style="color: blue; font-size: large;"><b>ವ್ಯರ್ಥವಾಗುವುದಿಲ್ಲ... </b></span><br />
<span style="color: blue; font-size: large;"><b>ಅವು ಸಂಕ್ರಾಂತಿಯನ್ನು </b></span><br />
<span style="color: blue; font-size: large;"><b>ಒಡಲೊಳಗೆ ಬಚ್ಚಿಟ್ಟುಕೊಂಡ ಬೀಜಗಳು</b></span><br />
<span style="color: purple; font-size: large;"><b>3</b></span><br />
<span style="color: blue; font-size: large;"><b>ಆ ಓಣಿಯಲ್ಲಿ ಸಾಗುವಾಗ ಎಚ್ಚರ </b></span><br />
<span style="color: blue; font-size: large;"><b>ಅದು ಸಜ್ಜನರು ಬದುಕುವ ಓಣಿ </b></span><br />
<span style="color: blue; font-size: large;"><b>ಈಗಷ್ಟೇ ಒಂದು ಹೆಣವನ್ನು ನೋಡಿದವರಂತೆ </b></span><br />
<span style="color: blue; font-size: large;"><b>ಅಲ್ಲಿ ಆವರಿಸಿಕೊಂಡ ಮೌನ </b></span><br />
<span style="color: blue; font-size: large;"><b>ನಿಮ್ಮನ್ನು ಬೆಚ್ಚಿ ಬೀಳಿಸಬಹುದು !</b></span><br />
<span style="color: purple; font-size: large;"><b>4</b></span><br />
<span style="color: blue; font-size: large;"><b>ನಮಗೆ ದೊರಕಿರುವ</b></span><br />
<span style="color: blue; font-size: large;"><b> "ಅಭಿವ್ಯಕ್ತಿ" ಎನ್ನೋ ಪದ </b></span><br />
<span style="color: blue; font-size: large;"><b>ಲಕ್ಷಾಂತರ ಜನರ ರಕ್ತದಲ್ಲಿ </b></span><br />
<span style="color: blue; font-size: large;"><b>ನೆಂದಿದೆ </b></span><br />
<span style="color: blue; font-size: large;"><b>ಎನ್ನೋ ಕೃತಜ್ಞತೆ ನಮಗಿರಬೇಕು</b></span><br />
<span style="color: purple; font-size: large;"><b>5</b></span><br />
<span style="color: blue; font-size: large;"><b>ದಾರಿ ಹೋಕರು ಎಸೆದ ನೂರು </b></span><br />
<span style="color: blue; font-size: large;"><b>ಕಲ್ಲುಗಳ ತಾಳಿಕೊಂಡು </b></span><br />
<span style="color: blue; font-size: large;"><b>ಹುಳಿ ಮಾವಿನ ಮರದಲ್ಲಿ ತೂಗುತ್ತಿರುವ </b></span><br />
<span style="color: blue; font-size: large;"><b>ಹಣ್ಣು</b></span><br />
<span style="color: blue; font-size: large;"><b>ಲಂಕೇಶರ ಕನಸುಗಳ </b></span><br />
<span style="color: blue; font-size: large;"><b>ಕಣ್ಣ ರೆಪ್ಪೆಯೊಳಗೆ ಜೋಪಾನ ಮಾಡಿ </b></span><br />
<span style="color: blue; font-size: large;"><b>ಕಾವು ಕೊಡುತ್ತಾ </b></span><br />
<span style="color: blue; font-size: large;"><b>ಎರಗುವ ಹದ್ದುಗಳ ಜೊತೆಗೆ </b></span><br />
<span style="color: blue; font-size: large;"><b>ಬೀದಿಗಿಳಿದು ಬಡಿದಾಡುತ್ತಾ </b></span><br />
<span style="color: blue; font-size: large;"><b>ಕೋರ್ಟು ಕಚೇರಿ ಎಂದು ಅಲೆದಾಡುತ್ತ </b></span><br />
<span style="color: blue; font-size: large;"><b>ಟೀಕೆ-ಟಿಪ್ಪಣಿಗಳ ಬಾಣಕ್ಕೆ ಎದೆಗೊಟ್ಟ </b></span><br />
<span style="color: blue; font-size: large;"><b>ಮುಸ್ಸಂಜೆ ಕಥಾ ಪ್ರಸಂಗದ ರಂಗವ್ವ</b></span><br />
<span style="color: blue; font-size: large;"><b>ಕೆಲವರ ಪಾಲಿಗೆ ಅಕ್ಕ </b></span><br />
<span style="color: blue; font-size: large;"><b>ಹಲವರ ಪಾಲಿಗೆ ಅವ್ವ </b></span><br />
<span style="color: blue; font-size: large;"><b>ಸಾವಂತ್ರಿ, ರಂಗವ್ವ, ಸುಭದ್ರೆ, ದೇವೀರಿ </b></span><br />
<span style="color: blue; font-size: large;"><b>ನೀಲು, ನಿಮ್ಮಿ... ಎಲ್ಲರೊಳಗೂ </b></span><br />
<span style="color: blue; font-size: large;"><b>ಚೂರು ಚೂರಾಗಿ ನೀವು... </b></span><br />
<span style="color: blue; font-size: large;"><b>ನಿಮ್ಮೊಳಗೆ ಲಂಕೇಶರು </b></span><br />
<span style="color: blue; font-size: large;"><b>ಹೊಸದಾಗಿ ಹುಟ್ಟಿದರು</b></span><br />
<span style="color: blue; font-size: large;"><b>ಪತ್ರಿಕೆ ನಿಮ್ಮನ್ನು ಸಿಗರೇಟಿನಂತೆ </b></span><br />
<span style="color: blue; font-size: large;"><b>ಸೇದುತ್ತಿದೆ... </b></span><br />
<span style="color: blue; font-size: large;"><b>ಪ್ರತಿವಾರ ಸುಡು ಕೆಂಡ </b></span><br />
<span style="color: blue; font-size: large;"><b>ವಿಷ ಹೀರಿದ ನಂಜುಂಡ </b></span><br />
<span style="color: blue; font-size: large;"><b>ಮಾತಿಲ್ಲದವರ ಪಾಲಿಗೆ </b></span><br />
<span style="color: blue; font-size: large;"><b>ಪತ್ರಿಕೆಯೇ ನಾಲಗೆ </b></span><br />
<span style="color: blue; font-size: large;"><b>ನಿರೀಕ್ಷೆ, ಸಮತೆಯ ನಾಳೆಗೆ</b></span><br />
<span style="color: blue; font-size: large;"><b>ಇಂದು ನಿಮಗೆ ಹುಟ್ಟಿದ ದಿನ </b></span><br />
<span style="color: blue; font-size: large;"><b>ನಾಡು, ನುಡಿಯನ್ನು ನೀವು ಮುಟ್ಟಿದ ದಿನ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಗೌರಿ ಮೇಡಂಗೆ ಪದ್ಯದ ಮೂಲಕ ನಾನು ಶುಭಾಷಯ ಹೇಳಿದಾಗ ಅವರು ನನಗೆ ಇನ್ಬಾಕ್ಸ್ ನಲ್ಲಿ ಪ್ರತಿಕ್ರಯಿಸಿದ್ದು ಹೀಗೆ ...</b></span><br />
<span style="color: blue; font-size: large;"><b>01/29/2015 7:12PM</b></span><br />
<span style="color: blue; font-size: large;"><b>Oh basheer!!!!!!!!!!! you made me cry on my birthday. thank you thank you thank you. first time someone has written a poem about me. this is the most beautiful gift i have got in all my 53 birthdays. of course the best gift i have got was LIFE from my parents.</b></span><br />
<span style="color: purple; font-size: large;"><b>6</b></span><br />
<span style="color: blue; font-size: large;"><b>ನನ್ನ ಮರಣವ </b></span><br />
<span style="color: blue; font-size: large;"><b>ಕಂಡು ಅವರು ಉದ್ಗರಿಸುತ್ತಾರೆ </b></span><br />
<span style="color: blue; font-size: large;"><b>ಇವನು ಮಹಮದೀಯನಲ್ಲ, </b></span><br />
<span style="color: blue; font-size: large;"><b>ಕ್ರಿಶ್ಚಿಯನ್ನನಲ್ಲ, </b></span><br />
<span style="color: blue; font-size: large;"><b>ಯಹೂದಿಯಲ್ಲ </b></span><br />
<span style="color: blue; font-size: large;"><b>ಹಿಂದೂ ಅಂತೂ ಅಲ್ಲವೇ ಅಲ್ಲ ... </b></span><br />
<span style="color: blue; font-size: large;"><b>ಈ ಮರಣ ಕೂಗಿ ಹೇಳುತ್ತಿದೆ </b></span><br />
<span style="color: blue; font-size: large;"><b>ಇವನೊಬ್ಬ ಶರಣ!!</b></span><br />
<div>
<br /></div>
</div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-83520749664861121142017-09-13T10:38:00.004-07:002017-09-13T10:39:07.323-07:00 ಗಾಂಧಿಯ ಬೆಳಕಲ್ಲಿ ಗೌರಿ....<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhPv974J2l_hApuUZs-pIww5HNxnqWLyOKVlZaa9YrQHWUpRP9iUjq12Gp_2mxkkVOKu8hTkV5X-o8NrgnuG6JKAyahztL0f3UKVwo_qJahT0OGpwIichsQLeWDsxZ6pToEgBC82ldXn-Dk/s1600/Gauri-Lankesh_PTI-1.jpg" imageanchor="1" style="margin-left: 1em; margin-right: 1em;"><img border="0" data-original-height="505" data-original-width="633" height="255" src="https://blogger.googleusercontent.com/img/b/R29vZ2xl/AVvXsEhPv974J2l_hApuUZs-pIww5HNxnqWLyOKVlZaa9YrQHWUpRP9iUjq12Gp_2mxkkVOKu8hTkV5X-o8NrgnuG6JKAyahztL0f3UKVwo_qJahT0OGpwIichsQLeWDsxZ6pToEgBC82ldXn-Dk/s320/Gauri-Lankesh_PTI-1.jpg" width="320" /></a></div>
<div style="background-color: white; font-family: arial, sans-serif;">
<b style="font-size: x-large;"><span style="color: purple; font-size: large;">ಗೌರಿ ಲಂಕೇಶ್ ಪತ್ರಿಕೆಯ ಕೊನೆಯ ಸಂಚಿಕೆಗೆಂದು ಬರೆದಿರುವ ಲೇಖನ ....</span></b></div>
<div style="background-color: white; font-family: arial, sans-serif;">
</div>
<div style="background-color: white; font-family: arial, sans-serif;">
<b style="color: blue;"><span style="font-size: large;">ನಾನು ಬಾಲ್ಯದಲ್ಲಿ ಕೇಳಿದ ಕತೆ ಇದು. ಈ ಕತೆ ಹೇಳಿದ್ದು ನನ್ನ ತಾಯಿ. ಆಕೆ ಅದನ್ನು ನನಗೆ ಹೇಳುವ ಸಂದರ್ಭದಲ್ಲಿ ಯಾವ ಉದ್ದೇಶ ಇತ್ತು ಎನ್ನುವುದು ನನಗೆ ಅರಿಯದು. ಆದರೆ ಆ ಬಳಿಕ, ಈ ಕತೆ ನಾನು ಬೆಳೆದಂತೆ ಹೆಚ್ಚು ಹೆಚ್ಚು ಉಜ್ವಲಗೊಳ್ಳುತ್ತಾ ನನ್ನನ್ನು ವಾಸ್ತವಕ್ಕೆ ಮುಖಾಮುಖಿಯಾಗುವುದಕ್ಕೆ ಪ್ರೇರೇಪಿಸಿದೆ. ನನ್ನ ತಾಯಿ ಹೇಳಿದ ಕತೆ ಹೀಗಿದೆ. </span></b></div>
<div style="background-color: white; font-family: arial, sans-serif;">
<span style="color: blue; font-size: large;"><b><br /></b></span></div>
<div style="background-color: white; font-family: arial, sans-serif;">
<span style="color: blue; font-size: large;"><b>ಪ್ರವಾದಿ ಮಹಮ್ಮದ್ ಆಗಷ್ಟೇ ಮಕ್ಕಾದಲ್ಲಿ ತನ್ನ ಚಿಂತನೆಗಳನ್ನು ಹರಡುತ್ತಿದ್ದ ಕಾಲ. ಅವರು ಭಾಗಶಃ ಒಂಟಿಯಾಗಿದ್ದರು. ಹಲವರಿಂದ ಹುಚ್ಚ ಎಂಬ ಟೀಕೆಗೀಡಾಗಿದ್ದರಷ್ಟೇ ಅಲ್ಲದೆ ಹಲ್ಲೆಗೂ ಒಳಗಾಗಿದ್ದರು. ಎಲ್ಲರಿಗೂ ಅವರೊಂದು ತಮಾಷೆಯ ವಸ್ತು. ಇನ್ನೊಂದೆಡೆ ಮಹಮ್ಮದರ ಸಂಬಂಧಿಯಾಗಿರುವ ಮಕ್ಕಾದ ನಾಯಕ ಅಬೂಜಹಲ್(ಈತನ ನಿಜವಾದ ಹೆಸರು ಅಮ್ರ್ ಬಿನ್ ಹಿಶಾಮ್) ಮಹಮ್ಮದರಿಗೆ ಸರಿಯಾದ ಪಾಠ ಕಲಿಸಲು ಕಾಯುತ್ತಿದ್ದ. ಕೈಗೆ ಸಿಕ್ಕಿದರೆ ಕೊಂದೇ ಹಾಕುವುದೆಂದು ತೀರ್ಮಾನಿಸಿದ್ದ. ಮಕ್ಕಾದ ಪುಂಡರೆಲ್ಲ ಸಮಯ ಸಿಕ್ಕಿದಾಗ ಮಹಮ್ಮದರ ಮೇಲೆ ಟೀಕೆ, ದಾಳಿಗಳನ್ನು ನಡೆಸುತ್ತಿದ್ದರು.</b></span></div>
<div style="background-color: white; font-family: arial, sans-serif;">
<span style="color: blue; font-size: large;"><b><br /></b></span></div>
<div style="background-color: white; font-family: arial, sans-serif;">
<span style="color: blue; font-size: large;"><b> ಒಂದು ದಿನ ಮಕ್ಕಾದ ನಗರದ ಮೂಲೆಯಲ್ಲಿ, ರೌಡಿಗಳೆನಿಸಿಕೊಂಡ ಕೆಲವರು ಕುಳಿತು ಮಹಮ್ಮದರ ಚಿಂತನೆ, ಹೋರಾಟವನ್ನು ಚರ್ಚಿಸಿ ನಗುತ್ತಿದ್ದರು. ಆ ಸಂದರ್ಭದಲ್ಲಿ ಆ ಗುಂಪಿನ ಕಡೆಗೆ ಒಬ್ಬ ಬಡ ಕಾರ್ಮಿಕ ಬಂದ. ‘‘ಈ ನಗರದ ಆಗರ್ಭ ಶ್ರೀಮಂತ ಅಬೂಜಹಲ್ ನನಗೆ ಹಣವನ್ನು ಕೊಡುವುದಕ್ಕಿದೆ. ಕೇಳಿದರೆ ಬೆದರಿಸುತ್ತಾನೆ. ದಯವಿಟ್ಟು ಅದನ್ನು ವಸೂಲಿ ಮಾಡಿ ಕೊಡಿ’’ ಎಂದು ಗೋಗರೆಯ ತೊಡಗಿದ. ಅಲ್ಲಿದ್ದವರೆಲ್ಲ ಬಲಿಷ್ಟರು. ಶಕ್ತಿವಂತರು. ಗಣ್ಯರೂ ಅವರ ನಡುವೆ ಇದ್ದರು. ಆದರೆ ಅವರ್ಯಾರಿಗೂ ಈ ಕಾರ್ಮಿಕನಿಗಾಗಿ ಅಬೂಜಹಲ್ನೊಂದಿಗೆ ನಿಷ್ಠುರ ಕಟ್ಟಿಕೊಳ್ಳುವ ಇರಾದೆಯಿರಲಿಲ್ಲ. ಇನ್ನೇನು ಆತನನ್ನು ಗದರಿಸಿ ಓಡಿಸಬೇಕು ಎನ್ನುವಷ್ಟರಲ್ಲಿ ಒಬ್ಬನಿಗೆ ಏನನ್ನಿಸಿತೋ ‘‘ನೋಡು, ಓ ದೂರದಲ್ಲಿ ಒಬ್ಬ ಏಕಾಂಗಿಯಾಗಿ ಕುಳಿತಿದ್ದಾನಲ್ಲ. ಅವನ ಬಳಿಗೆ ಹೋಗು. ಅವನು ಖಂಡಿತವಾಗಿಯೂ ನಿನ್ನ ಹಣವನ್ನು ಅಬೂಜಹಲ್ನಿಂದ ವಸೂಲಿ ಮಾಡಿ ಕೊಡುತ್ತಾನೆ’’ ಎಂದು ಹೇಳಿದ. ಕೂಲಿ ಕಾರ್ಮಿಕ ಅದನ್ನು ನಂಬಿ ಆ ವ್ಯಕ್ತಿಯ ಕಡೆಗೆ ನಡೆದ. ಅಲ್ಲಿ ಮುಹಮ್ಮದರು ಏಕಾಂಗಿಯಾಗಿ ಕೂತಿದ್ದರು. ಕಾರ್ಮಿಕನನ್ನು ಮತ್ತು ಮಹಮ್ಮದರನ್ನು ಏಕಕಾಲದಲ್ಲಿ ತಮಾಷೆ ಮಾಡುವುದು ಅಲ್ಲಿ ಗುಂಪು ಕೂಡಿದ್ದವರ ಉದ್ದೇಶವಾಗಿತ್ತು. ಕಾರ್ಮಿಕ ಇವರ ಮಾತನ್ನು ನಂಬಿ ಮಹಮ್ಮದರ ಬಳಿಗೆ ಸಾರಿ, ತನ್ನ ಅಳಲನ್ನು ಹೇಳಿದ. ಕಾರ್ಮಿಕನ ಅಳಲನ್ನು ವಿವರವಾಗಿ ಆಲಿಸಿದ ಮಹಮ್ಮದರು, ಎಲ್ಲರೂ ನೋಡು ನೋಡುತ್ತಿದ್ದಂತೆಯೇ ಆತನ ಕೈ ಹಿಡಿದು ನೇರವಾಗಿ ಅಬೂಜಹಲನ ಮನೆಯ ಕಡೆಗೆ ನಡೆದರು. ಹೋದವರೇ ಅಬೂಜಹಲರ ಮನೆ ಬಾಗಿಲನ್ನು ತಟ್ಟಿದರು. ಆತ ಬಾಗಿಲು ತೆರೆದರೆ, ತನ್ನ ಮುಂದೆ ತಾನು ಹುಡುಕುತ್ತಿರುವ ಮುಹಮ್ಮದ್! ಜೊತೆಗೆ ತಾನು ಹಣ ನೀಡುವುದಕ್ಕೆ ಬಾಕಿಯಿಟ್ಟಿರುವ ಕಾರ್ಮಿಕ! ಮಹಮ್ಮದರು ಕಾರ್ಮಿಕನನ್ನು ತೋರಿಸಿ ಒಂದೇ ವಾಕ್ಯ ಹೇಳಿದರು ‘‘ಈತನಿಗೆ ನೀಡಬೇಕಾಗಿರುವ ಹಣವನ್ನು ಕೊಟ್ಟು ಬಿಡಿ’’. ಅಬೂಜಹಲ್ ಯಾವುದೋ ವಿಸ್ಮೃತಿಗೆ ತಳ್ಳಲ್ಪಟ್ಟವನಂತೆ ನೇರ ಒಳಹೋದವನೇ ಹಣವನ್ನು ತಂದು ಕಾರ್ಮಿಕನಿಗೆ ಒಪ್ಪಿಸಿದ. ಮಹಮ್ಮದ್ ಕಾರ್ಮಿಕನ ಜೊತೆಗೆ ಅಲ್ಲಿಂದ ವಾಪಾಸಾದರು. ಇವನ್ನೆಲ್ಲ ವಿಸ್ಮಿತರಾಗಿ ನೋಡುತ್ತಿದ್ದ ಮಕ್ಕಾ ನಗರದ ಪುಂಡರು ಅಬೂಜಹಲ್ನನ್ನು ತರಾಟೆಗೆ ತೆಗೆದುಕೊಂಡರು. ಆಗ ಅಬೂಜಹಲ್ ನುಡಿದನಂತೆ ‘‘ಮಹಮ್ಮದರ ಎರಡು ಭುಜಗಳಲ್ಲಿ ನಾನು ಎರಡು ಸಿಂಹಗಳು ಘರ್ಜಿಸುತ್ತಿರೂದನ್ನು ನೋಡಿದೆ’’</b></span></div>
<div style="background-color: white; font-family: arial, sans-serif;">
</div>
<div style="background-color: white; font-family: arial, sans-serif;">
<span style="color: blue; font-size: large;"><b> ಮಹಮ್ಮದರ ಭುಜಗಳಲ್ಲಿ ಎರಡು ಸಿಂಹಗಳು ಗರ್ಜಿಸುತ್ತಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಮಹಮ್ಮದರು ಒಬ್ಬ ಅನಕ್ಷರಸ್ಥರು. ಅನಾಥರು. ದೈಹಿಕವಾಗಿ ದುರ್ಬಲರು. ಬಡವರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಏಕಾಂಗಿ. ಆದರೆ ಮಹಮ್ಮದರ ಪ್ರಾಮಾಣಿಕತೆ, ನಿಷ್ಠುರತೆ, ನ್ಯಾಯಪರತೆಗೆ ಅವನು ಹೆದರಿದ. ಒಬ್ಬ ಮನುಷ್ಯನೊಳಗಿರುವ ನೈತಿಕ ಶಕ್ತಿಯೇ ಆತನ ನಿಜವಾದ ಬಲ ಎನ್ನುವುದನ್ನು ಆ ಕತೆಯಿಂದ ಅರಿತುಕೊಳ್ಳುತ್ತಾ ಹೋದೆ. ಯಾವಾಗ ಗಾಂಧೀಜಿಯ ಬದುಕು ಮತ್ತು ಹೋರಾಟವನ್ನು ನಾನು ಓದತೊಡಗಿದೆನೋ, ಮೇಲಿನ ಕತೆ ತನ್ನ ಒಳ ತಿಳಿವನ್ನು ಇನ್ನಷ್ಟು ಇನ್ನಷ್ಟು ಬಿಟ್ಟು ಕೊಡತೊಡಗಿತು. ತನ್ನೆಲ್ಲ ಸೋಗಲಾಡಿತನಗಳ ಮೂಲಕ ಬದುಕುವ ಮನುಷ್ಯ ತನ್ನ ದೌರ್ಬಲ್ಯಗಳನ್ನು ಖಾಕಿಯ ಮೂಲಕ, ಹಣದ ಮೂಲಕ, ದೈಹಿಕ ಬಲದ ಮೂಲಕ, ಹಿಂಬಾಲಕರ ಮೂಲಕ, ಪುರೋಹಿತ ಶಾಹಿ ವ್ಯವಸ್ಥೆಯ ಮೂಲಕ ರಕ್ಷಿಸಿಕೊಳ್ಳಲು ಯತ್ನಿಸುತ್ತಾನೆ. ಅನೇಕ ಸಂದರ್ಭಗಳಲ್ಲಿ ಆತ ತನ್ನ ಪಾಂಡಿತ್ಯ, ವಿದ್ವತ್ತುಗಳ ಮೂಲಕವೂ ಬಚ್ಚಿಟ್ಟುಕೊಳ್ಳಲು ಯತ್ನಿಸುತ್ತಾನೆ. ಆದರೆ ಮೂಲತಃ ಅವನು ಪ್ರಾಮಾಣಿಕ, ನ್ಯಾಯನಿಷ್ಠುರ ಮನುಷ್ಯನಿಗೆ ಒಳಗೊಳಗೆ ಅಂಜುತ್ತಾ ಬದುಕುತ್ತಾನೆ. ಇಲ್ಲವಾದರೆ, ಒಬ್ಬ ಫಕೀರ, ವೃದ್ಧ, ನಿಶ್ಶಸ್ತ್ರ ಮನುಷ್ಯನನ್ನು ಗೋಡ್ಸೆಯಂತಹ ವ್ಯಕ್ತಿಗೆ ಗುಂಡು ಹಾಕಿ ಕೊಲ್ಲುವ ಅಗತ್ಯವೇ ಬೀಳುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ನೆಹರೂನ ಮಾತಿನ ಲಾಲಿತ್ಯ, ವಲ್ಲಭಬಾಯಿ ಪಟೇಲರ ಶಕ್ತಿ, ಬಾಲಗಂಗಾಧರ ತಿಲಕರ ವಾಕ್ ವೈಭವ ಎಲ್ಲವನ್ನೂ ಗಾಂಧಿ ಮೀರಿದ್ದು ತನ್ನ ನ್ಯಾಯನಿಷ್ಠುರವಾದ ವ್ಯಕ್ತಿತ್ವದ ಮೂಲಕ. ತನ್ನ ಸರಳತೆಯ ಮೂಲಕ. </b></span></div>
<div style="background-color: white; font-family: arial, sans-serif;">
<span style="color: blue; font-size: large;"><b><br /></b></span></div>
<div style="background-color: white; font-family: arial, sans-serif;">
<span style="color: blue; font-size: large;"><b>ರಾಜ್ಯದಲ್ಲಿ ಲಂಕೇಶರ ವಿದ್ವತ್ಭರಿತ ವ್ಯಕ್ತಿತ್ವವನ್ನು ಮೀರಿ ಗೌರಿ ಲಂಕೇಶ್ ಬೆಳೆದು, ನಾಡನ್ನು ಆವರಿಸಿದ್ದು ಇದೇ ನೈತಿಕಶಕ್ತಿಯಿಂದ ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಗೌರಿ ಆಳದಲ್ಲಿ ಒಂಟಿಯಾಗಿದ್ದವರು. ದೈಹಿಕವಾಗಿ ದುರ್ಬಲರಾಗಿದ್ದರು. ಒಳ್ಳೆಯ ಭಾಷಣಕಾರ್ತಿಯಂತೂ ಆಗಿರಲೇ ಇಲ್ಲ. ಹಾಗೆಯೇ ವಿದ್ವ,ತ್ ಪೂರ್ಣ ಬರಹಗಾರ್ತಿಯೂ ಅವರಲ್ಲ. ಆದರೆ ನಡು ಬೀದಿಯಲ್ಲಿ ಅಮಾಯಕನೊಬ್ಬ ಬರ್ಬರವಾಗಿ ಹಲ್ಲೆಗೀಡಾಗುತ್ತಿರುವಾಗ ಅವನು ನಮ್ಮಿಂದ ನಿರೀಕ್ಷಿಸುವುದು ಪ್ರಗಲ್ಭ ಭಾಷಣವನ್ನಲ್ಲ, ವಿದ್ವತ್ತನ್ನಲ್ಲ ಎನ್ನುವುದು ಗೌರಿಗೆ ಗೊತ್ತಿತ್ತು. ‘ನಿಲ್ಲಿಸಿ’ ಎನ್ನುವ ಒಂದೇ ಒಂದು ಶಬ್ಬ ನಮ್ಮ ಬಾಯಿಯಿಂದ ಮೊಳಗಿದರೆ ಅಥವಾ ನಮ್ಮ ಲೇಖನಿಯಿಂದ ಉದುರಿದರೆ ಅದನ್ನು ವರ್ತಮಾನ ಆಲಿಸುತ್ತದೆ. ತಿರಸ್ಕರಿಸುತ್ತದೆ. ಅಥವಾ ಆ ಪದವನ್ನು ಗಂಭೀರವಾಗಿ ಚರ್ಚಿಸುತ್ತದೆ. "ನಿಲ್ಲಿಸಿ" ಅಥವಾ "ಬೇಡ" ಎನ್ನುವುದು ಇಂದಿನ ದಿನಗಳಲ್ಲಿ ಒಂದು ಪದ ಅಥವಾ ಒಂದು ವಾಕ್ಯ ಮಾತ್ರವಲ್ಲ, ಅದೊಂದು ಪೂರ್ಣ ಲೇಖನವೂ ಕೂಡ. ಇಂಗ್ಲಿಶ್ ಪತ್ರಿಕೋದ್ಯಮದಿಂದ ಬಂದ ಗೌರಿಗೆ ಕನ್ನಡದಲ್ಲಿ ವಿದ್ವತ್ ಪೂರ್ಣವಾಗಿ ಬರೆಯಲು ಸಾಧ್ಯವಿರಲಿಲ್ಲ. ಅವರು ಕನ್ನಡದಲ್ಲಿ ತಡವರಿಸುತ್ತಾ ಮಾತನಾಡಿದರು. ಅಕ್ಷರಕ್ಷರಗಳನ್ನು ಕೂಡಿಸಿ ಬರೆದರು. ‘ಕನ್ನಡವೇ ಸರಿಯಾಗಿ ತಿಳಿಯದ ಈಕೆ ಲಂಕೇಶರ ಪತ್ರಿಕೆಯನ್ನು ಹೇಗೆ ಮುಂದುವರಿಸಿಯಾಳು?’ ಎಂಬ ಪ್ರಶ್ನೆಗಳಿಗೆ ತನ್ನ ಸರಳ ಆದರೆ ಅಷ್ಟೇ ನಿಷ್ಠುರವಾದ ವ್ಯಕ್ತಿತ್ವದ ಮೂಲಕ ಅವರಿಗೆ ಉತ್ತರಿಸಿದರು. ಅವರು ಸಾಹಿತ್ಯದ ಭಾಷೆಯಲ್ಲಿ ಮಾತನಾಡದೆ, ಜನಸಾಮಾನ್ಯರ ಸರಳ ಕನ್ನಡದಲ್ಲಿ ಮಾತನಾಡಿದರು. ಗೌರಿಯ ಸರಳ ಕನ್ನಡ ಕಾಲದ ಅಗತ್ಯವಾಗಿತ್ತು. ಹನ್ನೆರಡನೇ ಶತಮಾನದಲ್ಲಿ ವಚನಕಾರರು ಬಳಸಿದ ಪಾಂಡಿತ್ಯ ರಹಿತ ಸರಳ ಕನ್ನಡ ಅದು. ಇಂದಿನ ಕಾಲದ ಬೇಡಿಕೆಯೇ ಸರಳ, ಸ್ಪಷ್ಟ ಮಾತುಗಳಾಗಿರುವಾಗ, ಗೌರಿಯ ಸರಳ ಭಾಷೆ ಅವರ ದೌರ್ಬಲ್ಯವಾಗದೆ, ಸಾಮರ್ಥ್ಯವಾಗಿ ಪರಿವರ್ತನೆಯಾಯಿತು. ಆಕೆಯ ಸರಳ ಮಾತು ಕಾಲದ ಬೇಡಿಕೆಯಾಗಿತ್ತು. ಲಿಂಗಾಯತ ಸಮುದಾಯದಿಂದ ಬಂದಿದ್ದರೂ ಅವರು ಆ ಗುರುತನ್ನು ತಿರಸ್ಕರಿಸಿದ್ದರು. ಆದರೆ ಬಸವಣ್ಣನ ಆಶಯ ಅವರ ಅವರ ಹೋರಾಟಗಳ ಅಡಿಗಲ್ಲಾಗಿತ್ತು. ಲಿಂಗಾಯತ ಧರ್ಮವನ್ನು ಇಂದಿನ ಕೆಲ ಸ್ವಾಮೀಜಿಗಳಿಗಿಂತ ಹೆಚ್ಚು ತನ್ನದಾಗಿಸಿ ಕೊಂಡಿದ್ದರು. ರಾಜ್ಯದಲ್ಲಿ ಹರಡುತ್ತಿರುವ ಲಿಂಗಾಯತ ಚಳವಳಿಯ ಮಹತ್ವವನ್ನು ಮನಗಂಡಿದ್ದರು. ಆಕೆ ಬದುಕಿದ ರೀತಿ, ಆಕೆಯ ಅಸೀಮ ಧೈರ್ಯ, ಹೋರಾಟ, ಮತ್ತು ಅಂತ್ಯ ಒಬ್ಬ ಶ್ರೇಷ್ಠ ಶರಣೆಗೆ ತಕ್ಕುದಾಗಿತ್ತು. </b></span></div>
<div style="background-color: white; font-family: arial, sans-serif;">
<span style="color: blue; font-size: large;"><b>‘ಲಂಕೇಶರ ಪತ್ರಿಕೆ ಈಗ ಅವರ ಮಗಳಂತೆ ಸೊರಗಿದೆ’ ಕೆಲವರು ತೆರೆ ಮರೆಯಲ್ಲಿ ವ್ಯಂಗ್ಯವಾಡುತ್ತಿದ್ದರು. ಆದರೆ ಆ ಮಾತುಗಳಿಗೆ ತನ್ನ ಬದುಕು ಮತ್ತು ಮರಣದ ಮೂಲಕವೇ ಅವರು ಉತ್ತರಿಸಿದರು. ಆಕೆಯ ತಮ್ಮನೂ ಸೇರಿದಂತೆ ಈ ನಾಡಿನ ಪ್ರಮುಖ ಟ್ಯಾಬ್ಲಾಯಿಡ್ ಪತ್ರಿಕೆಯ ಸಂಪಾದಕರು ಗನ್ ಇಟ್ಟು ಓಡಾಡುತ್ತಿರುವಾಗ, ಈಕೆ ಯಾವ ಶಸ್ತ್ರಗಳ ರಕ್ಷಣೆ ಇಲ್ಲದೆಯೇ ಓಡಾಡಿದರು. ಗಾಂಧೀಜಿಗೋ ಅವರ ‘ಮಹಾತ್ಮ’ನೆಂಬ ಪ್ರಭಾವಳಿ ರಕ್ಷಣೆಗಿತ್ತು. ಆದರೆ ಗೌರಿಯೆನ್ನುವ ಈ ತಾಯಿಗೆ ಅದೂ ಇದ್ದಿರಲಿಲ್ಲ. ಆದರೆ ಆಕೆ ಎಷ್ಟು ಶಕ್ತಿವಂತೆ ಎನ್ನುವುದು ಆಕೆಯನ್ನು ಕೊಂದವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರನ್ನು ಕೊಲ್ಲುವುದಕ್ಕಾಗಿ ಏಳು ಗುಂಡುಗಳನ್ನು ಅವರು ಬಳಸಬೇಕಾಯಿತು. ಆದರೂ ಆಕೆಯನ್ನು ಕೊಲ್ಲಲು ಸಾಧ್ಯವಾಗಲಿಲ್ಲ ಎನ್ನುವ ಅಂಶ ಕೊಲೆಗಾರರಿಗೆ ತಡವಾಗಿಯಾದರೂ ಮನವರಿಕೆಯಾಗಿರಬಹುದು. ಯಾಕೆಂದರೆ, ಗೌರಿ ಸಾಯುವ ಮೊದಲು ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದರು. ಈಗ ನೋಡಿದರೆ ದೇಶಾದ್ಯಂತ ತನ್ನ ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡು ವಿಕ್ರಮ ರೂಪತಾಳಿದ್ದಾರೆ. ಈ ದೇಶದ ಸೌಹಾರ್ದವನ್ನು ನಾಶ ಮಾಡುವ ಶಕ್ತಿಗಳಿಗೆ ಇನ್ನಷ್ಟು ಸವಾಲಾಗಿ ನಿಂತಿದ್ದಾರೆ.</b></span></div>
</div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-57884456951054545762017-07-17T06:06:00.007-07:002017-07-17T06:06:43.768-07:00ಮಮತೆ ಮತ್ತು ಇತರ ಕತೆಗಳು<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEi4-OBY1KOiFfUu1jMIEBW2Wl8leWgSjwtGy146vZookxK7llvyTehoUwfG63U-cqzE1WYIAjwPDskUfO4O2VWBVEwXgDwzF6p07kAmWcDmsReX2qwSGGumDofiVI39Vpofku4AibOGaxM4/s1600/old.jpg" imageanchor="1" style="margin-left: 1em; margin-right: 1em;"><img border="0" data-original-height="1073" data-original-width="770" height="320" src="https://blogger.googleusercontent.com/img/b/R29vZ2xl/AVvXsEi4-OBY1KOiFfUu1jMIEBW2Wl8leWgSjwtGy146vZookxK7llvyTehoUwfG63U-cqzE1WYIAjwPDskUfO4O2VWBVEwXgDwzF6p07kAmWcDmsReX2qwSGGumDofiVI39Vpofku4AibOGaxM4/s320/old.jpg" width="229" /></a></div>
<b style="color: purple; font-size: x-large;">ಜಾತಿ</b><br />
<span style="color: blue; font-size: large;"><b>ಅವನು ಬಾಡಿಗೆ ಮನೆ ಹುಡುಕುತ್ತಿದ್ದ.</b></span><br />
<span style="color: blue; font-size: large;"><b>ಅದೊಂದು ಮನೆ ಬಾಡಿಗೆಗಿತ್ತು. ಇವನು ಹೋಗಿ ವಿಚಾರಣೆ ನಡೆಸಿದ.</b></span><br />
<span style="color: blue; font-size: large;"><b>ಒಡೆಯ ಹೇಳಿದ ‘‘ನಮ್ಮ ಜಾತಿಯವರಿಗೆ ಮಾತ್ರ ಕೊಡೋದು. ಹೇಳಿ, ನಿಮ್ಮ ಜಾತಿ ಯಾವುದು’’</b></span><br />
<span style="color: blue; font-size: large;"><b>ಅವನು ಉತ್ತರಿಸಿದ ‘‘ನನ್ನದು ಮನುಷ್ಯ ಜಾತಿ...’’</b></span><br />
<span style="color: blue; font-size: large;"><b>ಒಡೆಯ ತಕ್ಷಣವೇ ಹೇಳಿದ ‘‘ಇಲ್ಲ ಇಲ್ಲ, ಆ ಜಾತಿಯವರಿಗೆ ಕೊಡುವುದಕ್ಕಾಗುವುದಿಲ್ಲ. ನಮ್ಮ ಜಾತಿಯವರಿಗೆ ಮಾತ್ರ...’’ ಎಂದು ಕದ ಇಕ್ಕಿದ.</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಗ್ಯಾರಂಟಿ</b></span><br />
<span style="color: blue; font-size: large;"><b>‘‘ಸಾರ್...ಈ ಫ್ರಿಜ್ಜಿಗೆ ಎಷ್ಟು ವರ್ಷ ಗ್ಯಾರಂಟಿಯಿದೆ’’</b></span><br />
<span style="color: blue; font-size: large;"><b>ಗ್ರಾಹಕ ಅಂಗಡಿಯಾತನಲ್ಲಿ ಕೇಳಿದ</b></span><br />
<span style="color: blue; font-size: large;"><b>‘‘ಮನುಷ್ಯನಿಗಿರುವ ಗ್ಯಾರಂಟಿಗಿಂತ ಎರಡು ದಿನ ಜಾಸ್ತಿ’’ ಅಂಗಡಿಯಾತ ತಣ್ಣಗೆ ಹೇಳಿದ</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಕೊಲೆ</b></span><br />
<span style="color: blue; font-size: large;"><b>‘‘ಬೀದಿಯಲ್ಲೊಂದು ಕೊಲೆ’’</b></span><br />
<span style="color: blue; font-size: large;"><b>‘‘ಹೌದಾ...ನಮ್ಮವರದಾ? ಅವರದಾ?’’</b></span><br />
<span style="color: blue; font-size: large;"><b>‘‘ನಮ್ಮವರದು....’’</b></span><br />
<span style="color: blue; font-size: large;"><b>‘‘ಹೌದಾ..ಅನ್ಯಾಯ ಬಂದ್ ನಡೆಸಬೇಕು....ಕೊಂದವರು ಯಾರು ನಮ್ಮವರೋ, ಅವರೋ...?’’</b></span><br />
<span style="color: blue; font-size: large;"><b>‘‘ನಮ್ಮವರೇ...’’</b></span><br />
<span style="color: blue; font-size: large;"><b>‘‘ಛೆ...ಸ್ವಲ್ಪದರಲ್ಲಿ ಮಿಸ್ಸಾಯಿತು...’’</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಹಣ</b></span><br />
<span style="color: blue; font-size: large;"><b>ಒಬ್ಬ ದಿನಕ್ಕೆ 200 ರೂಪಾಯಿ ದುಡಿಯುತ್ತಿದ್ದ. ಅದರಿಂದ 50 ರೂ.ಯನ್ನು ಉಳಿಸಿ, ತನ್ನ ತಂದೆ ತಾಯಿಯ ಕೈಗಿಡುತ್ತಿದ್ದ.</b></span><br />
<span style="color: blue; font-size: large;"><b> ಆತ ನಿಧಾನಕ್ಕೆ ಹೆಚ್ಚು ಹಣ ಸಂಪಾದಿಸತೊಡಗಿದ.</b></span><br />
<span style="color: blue; font-size: large;"><b>ಇದೀಗ ಆತ ಪ್ರತಿ ದಿನ 10 ಸಾವಿರ ದುಡಿಯುತ್ತಿದ್ದಾನೆ.</b></span><br />
<span style="color: blue; font-size: large;"><b>ಆದರೆ, ತಂದೆ ತಾಯಿಗೆ ಕೊಡಲು ಅವನಲ್ಲಿ ಹಣವೇ ಇಲ್ಲ. </b></span><br />
<span style="color: blue; font-size: large;"><b>ಕೇಳಿದರೆ ‘‘ನಿಮಗೇಕೆ ಹಣ?’’ ಎನ್ನುತ್ತಾನೆ. </b></span><br />
<span style="color: blue; font-size: large;"><b>ಮೈ ತುಂಬಾ ಸಾಲ ಮಾಡಿಕೊಂಡು ಓಡಾಡುತ್ತಿದ್ದಾನೆ. </b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಓದು</b></span><br />
<span style="color: blue; font-size: large;"><b>‘‘ನಾನು ಓದಿದ ಸರ್ವ ಶ್ರೇಷ್ಠ ಚಿಂತಕರು ಅವರು. ನನ್ನ ಬದುಕಿಗೆ ಅವರೇ ನಾಯಕ’’ ಆತ ತನ್ನ ನೇತಾರನ ಹೆಸರು ಹೇಳಿ ಘೋಷಿಸಿದ.</b></span><br />
<span style="color: blue; font-size: large;"><b>ಸಂತ ವಿನಯದಿಂದ ಕೇಳಿದ ‘‘ನೀವು ಯಾವ ಯಾವ ಚಿಂತಕರನ್ನೆಲ್ಲ ಈವರೆಗೆ ಓದಿದ್ದೀರಿ’’</b></span><br />
<span style="color: blue; font-size: large;"><b>‘‘ಅವರನ್ನು ಬಿಟ್ಟರೆ ಇನ್ನಾರನ್ನೂ ಓದಿಲ್ಲ. ಯಾಕೆಂದರೆ ಇನ್ನಾರೂ ಅವರಷ್ಟು ದೊಡ್ಡ ಚಿಂತಕರೇ ಅಲ್ಲ’’ ಇವನು ಮತ್ತೆ ಎದೆ ತಟ್ಟಿ ಹೇಳಿದ.</b></span><br />
<span style="color: blue; font-size: large;"><b>ಸಂತ ನಿಟ್ಟುಸಿರಿಟ್ಟು ಅಲ್ಲಿಂದ ತೆರಳಿದ. </b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಮಮತೆ</b></span><br />
<span style="color: blue; font-size: large;"><b>ಒಬ್ಬ ವೃದ್ಧ ಕಾಲೆಳೆಯುತ್ತಾ ನಡೆಯುತ್ತಿದ್ದ.</b></span><br />
<span style="color: blue; font-size: large;"><b>ಅದನ್ನು ನೋಡಿದ ದಯಾಮಯ ಯುವಕನೊಬ್ಬ ಹೇಳಿದ ‘‘ನಾನು ನಿಮ್ಮನ್ನು ಹೆಗಲಲ್ಲಿ ಹೊತ್ತು ನಿಮ್ಮ ಮನೆಯವರೆಗೆ ನಡೆಯಲೆ?’’</b></span><br />
<span style="color: blue; font-size: large;"><b>ವೃದ್ಧ ಅವನನ್ನು ಮಮತೆಯಿಂದ ನೋಡಿ ಹೇಳಿದ ‘‘ನೀನು ನನ್ನನ್ನು ಹೊತ್ತುಕೊಳ್ಳುತ್ತೀಯೋ, ಇಲ್ಲವೋ ಗೊತ್ತಿಲ್ಲ. ಆದರೆ ನಿನ್ನನ್ನಂತೂ ನಾನು ನನ್ನ ಮನೆಯವರೆಗೆ ಹೊತ್ತುಕೊಂಡು ಹೋಗುವೆ’’ ಎಂದು ಅವನು ಕಾಲೆಳೆಯುತ್ತಾ ಮುಂದೆ ಸಾಗಿದ. </b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ನೆರಳು</b></span><br />
<span style="color: blue; font-size: large;"><b>‘‘ನೆರಳಿಲ್ಲದ ಮನುಷ್ಯನಿದ್ದಾನೆಯೆ?’’ ಶಿಷ್ಯರು ಕೇಳಿದರು.</b></span><br />
<span style="color: blue; font-size: large;"><b>‘‘ಇದ್ದಾನೆ’’ ಸಂತ ನುಡಿದ.</b></span><br />
<span style="color: blue; font-size: large;"><b>‘‘ಯಾರು?’’ ಶಿಷ್ಯರು ಅಚ್ಚರಿಯಿಂದ ಪ್ರಶ್ನಿಸಿದರು.</b></span><br />
<span style="color: blue; font-size: large;"><b>‘‘ಯಾರು ಜೀವನದಲ್ಲಿ ತಪ್ಪನ್ನೇ ಮಾಡಿರುವುದಿಲ್ಲವೋ ಅವನಿಗೆ ನೆರಳಿರುವುದಿಲ್ಲ...’’</b></span><br />
<span style="color: blue; font-size: large;"><b>ಎಂದ ಸಂತ ಅಲ್ಲಿಂದ ಹೊರ ನಡೆದ. ಅವನ ನೆರಳು ಅವನನ್ನು ಹಿಂಬಾಲಿಸುತ್ತಿತ್ತು.</b></span><br />
<br /></div>
B.M.BASHEERhttp://www.blogger.com/profile/14436644887076126519noreply@blogger.com1tag:blogger.com,1999:blog-3037848766175505211.post-26964671698997688582017-03-19T06:35:00.001-07:002017-07-06T11:35:47.991-07:00ದೇವರ ಅಂಗಡಿಯ ಚಪ್ಪಲಿ....!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjLfc_dfMnzX7RtMzifpfTBpzGuRKaR38-9qyhOqHxOLUD4c4aFQhJPJM5krjsHBlq2LvugSyEayGhvp_o6Q8nB0sSOXHxxbBy5Or3CvDU0VHS0ohQCmX6V3KAkEezJA1CgXgzXXfUjflGh/s1600/san.jpg" imageanchor="1" style="margin-left: 1em; margin-right: 1em;"><span style="font-size: large;"><img border="0" src="https://blogger.googleusercontent.com/img/b/R29vZ2xl/AVvXsEjLfc_dfMnzX7RtMzifpfTBpzGuRKaR38-9qyhOqHxOLUD4c4aFQhJPJM5krjsHBlq2LvugSyEayGhvp_o6Q8nB0sSOXHxxbBy5Or3CvDU0VHS0ohQCmX6V3KAkEezJA1CgXgzXXfUjflGh/s1600/san.jpg" /></span></a></div>
<div style="text-align: left;">
<span style="color: blue; font-size: large;"><b>ಇಲ್ಲ ಎನ್ನುವ ದುಃಖ ಪಂಟುವನ್ನು ಯಾವತ್ತೂ ಕಾಡಿದ್ದಿಲ್ಲ. ನಗರಕ್ಕೆ ಒತ್ತಿಕೊಂಡಿರುವ ಕೊಳೆಗೇರಿಯಲ್ಲಿ ಹರಡಿಕೊಂಡಿರುವ ನೂರಾರು ಕುಟುಂಬಗಳ ಸದಸ್ಯರಲ್ಲಿ ಪಂಟು ಒಬ್ಬ. ಅವನ ಹೆಸರು ಪಾಂಡು ಎಂದೋ ಪಾಂಡುರಂಗ ಎಂದೋ ಇರಬಹುದು ಎಂದು ಗುಡಿಸಲ ಅಕ್ಕಪಕ್ಕದ ಹಿರಿಯರು ಮಾತನಾಡಿಕೊಳ್ಳುತ್ತಾರೆ. ತನಗೆ ಹೆಸರಿಟ್ಟವರಾರು ಎನ್ನುವುದೇ ಗೊತ್ತಿಲ್ಲದ ಕಾರಣದಿಂದ ತನ್ನ ಹೆಸರು ಪಂಟು ಅಥವಾ ಪಾಂಡು ಏನೇ ಆಗಿದ್ದರೂ ದೊಡ್ಡ ವ್ಯತ್ಯಾಸವಿಲ್ಲ ಎಂದು ಅವನು ತಿಳಿದುಕೊಂಡಿದ್ದ. ಪಂಟು ಶಾಲೆ ಕಲಿತಿಲ್ಲ. ಹುಟ್ಟಿದವನು ನೇರವಾಗಿ ನಗರದ ಓಣಿಯ ಕಡೆಗೆ ಅಂಬೆಗಾಲಿಕ್ಕಿ ನಡೆದ. ಸರಕಾರ, ಕಾನೂನು, ವ್ಯವಸ್ಥೆ ಯಾವುದೂ ಅವನಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿಯೂ ಇರಲಿಲ್ಲ. ಇಡೀ ಭೂಮಿ, ಆಕಾಶ, ನಕ್ಷತ್ರಗಳೆಲ್ಲ ನನ್ನವು, ನಾನು ಬೇಕೆಂದಾಗ ಅವನ್ನು ಬಳಸಿಕೊಳ್ಳಬಹುದು ಎನ್ನುವ ಅಪಾರ ಶ್ರೀಮಂತಿಕೆಯ ಜೊತೆಗೆ ಬದುಕಿಕೊಂಡು ಬಂದಿರುವ ಪಂಟುವಿಗೆ, ಜೋಪಡಿಗೆ ಒತ್ತಿಕೊಂಡ ಪುಟ್ಟ ನಗರ ಒಡೆಯನೇ ಇಲ್ಲದ, ತೆರೆದಿಟ್ಟ ತಿಜೋರಿಯಂತೆ ಕಾಣುತ್ತಿತ್ತು. ಬೇಕೆಂದಾಗಲೆಲ್ಲ ಈ ನಗರ ಅವನನ್ನು ಕರೆದು ಕೊಟ್ಟು, ಸಂತೈಸಿ ಕಳುಹಿಸುತ್ತಿತ್ತು. </b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅಗತ್ಯ ಹಣ ಬೇಕೆಂದಾಗ ಯಾರದಾದರೂ ಜೇಬಿಗೆ ಕತ್ತರಿ ಹಾಕುತ್ತಿದ್ದ. ಹೊಸ ಪ್ಯಾಂಟು ಕೊಳ್ಳಬೇಕು ಎಂದಾಗ ರಸ್ತೆಯ ಜನಸಂದಣಿಯ ನಡುವೆ ಹರಡಿ ಮಾರಾಟಕ್ಕಿಟ್ಟಿರುವ ಬಟ್ಟೆಗಳಲ್ಲಿ ಒಂದೆರಡನ್ನು ನಾಜೂಕಾಗಿ ಎತ್ತಿ, ಅದರಲ್ಲಿ ತನ್ನ ಸೈಜಿನದನ್ನು ಇಟ್ಟುಕೊಂಡು ಉಳಿದುದನ್ನು ಕಡಿಮೆ ದರಕ್ಕೆ ತನ್ನ ಗೆಳೆಯರಿಗೇ ಮಾರುತ್ತಿದ್ದ. ಕೆಲವೊಮ್ಮೆ ಪುಕ್ಕಟೆಯಾಗಿಯೇ ಹಂಚುತ್ತಿದ್ದ. ಹಲವು ಪರಿಚಿತ ಗೂಡಂಗಡಿಗಳಲ್ಲಿ ಅವನು ಪುಕ್ಕಟೆಯಾಗಿಯೇ ದೋಸೆ, ಇಡ್ಲಿ ಹಾಕಿಸಿಕೊಂಡು ತಿನ್ನುತ್ತಿದ್ದ. ದುಡ್ಡಿದ್ದಾಗ ದುಪ್ಪಟ್ಟು ಕೊಡುತ್ತಿದ್ದ. ಇಲ್ಲವಾದರೆ ಅಕೌಂಟ್ನಲ್ಲಿ ಬರ್ಕೋ ಎಂದು ಬಿಂದಾಸಾಗಿ ಎದ್ದು ಹೋಗುತ್ತಿದ್ದ. ಆಗಾಗ ಜೈಲು ಸೇರುವ ಅಭ್ಯಾಸವೂ ಆಗಿತ್ತಾದರೂ, ಅದೂ ಅನ್ಯವೆಂದು ಅವನಿಗೆ ಅನ್ನಿಸಿರಲೇ ಇಲ್ಲ. ಅಲ್ಲಿರುವ ಸಿಬ್ಬಂದಿಯಿಂದ ಹಿಡಿದು ವಿಚಾರಣಾಧೀನ ಕೈದಿಗಳೆಲ್ಲ ಅವನಿಗೆ ಒಂದಲ್ಲ ಒಂದು ರೀತಿಯಲ್ಲಿ ಆಪ್ತರೇ ಆಗಿದ್ದರು. ಜೈಲು ಎನ್ನುವುದು ಅವನಿಗೊಂದು ಅಚ್ಚರಿಯಾಗಿತ್ತು. ಅನ್ನ, ಆಹಾರ, ವಸತಿಯನ್ನು ಪುಕ್ಕಟೆಯಾಗಿ ಜೈಲುಗಳ ಮೂಲಕ ಕೊಡುವ ಸರಕಾರದ ಕರುಣೆಗೆ ಅವನ ಹೃದಯ ತುಂಬಿ ಬರುತ್ತಿತ್ತು. ಅಲ್ಲಿನ ಜೈಲು ಸಿಬ್ಬಂದಿಗೂ ಅವನು ಆಪ್ತನಾಗಿದ್ದ. ಅದೆಷ್ಟೋ ಕೆಲಸಗಳನ್ನು ಅವನಿಂದ ಮಾಡಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಸಣ್ಣ ಹಣವನ್ನೂ ನೀಡುತ್ತಿದ್ದರು. ಮತ್ತು ಹೀಗಿದ್ದರೂ ಈ ನಗರದ ಜನರು ಯಾಕೆ ಇಷ್ಟು ಒತ್ತಡ ಅನುಭವಿಸುತ್ತಿದ್ದಾರೆ, ಗಡಿಬಿಡಿಯಿಂದ ಓಡಾಡುತ್ತಿದ್ದಾರೆ, ಕಷ್ಟ ಪಡುತ್ತಿದ್ದಾರೆ ಎಂದು ಅಚ್ಚರಿಗೊಳ್ಳುತ್ತಿದ್ದ. </b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹೀಗೇ ಬದುಕು ಕಳೆಯುತ್ತಿರುವ ಹೊತ್ತಿಗೆ ವಯಸ್ಸಿನಲ್ಲಿ ತುಂಬಾ ಹಿರಿಯನಾಗಿರುವ ಅವನ ಗೆಳೆಯ ಜಗ್ಗು ‘ಮದುವೆ ಆಗು’ ಎಂಬ ಸಲಹೆಯನ್ನು ನೀಡಿದ. </b></span><br />
<span style="color: blue; font-size: large;"><b>‘ಯಾಕಾಗಬಾರದು?’ ಎಂದು ಪಂಟುವಿಗೂ ಅನ್ನಿಸಿತು. </b></span><br />
<span style="color: blue; font-size: large;"><b>‘‘ಹುಡುಗಿ ತೋರ್ಸು. ನೀನು ತೋರ್ಸಿದ ಹುಡುಗೀನಾ ಮದುವೆ ಆಯ್ತೀನಿ’’ ಎಂದ ಪಂಟು. </b></span><br />
<span style="color: blue; font-size: large;"><b>‘‘ನಿನಗೊಬ್ಬ ಚಂದದ ಹುಡ್ಗೀನ ನೋಡಿ ಇಟ್ಟಿದ್ದೀನಿ. ನನ್ನ ಹೆಣ್ತಿಗೆ ಪರಿಚಯ. ಅವಳು ನಿನ್ನನ್ನು ನೋಡಿದ್ದಾಳೆ. ಮೊದಲು ಕಾಲಲ್ಲಿರುವ ಚಪ್ಪಲಿ ಬದಲಿಸು. ನೀನು ಅವ್ಳ ಮೀಟ್ ಮಾಡೋ ವ್ಯವಸ್ಥೆ ಮಾಡಿಸ್ತೀನಿ’’ ಎಂದ ಜಗ್ಗು.</b></span><br />
<span style="color: blue; font-size: large;"><b>ಮೊದಲ ಬಾರಿಗೆ ಅವನಿಗೆ ಅವನ ಚಪ್ಪಲಿಯ ಕಡೆಗೆ ಗಮನ ಹೋಯಿತು. ಒಂದೆರಡು ವರ್ಷಗಳಿಂದ ಅವನ ಜೊತೆಗಾರನಾಗಿದ್ದ ಚಪ್ಪಲಿ ಭಾಗಶಃ ಹರಿದು ಚಿಂದಿಯಾಗಿತ್ತು. ಸರಿ, ಯಾವುದಾದರೂ ಬೀದಿ ಬದಿಯಲ್ಲಿರುವ ಅಂಗಡಿಯಿಂದ ಎಗರಿಸಿದರಾಯಿತು ಎಂದು ಯೋಚಿಸಿದ.</b></span><br />
<span style="color: blue; font-size: large;"><b>‘‘ಸ್ವಲ್ಪ ಕ್ವಾಸ್ಟ್ಲಿ ಚಪ್ಪಲಿ ಹಾಕು...ಮರ್ಯಾದೆ ಬತ್ತದೆ. ಚಪ್ಪಲಿಗಿರುವ ಮರ್ಯಾದೆ, ಹಾಕೋ ಬಟ್ಟೆಗಿಲ್ಲ ತಿಳ್ಕೋ’’ ಎಂದ ಜಗ್ಗು.</b></span><br />
<span style="color: blue; font-size: large;"><b>‘‘ಸೋ ರೂಂಗೆ ಹೋದ್ರೆ ಹೆಂಗೆ?’’ ಕೇಳಿದ ಪಂಟು.</b></span><br />
<span style="color: blue; font-size: large;"><b>‘‘ಏ...ಅಲ್ಲೆಲ್ಲ ಸಿಸಿ ಕ್ಯಾಮರಾ ಆಯ್ತದೆ....ಪೊಲೀಸ್ರು ಕಾವ್ಲ ಕಾಯ್ತ ನಿಂತಿರ್ತಾರೆ...ನೀ ಹುಡುಗಿ ನೋಡೋ ಬದ್ಲು ಹುಡುಗೀನೇ ನಿನ್ನನ್ನು ಟೇಸನ್ಗೆ ಬಂದು ನೋಡಬೇಕಾಯ್ತದೆ.....’’ ಜಗ್ಗು ಎಚ್ಚರಿಸಿದ.</b></span><br />
<span style="color: blue; font-size: large;"><b>‘‘ಸರಿ ಬಿಡು. ಈಟು ಅಂಗಡಿಗಳಿವೆ. ನನಗಾಗಿ ಒಂದು ಜೋಡು ಸಿಗಾಕಿಲ್ಲವಾ?’’ ಎಂದು ಅವನನ್ನು ಸಮಾಧಾನಿಸಿದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕೈಯಲ್ಲಿ ಕಾಸೂ ಇಲ್ಲದ, ಯಾವುದನ್ನೂ ಕಾಸು ಕೊಟ್ಟು ತಗೊಂಡು ಅಭ್ಯಾಸವಿಲ್ಲದ ಪಂಟು ಈಗ ಒಂದು ಜೋಡು ಒಳ್ಳೆಯ ಬ್ರಾಂಡಡ್ ಚಪ್ಪಲಿಗಾಗಿ ಅಲೆದಾಡ ತೊಡಗಿದ. ಒಂದೆರಡು ಚಪ್ಪಲಿಗಳನ್ನು ಎಗರಿಸಿದನಾದರೂ ಅದು ಅವನ ಕಾಲಿಗೆ ಸರಿ ಹೊಂದುತ್ತಿರಲಿಲ್ಲ. ಯಾವುದೋ ಅಂಗಡಿಯೊಂದರಲ್ಲಿ ಇನ್ನೇನು ಪಸಂದಾದ ಜೋಡು ಚಪ್ಪಲಿ ಕೈಗೆ ಸಿಕ್ಕಬೇಕು ಎನ್ನುವಷ್ಟರಲ್ಲಿ ಮಾಲಿಕನ ಕೈಗೆ ಸಿಕ್ಕಿ, ಕೆನ್ನೆಗೆ ಎರಡೇಟು ಬಿಗಿಸಿಕೊಂಡ.</b></span><br />
<span style="color: blue; font-size: large;"><b> ‘‘ಒಂದು ಜೋಡು ಚಪ್ಪಲಿ ಕೂಡಿಸಿಕೊಳ್ಳೋ ಯೋಗ್ಯತೆಯಿಲ್ಲ...ನಿನಗೆ ಹುಡುಗಿ ಬೇರೆ ಕೇಡು...’’ ಜಗ್ಗು ಛೀಮಾರಿ ಹಾಕಿದ.</b></span><br />
<span style="color: blue; font-size: large;"><b>‘‘ಸಿಗತ್ತೆ ಬಿಡೂ....ಸ್ವಲ್ಪ ಹುಡುಕೋಣ...ಎಲ್ಲ ಕೂಡಿ ಬರಬೇಕು...’’ ಪಂಟು ಸಮಾಧಾನಿಸಿದ.</b></span><br />
<span style="color: blue; font-size: large;"><b>ಅಷ್ಟರಲ್ಲಿ ಜಗ್ಗು. ಒಂದು ಸಲಹೆ ಕೊಟ್ಟ ‘‘ದೇವಸ್ಥಾನಕ್ಕೊಮ್ಮೆ ಹೋಗಿ ಟ್ರೈ ಮಾಡು...’’</b></span><br />
<span style="color: blue; font-size: large;"><b> ಪಂಟು ತಕ್ಷಣವೇ ನಿರಾಕರಿಸಿದ </b></span><br />
<span style="color: blue; font-size: large;"><b>‘‘ಬೇಡ ಬೇಡ....ಈ ದೇವ್ರ ದಿಂಡರ ಸಹವಾಸ ಬೇಡ. ನಮಗೇಂತ ಇಷ್ಟೆಲ್ಲ ಅಂಗಡಿಗಳನ್ನು ಅವನು ತೆರೆದುಕೊಟ್ಟಿಲ್ವಾ? ಹಿಂಗಿರುವಾಗ ಅವನ ಅಂಗಡಿಗೇ ಹೋಗಿ ಅವನ ಭಕ್ತರ ಚಪ್ಪಲೀನ ಎಗರಿಸೋದು ಎಷ್ಟು ಸರಿ? ಬೇಡ...ಬೇಡ...’’ </b></span><br />
<span style="color: blue; font-size: large;"><b>‘‘ಸರಿ ದೇವಸ್ಥಾನಕ್ಕೆ ಬೇಡಪ್ಪ...ಮಸೀದಿಗೆ ಹೋಗು....ನಿಜಕ್ಕೂ ಮಸೀದಿ ಮುಂದೇನೇ ಒಳ್ಳೊಳ್ಳೆ ಚಪ್ಪಲಿಗಳು ಸಿಗೋದು...’’ ಜಗ್ಗು ಇನ್ನೊಂದು ಸಲಹೆ ನೀಡಿದ. </b></span><br />
<span style="color: blue; font-size: large;"><b>‘‘ಅವ್ರ ದೇವ್ರಾದರೇನು? ಇವ್ರ ದೇವ್ರಾದರೇನು? ದೇವ್ರ ದೇವ್ರೇ ಅಲ್ವಾ? ಇವರ ದೇವರು ಕಿರೀಟ ಹಾಕ್ಕೊಂಡಿರ್ತಾನೆ. ಅವ್ರ ದೇವ್ರ ಟೋಪಿ ಹಾಕ್ಕೊಂಡಿರ್ತಾನೆ....’’</b></span><br />
<span style="color: blue; font-size: large;"><b>‘‘ನೋಡು ಜಗದಾಗೆ ಇರೋದೆಲ್ಲ ದೇವ್ರದ್ದು. ನಮ್ಮ ಹಣೇಲಿ ನಮ್ಮದೂಂತ ಇದ್ದದ್ದಷ್ಟೇ ನಮಗೆ ಅವನು ಕೊಡ್ತಾನೆ. ಆದುದರಿಂದ ದೇವರ ಅಂಗಡಿಯಿಂದ ಎಗರಿಸಿದ್ರೆ ಯಾವ ತಪ್ಪು ಇಲ್ಲ...ನೀನು ಹೋಗು...’’ ಜಗ್ಗು ಅಧ್ಯಾತ್ಮ ಹೇಳಿ ಧೈರ್ಯ ತುಂಬಿದ.</b></span><br />
<span style="color: blue; font-size: large;"><b> ಪಂಟು ಈವರೆಗೆ ದೇವರು, ದಿಂಡರ ಕಡೆಗೆ ತಲೆಯನ್ನೇ ಹಾಕಿರಲಿಲ್ಲ. ಅವನಿಗದರಲ್ಲಿ ಆಸಕ್ತಿಯೂ ಇರಲಿಲ್ಲ. ಆ ಜಗತ್ತು ಅವನಿಗೆ ಅರ್ಥವಾಗುತ್ತಲೂ ಇರಲಿಲ್ಲ. ಒಮ್ಮೆ ಪ್ರಸಾದಕ್ಕಾಗಿ ದೇವಸ್ಥಾನದೊಳಗೆ ಹೋಗಿ, ಅಲ್ಲಿ ಅವನ ಜಾತಿ ಕೇಳಿದ ದಿನದಿಂದ ಅದು ತನ್ನ ಜಾಗ ಅಲ್ಲವೇ ಅಲ್ಲ ಎಂದು ದೂರ ಸರಿದಿದ್ದ. ಅದರೊಳಗೆ ಏನು ನಡೆಯುತ್ತದೆ ಎನ್ನುವುದೂ ಅವನಿಗೆ ಗೊತ್ತಿರಲಿಲ್ಲ.</b></span><br />
<span style="color: blue; font-size: large;"><b>‘‘ದೇವಸ್ಥಾನ, ಇಗರ್ಜಿ, ಮಸೀದಿ...ಎಲ್ಲಿಗೆ ಹೋಗಲಿ?’’ ಪಂಟು ಆಲೋಚಿಸಿ ಕೇಳಿದ. </b></span><br />
<span style="color: blue; font-size: large;"><b>ಜಗ್ಗು ಉತ್ತರಿಸಿದ ‘‘ನೋಡೋ ಪಂಟು...ಈ ಹಿಂದೂ ದೇವ್ರೂ ಬೋ ಸಂಖ್ಯೆಯಲ್ಲಿರುವುದರಿಂದ ದೇವಸ್ಥಾನದಲ್ಲಿ ಕದಿಯೋದು ಸುಲಭ. ಆ ದೇವ್ರ ನೋಡ್ಕೋತಾನೆ ಅಂತ ಈ ದೇವ್ರ...ಈ ದೇವ್ರ ನೋಡ್ಕೋತಾನೆ ಅಂತ ಆ ದೇವ್ರೂ ಯೋಚಿಸ್ತಾ ಇರೋವಾಗಲೇ ಸುಲಭದಲ್ಲಿ ಎಗರಿಸಿ ಬಿಡಬಹುದು. ತಮ್ಮ ದೇವರ ಸೋಮಾರಿತನ ಗೊತ್ತಿರೋದರಿಂದಲೇ ದೇವಸ್ಥಾನಕ್ಕೆ ಬರೋರೆಲ್ಲ ಹಳೆ ಹರಿದ ಚಪ್ಪಲಿ ಹಾಕ್ಕೊಂಡು ಬರ್ತಾರೆ. ಆ ಚಪ್ಪಲಿ ಹಾಕ್ಕೊಂಡು ನೀನು ಹುಡುಗೀನ ನೋಡೋಕೋದ್ರೆ ಅಷ್ಟೇಯ? ಆದರೆ ಈ ಸಾಬ್ರ ದೇವ್ರ ಇದ್ದಾನಲ್ಲ, ಅವ್ನ ತುಂಬಾ ಪವರ್ಫುಲ್... ನಮ್ಮ ದೇವ್ರ ಹಾಗೆ ಅವನಿಗೆ ಹೆಂಡ್ತಿ ಮಕ್ಕಳಿಲ್ಲ. ಸಂಸಾರ ಕಾಟ ಇಲ್ಲ. ನಿದ್ರೆ ಮಾಡೋ ಹಂಗಿಲ್ಲ. ಜೊತೆಗೆ ಒಬ್ಬಂಟಿ ಬ್ರಹ್ಮಚಾರಿ ಬೇರೆ. ಆ ಧೈರ್ಯದಿಂದಲೇ ಸಾಬರು ಭಾರೀ ಬೆಲೆ ಬಾಳೋ ಚಪ್ಪಲಿ ಹಾಕ್ಕೊಂಡೇ ಮಸೀದಿಗೆ ಬರ್ತಾರೆ....’’</b></span><br />
<span style="color: blue; font-size: large;"><b>‘‘ಮತ್ತೆ ಇಗರ್ಜಿ ದೇವ್ರ...’’</b></span><br />
<span style="color: blue; font-size: large;"><b>‘‘ಅಯ್ಯೋ ಅವನು ಪಾಪ...ಸಿಲುಬೆಗೇರಿಸಿ ಮೊಳೆ ಹೊಡ್ದು ಬಿಟ್ರು ಪಾಪಿಗಳು. ಅದಕ್ಕೆ...ಇಗರ್ಜಿಗೆ ಹೋಗೋರು ಚಪ್ಪಲೀನ ಹೊರಗೆ ಇಡೋದೇ ಇಲ್ಲ. ಚಪ್ಪಲಿ ಹಾಕ್ಕೊಂಡೇ ಇಗರ್ಜಿ ಒಳಗೆ ಹೋಗಿ ಅವನಿಗೆ ಕ್ಯಾಂಡಲ್ ಹಚ್ಚಿ ಬರ್ತಾರೆ...’’</b></span><br />
<span style="color: blue; font-size: large;"><b>‘‘ಈಗ ನಾನು ಯಾವ ದೇವ್ರ ಚಪ್ಪಲಿ ಎಗರಿಸ್ಲಿ...’’</b></span><br />
<span style="color: blue; font-size: large;"><b>‘‘ಎಗರಿಸೋದು ಅನ್ನಬೇಡವೋ ಹುಚ್ಚಪ್ಪ. ಪ್ರಸಾದ ಅಂತ ಸ್ವೀಕರಿಸೋದು. ಅವ್ರಿಗೆಲ್ಲ ಹಣ್ಣುಹಂಪಲು ಪ್ರಸಾದ ಅಂತ ಕೊಟ್ರೆ, ನಮ್ಮೆಂತೋರಿಗೆಲ್ಲ ಕಾಲಿಗೆ ಹಾಕೋಕೆ ಜೋಡು ಚಪ್ಪಲಿ ಪ್ರಸಾದವಾಗಿ ಕೊಡ್ತಾನೆ ಎಂದು ತಿಳ್ಕೊಂಡು ಎತ್ಕೊಂಡು ಬಿಡು. ನಾವೆಲ್ಲ ಅವನ ಮಕ್ಕಳೇ ಅಲ್ಲವೇನಾ? ನೋಡು ಸೋಮಾರಿ ದೇವರ ಕಳಪೆ ಚಪ್ಪಲಿ ಬೇಕಾ?. ಪವರ್ಫುಲ್ ದೇವ್ರ ಕ್ವಾಸ್ಟ್ಲಿ ಚಪ್ಪಲಿ ಬೇಕಾ? ಯಾವುದು ಬೇಕು ನೀನೇ ತೀರ್ಮಾನಿಸು...’’</b></span><br />
<span style="color: blue; font-size: large;"><b>‘‘ಪವರ್ಫುಲ್ ದೇವ್ರ ಚಪ್ಪಲಿ ಎಂದ ಮೇಲೆ ರಿಸ್ಕು ಜಾಸ್ತಿ....’’</b></span><br />
<span style="color: blue; font-size: large;"><b>‘‘ಹಂಗೆಲ್ಲ ಹೇಳಬೇಡವೋ...ನೀ ಅಲ್ಲಿಗೆ ಹೋಗು...ಅವನೇ ಎರಡು ಒಳ್ಳೆ ಚಪ್ಪಲೀನ ಆರಿಸಿ ನಿನ್ನ ಕೈಗೆ ಇಡ್ತಾನೆ....ಬೇಕಾದ್ರೆ ನೋಡು...ಮನುಸರಿಗಾದ್ರೆ ಹೆದರ್ಬೇಕು. ದೇವ್ರಿಗೇಕೆ ಹೆದರ್ಬೇಕು?’’ ಜಗ್ಗು ಧೈರ್ಯ ತುಂಬಿದ. ‘‘ಆದ್ರೆ ನಮ್ ದೇವ್ರ ಥರ ಅವ್ರ ದೇವ್ರ ಕಣ್ಣಿಗೆ ಕಾಣಂಗಿಲ್ವಲ್ಲ...ಮತ್ತೆ ಹೆಂಗೆ ಕೊಡ್ತಾನೆ....’’</b></span><br />
<span style="color: blue; font-size: large;"><b>‘‘ಅದಕ್ಕೆಲ್ಲ ನಾವೇಕೆ ತಲೆಕೆಡುಸ್ಕೋಬೇಕು? ಕೊಡೋನು ಅವನು. ಹೆಂಗಾದ್ರೂ ಬಂದು ಕೊಡಲಿ....ಅವನ ಅಂಗಡಿ. ಅವನ ಚಪ್ಪಲಿ...’’</b></span><br />
<span style="color: blue; font-size: large;"><b>ಪಂಟುವಿಗೆ ಸರಿ ಅನ್ನಿಸಿತು. ‘‘ಹಾಗಾದ್ರೆ...ಸಾಬ್ರ ದೇವಸ್ಥಾನ ಎಲ್ಲಿದೆ...?’’ ಕೇಳಿದ.</b></span><br />
<span style="color: blue; font-size: large;"><b>‘‘ಎರಡು ಓಣಿಯಾಚೆಗಿರುವ ದೊಡ್ಡ ಮಸೀದಿಗೆ ಹೋಗು...ಬೋ ದೊಡ್ಡ ಮಿನಾರ ಇರೋ ಮಸೀದಿ ಅದು...’’ ಜಗ್ಗು ದಾರಿ ವಿವರಿಸಿದ.</b></span><br />
<span style="color: blue; font-size: large;"><b>ಪಂಟು ತಲೆಯಾಡಿಸಿದ.</b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅಂದು ಶುಕ್ರವಾರ. ನಮಾಝಿಗೆಂದು ಒಬ್ಬೊಬ್ಬರಾಗಿ ಮಸೀದಿಯ ವರಾಂಡಕ್ಕೆ ಕಾಲಿಡುತ್ತಿದ್ದರು. ಚಪ್ಪಲಿಗಳನ್ನು ಕಳಚಿಟ್ಟು ಅಲ್ಲಿಯೇ ಇರುವ ಸಣ್ಣ ನೀರಿನ ಟ್ಯಾಂಕೊಂದರಲ್ಲಿ ಕಾಲು ತೊಳೆದು, ಮುಖ, ಕೈ ತೊಳೆಯಲು ದೊಡ್ಡ ಟ್ಯಾಂಕಿನ ಬಳಿ ಒಬ್ಬೊಬ್ಬರಾಗಿ ಸಾಗುತ್ತಿದ್ದರು. </b></span><br />
<span style="color: blue; font-size: large;"><b>‘ಯಾವುದನ್ನು ಬೇಕಾದರೂ ಆರಿಸಿಕೋ’ ಎಂಬಂತೆ ಪಂಟುವಿನ ಮುಂದೆ ಚಪ್ಪಲಿಗಳು, ಶೂಗಳು ಒಂದೊಂದಾಗಿ ಹರಡಿಕೊಳ್ಳುತ್ತಿದ್ದವು. ಕಾಂಪೌಂಡ್ ಕಟ್ಟೆಯ ಮೇಲೆ ನಿಂತು ಅವನು ಆ ಚಪ್ಪಲಿಗಳನ್ನೇ ನೋಡುತ್ತಿದ್ದ. ತುಸು ದೂರದಲ್ಲಿ ಪಂಟು ಬೋರ್ಡೊಂದನ್ನು ನೋಡಿದ.</b></span><br />
<span style="color: blue; font-size: large;"><b>‘‘ನಿಮ್ಮ ನಿಮ್ಮ ಚಪ್ಪಲಿಗೆ ನೀವೇ ಜವಾಬ್ದಾರರು’’ ಪಂಟುವಿಗೆ ಅರ್ಥವಾಗಲಿಲ್ಲ. ದೇವರಿಗೆ ನಮಸ್ಕರಿಸುವುದಕ್ಕಾಗಿ ತಾನೇ ಮಸೀದಿಯ ಒಳಗೆ ಹೋಗುತ್ತಿದ್ದಾರೆ. ಚಪ್ಪಲಿ ಹಾಕ್ಕೊಂಡು ಹೋಗಬಾರದು ಎಂದು ಹೇಳಿರುವುದೂ ದೇವರೇ ತಾನೇ? ಹಾಗಿರುವಾಗ ಚಪ್ಪಲಿಯ ಜವಾಬ್ದಾರಿ ದೇವರದ್ದಲ್ಲವೇೆ? ಜಗ್ಗು ಇದ್ದಿದ್ದರೆ ಉತ್ತರ ಹೇಳುತ್ತಿದ್ದ ಅನ್ನಿಸಿತು. ತುಸು ದೂರದಲ್ಲಿ ಇನ್ನೊಂದು ಬೋರ್ಡ್ ಲಗತ್ತಿಸಲಾಗಿತ್ತು ‘‘ಚಪ್ಪಲಿ ಕಳ್ಳರಿದ್ದಾರೆ, ಎಚ್ಚರಿಕೆ!’’</b></span><br />
<span style="color: blue; font-size: large;"><b> ಅರೆ! </b></span><br />
<span style="color: blue; font-size: large;"><b>‘‘ದೇವರಿದ್ದಾನೆ...ಚಪ್ಪಲಿ ಕಳ್ಳರೇ ಎಚ್ಚರಿಕೆ!’’ ಎಂದು ಬೋರ್ಡ್ ಹಾಕಬೇಕಾಗಿತ್ತಲ್ಲ. ಕಳ್ಳರಿಗೆ ಎಚ್ಚರಿಕೆ ಕೊಡದೇ ಭಕ್ತರಿಗೇ ಎಚ್ಚರಿಕೆ ಕೊಡುತ್ತಿದ್ದಾರೆ? ಪಂಟುವಿಗೆ ಅರ್ಥವಾಗಲಿಲ್ಲ. ಹಾಗಾದರೆ ನಾನು ಇಲ್ಲಿ ಹೆದರುವ ಅಗತ್ಯವೇ ಇಲ್ಲ ಅಂದಾಯಿತು. ಎಚ್ಚರಿಕೆಯಿಂದಿರಬೇಕಾದವರು ಕಳ್ಳರಲ್ಲ, ಚಪ್ಪಲಿ ಹೊಂದಿರುವವರು. ದೇವರು ನಮ್ಮ ಜೊತೆಗಿದ್ದಾನೆ ಎನ್ನುವುದು ಬೋರ್ಡ್ ಹಾಕಿದವನಿಗೆ ಚೆನ್ನಾಗಿ ಗೊತ್ತಿರುವಂತಿದೆ. ಚಪ್ಪಲಿಗಳ ಕಡೆಗೆ ಕಣ್ಣಾಯಿಸಿದ. ಬಣ್ಣ ಬಣ್ಣದ ಥರಾವರಿ ಚಪ್ಪಲಿಗಳು. ಜಗ್ಗು ಹೇಳಿದ ಹಾಗೆ ಎಲ್ಲವೂ ಕ್ವಾಸ್ಟ್ಲಿ ಚಪ್ಪಲಿಗಳು.</b></span><br />
<span style="color: blue; font-size: large;"><b> ‘‘ಅವರಲ್ಲೆಲ್ಲ ದುಬಾಯಿಯ ಹಣ ಇರುತ್ತವೆ. ಆದುದರಿಂದಲೇ ಅವರೆಲ್ಲ ದುಬಾರಿ ಚಪ್ಪಲಿಗಳು, ಶೂಗಳನ್ನು ಧರಿಸುತ್ತಾರೆ. ನಿನಗೆ ಬೇಕಾದುದನ್ನು ನೀನು ತೆಗೆದುಕೊಂಡು ಬಾ. ಅವರು ಕಳೆದು ಹೋದುದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳದೆ ಹೊಸತನ್ನು ತೆಗೆದುಕೊಂಡು ಬರುತ್ತಾರೆ...’’ ಎಂದಿದ್ದ ಜಗ್ಗು.</b></span><br />
<span style="color: blue; font-size: large;"><b>ತಾನೇ ಕೈ ಹಾಕಿ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಲೇ ಅಥವಾ ಜಗ್ಗು ಹೇಳಿದಂತೆ ದೇವರೇ ಬಂದು ನನಗೆ ಬೇಕಾದ ಚಪ್ಪಲಿಯನ್ನು ಕೊಡಬಹುದೇೆ? ಎಂಬ ಪ್ರಶ್ನೆಯೂ ಅವನನ್ನು ಕಾಡತೊಡಗಿತು. ಅವನು ನೋಡು ನೋಡುತ್ತಿದ್ದಂತೆಯೇ ಒಂದು ಬಿಳಿ ಕಾರು ಕಾಂಪೌಂಡು ಹೊರಗೆ ಬಂದು ನಿಂತಿತು. ಬಿಳಿ ಪ್ಯಾಂಟು, ಬಿಳಿ ಬಟ್ಟೆ ಧರಿಸಿದ ಒಬ್ಬ ಗಡ್ಡಧಾರಿ ಅದರಿಂದ ಇಳಿದ. ಒಳಬಂದವನೇ ತನ್ನ ಚಪ್ಪಲಿಯ ಬೆಲ್ಟ್ನ್ನು ಕಳಚ ತೊಡಗಿದ. ಜಗ್ಗು ಕಣ್ಣು ಬೆಳಗಿತು. ತೆಗೆದುಕೊಳ್ಳುವುದ್ತಿದ್ದರೆ ಮಿರ ಮಿರ ಮಿಂಚುತ್ತಿರುವ ಈ ಚಪ್ಪಲಿಯನ್ನೇ ಎಂದು ನಿರ್ಧರಿಸಿ ಬಿಟ್ಟ. ಕಳಚಿಟ್ಟು ಆತ ಮಸೀದಿಯೊಳಗೆ ಹೋದದ್ದೇ ಕಾಲಿಗೆ ಧರಿಸಿಕೊಂಡು ಹೊರಟು ಬಿಡಬೇಕು. ಆದರೆ ಒಂದು ವಿಚಿತ್ರ ನಡೆಯಿತು.</b></span><br />
<span style="color: blue; font-size: large;"><b>ಚಪ್ಪಲಿಯನ್ನು ಕಳಚಿದ ಆ ಗಡ್ಡಧಾರಿ ಕಟ್ಟೆಯ ಮೇಲೆ ಕುಳಿತಿದ್ದ ಜಗ್ಗುವಿನ ಕಡೆಗೇ ಬಂದ. ಅರೆ! ಇದೇನಿದು ನನ್ನೆಡೆಗೇ ದಾವಿಸಿ ಬರುತ್ತಿದ್ದಾನೆ. ನಾನು ಚಪ್ಪಲಿ ಕದಿಯಲು ಬಂದಿದ್ದೇನೆ ಎನ್ನುವುದು ಆತನಿಗೆ ತಿಳಿದು ಬಿಟ್ಟಿರಬಹುದೇ? ಓಡಿದರೆ ಹೇಗೆ? ಅಥವಾ ಜಗ್ಗು ಹೇಳುವಂತೆ ದೇವರೇ ನನಗೆ ಬೇಕಾದ ಚಪ್ಪಲಿಯನ್ನು ಆರಿಸಿ ನನ್ನ ಕೈಗೆ ಇಡುತ್ತಿದ್ದಾನೆಯೇ? ಈತ ಸಾಬರ ದೇವರಾಗಿರಬಹುದೇ?</b></span><br />
<span style="color: blue; font-size: large;"><b>ಎಂದೆಲ್ಲ ಯೋಚಿಸುವಷ್ಟರಲ್ಲಿ ಗಡ್ಡಧಾರಿ ಹಸನ್ಮುಖನಾಗಿ ಆತನೆಡೆಗೆ ಬಾಗಿದ. ಎರಡೂ ಚಪ್ಪಲಿಗಳನ್ನು ಪಂಟುವಿನ ಪಕ್ಕದಲ್ಲಿ ಇಟ್ಟು ಹೇಳಿದ ‘‘ಜಾಗೃತೆಯಾಗಿ ನೋಡಿಕೊಳ್ಳಿ...ಐದು ಸಾವಿರ ರೂಪಾಯಿ ಬೆಲೆಬಾಳುವ ಚಪ್ಪಲಿ ಇದು...ನಿಮ್ಮ ಧೈರ್ಯದಲ್ಲಿ ಬಿಟ್ಟು ಹೋಗುತ್ತಿದ್ದೇನೆ’’ ಎಂದು ಅವನ ತೋಳನ್ನು ಅಮುಕಿ ಕಿಸೆಯಿಂದ ನೂರು ರೂಪಾಯಿ ನೋಟನ್ನು ತೆಗೆದು ಅವನ ಕೈಗಿಟ್ಟ. ಬಳಿಕ ಆತ ಮಸೀದಿಯೊಳಗೆ ಸರಿದು ಹೋದ. </b></span><br />
<span style="color: blue; font-size: large;"><b>ಪಂಟು ದಿಗ್ಭ್ರಾಂತನಾಗಿದ್ದ. ಯಾವ ಚಪ್ಪಲಿಯನ್ನು ತಾನು ಹೊತ್ತೊಯ್ಯಬೇಕೆಂದು ಭಾವಿಸಿದ್ದೆನೋ ಅದೇ ಚಪ್ಪಲಿಯ ರಕ್ಷಣೆಯನ್ನು ಈತ ನನ್ನ ಕೈಗೆ ವಹಿಸಿ ಹೋಗಿದ್ದಾನೆ. ಅವನು ರೋಮಾಂಚನಗೊಂಡ. ಜೋಡಿ ಚಪ್ಪಲಿಯ ಜೊತೆಗೆ ನೂರು ರೂಪಾಯಿಯೂ ಸಿಕ್ಕಿದೆ. ದೇವರು ಯಾವ ರೂಪದಲ್ಲಿ ಬರುತ್ತಾನೆ ಎಂದು ಯಾರಿಗೆ ಗೊತ್ತು? ಅವನು ದೇವರೇ ಆಗಿರಬಹುದು. ಗಡ್ಡ ಬೇರೆ ಇಟ್ಟಿರುವುದರಿಂದ ಸಾಬರ ದೇವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ‘ಜಾಗೃತೆಯಾಗಿ ನೋಡಿಕೊಳ್ಳಿ...’ ಎಂದ. ನನ್ನ ಮೇಲೆ ಭರವಸೆ ಇಟ್ಟು ಕೊಟ್ಟು ಹೋದ. ಅದೂ ಐದು ಸಾವಿರ ರೂಪಾಯಿಯ ಚಪ್ಪಲಿಯನ್ನು. </b></span><br />
<span style="color: blue; font-size: large;"><b>ಅಷ್ಟರಲ್ಲಿ ಇನ್ನಾವನೋ ಒಬ್ಬ ಬಂದು ತನ್ನ ಚಪ್ಪಲಿಯನ್ನೂ ಇವನ ಮುಂದೆ ಕಳಚಿಟ್ಟ. ಮತ್ತು 20 ರೂಪಾಯಿಯ ನೋಟನ್ನು ಕೈಯಲ್ಲಿಟ್ಟು ‘ಭದ್ರವಾಗಿ ನೋಡಿಕೊಳ್ಳಿ, ಹೊಸ ಚಪ್ಪಲಿ’ ಎಂದ.</b></span><br />
<span style="color: blue; font-size: large;"><b> ಯಾರು? ಎತ್ತ ಎಂದು ಅವನು ನೋಡುವಷ್ಟರಲ್ಲಿ ಹಣ ಕೈಯಲ್ಲಿಟ್ಟವನು ಮಸೀದಿ ಸೇರಿಯಾಗಿತ್ತು. ಇದೀಗ ಒಬ್ಬೊಬ್ಬರೇ ಅವನ ಸುತ್ತ ತಮ್ಮ ಚಪ್ಪಲಿ ಕಳಚಿಟ್ಟು ಹೋಗುತ್ತಿದ್ದರು. ಅವನ ಕೈಗೆ 5 ರೂ., 10 ರೂ. 20 ರೂ., ಹೀಗೆ ಸೇರ್ಪಡೆಯಾಗುತ್ತಲೇ ಇದ್ದವು. ಅವನ ಸುತ್ತ ಈಗ ನೋಡಿದರೆ ನೂರಾರು ಚಪ್ಪಲಿಗಳು ‘ಆರಿಸಿಕೋ...ಬೇಕಾದುದನ್ನು ಆರಿಸಿಕೋ’ ಎನ್ನುತ್ತಿದ್ದವು. ಕಿಸೆ ತುಂಬಾ ಹಣವೂ. ತುಸು ಹೊತ್ತಲ್ಲಿ ಮಸೀದಿಯೊಳಗೆ ಎಲ್ಲರೂ ಜೊತೆಯಾಗಿ ನಮಾಝ್ ಮಾಡ ತೊಡಗಿದ್ದರು. ಈ ಚಪ್ಪಲಿಯನ್ನೆಲ್ಲ ಎತ್ತಿಕೊಂಡು ಹೋದರೆ ಕೇಳುವವರೇ ಇಲ್ಲ. ಪಂಟು ವಿಸ್ಮಿತನಾಗಿದ್ದ. ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅವನಿಗೆ ಅವನ ಮೇಲೆಯೇ ಅಭಿಮಾನವೊಂದು ಬಂದು ಬಿಟ್ಟಿತು. ನಿಜಕ್ಕೂ ಅಷ್ಟೂ ಚಪ್ಪಲಿಗಳನ್ನು ತಾನು ಕಾಯುತ್ತಿದ್ದೇನೆಯೇ ಅಥವಾ ಅಷ್ಟೂ ಚಪ್ಪಲಿಗಳು ನನ್ನನ್ನು ಕಾಯುತ್ತಿವೆಯೇ? ತನಗೆ ತಾನೇ ಗೊಣಗಿಕೊಂಡ.</b></span><br />
<span style="color: blue; font-size: large;"><b> ಐದು ಸಾವಿರ ರೂಪಾಯಿಯ ಚಪ್ಪಲಿಯನ್ನು ನನ್ನ ಬಳಿ ಬಿಟ್ಟು ಹೋದವನು ನನ್ನ ಮೇಲೆ ಭರವಸೆಯಿಟ್ಟು ಅದೆಷ್ಟು ನಿರಾಳವಾಗಿ ಹೋದ. ಅವರೆಲ್ಲರೂ ನನ್ನ ಬಗ್ಗೆ ಭರವಸೆಯಿಟ್ಟಿದ್ದರು. ಎದುರಲ್ಲಿದ್ದ ‘ನಿಮ್ಮ ಚಪ್ಪಲಿಗೆ ನೀವೇ ಜವಾಬ್ದಾರರು’ ‘ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ!’ ಎಂಬ ಬೋರ್ಡ್ಗಳನ್ನೇ ಅಣಕಿಸುವಂತೆ. ದೇವರನ್ನು ನಂಬುವಷ್ಟೇ ತನ್ಮಯವಾಗಿ ಅಪರಿಚಿತನಾಗಿರುವ ನನ್ನನ್ನು ನಂಬಿದರು.</b></span><br />
<span style="color: blue; font-size: large;"><b>ಹೀಗೆ ಥರಥರವಾಗಿ ಯೋಚಿಸುತ್ತಾ ಕುಳಿತನೇ ಹೊರತು, ಚಪ್ಪಲಿಯನ್ನು ಹೊತ್ತೊಯ್ಯುವ ಧೈರ್ಯ ಅವನಿಗೆ ಬರುತ್ತಿರಲಿಲ್ಲ. ತುಸು ಹೊತ್ತಲ್ಲೇ ಎಲ್ಲರೂ ಮಸೀದಿಯಿಂದ ಹೊರ ಬರತೊಡಗಿದರು. ಒಬ್ಬೊಬ್ಬರಾಗಿ ಅವರವರ ಚಪ್ಪಲಿಗಳನ್ನು ಕಾಲಲ್ಲಿ ಧರಿಸಿ ಹೊರಟು ಹೋಗ ತೊಡಗಿದರು. ಆ ನೀಳ ಗಡ್ಡಧಾರಿ ಚಪ್ಪಲಿಯನ್ನು ಧರಿಸುತ್ತಿದ್ದಾಗ ತನ್ನ ಕಡೆ ನೋಡಿ ತುಂಟ ನಗು ನಕ್ಕ? ಅರೆ! ಅವನು ನಕ್ಕದ್ದು ಯಾಕೆ? ನಾನು ಕಳ್ಳನೆನ್ನುವುದು ಅವನಿಗೆ ಗೊತ್ತಿತ್ತೇ? ಅಥವಾ ಅವನು ನಿಜಕ್ಕೂ ಸಾಬರ ದೇವರೇ ಆಗಿರಬಹುದೇ? ನನ್ನನ್ನು ಪರೀಕ್ಷಿಸಲೆಂದು ಹೀಗೆ ಗಡ್ಡಧಾರಿಯಾಗಿ ಬಂದಿರಬಹುದೆ? ಅವನಿಗೆ ಅರ್ಥವಾಗಲಿಲ್ಲ. ಎಲ್ಲರೂ ಅವರವರ ಚಪ್ಪಲಿಗಳ ಜೊತೆಗೆ ಹೊರಟು ಹೋದ ಬಳಿಕವೂ ಅವನು ಕಡೆದಿಟ್ಟ ಕಲ್ಲಿನಂತೆ ಕುಳಿತೇ ಇದ್ದ. ಅಲ್ಲೇ ಇದ್ದ ಯಾರೋ ‘‘ಭಾಯಿ ತಗೋ’’ ಎಂದು ಒಂದು ಕಟ್ಟನ್ನು ಅವನ ಮುಂದಿಟ್ಟರು. ಕಟ್ಟು ಬಿಚ್ಚಿದರೆ ಅದರಲ್ಲಿ ಬಿರಿಯಾನಿ ಗಮಗಮಿಸುತ್ತಿತ್ತು.</b></span><br />
<span style="color: blue; font-size: large;"><b>ಆತ ಬಿರಿಯಾನಿ ತಿಂದು, ಪಕ್ಕದಲ್ಲೇ ಇದ್ದ ನೀರಿನ ಟ್ಯಾಪ್ನಲ್ಲಿ ಕೈ ತೊಳೆದ. ನೀರು ಕುಡಿದ. ಬಳಿಕ ಕಿಸೆಯಲ್ಲಿದ್ದ ಹಣವನ್ನು ಎಣಿಸಿದ. 350 ರೂಪಾಯಿಯಿತ್ತು. ಹಾಗೆ ಯಾರೋ ಕೀಲಿ ತಿರುಗಿಸಿ ಬಿಟ್ಟ ಗೊಂಬೆಯಂತೆ ಪಂಟು ನಡೆಯ ತೊಡಗಿದ. ದೂರದಲ್ಲೊಂದು ಪುಟ್ಟ ಚಪ್ಪಲಿ ಅಂಗಡಿ ಕಂಡಿತು. ನೇರವಾಗಿ ಅದರ ಒಳ ಹೊಕ್ಕ. ‘‘350 ರೂಪಾಯಿಗೆ ಆಗುವ ಹಾಗೆ ಒಂದು ಚಪ್ಪಲಿ ಕೊಡಿ ಸಾಮಿ...’’ ಎಂದ.</b></span><br />
<span style="color: blue; font-size: large;"><b>ಅಂಗಡಿಯಾತ ಅವನೆಡೆಗೆ ಬಂದ. ಅವನ ಕೈಯಲ್ಲಿ ವಿವಿಧ ಸೈಜಿನ ಚಪ್ಪಲಿಗಳಿದ್ದವು. ಬಾಗಿದವನು ಪಂಟುವಿನ ಪಾದವನ್ನು ತನ್ನ ತೊಡೆಯ ಮೇಲಿಟ್ಟು ಚಪ್ಪಲಿಯನ್ನು ಜೋಡಿಸಿದ. ಪಂಟುವಿನ ಬದುಕಿನಲ್ಲೇ ಅದೊಂದು ವಿಚಿತ್ರ ಅನುಭವ. ತನ್ನ ಪಾದವನ್ನು ಯಾವ ಸಂಕೋಚವೂ ಇಲ್ಲದೆ ತನ್ನ ತೊಡೆಯ ಮೇಲೆ ಇಟ್ಟು ಕೊಂಡು ಚಪ್ಪಲಿಯನ್ನು ಜೋಡಿಸಿದ ಈತ ದೇವರೇ ಯಾಕಾಗಿರಬಾರದು? ಎಂಬ ಆಲೋಚನೆ ತಲೆಯಲ್ಲಿ ಬಂತು. ತನ್ನ ಪಾದಕ್ಕೆ ಹೇಳಿ ಮಾಡಿಸಿದ ಚಪ್ಪಲಿ ಆಗಿತ್ತು. ಧರಿಸಿದ. ಅವನಿಗೆ ಅಳುಬಂದಿತ್ತು. ‘ಇಷ್ಟು ಬೆಲೆ ಬಾಳುವ ಚಪ್ಪಲಿಯನ್ನು ತಾನು ಧರಿಸಿರಲೇ ಇಲ್ಲ’ ಎನ್ನುತ್ತಾ ಆ ಜೋಡಿ ಚಪ್ಪಲನ್ನು ತನ್ನ ಎದೆಗೊತ್ತಿ ಹಿಡಿದ. </b></span><br />
<span style="color: blue; font-size: large;"><b>ಅಂದು ಸಂಜೆ ಜಗ್ಗುವಿನ ಮುಂದೆ ಆ ಚಪ್ಪಲಿಯನ್ನಿಟ್ಟು ಹೇಳಿದ ‘‘ದೇವ್ರೇ ಕೈಯಾರೆ ನನಗೆ ಕೊಟ್ಟ ಚಪ್ಪಲಿ ಇದು...ಇದನ್ನು ಕಾಲಲ್ಲಿ ಧರಿಸೋಕೆ ಮನಸ್ಸೇ ಬರುತ್ತಿಲ್ಲ’’</b></span><br />
<span style="color: blue; font-size: large;"><b>‘‘ಹೇ...ಅಂಗಾರೆ ತಲೆ ಮೇಲೆ ಹೊತ್ಕೊಂಡು ನಡಿ...’’ ಎನ್ನುತ್ತಾ ಜಗ್ಗು ನಕ್ಕ.</b></span><br />
<span style="color: blue; font-size: large;"><b>ಪಂಟು ಮೊದಲ ಬಾರಿಗೆ ಚಪ್ಪಲಿಯನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕೋ, ಕಾಲಿಗೆ ಧರಿಸಬೇಕೋ ಎಂಬ ಗೊಂದಲದಲ್ಲಿದ್ದ. </b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b>ಅಂದು ಸಂಜೆ ಪಂಟು ತನ್ನ ಹುಡುಗಿಯನ್ನು ಭೇಟಿಯಾಗಬೇಕಾಗಿತ್ತು ಬೆಳಗ್ಗೆ ಬೇಗನೇ ಎದ್ದು ಹತ್ತಿರದ ಕೆರೆಯಲ್ಲಿ ಮಿಂದು, ಇದ್ದುದರಲ್ಲೇ ಬಿಳಿಯಾದ ಬಟ್ಟೆ ಬರೆ ಧರಿಸಿ ಕಾಲಿಗೆ ಹೊಸ ಚಪ್ಪಲಿ ಸಿಕ್ಕಿಸಿಕೊಂಡ. ಅವನ ಬದುಕಿನಲ್ಲೇ ಅದೇ ಮೊದಲ ಬಾರಿ ಅವನ ಮನಸ್ಸು ಒಂದು ವಿಚಿತ್ರ ಅನುಭೂತಿಗೆ ಸಿಕ್ಕಿತ್ತು. ಈವರೆಗಿನ ತನ್ನ ಬದುಕನ್ನೆಲ್ಲ ತಿರಸ್ಕರಿಸುವ, ಹೊಸ ಬದುಕೊಂದಕ್ಕೆ ತನ್ನನ್ನು ತಳ್ಳುವ ಶಕ್ತಿ ಆ ಅನುಭೂತಿಗಿರುವುದು ಅವನ ಗಮನಕ್ಕೆ ತೆಳುವಾಗಿ ಬರುತ್ತಿತ್ತು. ವಿಚಿತ್ರವೆಂದರೆ ಬೆಳಗ್ಗಿನಿಂದಲೇ ಅವನ ಮನಸ್ಸು ಒಂದು ಹಂಬಲದಲ್ಲಿತ್ತು. ಈ ಚಪ್ಪಲಿ ಧರಿಸಿಕೊಂಡು ಆ ಮಸೀದಿಯ ಕಡೆಗೆ ಮತ್ತೊಮ್ಮೆ ನಡೆಯಬೇಕು. ಅವನಿಗೆ ಇನ್ನಷ್ಟು ಚಪ್ಪಲಿಯ ಆಸೆ ಇರಲಿಲ್ಲ. ತನ್ನ ಕಡೆಗೆ ನೋಡಿ ತುಂಟ ನಗೆ ಬೀರಿದ ಆ ಗಡ್ಡಧಾರಿ ಅಲ್ಲೆಲ್ಲಾದರೂ ಸಿಗುತ್ತಾನೆಯೋ ಎಂಬ ಆಸೆ ಅವನದು. ಬೆಳಗ್ಗಿನಿಂದ ಅದನ್ನೇ ಯೋಚಿಸುತ್ತಾ ಇದ್ದವನು ಇದ್ದಕ್ಕಿದ್ದಂತೆಯೇ ಎದ್ದು ಹೊರಟೇ ಬಿಟ್ಟ. </b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮಸೀದಿಯ ಮುಂದೆ ವಿಶೇಷ ಜನರೇನೂ ಕಾಣಲಿಲ್ಲ. ಆಗಾಗ ಬೆರಳೆಣಿಕೆಯ ಜನರು ಒಳಗೆ ಹೊರಗೆ ಬಂದು ಹೋಗುವುದನ್ನು ಮಾಡುತ್ತಿದ್ದರು. ಇವನು ಮಸೀದಿಯ ಆವರಣದೊಳಗೆ ಕಾಲಿಟ್ಟನಾದರೂ ಯಾರೂ ಇವನನ್ನು ಗಮನಿಸಲಿಲ್ಲ. ಆ ಮಸೀದಿಯ ಒಳಗಿನಿಂದ ಯಾರೋ ತನ್ನನ್ನು ಸೆಳೆಯುತ್ತಿದ್ದಾರೆ ಅನ್ನಿಸುವ ಭಾವ. ಹೋಗಿ ಆ ಸಾಬರ ದೇವರಿಗೆ ಒಮ್ಮೆ ಕೈ ಮುಗಿದು ಬಂದರೆ ಹೇಗೆ ಎನ್ನುವ ಅನಿಸಿಕೆ! ಮುಂದಕ್ಕೆ ಹೆಜ್ಜೆಯಿಟ್ಟ. ಅಷ್ಟರಲ್ಲಿ ಒಬ್ಬ ಬಂದು ಪಕ್ಕದ ಕಿರು ಟ್ಯಾಂಕ್ನಲ್ಲಿದ್ದ ನೀರನ್ನು ಕಾಲಿಗೆ ಸುರಿದು ಮಸೀದಿಯ ಒಳಗೆ ಹೋಗುವುದನ್ನು ನೋಡಿದ. ಇವನೂ ಅವನನ್ನೇ ಅನುಸರಿಸಿದ. ಅಳುಕುತ್ತಾ ಅವನು ಮಸೀದಿಯ ಒಳಗೆ ಹೆಜ್ಜೆಯಿಟ್ಟ. ಅಮೃತ ಶಿಲೆಗಳನ್ನು ಹಾಸಿದ ವಿಶಾಲವಾದ ಭವನ ಅದು. ದೊಡ್ಡ ದೊಡ್ಡ ಕಿಟಕಿಗಳು. ದೊಡ್ಡ ದೊಡ್ಡ ಕಂಬಗಳು ಆ ಮಸೀದಿಯನ್ನು ಎತ್ತಿ ನಿಲ್ಲಿಸಿದ್ದವು. ಅಪಾರ ಬೆಳಕು. ನೆಲ ಹಾಲಿನಂತೆ ಹೊಳೆಯುತ್ತಿತ್ತು. ನೆತ್ತಿಯ ಮೇಲೆ ದೊಡ್ಡ ಫ್ಯಾನುಗಳು ತಿರುಗುತ್ತಿದ್ದವು. ಪಂಟು ಮುಂದಕ್ಕೆ ಕಣ್ಣಾಯಿಸಿದ. ಒಂದೆರಡು ಜನ ಬಗ್ಗಿ, ಏಳುವ ಕೆಲಸವನ್ನು ಮಾಡುತ್ತಿದ್ದರು. ಪಂಟು ಆ ವಿಶಾಲ ಆವರಣದೊಳಗೆ ಸಾಬರ ದೇವರನ್ನು ಹುಡುಕುತ್ತಿದ್ದ. ಬರೇ ಖಾಲಿ ....ಗೋಡೆಯಲ್ಲಿ ಒಂದು ಫೋಟೋ ಕೂಡ ಇಲ್ಲ. ಹಾಂ...ಗೋಡೆಯಲ್ಲಿ ಒಂದೆರಡು ದೊಡ್ಡ ದೊಡ್ಡ ಗಡಿಯಾರಗಳು ಟಿಕ್ ಟಿಕ್ ಎನ್ನುವ ಸದ್ದು ಮಾಡುತ್ತಿದ್ದವು. ಹಾಗಾದರೆ ದೇವರೆಲ್ಲಿದ್ದಾನೆ? ಅವನಿಗೆ ಆರತಿ ಎತ್ತಿ ಪ್ರಸಾದ ಕೊಡುವವರು ಯಾರು? ಒಂದೂ ಅರ್ಥವಾಗಲಿಲ್ಲ. ನೋಡಿದರೆ ದೂರದ ಮೂಲೆಯೊಂದರಲ್ಲಿ ಕಿಟಕಿಯ ಪಕ್ಕ ಒಬ್ಬ ಗಡ್ಡಧಾರಿ ಮುದುಕ ಕುಳಿತು ಜಪಮಣಿ ಎಣಿಸುತ್ತಿರುವುದನ್ನು ನೋಡಿ ಅವನ ಕಣ್ಣು ಬೆಳಗಿತು. ಅದ್ಯಾರು? ಅವನೇ ಈ ಸಾಬರ ದೇವರು ಇರಬಹುದೇ? ನೇರವಾಗಿ ಅವನ ಬಳಿಗೆ ನಡೆದ. </b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ತನ್ನ ಬಳಿ ನಿಂತ ಆಗಂತುಕನನ್ನು ಜಪಮಣಿ ಎಣಿಸುತ್ತಿದ್ದ ಮುದುಕ ತಲೆಯೆತ್ತಿ ನೋಡಿದ. ಪಂಟುವಿಗೆ ಅವನ ಬಳಿ ಏನು ಕೇಳಬೇಕು ಎಂದೇ ಗೊತ್ತಾಗದೆ ‘‘ಇಲ್ಲಿ ದೇವರು ಎಲ್ಲಿದ್ದಾನೆ?’’ ಎಂದು ಕೇಳಿ ಬಿಟ್ಟ. ಮುದುಕ ದಿಗ್ಭ್ರಾಂತನಾಗಿ ಆಗಂತುಕನನ್ನು ನೋಡಿದ. ಇಂತಹದೊಂದು ಅಧ್ಯಾತ್ಮ ಪ್ರಶ್ನೆಯನ್ನು ಈವರೆಗೆ ಯಾರೂ ಅವನಲ್ಲಿ ಕೇಳಿರಲಿಲ್ಲ. ಆಘಾತದಿಂದ ಆತ ಆಗಂತುಕನ ಮುಖವನ್ನು ನೋಡುತ್ತಲೇ ಇದ್ದ.</b></span><br />
<span style="color: blue; font-size: large;"><b>‘‘ದೇವರಿಗೆ ಕೈ ಮುಗಿದು ಅಡ್ಡ ಬೀಳಬೇಕಾಗಿದೆ. ಇಲ್ಲಿ ನಿಮ್ಮ ದೇವರೆಲ್ಲಿದ್ದಾನೆ ಹೇಳಿ?’’ ಪಂಟು ವಿನೀತನಾಗಿ ಮತ್ತೆ ಕೇಳಿದ.</b></span><br />
<span style="color: blue; font-size: large;"><b>ಮುದುಕ ಮುಗುಳ್ನಕ್ಕ. ‘‘ಸುತ್ತ ಮುತ್ತ ಎಲ್ಲ ದೇವರಿದ್ದಾನೆ. ಈ ಗಾಳಿಯಲ್ಲಿ, ಬೆಳಕಲ್ಲಿ, ಪರಿಮಳದಲ್ಲಿ....ಎಲ್ಲ. ಇಲ್ಲಷ್ಟೇ ಅಲ್ಲ, ಹೊರಗೂ ಇದ್ದಾನೆ....ನಮ್ಮ ಒಳಗೂ ಇದ್ದಾನೆ....ಎಲ್ಲೆಡೆ ದೇವರಿದ್ದಾನೆ....’’</b></span><br />
<span style="color: blue; font-size: large;"><b>‘‘ಹಾಗಾದರೆ ನಾನು ಇಲ್ಲಿ ಯಾರಿಗೆ ಅಡ್ಡ ಬೀಳಲಿ...ಹೇಗೆ ಕೈ ಮುಗಿಯಲಿ...’’</b></span><br />
<span style="color: blue; font-size: large;"><b>‘‘ನಿನಗೇಕೆ ಕೈಮುಗಿಯಬೇಕು ಅನ್ನಿಸಿದೆ?’’ ಮುದುಕ ಕೇಳಿದ.</b></span><br />
<span style="color: blue; font-size: large;"><b>‘‘ನನಗವನು ಚಪ್ಪಲಿ ಕೊಟ್ಟ’’ ಪಂಟು ಉತ್ತರಿಸಿದ.</b></span><br />
<span style="color: blue; font-size: large;"><b>ಮುದುಕ ಮುಗುಳ್ನಕ್ಕ. ‘‘ನಿನಗವನು ಕೊಟ್ಟದ್ದು ಬರೀ ಚಪ್ಪಲಿ ಮಾತ್ರವೇ?’’ ಮುದುಕ ಕೇಳಿದ.</b></span><br />
<span style="color: blue; font-size: large;"><b>‘‘ಹೌದು. ಅವನೇ ಕೈಯಾರೆ ತಂದು ಕೊಟ್ಟ. ನಾನು ಅವನನ್ನು ನೋಡಿದೆ. ಅವನು ನನ್ನನ್ನು ನೋಡಿ ತುಂಟ ನಗೆ ನಕ್ಕ...’’</b></span><br />
<span style="color: blue; font-size: large;"><b> ‘‘ನೀನು ಹೇಳಿದ್ದನ್ನು ನಾನು ನಂಬುತ್ತೇನೆ. ಅವನ ಕೈಯಿಂದ ನೀನು ಚಪ್ಪಲಿ ತೆಗೆದುಕೊಂಡದ್ದು ನಿಜವೇ ಆಗಿದ್ದರೆ ಅವನು ಅದಕ್ಕಾಗಿ ನಗಲೇ ಬೇಕಾಗುತ್ತದೆ....’’ ಎಂದವನು ಒಂದು ಕ್ಷಣ ವೌನವಾದ. </b></span><br />
<span style="color: blue; font-size: large;"><b>‘‘ಆದರೆ ಅವನಿಂದ ನೀನು ಪಡೆದದ್ದು ಚಪ್ಪಲಿ ಮಾತ್ರವೇ ಅಲ್ಲ... ಅದರ ಜೊತೆಗೆ ಅವನು ಇನ್ನೇನೋ ಕೊಟ್ಟಿರಬೇಕು....ಸರಿಯಾಗಿ ನೋಡಿಕೋ....’’ ಎಂದ ಮುದುಕ ಪಕ್ಕದಲ್ಲೇ ಇದ್ದ ಅದೇನೋ ಮರದ ಪುಟ್ಟ ಹಲಗೆಯಂತಹ ವಸ್ತುವನ್ನು ಎಳೆದುಕೊಂಡ. ಆ ಹಲಗೆಗೆ ನಾಲ್ಕು ಚಕ್ರಗಳಿದ್ದವು. ಮತ್ತು ಎರಡೂ ಕೈಗಳನ್ನು ನೆಲಕ್ಕೆ ಒತ್ತಿ ಮುದುಕ ಆ ಹಲಗೆ ಏರಿದ. ಪಂಟು ಬೆಚ್ಚಿದ. ಮುದುಕನಿಗೆ ಎರಡು ಕಾಲುಗಳೇ ಇರಲಿಲ್ಲ. ತನ್ನ ಹಲಗೆಯ ಗಾಡಿಯಲ್ಲಿ ದರದರನೆ ಸಾಗಿ ಮಸೀದಿಯ ಹೊರಬಾಗಿಲು ದಾಟಿದ ಮುದುಕ ಕಾಣೆಯಾಗಿ ಬಿಟ್ಟ. ಪಂಟು ನಿಂತಲ್ಲೇ ಕಲ್ಲಾಗಿ ಬಿಟ್ಟ. ಅವನು ಸಣ್ಣಗೆ ಕಂಪಿಸುತ್ತಿದ್ದ. ಸುಸ್ತಾದವನಂತೆ ಗೋಡೆಯನ್ನು ಆಧರಿಸಿಕೊಂಡ. ಹಾಗೆಯೇ ಕಾಲಿಲ್ಲದವನಂತೆ ಕುಸಿದು ತುಂಬಾ ಹೊತ್ತು ಅಲ್ಲೇ ಕುಳಿತು ಬಿಟ್ಟ. ಒಂದರ್ಧ ಗಂಟೆಯ ಬಳಿಕ ಅವನು ಎದ್ದು ಹೊರಟ. ಮಸೀದಿಯ ಹೆಬ್ಬಾಗಿಲು ದಾಟಿದವನೇ ಅಂಗಳಕ್ಕೆ ಬಂದ. ಹೊರಾಂಗಣದ ಮೂಲೆಯಲ್ಲಿ ಇಟ್ಟಿರುವ ತನ್ನ ಚಪ್ಪಲಿಯ ಕಡೆಗೆ ನಡೆದ. ನೋಡಿದರೆ ಅವನ ಚಪ್ಪಲಿ ಅಲ್ಲಿ ಕಾಣಲಿಲ್ಲ.</b></span><br />
<span style="color: blue; font-size: large;"><b>ಅದನ್ನು ಹುಡುಕುವ ಪ್ರಯತ್ನವನ್ನೇ ಮಾಡದ ಪಂಟು ಮಸೀದಿಯ ಕಾಂಪೌಂಡ್ ಕಟ್ಟೆಯನ್ನೇರಿ ಕುಳಿತು ಆಕಾಶವನ್ನು ಚುಚ್ಚುವ ಪ್ರಯತ್ನದಲ್ಲಿದ್ದ ಮಿನಾರವನ್ನೊಮ್ಮೆ ನೋಡಿದ. </b></span><br />
<span style="color: blue; font-size: large;"><b>ಅವನೊಳಗೀಗ ಅದೇನೋ ಕಳೆದು ಕೊಂಡು ಹಗುರಾದ ಭಾವ, ಜೊತೆಗೆ ಅದೇನೋ ಪಡೆದುಕೊಂಡು ಸುಸ್ತಾದವನ ಸ್ಥಿತಿ. ಇದರಲ್ಲಿ ಯಾವುದು ನಿಜ ಎನ್ನೋದು ಸ್ಪಷ್ಟವಾಗದೆ ತನ್ನ ಮುಂದೆ ಹರಡಿಕೊಳ್ಳುತ್ತಿರುವ ಚಪ್ಪಲಿಗಳನ್ನು ಗಮನಿಸ ತೊಡಗಿದ. </b></span></div>
</div>
B.M.BASHEERhttp://www.blogger.com/profile/14436644887076126519noreply@blogger.com2tag:blogger.com,1999:blog-3037848766175505211.post-64776580775635016292017-02-11T10:21:00.001-08:002017-02-11T10:21:46.715-08:00ರೋಗಿಯ ಆತ್ಮಕತೆ <div dir="ltr" style="text-align: left;" trbidi="on">
<span style="color: #990000;"><b>ಬೊಳುವಾರು ಮುಹಮ್ಮದ್ ಕು೦ಞ ಬರೆದ ಈ ಸುದೀರ್ಘ ಸಾಲುಗಳನ್ನು ಏನೆಂದು ಕರೆಯೋಣ ?</b></span><br />
<span style="color: #990000;"><b>ಕತೆಯೆನ್ನೋಣವೇ ? ಕತೆಯಲ್ಲವೇ ಅಲ್ಲ ಎನ್ನುವಂತಹ ಕತೆ </b></span><br />
<span style="color: #990000;"><b>ಆತ್ಮ ಕತೆ... ಊಹುಂ ಅದರಾಚೆಗೆ </b></span><br />
<span style="color: #990000;"><b>ವೈದ್ಯಕೀಯ ಬರಹವೆನ್ನೋಣವೇ ... ಊಹುಂ ಅದನ್ನೂ ಮೀರಿದೆ </b></span><br />
<span style="color: #990000;"><b>ಕಾವ್ಯ ಗುಣವಿದೆ .... ದಾಂಪತ್ಯ ಗೀತೆ ಇದು ಎಂದರೆ ಇಲ್ಲ ಇನ್ನೂ ಅದರಾಚೆಗೆ ಏನೋ ಇದೆ </b></span><br />
<span style="color: #990000;"><b>ಇದು ಕನ್ನಡ ಸಾಹಿತ್ಯಕ್ಕೆ ಬೊಳುವಾರು ನೀಡಿದ ಒಂದು ಹೊಸ ಗದ್ಯ ಪ್ರಾಕಾರ... </b></span><br />
<span style="color: #990000;"><b>ಬೊಳುವಾರರ ಲೇಖನಿಗೆ ರಾವಣನ ಹತ್ತು ತಲೆಗಳು.. ಇಲ್ಲಿವೆ ಆ ರಾವಣ ಬರಹಗಾರ ಕಟ್ಟಿಕೊಟ್ಟ </b></span><br />
<b><span style="color: #990000;"></span></b><br />
<span style="color: #990000;"><b>ಪುರೋಷೋತ್ತಮ ತನ್ನ ಸಂಗಾತಿಯ ಜೊತೆ ಮರಣವನ್ನ ಗೆದ್ದ ಹೊಸ ರಾಮಾಯಣ </b></span><br />
<span style="color: purple; font-size: large;"><b><br /></b></span>
<span style="color: purple; font-size: large;"><b><br /></b></span>
<span style="color: purple; font-size: large;"><b>ಟೈಪ್-1</b></span><br />
<span style="color: purple; font-size: large;"><b><br /></b></span>
<span style="color: blue; font-size: large;"><b>ಅವನಿಗೆ ನಂಬಿಕೆಯೇ ಆಗಿದ್ದಿರಲಿಲ್ಲ! </b></span><br />
<span style="color: blue; font-size: large;"><b>ಅದುವರೆಗೆ ಶೋಭನಾ ಯಾವುದಕ್ಕೂ ಕಾಡಿಸಿದವಳಲ್ಲ. ಪೀಡಿಸಿದವಳಲ್ಲ. </b></span><br />
<span style="color: blue; font-size: large;"><b>ಮದುವೆಯಾಗಿ ಜೊತೆಯಲ್ಲಿ ಕಳೆದ ೨೫ ವರ್ಷಗಳಲ್ಲಿ ಹೊಸದೊಂದು ಸೀರೆ ತಂದು ಕೊಡು ಎಂದು ಬೇಡಿಕೆಯಿಟ್ಟವಳಲ್ಲ. ಬಂಗಾರದ ನೆಕ್ಲೆಸ್ ಬೇಕು ಎಂದು ತಮಾಷೆಗಾದರೂ ಹೇಳಿದವಳಲ್ಲ. ನಾಟಕ, ಯಕ್ಷಗಾನ, ಸೆಮಿನಾರುಗಳೆಂದು ಊರೂರು ಅಲೆಯುತ್ತಾ ನಡು ರಾತ್ರಿಯಲ್ಲಿ ಬಂದು ಬಾಗಿಲು ಬಡಿದಾಗಲೂ ಮುಖ ಸಿಂಡರಿಸಿಕೊಂಳವಳಲ್ಲ. ಅಂಥವಳಿಗೆ ಈಗ ಏನಾಯಿತು? ಯಾರ ಚಿತಾವಣೆಯಿಂದ ಹೀಗೆ ಮಾಡುತ್ತಿದ್ದಾಳೆ!? ಯಾವುದಕ್ಕೂ ಹಟ ಹಿಡಿಯದ ಇವಳು ಈಗೇಕೆ, ಹೀಗೇಕೆ ಹಿಂಸಿಸಿ ಕೊಲ್ಲುತ್ತಿದ್ದಾಳೆ!!? </b></span><br />
<span style="color: blue; font-size: large;"><b>ಅವನು ಹುಚ್ಚನಂತಾಗಿದ್ದ. </b></span><br />
<span style="color: blue; font-size: large;"><b>ಅವನನ್ನು ತಯಾರು ಮಾಡಿದ ದೇವರು ಸ್ರ್ತೀ ಪುರುಷೋತ್ತಮರಿಗೆಲ್ಲ ಜೋಡಿಸುವಂತೆ ಎಲ್ಲ ಅಂಗಾಂಗಗಳನ್ನೂ ಸರಿಯಾಗಿಯೇ ಅಂಟಿಸಿ, ಚೆನ್ನಾಗಿ ಜೀವಿಸು ಎಂದು ಹೇಳಿಯೇ, ಹಿಂದೂಸ್ತಾನದ ಪಶ್ಚಿಮ ಘಟ್ಟದ ತಪ್ಪಲಿನ ಕರಿಮಲೆಯ ಬುಡದಲ್ಲಿನ ಬಿಳಿಮಲೆ ಎಂಬ ಆರೇಳು ಮನೆಗಳ ಊರಿಗೆ ಟಿಕೇಟು ಕೊಟ್ಟು ಕಳಿಸಿದ್ದ. ಆದರೆ ಜೀವನವೆಂದರೆ ಏನೆಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಬದುಕಿನ ಬಹುಭಾಗವನ್ನು ಸಾಹಿತಿಗಳ, ಬುದ್ಧಿ ಜೀವಿಗಳ ನಡುವೆಯೇ ಕಳೆದುಕೊಂಡುಬಿಟ್ಟಿದ್ದ. </b></span><br />
<span style="color: blue; font-size: large;"><b>ಎಂಬತ್ತರ ದಶಕದ ಆರಂಭದ ದಿನಗಳಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದಾಗಲೇ ನಾಲ್ಕೂ ದಿಕ್ಕಿನಲ್ಲಿ ಕಾಣಿಸುತ್ತಿದ್ದ ಹಚ್ಚ ಹಸಿರಿನ ನಡುವೆ ಕೆಂಪು ಕಾಣುವ ಬಯಕೆ ಅವನೊಳಗಿತ್ತು. ಕೆಲವು ಸಮಾನ ಮನಸ್ಕ ಗೆಳೆಯರನ್ನು (ಐ. ಕೆ. ಬೊಳುವಾರು, ಮೋಹನ ಸೋನ, ಸುದೇಶ ಮಹಾನ, ಹಿಮಕರ, ಎಂ.ಜಿ. ಕಜೆ ಮೊದಲಾದವರು) ಜೊತೆಗೇರಿಸಿಕೊಂಡು ಬಗೆ ಬಗೆಯ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆಗಳನ್ನು ಕಟ್ಟಿಕೊಂಡು ಅಲೆಯುತ್ತಿದ್ದ. ಅಭಿನಯ ನಾಟಕ ತಂಡ, ಸ್ವಂತಿಕಾ ಪ್ರಕಾಶನಗಳನ್ನು ಹುಟ್ಟುಹಾಕಿದ್ದ. ಬಂಡಾಯ ಸಾಹಿತ್ಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಆಗಷ್ಟೇ ಜನಪ್ರಿಯವಾಗುತ್ತಿದ್ದ ದಲಿತ ಚಳುವಳಿಯೂ ಅವನಿಗೆ ಆಪ್ತವಾಗಿತ್ತು. ಲಿಂಗ ಬೇಧ, ಜಾತಿಯ ಅಸಮಾನತೆ, ಅಲ್ಪ ಸಂಖ್ಯಾಕರ ಶೋಷಣೆ, ಸಾಮಾಜಿಕ ಅಸಮಾನತೆಗಳ ವಿರುದ್ಧ ಸಂಘಟಿತ ಹೋರಾಟಗಳು ಅಂದಿನ ಅವನ ಅಗತ್ಯಗಳು.</b></span><br />
<span style="color: blue; font-size: large;"><b>ಸಾಮಾಜಿಕ ಬದಲಾವಣೆಗೆ ಅವನೊಬ್ಬ ಕಾರಣಕರ್ತನಾಗದಿದ್ದರೆ ಚರಿತ್ರೆ ಅವನನ್ನು ಕ್ಷಮಿಸಲಾರದು ಎಂದು ಗಟ್ಟಿಯಾಗಿ ನಂಬಿಕೊಂಡಿದ್ದ. ನಾಳೆ ಬೆಳಗ್ಗೆ ಹನ್ನೊಂದುವರೆಯೊಳಗೆ ಕ್ರಾಂತಿಯಾಗುತ್ತದೆ ಎಂದು ಪ್ರಾಮಾಣಿಕವಾಗಿ ನಂಬಿದ್ದ. </b></span><br />
<span style="color: blue; font-size: large;"><b>ಈ ನಂಬಿಕೆಗಳಿಗೆ ಪೂರಕವಾದ ಓದು ಅವನ ಅಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿತ್ತು. ಆಗಷ್ಟೇ ದಲಿತ ಕವಿ ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು ಅವನಿಗೆ ಮತ್ತು ಅವನಂತಹ ಹಲವರಿಗೆ ಹುಚ್ಚು ಹಿಡಿಸಿತ್ತು. ಸುಳ್ಯದವರೇ ಆದ ಕುಳುಕುಂದ ಶಿವರಾಯ ಅಥವಾ ನಿರಂಜನರ ಕೆಯ್ಯೂರು ಕ್ರಾಂತಿಯ ಚಿರಸ್ಮರಣೆ ಅವನಲ್ಲಿ ಕ್ರಾಂತಿಯ ಕನಸನ್ನು ಬಿತ್ತಿತ್ತು. </b></span><br />
<span style="color: blue; font-size: large;"><b>ಇವುಗಳ ಜೊತೆಗೆ ಪಾಬ್ಲೋ ನೆರುದಾನ ನೋಡಿ ರಕ್ತವಿದೆ ಬೀದಿಯ ಮೇಲೆ, ಬೀದಿಯ ಮೇಲೆ ರಕ್ತವಿದೆ ಸಾಲು, ಅದಾಗಲೇ ಗಾರ್ಕಿಯ ಮದರ್ ಕಾದಂಬರಿಯ ಸಾಲುಗಳಿಂದ ತುಂಬಿದ್ದ ಅವನ ದಿನಚರಿಯ ಪುಟಗಳ ನಡುವೆ ಸೇರಿಕೊಂದಿತ್ತು. ಚಿಲಿಯ ಕ್ರಾಂತಿಕಾರಿ ಹೋರಾಟಗಾರ ಚೆಗವಾರ ಬರೆದ ಪ್ರೇಮ ಪತ್ರದ ಸಾಲುಗಳನ್ನು ಬಾಯಿಪಾಠ ಮಾಡಿಕೊಂಡಿದ್ದ. ಅಮೇರಿಕಾದ ಸೈನಿಕರು ಚೆ ಗವಾರನನ್ನು ಗುಂಡಿಕ್ಕಿ ಸಾಯಿಸಿ, ಆತನ ದೇಹವನ್ನು ತಪಾಸಣೆ ಮಾಡಿದಾಗ ಅವರಿಗೆ ಸಿಕ್ಕಿದ್ದು ನೆರೂದಾನ ಕಾವ್ಯ ಮತ್ತು ಒಂದು ಮದ್ದು ಗುಂಡು ಎಂಬುದನ್ನು ಓದಿಕೊಂಡು ಪುಳಕಿತನಾಗಿದ್ದ. ಟಾಲ್ಸಟಾಯ್ ಕಾದಂಬರಿಗಳು, ಬೋದಿಲೇರನ ಪಾಪದ ಹೂಗಳು, ಶಿವರಾಮ ಕಾರಂತರ ಚೋಮನ ದುಡಿ, ಬೊಳುವಾರರ ಕತೆಗಳು, ಲಂಕೇಶ್ ಪತ್ರಿಕೆ, ಶೂದ್ರ, ಸಂಕ್ರಮಣ, ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಸಂಗಾತಿಗಳೊಂದಿಗೆ ಚರ್ಚೆ ನಡೆಸುತ್ತಿದ್ದ. </b></span><br />
<span style="color: blue; font-size: large;"><b>ಅವನು ಮತ್ತು ಅವನ ಸಂಗಾತಿಗಳು ಬಹಳ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದುದರಿಂದ ಬಹಳ ಜನ ಚಿಂತಕರು, ಬುದ್ಧಿಜೀವಿಗಳು ತಾವಾಗಿಯೇ ಸುಳ್ಯದ ಕಡೆ ಬಂದು ಅವರನ್ನು ಮಾತಾಡಿಸುತ್ತಿದ್ದರು. ಮಂಗಳೂರಿನಿಂದ ರಾಮಚಂದ್ರ ರಾವ್, ಕಾಸರಗೋಡು ಕಡೆಯಿಂದ ಬಿ. ವಿ. ಕಕ್ಕಿಲ್ಲಾಯ ಮತ್ತಿತರರು ಸುಳ್ಯದಲ್ಲಿ ಕಾಣಿಸಿಕೊಂಡರು. ಈ ಸಂಗಾತಿಗಳು ವಾರಾಂತ್ಯಗಳಲ್ಲಿ ಮನೆ ಮನೆಗಳಲ್ಲಿ ನಡೆಸುತ್ತಿದ್ದ ಅಧ್ಯಯನ ವೇದಿಕೆಗಳಲ್ಲಿ ಕಾರ್ಲ ಮಾರ್ಕ್ಸ, ಎಂಗೆಲ್ಸ್, ಲೆನಿನ್, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ, ದ್ವಂದ್ವ ಮಾನ ಭೌತಿಕವಾದ, ಬಡತನ, ಬಿಡುಗಡೆ, ವಿಮೋಚನೆ, ಹೋರಾಟ, ರಷ್ಯಾ ಕ್ರಾಂತಿ ಮತ್ತಿತರ ವಿಷಯಗಳೆಲ್ಲ ಸದ್ದು ಮಾಡತೊಡಗಿದ್ದವು. ಸಿದ್ಧಲಿಂಗಯ್ಯ, ಕೋವೂರ್, ಶೂದ್ರ ಪತ್ರಿಕೆ, ಸಮುದಾಯ ಜಾಥಾ, ಚಂಪಾ, ಬರಗೂರು, ಅತ್ರಿ ಅಶೋಕವರ್ಧನ ಮೊದಲಾದವರ ಪ್ರೇರಣೆಯಿಂದ ಹೊಸ ಯೋಚನೆಗಳು, ಯೋಜನೆಗಳು ರೂಪುಗೊಳ್ಳುತ್ತಿದ್ದುವು. </b></span><br />
<span style="color: blue; font-size: large;"><b>ದೇವಮಾನವರ ವಿರುದ್ಧ ಹೋರಾಟ, ಜಾತಕಕ್ಕೆ ಬೆಂಕಿ, ಸಾಮಾಜಿಕ ಬದಲಾವಣೆಗಾಗಿ ಬೀದಿ ನಾಟಕ, ಕುವೆಂಪು ಪ್ರೇರಣೆಯಿಂದ ಶೂದ್ರತ್ವದ ಬಗೆಗೆ ಹೊಸ ತಿಳುವಳಿಕೆ, ಜಾತಿವಿನಾಶ ಚಳುವಳಿ- ಹೀಗೆ ಗೆಳೆಯರ ಚಟುವಟಿಕೆಗಳಿಗೆ ಹಲವು ಮುಖಗಳಿದ್ದುವು. ವಿದ್ಯಾರ್ಥಿಗಳ ಒಂದು ಗುಂಪು ಈ ಗುಂಪಿನ ಜೊತೆಗೆ ಕ್ರಾಂತಿ ಗೀತೆ ಹಾಡುತ್ತಿತ್ತು. </b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಕ್ರಾಂತಿಗೆ ಕಡಿದ ಸೊಳ್ಳೆ:</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b> ಕ್ರಾಂತಿಕಾರಿಗಳಿಗೆ ಸೊಳ್ಳೆ ಕಚ್ಚಬಾರದೆಂದೇನೂ ಇಲ್ಲವಲ್ಲ.</b></span><br />
<span style="color: blue; font-size: large;"><b> ೧೯೮೨ರ ಜುಲಾಯಿ ತಿಂಗಳಿನ ಮಳೆಗಾಲದ ಒಂದು ಸಂಜೆ ಈ ಕ್ರಾಂತಿಕಾರಿಯ ಮೊಣಕಾಲ ಕೆಳಗೆ ಸೊಳ್ಳೆಯೊಂದು ಕಚ್ಚಿಬಿಟ್ಟಿತ್ತು. ಎಲ್ಲರ ಹಾಗೆ ಇವನೂ ಸೊಳ್ಳೆ ಕಡಿದ ಜಾಗವನ್ನು ಸಹಜವಾಗಿ ಕೆರೆದುಕೊಂಡ. ಚರ್ಮ ಎದ್ದು ಬಂತು, ಉರಿ ಶಮನವಾಯಿತು. ಮರುದಿನ ಕೆರೆದುಕೊಂಡ ಜಾಗ ಕೆಂಪಾಗಿತ್ತು. ಒಂದೆರಡು ದಿನಗಳಲ್ಲಿ ಅದು ಎಂದಿನಂತೆ ಒಣಗದೆ, ಆ ಜಾಗದಲ್ಲಿ ಪಾವಲಿಯಷ್ಟು ಅಗಲವಾದ ಸ್ಥಳ ಕಲ್ಲಿನಂತೆ ಗಟ್ಟಿಗೊಂಡು, ಅಸಾಧ್ಯ ನೋವು ಕಾಣಿಸಿಕೊಂಡಿತು. ನೋವುನಿವಾರಕ ಮಾತ್ರೆಗಳಿಂದ ಪ್ರಯೋಜನವಾಗಲಿಲ್ಲ. ಯಾವುದೋ ಗೆಳೆಯನ ಸಲಹೆಯಂತೆ ಮಂಗಳೂರಿಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡ. ಸಕ್ಕರೆಯ ಮಟ್ಟ ೨೫೬ಕ್ಕೆ ತಲುಪಿತ್ತು. ಹಂಪನಕಟ್ಟೆಯ ಡಾಕ್ಟರ್ ವರ್ಗೀಸ್ ವರದಿ ಹೇಳಿದ್ದರು, ಆರೋಗ್ಯವಂತ ದೇಹದಲ್ಲಿ ಸಕ್ಕರೆಯ ಮಟ್ಟ ೭೦-೧೨೦ ಇರಬೇಕು. ನಿಮ್ಮದು ಇಮ್ಮಡಿ ಆಗಿದೆ, ದುರ್ದೈವದಿಂದ ನಿಮಗೆ ಸಣ್ಣ ವಯಸ್ಸಿಗೆ ಮಧುಮೇಹ ಬಂದಿದೆ. ತುಂಬಾ ಜಾಗೃತೆಯಾಗಿರಿ. ಹಾಗೆ ಹೇಳಿದವರು ಯೂಗ್ಲೋಕೋನ್ ಎಂಬ ಮಾತ್ರೆ ಸೇವಿಸಲು ಹೇಳಿದರು.</b></span><br />
<span style="color: blue; font-size: large;"><b> ಅವನು ತಣ್ಣನೆ ಯಾವುದೋ ಬಸ್ ಹಿಡಿದು ಮರುದಿನದ ಕ್ರಾಂತಿಕಾರೀ ಚಟುವಟಿಕೆಗಳ ಬಗ್ಗೆ ಯೋಚಿಸುತ್ತಾ ಮಧ್ಯರಾತ್ರಿ ಸುಳ್ಯಕ್ಕೆ ಹಿಂದಿರುಗಿ, ಹಳೆಯ ಚಾಪೆಯಲ್ಲಿ ಒರಗಿಕೊಂಡು ನಿದ್ದೆಯಿಲ್ಲದ ರಾತ್ರಿ ಕಳೆದ. ಈ ನಡುವೆ ಕಾಲಿನ ಹುಣ್ಣು ಗುಣವಾದರೂ, ಗಡ್ಡ ತೆಗೆಯುವಾಗ ಗಲ್ಲದಲ್ಲಾದ ಸಣ್ಣದೊಂದು ಗಾಯವು ತಿಂಗಳಾನುಗಟ್ಟಲೆ ಗುಣವಾಗದೆ ಹಿಂಸೆ ನೀಡಿತ್ತು. </b></span><br />
<span style="color: blue; font-size: large;"><b>ಅಗಿನ್ನೂ ಮದುವೆಯಾಗಿರಲಿಲ್ಲ.</b></span><br />
<span style="color: blue; font-size: large;"><b> ಹುಡುಗಿಯರಿಗೆ ಗಲ್ಲದ ವಿನ್ಯಾಸ ಗೊತ್ತಾಗಬಾರದೆಂದು ಗಡ್ಡಬೆಳೆಸಿದ. </b></span><br />
<span style="color: blue; font-size: large;"><b>ಆತನ ಕುರುಚಲು ಕೂದಲು ಮತ್ತು ಕರ್ರಗಿನ ಗಡ್ಡ ಆ ಕಾಲದ ಅವನ ಕ್ರಾಂತಿಕಾರೀ ಚಟುವಟಿಕೆಗಳಿಗೆ ಪೂರಕವೆ ಆಗಿ ಹೋಯಿತು.</b></span><br />
<span style="color: blue; font-size: large;"><b>ಒಂದು ದಿನ ಸಿಕ್ಕಾಗ ನನ್ನಲ್ಲಿ ಅವಹಾಲು ತೋಡಿಕೊಂಡಿದ್ದ. ನಾನು ಡಯಾಬೆಟಿಕ್ ಅಂತ ಗೊತ್ತಾದಾಗ ನನಗೆ ೨೭ ವರ್ಷ. ಅಂದರೆ ಅದಕ್ಕೂ ನಾಲ್ಕಾರು ವರ್ಷಗಳ ಮೊದಲೇ ನಾನು ಡಯಾಬೆಟಿಕ್ ಆಗಿದ್ದಿರಬೇಕು. ನಿಜ ಯಾರಿಗೆ ಗೊತ್ತು? ನಾನು ಕುಡುಕನಲ್ಲ. ಸಿಗರೇಟು ಸೇದುತ್ತಿರಲಿಲ್ಲ, ಹೇಳುವಂತಹ ಕೆಟ್ಟ ಚಟಗಳು ಯಾವುದೂ ಇರಲಿಲ್ಲ, ಆದರೂ ಈ ಮಹಾಮಾರಿ ನನ್ನನ್ನೇ ಯಾಕೆ ಆರಿಸಿಕೊಂಡಿತು?</b></span><br />
<span style="color: blue; font-size: large;"><b> ಹಾಗೆಂದು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿಶೇಷ ಪ್ರಯತ್ನವನ್ನೇನೂ ಅವನು ಮಾಡಲಿಲ್ಲ. </b></span><br />
<span style="color: blue; font-size: large;"><b>ಬದುಕನ್ನು ಅದು ಬಂದ ಹಾಗೆಯೇ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಿದ್ದುರಿಂದ ಅವನು ಕಂಗೆಡಲಿಲ್ಲ. ಅವನ ಎಲ್ಲಾ ಕ್ರಾಂತಿಕಾರೀ ಚಟುವಟಿಗೆಗಳೂ ಹಾಗೆಯೇ ಮುಂದುವರಿದವು. </b></span><br />
<span style="color: blue; font-size: large;"><b>ಗೆಳೆಯರ ಜೊತೆಗೆ ಖಾಯಿಲೆಯನ್ನೂ ಮುಚ್ಚಿಡಲಿಲ್ಲ. ಸಕ್ಕರೆಯ ನೇರ ಸೇವನೆಗೆ ತಿಲಾಂಜಲಿ ಕೊಟ್ಟ.</b></span><br />
<span style="color: blue; font-size: large;"><b> ಆದರೆ, ಡಯಾಬೆಟಿಸ್ನ್ನು ನಿಯಂತ್ರಿಸಲು ಬೇಕಾದ ಅಗತ್ಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವಲ್ಲಿ ಬಹುತೇಕ ವಿಫಲನಾಗಿದ್ದ.ಅನ್ನ ಬಿಡಲಾಗಲಿಲ್ಲ. ಮಧುಮೇಹದ ದೂರಗಾಮೀ ಪರಿಣಾಮಗಳನ್ನು ಊಹಿಸಲಿಲ್ಲ. ಸುಳ್ಯದಿಂದ ಮಂಗಳೂರುವರೆಗೆ ಹೋಗಿ ನಿಯತವಾಗಿ ಪರೀಕ್ಷೆಮಾಡಿಸಿಕೊಳ್ಳಲು ಬೇಕಾದ ಆರ್ಥಿಕ ಶಕ್ತಿಯೂಅವನಿಗಿರಲಿಲ್ಲ. </b></span><br />
<span style="color: blue; font-size: large;"><b>ಮುಂದೊಮ್ಮೆ ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಕ್ಕಾಗ ನಗುತ್ತಲೇ ಹೇಳಿದ್ದ, ನನ್ನದೇನು ಮಹಾ? ಅನೇಕ ಕ್ರಾಂತಿಕಾರಿಗಳು ಸಣ್ಣ ದೊಡ್ಡ ಖಾಯಿಲೆಗಳಿಂದ ನರಳುತ್ತಿರಲಿಲ್ಲವಾ? ಈ ಖಾಯಿಲೆ ಸಾಮಾಜಿಕ ಬದಲಾವಣೆಗೆ ನಾನು ನಡೆಸುವ ಕೆಲಸಗಳಿಗೆ ಪೂರಕವಾಗಿದೆ. ಏನು ಹೇಳ್ತಿ? ನಾನೇನೂ ಹೇಳಿದ್ದಿರಲಿಲ್ಲ. ಆದರೆ ನಕ್ಕಿರಲಿಲ್ಲವೆಂದು ನೆನಪು. ಈ ನಡುವೆ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪಿ.ಎಚ್.ಡಿ ಪದವಿಗಾಗಿ ಡಾ. ವಿವೇಕ ರೈ ಅವರ ಮಾರ್ಗ ದರ್ಶನದಲ್ಲಿ ಹೆಸರು ನೋಂದಣೆ ಮಾಡಿಸಿಕೊಂಡ. ಇದಕ್ಕಾಗಿ ಸುಳ್ಯ ತಾಲೂಕಿನ ಎಲ್ಲ ೪೨ ಗ್ರಾಮಗಳನ್ನು ಹಗಲೂ ರಾತ್ರಿ ಸುತ್ತಿದ. ವಿಷಯ ಸಂಗ್ರಹ ಮಾಡಿದ. ಈ ಹಂತದಲ್ಲಿ ಆಹಾರ, ನಿದ್ರೆ, ಇತ್ಯಾದಿಗಳ ಬಗ್ಗೆ ಗಮನವನ್ನೇ ಹರಿಸಲಿಲ್ಲ.</b></span><br />
<span style="color: blue; font-size: large;"><b> ಮುಂದೆ ಪಿ.ಎಚ್.ಡಿ ಪದವಿಯೇನೋ ದೊರೆತಿತು. ಆದರೆ ಅಷ್ಟರಲ್ಲೇ ಮಧುಮೇಹ ಅವನನ್ನುಸದ್ದಿಲ್ಲದೆ ಕೊಲ್ಲಲು ಆರಂಭಿಸಿತ್ತು. </b></span><br />
<span style="color: blue; font-size: large;"><b>ಮುಂದೆ ಅವನು ಮಂಗಳೂರು ವಿಶ್ವವಿದ್ಯಾಲಯ ಸೇರಿದ. ಅಲ್ಲಿ ಪಾಠ ಮಾಡುವುದರ ಜೊತೆಗೆ, ಬಂಡಾಯ ಚಳುವಳಿಯ ಜಿಲ್ಲಾ ಸಂಚಾಲಕನಾಗಿ ಕೆಲಸ ಮಾಡಿದ. ದಲಿತ ಚಳುವಳಿಯಲ್ಲಿ ತೊಡಗಿಸಿಕೊಂಡ. ನಡುವೆ ಯಕ್ಷಗಾನದ ಹುಚ್ಚು ಕೂಡಾ ಅಂಟಿಕೊಂಡಿತು. ಇವೆಲ್ಲದರ ಜೊತೆಗೆ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕವಾಗಿ ಬೆಳೆಯಲೇಬೇಕಾಗಿತ್ತಾದ್ದರಿಂದ, ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳನ್ನೂ ಮುಂದುವರಿಸಿಕೊಂಡು ಬಂದ. ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ. ಮುಂದೆ ಅವನಿಗೆ ಬಹಳ ಖ್ಯಾತಿ ತಂದು ಕೊಟ್ಟ ಕರಾವಳಿ ಜಾನಪದ ಕೃತಿಯೂ ಪ್ರಕಟವಾಯಿತು. ಈ ಎಲ್ಲಾ ಕೆಲಸಗಳು ಅವನಿಗೆ ಸಾಕಷ್ಟು ಪ್ರಸಿದ್ಧಿಯ ಸಿಹಿಯನ್ನೂ, ದೇಹದ ತುಂಬೆಲ್ಲ ಸಕ್ಕರೆಯ ಕಹಿಯನ್ನೂ ತಂದಿದ್ದವು. ಇಂಥ ಸ್ಥಿತಿಯಲ್ಲೇ ಅವನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕನಾಗಿ ಆಹ್ವಾನದ ಮೇಲೆ ಸೇರಿಕೊಂಡ. </b></span><br />
<span style="color: blue; font-size: large;"><b>ಆಗ ಕಂಬಾರರು ಹಂಪಿಗೆ ಕುಲಪತಿಗಳು. </b></span><br />
<span style="color: blue; font-size: large;"><b>ಎಳೆಯ ವಯಸ್ಸಿನಲ್ಲಿ ಪ್ರಾಧ್ಯಾಪಕ ಹುದ್ದೆ ನೀಡಿದ ಕಂಬಾರರ ಋಣ ತೀರಿಸಲು ಇವನು ಅಗತ್ಯಕ್ಕಿಂತ ಹೆಚ್ಚು ದುಡಿದ. ಒಂದೆಡೆ ಕಟ್ಟಡದ ಕೆಲಸಗಳು, ಇನ್ನೊಂದೆಡೆ ಶೈಕ್ಷಣಿಕ ಕೆಲಸಗಳು, ಹೀಗೆ ದುಡಿಯುವಾಗ ಮಧುಮೇಹದ ಕುರಿತು ಚಿಂತಿಸಲು ಸಮಯವೇ ದೊರಕಲಿಲ್ಲ. ಆದರೆ ವಿಶ್ವವಿದ್ಯಾಲಯ ಮೇಲೆ ಬರುತ್ತಿದ್ದಂತೆ ಕಂಬಾರರೂ ಸೇರಿದಂತೆ ಹಲವರಿಗೆ, ಇವನನ್ನೂ ಒಳಗೊಂಡಂತೆ ಇನ್ನೂ ಕೆಲವರು ಬೇಡವಾದರು. ಕಂಬಾರ ಮತ್ತು ಅವರೊಡನೆ ಇದ್ದ ಕೆಲವರಿಗೆ ಬೇಕಾದದ್ದು ಇವನಲ್ಲಿರಲಿಲ್ಲ. ಇವನಲ್ಲಿದ್ದದ್ದು ಅವರಿಗೆ ಬೇಕಾಗಿರಲಿಲ್ಲ. ಪ್ರಕಾಶ್ ಕಂಬತ್ತಳ್ಳಿಯವರನ್ನು ಹೊರಗೆ ಅಟ್ಟಲಾಯಿತು. ಚಿ. ಶ್ರಿನಿವಾಸ ರಾಜು, ಎಚ್.ಎಸ್. ರಾಘವೇಂದ್ರ ರಾವ್, ಓ.ಏಲ್. ನಾಗಭೂಷಣ ಸ್ವಾಮಿ ಹೀಗೆ ಹಲವರು ಒಬ್ಬೊಬ್ಬರಾಗಿ ತಮ್ಮ ತಮ್ಮ ಮಾತೃ ಸಂಸ್ಥೆಗೆ ಹಿಂದಿರುಗಿದರು. ಆದರೆ ಇವನಿಗೆ ಬೇರೆ ಗತಿ ಇಲ್ಲ. ನಿಧಾನವಾಗಿ ಇರುವಲ್ಲಿಯೇ ಒಂಟಿಯಾಗತೊಡಗಿದ. ೧೯೯೭ರ ನವಂಬರದ ಹೊತ್ತಿಗೆ ಇವನ ಜೊತೆಗಿದ್ದದ್ದು ಹಂಪಿಯ ಸುಮಾರು ೬೦೦ ವರ್ಷಗಳ ಇತಿಹಾಸವಿರುವ ವಿರೂಪಾಕ್ಷ ಮತ್ತು ೪೭೫ರ ಇತಿಹಾಸ ನಿರ್ಮಿಸಿದ್ದಇವನ ಸಕ್ಕರೆಯ ಮಟ್ಟ ಮಾತ್ರ. </b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಕು.ಶಿ.ಕೊಟ್ಟ ಅಮೇರಿಕಾದ ಇನ್ಸುಲಿನ್</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b> ಆ ಸಂದರ್ಭದಲ್ಲಿ ಒಂದು ದಿನ ಉಡುಪಿಯಿಂದ ಕು.ಶಿ. ಹರಿದಾಸ ಭಟ್ಟರು ಇವನು ಕೆಲಸ ಮಾಡುತ್ತಿದ್ದ ಹಂಪಿಯ ಜಾನಪದ ವಿಭಾಗಕ್ಕೆ ನಗು ನಗುತ್ತಾ ಬಂದಿದ್ದಾಗ ಇವನು ಅಳು ಅಳುತ್ತಲೇ ತನ್ನ ಕತೆ ಹೇಳಿದ. ಒಂದು ವಾರದಲ್ಲಿ ಅವರು ಉಡುಪಿಯಿಂದ ಫೋನ್ ಮಾಡಿ ದೆಹಲಿಯಲ್ಲಿ ಕೆಲಸ ಮಾಡಲು ತಯಾರಿದ್ದೀಯಾ ಅಂತ ಕೇಳಿದರು. ಬಗೆ ಬಗೆಯ ಹಿಂಸೆಗೆ ಒಳಗಾಗಿ ಜರ್ಝರಿತನಾಗಿದ್ದ ಅವನು ಹೂಂ ಎಂದ.</b></span><br />
<span style="color: blue; font-size: large;"><b>೧೯೯೮ರ ದಶಂಬರದಲ್ಲಿ ಇವನು ಹಂಪಿ ಬಿಟ್ಟು ದೆಹಲಿ ಸೇರಿದ. </b></span><br />
<span style="color: blue; font-size: large;"><b>ದೆಹಲಿ ಇವನ ಆಯ್ಕೆಯಾಗಿರಲಿಲ್ಲ, ಆದರೆ ಇವನಿಗೆ ಬೇರೆ ಆಯ್ಕೆಗಳಿರಲಿಲ್ಲ. </b></span><br />
<span style="color: blue; font-size: large;"><b>ಇವನು ದೆಹಲಿಯಲ್ಲಿ ಕೆಲಸಕ್ಕೆ ಸೇರಿದ ಸಂಸ್ಥೆಯ ಹೆಸರು – ಭಾರತೀಯ ಅಧ್ಯಯನಗಳ ಅಮೇರಿಕಾ ಸಂಸ್ಥೆ. </b></span><br />
<span style="color: blue; font-size: large;"><b>ಅಮೇರಿಕಾದ ೬೦ ವಿಶ್ವವಿದ್ಯಾಯಗಳು ಒಟ್ಟು ಸೇರಿ ಸುರು ಮಾಡಿದ ಈ ಸಂಸ್ಥೆಯು ೧೯೪೫ರಿಂದಲೂ ಭಾರತದಲ್ಲಿ ಕೆಲಸ ಮಾಡುತ್ತಿತ್ತು. ವಿದೇಶೀಯರಿಗೆ ಭಾರತೀಯ ಭಾಷೆಗಳನ್ನು ಹೇಳಿಕೊಡುವುದು, ಭಾರತೀಯ ಅಧ್ಯಯನಗಳಿಗೆ ಶಿಷ್ಯ ವೇತನ ನೀಡುವುದು, ಎರಡು ಉನ್ನತ ಸಂಶೋಧನಾ ಕೇಂದ್ರಗಳನ್ನು ನಡೆಸುವುದು ಮತ್ತು ಸಂಶೋಧನಾ ಕೃತಿಗಳ ಪ್ರಕಟಣೆ – ಈ ಸಂಸ್ಥೆಯ ಮುಖ್ಯ ಕೆಲಸಗಳು. ಇಲ್ಲಿ ಆತ ಉಪನಿರ್ದೇಶಕನಾಗಿ ೧೯೯೮ರ ಜನವರಿ ತಿಂಗಳಲ್ಲಿ ಸೇರಿಕೊಂಡಿದ್ದ. </b></span><br />
<span style="color: blue; font-size: large;"><b>ದೆಹಲಿಯಲ್ಲಿ ಸಿಕ್ಕಾಗಲೊಮ್ಮೆ ಬಹಳ ದೊಡ್ಡ ಪಾಪ ಮಾಡಿದವನಂತೆ ನಾಚಿಕೆಯಿಂದಲೇ ಹೇಳಿದ್ದ, ಅಲ್ಲಿ ಜೋಯ್ನಿಂಗ್ ರಿಪೋರ್ಟ್ ಬರೆಯುತ್ತಿದ್ದಾಗ ನನಗೆ ನೆನಪಾಗಿದ್ದದ್ದು ಅಮೆರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಅಲ್ಲ, ಮಂಡ್ಯದ ಸಕ್ಕರೆ ಕಾರ್ಖಾನೆಗಳೂ ಅಲ್ಲ; ಅದೇ ಅಮೇರಿಕಾದ ಯಾವುದೋ ವಿಶ್ವವಿದ್ಯಾಲದಲ್ಲಿದ್ದ ಕಾಮ್ರೇಡ್ ಎಂ.ಕೆ. ಭಟ್ಟರು, ಹಿಂದೂಸ್ತಾನದಲ್ಲಿ ಕ್ರಾಂತಿ ಮಾಡಲೆಂದು ಸುಳ್ಯಕ್ಕೆ ಬಂದಿದ್ದ ದಿನಗಳಲ್ಲಿ ಅವರ ಜೊತೆಗೆ ಅನುಭವಿಸಿದ್ದ ರೋಮಾಂಚನದ ಕ್ಷಣಗಳು.</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ತ್ರಿಪತಿಗಳ ಕರುಣೆ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆ ಅಮೇರಿಕಾದ ಸಂಸ್ಥೆಯೇನೋ ಚೆನ್ನಾಗಿತ್ತು. ಆದರೆ ಇವನ ಭಾಷಾಜ್ಞಾನ ಅಲ್ಲಿಗೆ ಸಾಕಾಗುತ್ತಿರಲಿಲ್ಲ. ಅಲ್ಲಿಗೆ ಬರುತ್ತಿದ್ದವರೆಲ್ಲ ಖ್ಯಾತ ವಿದೇಶೀ ವಿದ್ವಾಂಸರೇ ಆಗಿದ್ದರು. ಅವರೊಡನೆ ಸಂವಾದಿಸಲು ಇಂಗ್ಲಿಷ್ ಬೇಕೇ ಬೇಕು. ಸರೀಕರೊಡನೆ ಮಾತಾಡಲು ಹಿಂದಿ ಬೇಕು. ಈ ಎರಡೂ ಭಾಷೆಗಳು ಕನ್ನಡದಲ್ಲಿ ಎಂ.ಎ. ಮಾಡಿದ ಅವನಿಗೆ ಫ್ರೆಂಚ್ ಆಗಿದ್ದವು. ಪ್ರತಿವಾರದ ಕೊನೆಗೆ ವಿವರವಾದ ಪ್ರಗತಿ ವರದಿಯನ್ನು ಇಂಗ್ಲಿಷ್ನಲ್ಲಿ ಬರೆದು ಇ-ಮೇಲ್ ಮಾಡಬೇಕು. ಇವನು ಅದುವರೆಗೆ ಕಂಪ್ಯೂಟರ್ ಮುಟ್ಟಿದವನಲ್ಲ. ಅವನೊಳಗಿದ್ದ ಪಂಪ, ರನ್ನ, ಕುಮಾರವ್ಯಾಸ, ಬೇಂದ್ರೆ ಕುವೆಂಪು ಅಲ್ಲಿ ಯಾರಿಗೂ ಬೇಕಾಗಿರಲಿಲ್ಲ. ಜೊತೆಗೆ ದೆಹಲಿಯಂಥಾ ಮಹಾನಗರದಲ್ಲಿ ವಾಸ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹಾಗೆ ನೋಡಿದರೆ ಆತ ಆತನ ಎಳವೆಯನ್ನು ಕಳೆದದ್ದು ವಾಟೆಕಜೆ ಎಂಬ ಪ್ರದೇಶದಲ್ಲಿ. ಬಂಟಮಲೆ ಕಾಡಿನ ನಡುವೆ ಇರುವ ಈ ಪ್ರದೇಶದಲ್ಲಿ ಅವನದ್ದು ಒಂದೇ ಮನೆ. ಆ ಮನೆಗೆ ಎರಡೇ ಮಾಡು. ಮಣ್ಣಿನ ಗೋಡೆಯ ಮೇಲೆ ಬಿದಿರು ಇರಿಸಿ, ಅದರ ಮೇಲೆ ಎಲ್ಲಿಂದಲೋ ಕಾಡಿ ಬೇಡಿ ತಂದ ಅಡಿಕೆ ಮರದ ಸೋಗೆ ಹಾಸಿ ಕಟ್ಟಿದ ಮನೆಯದು. ಅಪ್ಪ ಮನೆಯಿಂದ ದೂರವೇ ಇರುತ್ತಿದ್ದರು. ಅಮ್ಮ ಸೊಪ್ಪು ಸೌದೆ ತರಲು ಕಾಡಿನೊಳಕ್ಕೆ ಹೋಗುವಾಗ ಈತನನ್ನು ಮನೆಯೊಳಕ್ಕೆ ಇರಲು ಹೇಳಿ ಹೊರಗಿನಿಂದ ಬಾಗಿಲು ಮುಚ್ಚುತ್ತಿದ್ದರು. ಆ ಕತ್ತಲು ಕೋಣೆಯೊಳಗೆ ಆತ ಏಕಾಂಗಿಯೇನೂ ಅಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮನೆಯೆ ಒಡೆದ ಗೋಡೆಯ ತುಂಬಾ ವಾಸಮಾಡುತ್ತಿದ್ದ ಇಲಿಗಳು ಆತನ ಅಮ್ಮ ಬಾಗಿಲು ಮುಚ್ಚಿದ ತಕ್ಷಣ ಕ್ರಿಯಾಶೀಲವಾಗುತ್ತಿದ್ದವು. ಗೋಡೆಯ ಸಂದುಗೊಂದುಗಳಿಂದ ಸರಕ್ಕನೆ ಇಳಿದು ನೆಲದ ಮೇಲೆ ಓಡಾಡುವ ಚಿಕ್ಕ ದೊಡ್ಡ ಇಲಿಗಳನ್ನು ಕಂಡು ಅವನು ದಿಗಿಲಿನ ಜೊತೆಗೆ ಖುಷಿಗೊಳ್ಳುತ್ತಿದ್ದ. ಅವುಗಳನ್ನು ಮುಟ್ಟಲು ಪ್ರಯತ್ನಿಸುತ್ತಿದ್ದ. ಅವುಗಳ ಹಿಂದೆ ಓಡುತ್ತಿದ್ದ. ಕೈಗೆ ಸಿಗದ ಅವುಗಳ ಚುರುಕುತನಕ್ಕೆ ಅಸೂಯೆ ಪಡುತ್ತಿದ್ದ. ಜೊತೆಗೆ ಅನೇಕ ಬಾರಿ ಇಲಿಗಳೊಡನೆ ಮಾತಾಡಲೂ ಪ್ರಯತ್ನಿಸಿದ್ದುಂಟು. ಇಲಿಗಳು ಆತನನ್ನು ಎಂದೂ ಗಂಭೀರವಾಗಿ ಪರಿಗಣಿಸಲೇ ಇಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವನಿಗೆ ಪ್ರಿಯವಾಗಿದ್ದ ಇಲಿಗಳ ಸಹವಾಸ ಭಯಾನಕವಾಗುತ್ತಿದ್ದುದು ಅವುಗಳನ್ನು ಹಿಡಿಯಲು ಹಾವುಗಳು ಬರುತ್ತಿದ್ದಾಗ. ಮನೆಯ ಮಣ್ಣಿನ ಗೋಡೆ ಒರಟಾಗಿದ್ದುದು ಮಾತ್ರವಲ್ಲ ಅದರ ತುಂಬಾ ಬಿರುಕುಗಳಿದ್ದುದರಿಂದ ಹಾವುಗಳು ಸುಲಭವಾಗಿ ಅದರ ಮೂಲಕ ಮನೆಯ ಮಾಡನ್ನೇರುತ್ತಿದ್ದುವು. ಹಾವುಗಳಲ್ಲಿ ಕೇರೆ ಹಾವು ಎಂಬ ಪ್ರಭೇದವೊಂದಿದ್ದು ಅವುಗಳಿಗೆ ಇಲಿ ಅಂದರೆ ಪ್ರಾಣ. ಇಲಿಗಳನ್ನು ಕಂಡೊಡನೆ ಅವುಗಳನ್ನು ವೇಗವಾಗಿ ಅಟ್ಟಿಸಿಕೊಂಡು ಹೋಗಿ, ಹಿಡಿದು ನುಂಗಿ ಬಿಡುವ ಕೇರೆ ಹಾವುಗಳು ಮನುಷ್ಯರ ಮಟ್ಟಿಗೆ ನಿರಪಯಕಾರಿ. ಅಮ್ಮ ಮನೆಯೊಳಕ್ಕೆ ಇವನನ್ನು ಬಿಟ್ಟು ಹೋಗುವಾಗ ಎಷ್ಟೋ ಬಾರಿ ಈ ಕೇರೆ ಹಾವುಗಳು ಮಣ್ಣಿನ ಗೋಡೆಯನ್ನೇರಿ ಮೆಲ್ಲನೆ ಮನೆಯೊಳಕ್ಕೆ ಇಣುಕುತ್ತಿದ್ದವು. ಹಾವುಗಳ ಆಗಮನದ ಸೂಚನೆ ದೊರೆತ ಇಲಿಗಳು ಅಡ್ಡಾದಿಡ್ಡಿಯಾಗಿ ಓಡುವಾಗ ಈತನಿಗೂ ಅಪಾಯದ ಅರಿವುಂಟಾಗುತ್ತಿತ್ತು. ಒಮ್ಮೊಮ್ಮೆ ಈ ಕೇರೆ ಹಾವುಗಳು ಆಯತಪ್ಪಿ ಮಾಡಿನಿಂದ ಧೊಪ್ಪನೆ ನೆಲದ ಮೇಲೆ ಬಿದ್ದು ಬಿಡುತ್ತಿದ್ದುವು. ಬಿದ್ದು ಸ್ವಲ್ಪ ಹೊತ್ತು ಸುಮ್ಮನಿರುತ್ತಿದ್ದುವು. ಹೊರಗೆ ಹೋಗಲಾಗದ ಆತ ಮುದುರಿ ಕುಳಿತುಕೊಂಡು, ಹಾವನ್ನು ಹೊರಗೆ ಹೋಗಲು ಬೇಡಿಕೊಳ್ಳುತ್ತಿದ್ದ. ಜಾರಿಬಿದ್ದ ಕಾರಣ ನಾಚಿಕೊಂಡಿತೋ ಎಂಬಂತೆ ಸ್ವಲ್ಪ ಹೊತ್ತಿನ ಆನಂತರ ಕೇರೆ ಹಾವು ಮೆಲ್ಲಗೆ ಹರಿದು, ಗೋಡೆಯ ಬಿರುಕಿನ ಮೂಲಕ ಹೊರಗೆ ಹೋಗುತ್ತಿತ್ತು. ಹಾವಿನ ಬಾಲ ಗೋಡೆಯ ಬಿರುಕಿನಿಂದ ಮಾಯವಾಗುತ್ತಲೇ ಆತ ಇಲಿಗಳನ್ನು ಮತ್ತೆ ಹೊರಗೆ ಕರೆಯುತ್ತಿದ್ದ. ಬಂಟಮಲೆಯಲ್ಲಿ ಕಾಳಿಂಗ ಸರ್ಪ, ನಾಗರ ಹಾವು ಸೇರಿದಂತೆ ಅನೇಕ ಬಗೆಯ ಭಯಾನಕ ವಿಷದ ಹಾವುಗಳಿದ್ದುವು ಆದರೆ ಅವು ಮನೆಯ ಅಂಗಳದವರೆಗೆ ಬರುತ್ತಿದ್ದರೂ ಮನೆಯೊಳಕ್ಕೆ ಬರುತ್ತಿರಲಿಲ್ಲ, ಬರುತ್ತಿದ್ದರೆ ಇವನ್ನೆಲ್ಲಾ ಹೇಳಲು ಅವನು ನಮ್ಮೊಡನೆ ಇರುತ್ತಿರಲಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆತ ಸ್ವಲ್ಪ ದೊಡ್ಡದಾದಾಗ ಮನೆಯೊಳಕ್ಕೆ ಇರಲು ಒಪ್ಪದೆ ಅಮ್ಮನೊಡನೆ ಸೊಪ್ಪು ಸೌದೆ ತರಲು ಕಾಡಿನೊಳಕ್ಕೆ ಬರುವುದಾಗಿ ಹಠ ಹಿಡಿಯತೊಡಗಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ನಿಗೂಢವಾದ ಕಾಡು ಆತನಿಗೊಂದು ಕುತೂಹಲ. ಮಳೆಗಾಲದಲ್ಲಿ ಬೀಸುವ ಭಯಾನಕ ಗಾಳಿಗೆ ನಡುರಾತ್ರಿಯಲ್ಲಿ ಧರೆಗೊರಗುವ ಮರಗಳ ಸದ್ದಿಗೆ ಮನೆಯೊಳಗೆ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ಅವನು ಬೆಚ್ಚಿ ಬೀಳುತ್ತಿದ್ದ. ಆ ಮರಗಳು ನೆಲಕ್ಕೊರಗುವಾಗ ತನ್ನೊಡನೆ ಇತರ ಮರಗಳನ್ನೂ ನೆಲಕ್ಕೊರಗಿಸುತ್ತವೆ. ಮರಗಳನ್ನು ಗಾಢವಾಗಿ ಅಪ್ಪಿಕೊಂಡಿರುವ ಬಳ್ಳಿಗಳಿಗೂ ಉಳಿಗಾಲವಿಲ್ಲ. ಒಂದು ಮರವನ್ನು ಅಪ್ಪಿಕೊಂಡು ಮೇಲೇರುವ ಬೃಹತ್ ಬಳ್ಳಿಗಳು ಮೇಲೇರುತ್ತಲೇ ಇನ್ನೊಂದು ಮರದ ಕಡೆಗೆ ಚಾಚಿಕೊಂಡು ವಿಸ್ತಾರವಾಗಿ ಬೆಳೆಯುತ್ತವೆ. ಹೀಗಾಗಿ ಒಂದು ಮರ ಬಿದ್ದರೆ ಈ ಬಳ್ಳಿಗಳು ಇನ್ನೊಂದನ್ನು ಬರಸೆಳೆದು ಬೀಳಿಸುತ್ತವೆ. ಹೀಗೆ ಬೀಳುವಾಗ ಮರದ ಮೇಲೆ ಆಶ್ರಯ ಪಡೆದಿದ್ದ ಕೆಲವು ಹಕ್ಕಿಗಳು ಮತ್ತು ಪ್ರಾಣಿಗಳು ನಡುರಾತ್ರಿಯಲ್ಲಿ ಕಿರುಚಿಕೊಂಡು ಅತ್ಯಂತ ಭಯಾನಕ ವಾತಾವರಣವೊಂದು ನಿರ್ಮಾಣವಾಗುತ್ತಿತ್ತು. ಆದರೂ ಸಾಮಾನ್ಯವಾಗಿ ಮಳೆಗಾಲದಲ್ಲಿ ಬೀಳುವ ಈ ಮರಗಳನ್ನು ನೋಡಲು ಕಾಡಿನೊಳಕ್ಕೆ ಹೋಗಬೇಕೆಂದು ಆಸೆ ಮಾತ್ರ ಅವನಲ್ಲಿ ಮುರುಟುತ್ತಿರಲಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕೊನೆಗೆ ಒಂದು ಬೇಸಗೆಯಲ್ಲಿ ಆವನ ಹಠಕ್ಕೆ ಒಪ್ಪಿ ಕಾಡಿಗೆ ಕರೆದೊಯ್ಯಲು ಅತನ ಅಮ್ಮ ಒಪ್ಪಿದ್ದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕೈಯಲ್ಲಿ ಒಂದು ಪುಟ್ಟ ಕತ್ತಿ ಹಿಡಿದು ಅವನು ಅಮ್ಮನನ್ನು ಹಿಂಬಾಲಿಸಿದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅಮ್ಮ ನೇರವಾಗಿ ಬಿದಿರು ಹಿಂಡಿಲುಗಳಿರುವ ಸಮತಟ್ಟಾದ ಪ್ರದೇಶವೊಂದಕ್ಕೆ ಹೋಗಿ ಬಿದಿರಕ್ಕಿಯನ್ನು ಹೆಕ್ಕಲು ಆರಂಭಿಸಿದರು. ಈ ಬಿದಿರಕ್ಕಿಗೆ ರಾಜನಕ್ಕಿ ಎಂಬ ಹೆಸರೂ ಇತ್ತು. ಸಣ್ಣ ಆಕಾರದ ಈ ಬಿದಿರಿನ ಭತ್ತವನ್ನು ಮನೆಗೆ ತಂದು ಅದರ ಸಿಪ್ಪೆಯನ್ನು ತೆಗೆದು ಗಂಜಿ ಮಾಡಿ ಉಣ್ಣುವುದು ಅವರ ನಿತ್ಯದ ಕೆಲಸ. ತರಗೆಲೆಗಳ ನಡುವೆ ಅಡಗಿಹೋಗುವ ಆ ಅತಿ ಸಣ್ಣ ಭತ್ತದಂತಿರುವ ಬಿದಿರಕ್ಕಿಯನ್ನು ಹೆಕ್ಕಲು ತುಂಬಾ ತಾಳ್ಮೆ ಬೇಕು. ಅವನಿಗೋ ಕಾಡಿನೊಳಕ್ಕೆ ಮತ್ತಷ್ಟು ನುಗ್ಗುವ ತವಕ. ಮೆಲ್ಲನೆ ಅಮ್ಮನ ಕಣ್ಣು ತಪ್ಪಿಸಿ ಆಚೀಚೆ ನಡೆದು, ಕಾಡಿನೊಳಕ್ಕೆ ನೀಳವಾಗಿ, ಅನಾಥವಾಗಿ, ಎಲ್ಲವನ್ನು ಕಡಿದುಕೊಂಡು ಬಿದ್ದಿರುವ ಬೃಹತ್ ಮರಗಳ ಬಳಿ ಸುಳಿದಾಡುತ್ತಿದ್ದ. ಆ ಬಿದ್ದ ಮರಗಳ ಒಂದು ಬದಿಯಲ್ಲಿ ನಿಂತರೆ ಮತ್ತೊಂದು ಬದಿ ಕಾಣುತ್ತಿರಲಿಲ್ಲ. ಬಿದ್ದ ಮರದ ಬೇರುಗಳು ಅಕರಾಳ ವಿಕರಾಳವಾಗಿ ಆಕಾಶದೆತ್ತರಕ್ಕೆ ಚಾಚಿಕೊಂಡಿರುತ್ತಿದ್ದುವು. ಮಳೆಗಾಲದಲ್ಲಿ ಬಿದ್ದ ಈ ಮರಗಳ ತೊಗಟೆಯು ಬಂಟಮಲೆಯ ತೇವಾಂಶದಲ್ಲಿ ನಿಧಾನವಾಗಿ ಕರಗುತ್ತಿದ್ದವು. ಹಾಗೆ ಕರಗುತ್ತಿದ್ದಂತೆ ತೊಗಟೆಯ ಒಳಗಿನಿಂದ ಬಗೆ ಬಗೆಯ ಹುಳುಗಳು ಹೊರಬರುತ್ತಿದ್ದವು. ಹಲವು ಬಣ್ಣಗಳ, ವಿವಿಧ ಆಕಾರಗಳ ಆ ಹುಳುಗಳನ್ನು ನೋಡಿ ಆರಂಭದಲ್ಲಿ ಅವನು ಹೆದರಿದನಾದರೂ ನಿಧಾನವಾಗಿ ಅವುಗಳೊಡನೆಯೂ ಗೆಳೆತನ ಬೆಳೆಸಿದ. ಪ್ರೀತಿಯಿಂದ ಕೈಯಲ್ಲಿ ಸಣ್ಣ ಕೋಲು ಹಿಡಿದು ಆ ಹುಳುಗಳನ್ನು ಕೆಣಕುತ್ತಿದ್ದ. ಆಗೆಲ್ಲ ತಮ್ಮ ಪುಟ್ಟ ಹೆಡೆಬಿಚ್ಚಿ ಪ್ರತಿಭಟನೆ ತೋರುವ ಅವು ತೆವಳುತ್ತಾ ಮತ್ತೆ ಮರೆಗೆ ಸರಿಯುತ್ತಿದ್ದುವು. ಆ ಹುಳುಗಳಿಗೆ ಆತ ಬಗೆ ಬಗೆಯ ಹೆಸರಿಟ್ಟ. ಆ ಹೆಸರಿಂದ ಅವುಗಳನ್ನು ಕರೆಯುವಾಗ ಅವು ತಲೆಯಾಡಿಸುತ್ತಿರುವಂತೆ ಆತನಿಗಂತೂ ಅನ್ನಿಸುತ್ತಿತ್ತು. ಹುಳುಗಳ ಜೊತೆಗಣ ಆತನ ಸಂಭಾಷಣೆಗಳಿಂದ ಅವನ ಅಮ್ಮನಿಗೆ ಸಮಾಧಾನವಾಗುತ್ತಿತ್ತು. ಯಾಕೆಂzರೆ ಬಿದಿರಕ್ಕಿ ಹೆಕ್ಕುತ್ತಿದ್ದ ಆಕಗೆ ಪಕ್ಕದೆಲ್ಲೆಲ್ಲೋ ಮಗ ಕ್ಷೇಮವಾಗಿರುವ ಬಗ್ಗೆ ಸೂಚನೆ ದೊರೆಯುತ್ತಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇದೆಲ್ಲ ಕಳೆದು ಅರ್ಧ ಶತಮಾನ ಕಳೆದಿದೆ. ಆ ಹುಡುಗ ಈಗ ಅಮೇರಿಕಾ ಸಂಸ್ಥೆಗೆ ಹೊದಿಕೊಳ್ಳಬೇಕಾಗಿದೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವನು ಸೋಲೊಪ್ಪಿಕೊಳ್ಳಲು ಸಿದ್ದನಿದ್ದವನಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹಿಂದೊಮ್ಮೆ ಉಡುಪಿಯಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಜಾನಪದ ಸೆಮಿನಾರಿನಲ್ಲಿ ಯು ಕ್ಯಾನ್ ಅಂಡರ್ ಸ್ಟಾಂಡ್ ಮೈ ಕನ್ನಡ ಬೆಟರ್ ದೇನ್ ಮ್ಯ್ ಇಂಗ್ಲಿಷ್ ಎನ್ನುತ್ತಲೇ, ಎದುರಿಗೆ ಕಣ್ ಕಣ್ ಬಿಟ್ಟು ನೋಡುತ್ತಿದ್ದ ಪರದೇಶೀ ವಿದ್ವಾಂಸರನ್ನೆಲ್ಲ ಕಂಗಾಲುಗೊಳಿಸುವಷ್ಟು ವಿದ್ವತ್ ಮೆರೆದವನೀತ. ಈಸಬೇಕು ಇದ್ದು ಜೈಸಬೇಕು ಎಂಬ ದಾಸರ ವಾಣಿಯನ್ನು ನೂರಕ್ಕೆ ನೂರು ಪಾಲಿಸಿದವನೀತ; ಪಾಲಿಸಿದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮತ್ತ್ತೊಮ್ಮೆ ಮಗುವಾಗಿ ೪೩ ನೇ ವಯಸ್ಸಿನಲ್ಲಿ ಎಲ್ಲವನ್ನೂ ಕಲಿಯತೊಡಗಿದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕಂಪ್ಯೂಟರ್, ಇಂಗ್ಲಿಷ್, ಹಿಂದಿ, ಕೆಟಲಾಗಿಂಗ್, ಡಾಟಾ ಬೇಸ್, ಇ-ಮೇಲ್, ಒರೇಕಲ್, ಪವರ್ ಪಾಯಿಂಟ್, ಪಾಶ್ಚಾತ್ಯ ಸಂಸ್ಥೆಯ ಕೆಲಸದ ಸಂಸ್ಕೃತಿ ಇತ್ಯಾದಿ. ಅದೇನೂ ಬಂಟಮಲೆಯಲ್ಲಿ ಹುಳುಗಳೊಡನೆ ಮಾತಾಡಿದಂತಲ್ಲ. ತುಂಬಾ ಒದ್ದಾಡಬೇಕಾಗಿತ್ತು. ಸಹೋದ್ಯೋಗಿಗಳಿಗಿಂತ ಇವನು ಇಮ್ಮಡಿ ಶ್ರಮ ಹಾಕಲೇ ಬೇಕಾಗಿತ್ತು. ಕೆಲವು ಬಾರಿ ಸೋಲಿನ ಅವಮಾನವನ್ನೂ ನುಂಗಿಕೊಳ್ಳಬೇಕಾಯಿತು. ಒಂದು ಸಣ್ಣ ದೀಪದ ಬೆಳಕನ್ನು ಅಡಗಿಸುವಷ್ಟು ಕತ್ತಲು ಈ ಲೋಕದಲ್ಲಿ ಇಲ್ಲ ಎಂದು ದೃಢವಾಗಿ ನಂಬಿದವನೀತ. ಸಿಡಿಲು ಹೊಡೆದೊಡೆ ಹಿಡಿದ ಕೊಡೆ ಕಾವುದೇ ಎಂಬ ಹರಿಶ್ಚಂದ್ರ ಕಾವ್ಯದ ಮಾತನ್ನು ಸಾರಾಸಗಟಾಗಿ ನಿರಾಕರಿಸುವ ಆಶಾವಾದಿ. ಹತಾಶೆಯನ್ನು ಮೀರುವ ಕಲೆಯನ್ನು ಕಷ್ಟ ಪಟ್ಟು ರೂಢಿಸಿಕೊಂಡ. ಹಗಲೂ ರಾತ್ರಿ ಅಧ್ಯಯನ ನಡೆಸಿದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವನ ಕಲಿಕೆಯ ಹಠವನ್ನು ತಡೆಯುವ ಶಕ್ತಿ ಅಲ್ಲಿ ಯಾರಿಗೂ ಇರಲಿಲ್ಲ. ಅವನ ಪ್ರಾಮಾಣಿಕ ನಿಷ್ಠೆ ಮತ್ತು ಬದ್ಧತೆಯನ್ನು ಗುರುತಿದ ಆ ಅಮೇರಿಕಾದ ಸಂಸ್ಥೆ, ನಾಲ್ಕೇ ವರ್ಷಗಳಲ್ಲಿ ಇವನನ್ನು ಸಂಸ್ಥೆಯ ನಿರ್ದೆಶಕನಾಗಿ ನೇಮಿಸಿ ಮನ್ನಣೆ ನೀಡಿತು. ಇವನ ಜವಾಬ್ದಾರಿ ಏರಿತು. ಹಾಗಾಗಿ ಸಕ್ಕರೆಯ ಮಟ್ಟ ೫೦೦ ರಹತ್ತಿರ ತಲುಪಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆರೋಗ್ಯವಂತ ದೇಹದೊಳಗೆ ಅಂತರ್ಗತವಾಗಿರುವ ರೋಗ ನಿರೋಧಕ ಶಕ್ತಿ ಇವನೊಳಗೆ ಮಾಯವಾಗತೊಡಗಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ದೆಹಲಿಯ ಮೈಕೊರೆಯುವ ಛಳಿಯನ್ನು ತಡೆದುಕೊಳ್ಳುವುದು ಸುಲಭವಲ್ಲ. ಸೆಖೆಗೆ ಮೂಗಿನಿಂದ ರಕ್ತ ಒಸರುತ್ತಿತ್ತು. ಯಾರೋ ಹೇಳಿದರು ಅಂತ ಆಯುರ್ವೇದದ ಮೊರೆ ಹೋದ. ಒಂದಕ್ಕೆರಡಾಯಿತು. ಕಹಿ ಕಷಾಯ ಕುಡಿದಾಗ ಸಕ್ಕರೆಯ ಮಟ್ಟವೇನೋ ಕಡಿಮೆಯಾಗುತ್ತಿತ್ತು. ಆದರೆ ನಿರಂತರ ಕಹಿ ಕುಡಿದು ಪರಿಣಮವಾಗಿ ಲಿವರ್ ದುರ್ಬಲವಾಯಿತು. ಇದರ ಮುಂದಿನ ಹಂತವಾಗಿ ಜಾಂಡಿಸ್ ಕಾಣಿಸಿಕೊಂಡಿತು, ಜೊತೆಜೊತೆಗೆ ಕಾಲಲ್ಲಿ ಟಿ.ಬಿ. ಕಾಣಿಸಿಕೊಂಡಿತು. ಸಾವು ಹತ್ತಿರದಲ್ಲಿ ಎಲ್ಲೋ ಸುಳಿದಾಡುತ್ತಿದ್ದಂತೆ ಅನ್ನಿಸತೊಡಗಿತು. ನಿರ್ಲಕ್ಷಿಸಿದರೆ ಹೆಚ್ಚು ಕಾಲ ಬದುಕುವುದಿಲ್ಲ ಅಂತ ಖಚಿತವಾಗತೊಡಗಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>೨೦೦೪ರ ಜನವರಿ ತಿಂಗಳಲ್ಲಿ ಅವನು ದೆಹಲಿಯ ಪ್ರಖ್ಯಾತವಾದ ಅಪೋಲೋ ಆಸ್ಪತ್ರೆಯ ಅತ್ಯಾಧುನಿಕ ಎಂಡೋಕ್ರಿನೋಲೊಜಿಗೆ ಹೋದ. ಈ ವಿಭಾಗದ ಮುಖ್ಯಸ್ಥರು ಡಾ.ಅಂಬರೀಶ್ ಮಿತ್ತಲ್. ಒಳ್ಳೆಯ ಬರೆಹಗಾರು ಕೂಡ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಡಾಕ್ಟರರ ಷಾಪಿಗೆ ಹೋದವರಿಗೆಲ್ಲ ಒಂದು ಅನುಭವವಾಗಿರುತ್ತದೆ; ಒಂದಲ್ಲ ಎರಡು ಮೂರು ಬಗೆಯದು. ಯಾವುದೇ ಡಾಕ್ಟರರ ಷಾಪಿಗೆ ಹೋದರೆ, ಡಾಕ್ಟರು ನಾಡಿ ಹಿಡಿಯುವ ಮೊದಲು ಪೆನ್ನು ಹಿಡಿಯುತ್ತಾರೆ. ಯಾವುದಾದರೊಂದು ಟೆಸ್ಟ್ಗೆಚೀಟಿ ಕೊಡುತ್ತಾರೆ.ವಾರದ ಹಿಂದೆ ಮತ್ತೊಬ್ಬ ಡಾಕ್ಟರು ಅದೇ ಪರೀಕ್ಷೆ ಮಾಡಿಸಿ ಬರೆದು ಕೊಟ್ಟಿರುವ ರಿಪೋರ್ಟ್ ಕಣ್ಣೆದುರು ಹಿಡಿದರೂ ಕಣ್ಣು ಮುಚ್ಚಿಕೊಳ್ಳುತ್ತಾರೆ. ಉಪಾಯವಿಲ್ಲದೆ ಹೊಸ ಲ್ಯಾಬ್ನಲ್ಲಿ ಮತ್ತೊಂದು ಬಾರಿ ಟೆಸ್ಟ್ ಮಾಡಿಸಿ ರಿಪೋರ್ಟ್ ತಂದುತೋರಿಸುತ್ತಿರುವಾಗ, ಅಲ್ಲೊಂದು ಕೋಟ್ಯಾಧಿಪತಿಸೀನ್ ಕ್ರಿಯೇಟ್ ಆಗುತ್ತದೆ. ತಾನು ನೀಡಿದ ಉತ್ತರ ಸರಿಯೇ ತಪ್ಪೇ ಎಂದು ಕುತೂಹಲದಿಂದ ಕಾಯುವವನನ್ನು ಸತಾಯಿಸುವವ ನಿರೂಪಕನಂತೆ, ಡಾಕ್ಟರು ಎದುರು ಕೂತ ರೋಗಿ ಮತ್ತು ರೋಗಿಯ ಕಡೆಯವರನ್ನು ಒಮ್ಮೆ ಅನುಕಂಪದಿಂದ ದಿಟ್ಟಿಸಿ, ರಿಪೋರ್ಟಿನತ್ತ ಕಣ್ಣುಹಾಯಿಸುತ್ತಾರೆ. ಜೋರಾಗಿ ಉಸಿರೆಳೆದುಕೊಂಡು ಒಮ್ಮೆ ಹುಬ್ಬು ಏರಿಸುತ್ತಾರೆ. ಮತ್ತೊಮ್ಮೆ ತುಟಿ ಕೊಂಕಿಸಿ ಏನೋ ಅನಾಹುತದ ಮುನ್ಸೂಚನೆ ಕಾಣುತ್ತಿರುವವರಂತೆ ಮುಖ ಮುದುಡಿಸುತ್ತಾರೆ.ಬಳಿಕ ರಿಪೋರ್ಟನ್ನು ಬದಿಗೆ ಸರಿಸಿ,ತನ್ನ ಮಾತಿಗಾಗಿ ಕಾತರಿಸಿ ಕುಳಿತವರತ್ತ ನೋಡಿ, ನೋ ಪ್ರಾಬ್ಲೆಮ್, ಎಲ್ಲ ನಾರ್ಮಲ್ ಇದೆ ಎಂದುಬಿಡುತ್ತಾರೆ. ಅಗ, ಆದಾಗಲೇ ಎರಡೆರಡು ಬಾರಿ ದುಬಾರಿ ಬೆಲೆ ತೆತ್ತು ಪರೀಕ್ಷೆ ಮಾಡಿಸಿಕೊಂಡು ಬಂದವನಿಗೆ ತಾನು ಕೇಳುತ್ತಿರುವುದು ಸಂತಸದ ಸಂಗತಿಯೇ ಅಥವಾ ದು:ಖದಸಂಗತಿಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಸಂತಸದ ಸಂಗತಿಯಾಗಿದ್ದರೆ, ಪರೀಕ್ಷೆಗೆಂದು ಕೊಟ್ಟ ದುಡ್ಡು ದಂಡವೆಂದು ಭಾಸವಾಗುತ್ತದೆ. ಖರ್ಚು ಮಾಡಿದ ದುಡ್ಡು ಸದುಪಯಾಗಿದೆಯೆಂಬ ಸುಖ ಅನುಭವಿಸಬೇಕಾಗಿದ್ದರೆ ಡಾಕ್ಟರಿಂದ ಎಲ್ಲವೂ ಅಬ್ನಾರ್ಮಲ್ ಎಂಬ ಮತು ಕೇಳಬೇಕಾಗುತ್ತದೆ. ಆದರೆ, ನಮ್ಮ ಬಿಳಿಮಲೆಗೆ ಇದು ಯಾವುದೂ ಆಗಲಿಲ್ಲ. ಪರೀಕ್ಷೆಗೆಂದು ಖರ್ಚು ಮಾಡಿದ್ದ ದುಡ್ಡು ವ್ಯರ್ಥವಾಗಲಿಲ್ಲ ಎಂಬ ತೃಪ್ತಿ ಮತ್ತು ಸುಖ ಎರಡನ್ನೂ ಬಹಳ ವರ್ಷಗಳಿಂದಲೇ ಹಲವು ಬಾರಿ ಅನುಭವಿಸಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇವನ ದೇಹವನ್ನು ಬಗೆ ಬಗೆಯಾಗಿ ಪರೀಕ್ಷೆ ಮಾಡಿದ ಮಿತ್ತಲ್ ಸಾಹೇಬರು,ಬಹುಕಾಲದ ಮಧುಮೇಹದ ಪರಿಣಾಮ ಹಾಗೂ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕಾರಣದಿಂದಈ ಕ್ರಾಂತಿಕಾರಿಯನ್ನುಮೂರು ಇಂಗ್ಲಿಷ್ ರೋಗಗಳು- ಡಯಾಬೆಟಿಕ್ ರೆಟಿನೋಪತಿ, ಡಯಾಬೆಟಿಕ್ ನ್ಯೂರೋಪತಿ ಮತ್ತು ಡಯಾಬೆಟಿಕ್ ನೆಫ್ರೋಪತಿ -ಪ್ರೀತಿಸುತ್ತಿದ್ದು ಹಂತ ಹಂತವಾಗಿ ಕೊಲ್ಲುತ್ತಿದೆಯೆಂಬ ವರದಿ ನೀಡಿದರು. ಕೊನೆಗೊಂದು ಸಲಹೆಯನ್ನೂ ಕೊಟ್ಟಿದ್ದರು, ತ್ರಿಪತಿಗಳ ಕರುಣಿಗೆ ಪಾತ್ರನಾಗಿರುವವನನ್ನುತಿರುಪತಿ ತಿಮ್ಮಪ್ಪನಿಂದಲೂ ಕಾಪಾಡುವುದು ಸಾಧ್ಯವಿಲ್ಲ. ಆದರೆ ನಾನು ಹೇಳಿದಂತೆ ಕೇಳಿದರೆ ಸ್ವಲ್ಪ ಹೆಚ್ಚು ದಿನ ಬದುಕಬಹುದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಡಾಕ್ಟರು ಹಾಗೆಲ್ಲ ಹೇಳಿದಾಗ ಅವನಿಗೆ ನೆನಪಾದದ್ದು, ಹಿಂದೊಮ್ಮೆ ಪಾಠ ಮಾಡುತ್ತಿದ್ದ ಆವ ಕಾಲವನಾದೊಡೆ ಮೀರಿ ಬಪ್ಪುದು ಸಾವ ಕಾಲ ಮೀರಬಹುದೇ? ಎನ್ನುವ ಮೋಹನ ತರಂಗಿಣಿಯ ಮಾತು.ಆ ಮಾತನ್ನು ಸುಳ್ಳು ಮಾಡುವ ಹಟ ಇವನಿಗೂ ಇರಲಿಲ್ಲ. ಹೇಳಿ ಕೇಳಿ ತಾನೊಬ್ಬ ಕ್ರಾಂತಿಕಾರಿ ಎಂದು ನಂಬಿದವನು.ಕ್ರಾಂತಿಕಾರಿಗಳು ಸಾವಿಗೆ ಹೆದರಬಾರದಲ್ಲ?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅದರೂ ಮರಣಕ್ಕೆ ಮದ್ದುಗಳಿಲ್ಲ ಎಂದಿದ್ದ ಸರ್ವಜ್ಞನನ್ನು ಸ್ವಲ್ಪ ಮರೆತು, ಅಂಬರೀಶ ಹೇಳಿದಂತೆ ತ್ರಿಪತಿಯ ಒಡೆಯ ಇನ್ಸುಲಿನ್ಗೆ ಶರಣಾದ.</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಶರಣೆನೆ ಮರಣವಿಲ್ಲ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ತನಗೆ ತಾನೇ ಸಮಾಧಾನ ಮಾಡಿಕೊಳ್ಳಲು ಕೆಲವು ಸಂಗತಿಗಳನ್ನು ಸಂಶೋಧನೆ ಮಾಡಿದ. ತನಗೆ ಅನ್ನ ನೀರು ಕೊಡುತ್ತಿರುವ ದೆಹಲಿಯ ಐದು ಜನರಲ್ಲಿ ಮೂವರು ಮಧುಮೇಹಿಗಳಾಗಿರುವುದರಿಂತ ಉತ್ತೇಜಿತನಾದ. ಹೋಟೆಲುಗಳಲ್ಲಿ ಚಹ ಕುಡಿಯುವಾಗ, ಊಟ ಮಾಡುವಾಗ ನಾಲ್ಕೂ ದಿಕ್ಕು ಕಿವಿಯಾಗತೊಡಗಿದ. ಸಕ್ಕರೆ ರಹಿತ ಚಹ ಬೇಡುವವರನ್ನು ಹತ್ತಿರದ ಬಂಧುಗಳಂತೆ ಆತ್ಮೀಯವಾಗಿ ದಿಟ್ಟಿಸತೊಡಗಿದ.ಐಸ್ ಕ್ರೀಮ್ ಪಾರ್ಲರ್ಗಳು ಸಾವಿನಂಗಡಿಗಳಂತೆ ಕಾಣಲಾರಂಭಿಸಿದವು. ಇವನಂಥವರಿಗಾಗಿಯೇ ಸುಗರ್ಲೆಸ್ ಸಿಹಿತಿನಿಸು ಮಾರುವ ಅಂಗಡಿಗಳಿದ್ದವು. ಡಯಾಬೆಟಿಕ್ ರೋಗಿಗಳಿಗಾಗಿಯೇ ಆಹಾರ ತಯಾರಿಸುವ ಅಂತರಾಷ್ಟ್ರೀಯ ಕಾರ್ಖಾನೆಗಳೂ ಇದ್ದವು. ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ, ನ್ಯೂಯೋರ್ಕ ವಿಶ್ವವಿದ್ಯಾಲಯ, ಟೆಕ್ಸಾಸ್ ವಿಶ್ವವಿದ್ಯಾಲಯ(ಆಸ್ಟಿನ್) ಮತ್ತು ಹವಾಯಿ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಹೋಗಬೇಕಾದ ಸಂದರ್ಭಗಳಲ್ಲಿ ತಾನೊಬ್ಬ ಮಧುಮೇಹಿ ಎಂಬುದನ್ನು ವಿಮಾನದ ಪರಿಚಾರಿಕೆಗೆ ಮೊದಲೇ ತಿಳಿಸಿಕಡಿಮೆ ಕೊಬ್ಬಿನ, ಸಕ್ಕರೆ ರಹಿತ ಊಟವನ್ನು ಪಡೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇನ್ಸುಲಿನ್ ಸಹವಾಸ ಸುಲಭವಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಸಿಡಿಲು ಹೊಡೆಯುತ್ತಿರುವಾಗ ಕೊಡೆ ಹಿಡಿದುಕೊಂಡು ನೂಲ ಮೇಲೆ ನಡೆದಂತೆ ಅದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ದೇಹದಲ್ಲಿನ ಸಕ್ಕರೆಯ ಅಂಶವನ್ನು ಪರಿಗಣಿಸಿಕೊಂಡು ಎಷ್ಟು ಬೇಕೋ ಅಷ್ಟು ಇನ್ಸುಲಿನ್ ತೆಗೆದುಕೊಳ್ಳಬೇಕು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಸ್ವಲ್ಪ ಜಾಸ್ತಿ ಆದರೆ ಸಕ್ಕರೆಯ ಪ್ರಮಾಣ ಕಡಿಮೆ ಆಗಿ,ತಲೆತಿರುಗಿಬೀಳಬಹುದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹಾಗಾದಾಗ ದೇಹದಲ್ಲಿರುವ ರಕ್ತ ಕಣಗಳು ಗಮನಾರ್ಹವಾಗಿ ಕಡಿಮೆಯಾಗಿಬಿಡಬಹುದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅಗ ಹಿಮೋಗ್ಲೋಬಿನ್ ಮಟ್ಟವೂ ಕಡಿಮೆಯಾಗುತ್ತದೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹಾಗಂತ ಕಡಿಮೆ ಇನ್ಸುಲಿನ್ ತಗೊಂಡರೆ ಸಕ್ಕರೆಯ ಅಂಶ ಹೆಚ್ಚಾಗಬಹುದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆದ ಕಾರಣ ಅಳೆದು ಯೋಚಿಸಿ ಇನ್ಸುಲೆನ್ ತೆಗೆದುಕೊಳ್ಳಬೇಕು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅದು ಅಲಗಿನಂತೆ ಹೋಗುತ್ತಲೂ ಕೊಯ್ಯುವುದು, ಬರುತ್ತಲೂ ಕೊಯ್ಯುವುದು</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಬಿಟ್ಟು ಬಿಡದ ಹುಟ್ಟು ಗುಣ:</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹೀಗೇ ಸ್ವಲ್ಪ ತಡವಾಗಿಯಾದರೂ ಆರೋಗ್ಯದ ಬಗ್ಗೆ ಯೋಚಿಸತೊಡಗುವ ಸಂದರ್ಭದಲ್ಲಿಯೇ ದೆಹಲಿ ಕರ್ನಾಟಕ ಸಂಘದ ಚುನಾವಣೆ ಘೋಷಿತವಾಯಿತು.ಗೆಳೆಯರನೇಕರು ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸುವಂತೆ ಒತ್ತಾಯಿಸಿದರು. ಕನ್ನಡ ವಿಶ್ವವಿದ್ಯಾಲಯದ ಕೆಟ್ಟ ಅನುಭವದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಂಥ ಕಡೆ ಸಿಕ್ಕಿಕೊಳ್ಳಬೇಕೆಂಬ ಮನಸಿರಲಿಲ್ಲ. ಅದರೂ ಹುಟ್ಟು ಗುಣ ಕೈ ಕೊಟ್ಟಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಗೆಳೆಯರ ಒತ್ತಾಯಕ್ಕೆ ಮಣಿದು, ರಾಜಧಾನಿಯಲ್ಲಿ ಕರ್ನಾಟಕದ ಧ್ವನಿಯನ್ನು ಗಟ್ಟಿಗೊಳಿಸಲು ಸಾಧ್ಯವಾದರೆ, ಕನ್ನಡದ ಋಣ ತೀರಿಸಲೊಂದು ಅವಕಾಶ ಅಂತ ಭಾವಿಸಿಕೊಂಡು ಚುನಾವಣಾ ಕಣಕ್ಕಿಳಿದ.ಗೆದ್ದ.ಆದರೆ ಈ ಜಯವು ಸಾಕಷ್ಟು ಸವಾಲುಗಳನ್ನು ಮುಂದೆ ತಂದಿರಿಸಿತ್ತು.ಚದುರಿ ಹೋಗಿದ್ದ ದೆಹಲಿ ಕನ್ನಡಿಗರನ್ನು ಒಂದೆಡೆಗೆ ತರಬೇಕಿತ್ತು, ಅಗಲೇ ಮೇಲೇಳುತ್ತಿದ್ದ ಹೊಸ ಕಟ್ಟಡದ ಕೆಲಸಗಳನ್ನು ಪೂರೈಸಲು ಹಣ ಸಂಗ್ರಹ ಆಗಬೇಕಿತ್ತು, ಮತ್ತು ರಾಜಧಾನಿಯಲ್ಲಿ ದುರ್ಬಲವಾಗಿರುವ ಕರ್ನಾಟಕದ ಧ್ವನಿಯನ್ನು ಕರ್ನಾಟಕ ಸಂಘದ ಮೂಲಕ ಬಲಗೊಳಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿತ್ತು.ಕಾರ್ಯಕಾರೀ ಸಮಿತಿಯ ಸೂಕ್ತ ಮಾರ್ಗದರ್ಶನದಲ್ಲಿ ಮೇಲಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಶಕ್ತಿಮೀರಿ ದುಡಿಯತೊಡಗಿದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಬೆಳಿಗ್ಗೆ ೮ ಗಂಟೆಗೆ ಗುರ್ಗಾಂವ್ ನಲ್ಲಿರುವ ಕಛೇರಿಗೆ ಹೋಗುವವನುಸಂಜೆ ಆರು ಗಂಟೆಗೆ ಮೋತಿ ಭಾಗ್ ನಲ್ಲಿರುವ ದೆಹಲಿ ಕರ್ನಾಟಕ ಸಂಘಕ್ಕೆ ಧಾವಿಸುತ್ತಿದ್ದ.ರಾತ್ರಿ ೧೧ ಗಂಟೆ ವರೆಗೆ ಅಲ್ಲಿ ಕೆಲಸ ಮಾಡುವುದು ದಿನ ನಿತ್ಯದ ಕಾರ್ಯವಾಗಿತ್ತು.ಶನಿವಾರ-ಆದಿತ್ಯವಾರಗಳೆಲ್ಲ ಸಂಘದ ಕೆಲಸಗಳಿಗೆ, ಕನಾಟಕದಿಂದ ಆಗಮಿಸಿದ ಕನ್ನಡಿಗರಿಗೆ ಸಹಾಯ ಮಾಡುವ ಕೆಲಸಗಳಿಗೆ ಸೀಮಿತವಾಗಿತ್ತು. ಎರಡು ಅವಧಿಗೆ ಅಂದರೆ ಒಟ್ಟು ನಾಲ್ಕು ವರ್ಷಗಳ ಕಾಲ ನಿರಂತರ ಅಧ್ಯಕ್ಷನಾಗಿ ಕೆಲಸ ಮಾಡಿದ ಇವನುಬಿತ್ತಿದ ಬೀಜ ಫಲ ನೀಡಿತ್ತು. ದೆಹಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಸಂಘದ ಕಡೆ ಬರತೊಡಗಿದ್ದರು. ಸಂಘವು ನಡೆಸುತ್ತಿದ್ದ ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳಿಂದ ಸಂಘಕ್ಕೆ ವಿಶ್ವವಿದ್ಯಾಲಯವೊಂದರ ಆಯಾಮ ಬರತೊಡಗಿತ್ತು. ಆದರೆ ಈ ಅವಧಿಯಲ್ಲಿ ಅವನ ಶೈಕ್ಷಣಿಕ ಕೆಲಸಗಳೆಲ್ಲ ಹಿಂದೆ ಸರಿದುಬಿಟ್ಟವು. ಕನ್ನಡಕ್ಕಾಗಿ ಕಟ್ಟಡವೊಂದನ್ನು ಕಟ್ಟುವುದು ಕೂಡಾ ಮುಖ್ಯ ಕೆಲಸ ಅಂದುಕೊಂಡು ಸಮಾಧಾನ ಪಟ್ಟುಕೊಂಡ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇಂಥ ದಣಿವರಿಯದ ದುಡಿತದಿಂದ ಸಂಘದ ಸುಂದರ ಕಟ್ಟಡವು ಇವನ ಶುಗರ್ ಲೆವೆಲಿನಂತೆ ಮೇಲೆ ಮೇಲೆ ಏರತೊಡಗಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಪರಿಣಾಮ ಹೊಸದಾಗಿ ಸೇರ್ಪಡೆಕೊಂಡ ಖಾಯಿಲೆ- ರಕ್ತದೊತ್ತಡ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮಧುಮೇಹ ಮತ್ತು ರಕ್ತದೊತ್ತಡದ ಜಂಟೀ ಪರಿಣಾಮವೆಂದರೆ ಪಾರ್ಶ್ವವಾಯು ಮತ್ತು ಹೃದಯಾಘಾತ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b><br /></b></span>
<span style="color: purple; font-size: large;"><b>ಸತ್ಯದರ್ಶನ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇಂಥಹ ಜಾನ್ಲೇನಾ ಖಾಯಿಲೆಗಳು ಒಂದು ತರಹದ ಗುಪ್ತರೋಗದಂತೆ. ಅವುಗಳು ಮುನ್ಸೂಚನೆ ನೀಡಿ ಬರುವುದಿಲ್ಲ. ಸೂಚನೆ ಸಿಕ್ಕಾಗ ದೇಹದ ಸ್ಥಿತಿ ಸಿಕ್ಕುಸಿಕ್ಕಾಗಿರುತ್ತದೆ; ಅಪಾಯ ಸಂಭವಿಸಿ ಬಹು ಕಾಲ ಆಗಿರುತ್ತದೆ. ಅದಕ್ಕೆ ಇವನದ್ದೇ ಒಂದೆರಡು ಉದಾಹರಣೆಗಳುಂಟು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>೨೦೧೦ರ ಅಕ್ಟೋಬರದ ಒಂದು ದಿನ ಬೆಳಗ್ಗೆ ಎದ್ದು ಕನ್ನಡಿ ನೋಡಿದಾಗ ಎಡಗಣ್ಣಿನ ಒಳತಳದಲ್ಲಿ ರಕ್ತ ಸೋರಿ ಅರ್ಧ ಕಣ್ಣು ಕಾಣಿಸದಾಯಿತು. ಭಯದಿಂದ ತಕ್ಷಣ ಆಸ್ಪತ್ರೆಗೆ ಓಡಿದ.ಲೇಸರ್ ಕಿರಣಗಳನ್ನು ಉಪಯೋಗಿಸಿ, ಕಣ್ಣೊಳಗಿನ ರಕ್ತದ ಕಲೆಗಳನ್ನು ತೆಗೆದು ಹಾಕಲಾಯಿತು. ಹಾಗೆಯೇ ಕಣ್ಣೊಳಗೆ ಒಡೆದು ಹೋದ ನಾಳಗಳನ್ನು ಅಲ್ಲಿಯೇ ಬತ್ತಿಸಿ ಮತ್ತೆ ರಕ್ತ ಒಸರದಂತೆ ಮಾಡಲಾಯಿತು. ಸುಮಾರು ಮೂರು ತಿಂಗಳುಗಳ ಕಾಲ ನಡೆದ ಈ ಟ್ರೀಟ್ಮೆಂಟ್ನ ಆನಂತರ ಕಣ್ಣು ಮೊದಲಿನಂತಾಗದಿದ್ದರೂ ಓದಲು ಬರೆಯಲು ಅಡ್ಡಿಯಿಲ್ಲದಂತಾಯಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಒಂದು ಅಮೇರಿಕಾ ಪ್ರವಾಸದಲ್ಲಿ ಇದ್ದಕ್ಕಿದ್ದಂತೆ ಆತನ ಎರಡೂ ಪಾದಗಳು ತೀಕ್ಷ್ಣವಾಗಿ ಊದಿಕೊಳ್ಳಲು ಆರಂಭವಾದುವು.ಸುದೀರ್ಘವಾದ ವಿಮಾನ ಪ್ರಯಾಣದಿಂದ ಹಾಗಾಗಿರಬೇಕು ಅಂದುಕೊಂಡಿದ್ದ. ಆದರೆ ನಾಲ್ಕಾರು ದಿನಗಳ ಆನಂತರವೂ ಊತ ಕಡಿಮೆಯಾಗಲಿಲ್ಲ. ಹೇಗೋ ಸುಧಾರಿಸಿಕೊಂಡು ಹಿಂದೂಸ್ತಾನಕ್ಕೆ ಮರಳಿದ. ೨೦೧೧ರ ಎಪ್ರಿಲ್ ತಿಂಗಳ ಕೊನೆಯಲ್ಲಿ, ಸಂಸ್ಥೆಯ ವೈದ್ಯರ ಸಲಹೆಯ ಮೇರೆಗೆ, ದೆಹಲಿಯ ಫೋರ್ಟಿಸ್ ಆಸ್ಪತ್ರೆಗೆ ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಂಡ. ಫಲಿತಾಂಶ ಆಘಾತಕಾರಿಯಾಗಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಯೂರಿನ್ ಕ್ರಿಯೇಟಿನೈನ್ (ಮೂತ್ರ ಉತ್ಪಾದೆನೆಯ ಮಟ್ಟ) ೨.೬ಕ್ಕೆ ಏರಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆರೋಗ್ಯವಂತರ ದೇಹದಲ್ಲಿ ಅದು ೦.೬ ರಿಂದ ೧.೦೦ ಇರಬೇಕು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಥೇಟ್ಸಂತನ ಹಾಗೆ ಕಾಣಿಸುತ್ತಿದ್ದ ಡಾ. ಸಂಜೀವ್ ಗುಲಾಟಿ ಹೇಳಿದ್ದರಂತೆ, ನಿಮ್ಮ ಕಿಡ್ನಿಯ ಶೇಕಡಾ ೬೦ ಭಾಗ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇದು ಡಯಾಬೆಟಿಕ್ನ ಪರಿಣಾಮವಾದ್ದರಿಂದ ಇದರ ಅಧ:ಪತನವನ್ನು ಇನ್ನುತಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದು ಏರುತ್ತಾ ಹೋಗಲಿದೆ. ಕಾಲಿನ ನೀರು ದೇಹದಾದ್ಯಂತ ವ್ಯಾಪಿಸಲಿದೆ. ಹೆಚ್ಚೆಂದರೆ ಆರು ತಿಂಗಳುಗಳೊಳಗೆ ನಿಮಗೆ ಡಯಾಲಿಸಿಸ್ ಆರಂಭಿಸಲೇಬೇಕಾಗುತ್ತದೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಬದುಕುವ ಆಸೆ ಬಿಟ್ಟು ಮನೆಗೆ ಮರಳಿದ್ದ ಈತ ತಿಂಗಳಿಡೀ ಮೌನವಾಗಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ತಿಂದ ಆಹಾರದಲ್ಲಿ ದೇಹಕ್ಕೆ ಬೇಕಾದ್ದನ್ನು ಉಳಿಸಿ, ಬೇಡವಾದ್ದನ್ನು ಮೂತ್ರದ ಮೂಲಕ ಹೊರ ಹಾಕುವ ಕೆಲಸವನ್ನು ಕಿಡ್ನಿಗಳು ನಿರಂತರವಾಗಿ ಮಾಡುತ್ತಿರುತ್ತವೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಗೇರು ಬೀಜದ ಆಕ್ರತಿಯಲ್ಲಿರುವ ಕಿಡ್ನಿಯ ಒಳ ಭಾಗದಲ್ಲಿ ನೆಫ್ರೋ (ಕಿಡ್ನಿ ಅಧ್ಯಯನ ಶಾಸ್ತ್ರ -ನೆಫ್ರೋಲೊಜಿ) ಎಂಬ ಹೆಸರಿನ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಪುಟ್ಟ ಪುಟ್ಟ ಕಣಗಳಿರುತ್ತವೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಈ ನೆಫ್ರೋಗಳು ತಿಂದ ಆಹಾರದಲ್ಲಿರುವ ಸೋಡಿಯಂ, ಪೊಟಾಷಿಯಂ ಮತ್ತಿತರವುಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿ, ಆಯಾ ದೇಹಕ್ಕೆ ಅಗತ್ಯವಿರುವಷ್ಟನ್ನು ರಕ್ತಕ್ಕೆ ದಾಟಿಸುತ್ತದೆ.ಅನಗತ್ಯವಾದ್ದನ್ನು ಮೂತ್ರದ ಮೂಲಕ ಹೊರಹಾಕುತ್ತವೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಡಯಾಬೆಟಿಸ್ ಮತ್ತಿತರ ಖಾಯಿಲೆಗೆಳು ಈ ಎಲ್ಲ ನೆಫ್ರೋಗಳನ್ನು ನಿಧಾನವಾಗಿ ಸಾಯಿಸುತ್ತವೆ, ಇಲ್ಲವೇ ಶಕ್ತಿಹೀನಗೊಳಿಸುತ್ತವೆ. ಆಗ ದೇಹಕ್ಕೆ ಅನಗತ್ಯವಾಗ ಅಂಶಗಳು ಮೂತ್ರದ ಮೂಲಕ ಹೊರಹೋಗದೆ, ರಕ್ತಕ್ಕೆ ಸೇರಿಕೊಂಡು ದೇಹ ಅಸ್ತವ್ಯಸ್ತಗೊಳ್ಳುತ್ತದೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಸತ್ತು ಹೋದ ನೆಫ್ರೋಗಳನ್ನು ಮತ್ತೆ ಬದುಕಿಸಲು ಮನುಷ್ಯ ಕಲಿತಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ತಪಸ್ಸು ಮಾಡದೆಯೇ ತಾನೇನು ಎಂಬುದನ್ನು ಕಂಡುಕೊಂಡುಬಿಟ್ಟಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹೆಂಡತಿ ಶೋಬಾನಾಳಿಗಾಗಲೀ ಮಗ ಅನನ್ಯನಿಗಾಗಲೀ ಇದನ್ನು ಹೇಳುವ ಧೈರ್ಯ ಇವನಿಗಿರಲಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆದರೆ ದಿನೇ ದಿನೇ ಏರುತ್ತಿರುವ ಇವನ ಕಾಲಿನ ಊತ ಮೊಣಕಾಲಿನವರೆಗೆ ಆವರಿಸಿಕೊಂಡದ್ದನ್ನು ಗಮನಿಸಿದ ಅವರಿಬ್ಬರೂ ಮೌನವಾಗಿ ದು:ಖಿಸುತ್ತಿರುವುದು ಇವನಿಗೂ ಗೊತ್ತಾಗಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಈ ನಡುವೆ ಹೇಗಿದ್ದೀಯಾ ಮಗಾ.. ಎಂದು ಅಕ್ಕರೆಯಿಂದ ವಿಚಾರಿಸುವ ಮತ್ತೊಬ್ಬರೂ ಕಡಿಮೆಯಾಗಿಬಿಟ್ಟರು. ೨೦೧೧ರ ಜೂನ್ನಲ್ಲಿತಂದೆ ತೀರಿಕೊಂಡರು. ಇವನು ಹದಿನೈದು ದಿನಗಳ ರಜ ಹಾಕಿ ಊರಿಗೆ ಹೋಗಿದ್ದ. ಕಂಡವರೆಲ್ಲರೂ ಸ್ವಲ್ಪ ಊದಿಕೊಂಡಂತಿದ್ದ ಅವನ ದೇಹದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಮುಖ್ಯವಾಗಿ ಕಣ್ಣುಗಳ ಕೆಳಭಾಗದಲ್ಲಿ ರೆಪ್ಪೆಗಳಡಿಯಲ್ಲಿ ನೀರು ಕಾಣಿಸಿಕೊಂಡಿತ್ತು. ಮೂತ್ರ ಪಿಂಡಗಳು ದೇಹದಲ್ಲಿನ ಅನಗತ್ಯ ನೀರನ್ನು ಹೊರಹಾಕುವಲ್ಲಿ ವಿಫಲವಾದ್ದರಿಂದ ನೀರು ದೇಹದಲ್ಲಿಯೇ ಉಳಿದು ಎಲ್ಲೆಂದರಲ್ಲಿ ಅದು ಶೇಖರವಾಗತೊಡಗಿತ್ತು. ಅವನೀಗ ಉರುಟು ಉರುಟಾಗಿ ಕಾಣಿಸತೊಡಗಿದ್ದ. ಕೇಳಿದವರಿಗೆಲ್ಲರಿಗೂ ಕಿಡ್ನಿ ಸಮಸ್ಯೆಯಿದೆ ಎಂದಷ್ಟೇ ಹೇಳಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಜುಲೈ ತಿಂಗಳಿಗಾಗುವಾಗ ಕಿಡ್ನಿಯ ಕಾರ್ಯಕ್ಷಮತೆ ಶೇಕಡಾ ಮೂವತ್ತಕ್ಕೆ ಇಳಿದಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವನು ಡಯಾಲಿಸಿಸ್ಗೆ ಮಾನಸಿಕವಾಗಿ ಸಿದ್ಧನಾಗತೊಡಗಿದ್ದ. ಆದರೂ ಕಛೇರಿಯ ಕೆಲಸಗಳನ್ನು ನಿರ್ಲಕ್ಷಿಸಲಿಲ್ಲ. ದೇಹ ಕುಸಿಯುತ್ತಿದ್ದಂತೆ ಹೆಚ್ಚು ಹೆಚ್ಚು ಕೆಲಸ ಮಾಡಲು ಆರಂಭಿಸಿದ.ಗೆಳೆಯ ಉಮಾಪತಿಯ ಒತ್ತಾಯಕ್ಕೆ ಮಣಿದು ವಿಜಯ ಕರ್ನಾಟಕ ಪತ್ರಿಕೆಗೆ ಕಾಲಂ ಬರೆಯಲೂ ಒಪ್ಪಿಕೊಂಡ. ಸಾವಿಗೇ ಸವಾಲು ಹಾಕುವವನಂತೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ನವಂಬರ ತಿಂಗಳಲ್ಲಿ ಹೆಂಡತಿಗೆ ಎಲ್ಲವನ್ನೂ ವಿವರಿಸಿದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಎಲ್ಲವನ್ನೂ ಕೇಳಿಸಿಕೊಂಡ ಆಕೆ, ಡಯಾಲಿಸಿಸ್ ನಿಜಕ್ಕೂ ಪರಿಹಾರವಲ್ಲ. ಜೊತೆಗೆ ಅದನ್ನು ನಿರಂತರವಾಗಿ ಮಾಡುತ್ತಲೇ ಇರಬೇಕು.ಅಂತಿಮವಾಗಿ ದಿನಕ್ಕೆ ಮೂರು ಬಾರಿ ಮಾಡಿಸಿಕೊಳ್ಳಬೇಕು, ಕಾರಣ ಕಿಡ್ನಿ ಕಸಿ (ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್) ಮಾಡಿಸಿಕೊಳ್ಳುವುದೇ ಒಳ್ಳೆಯದು ಅಂತ ಸಲಹೆ ನೀಡಿದಳು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇವನು ಸರಿ ಎಂದು ತಲೆಯಾಡಿಸಿದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆದರೆ ಕಿಡ್ನಿ ತಪಾಸಣೆಗೆ ಹೊರಟವನಿಗೆ ಬಲುಬೇಗ ಸತ್ಯದರ್ಶನವಾಗಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಸರಕಾರೀ ಕಿಂಡಿಯ ಮೂಲಕವೇ ಕಿಡ್ನಿಗೆ ಬೇಡಿಕೆ ಸಲ್ಲಿಸಿ, ಅದು ಸಿಗುವವರೆಗೆ ವರ್ಷಾನುಗಟ್ಲೆ ತೆಪ್ಪಗೆ ಕಾಯಬೇಕು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅದಕ್ಕೆ ಇರಬೇಕು ಪ್ರಭುದೇವ, ಸಾವನ್ನಕ್ಕರ ಸಾಧನೆ ಮಾಡಿದೊಡೆ ಕಾದುವ ದಿನವಾವುದು ಎಂದು ಪರಿತಪಿಸಿದ್ದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಎಷ್ಟೋ ವರ್ಷಗಳ ನಿರೀಕ್ಷೆಯ ಬಳಿಕ ಸಿಗುವ ಕಿಡ್ನಿಯ ಕಂಡಿಷನ್ ಹೇಗಿರುತ್ತದೆ ಅಂತ ಊಹಿಸುವುದೂ ಕಷ್ಟ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>೬೦ ವರ್ಷ ದಾಟಿದವರ ಕಿಡ್ನಿಯಿಂದ ಹೆಚ್ಚು ಪ್ರಯೋಜನವಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಯಾವುದೋ ಅಫಘಾತದಲ್ಲಿ ಆಕಸ್ಮಿಕ ಮರಣ ಹೊಂದಿದ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ತರುಣರ ಕಿಡ್ನಿ ಸಿಕ್ಕರೆ, ಅದು ನಿಮ್ಮ ದೇಹಕ್ಕೆ ಒಪ್ಪಿಗೆಯಾದರೆ ನೀವು ಲಕ್ಷದಲ್ಲಿ ಒಬ್ಬರು,</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅದು ನಿಮ್ಮ ಪುಣ್ಯ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಭಾರತ ದೇಶದಲ್ಲಿ ಸತ್ತಮೇಲೆ ದೇಹದಾನ ಮಾಡುವುದು ಇನ್ನೂ ಜನಪ್ರಿಯವಾಗಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಸತ್ತ ಮೇಲಾದರೂ ದೇಶ ಸೇವೆ ಮಾಡಲು ನಮಗೆ ತಿಳಿದಿಲ್ಲ,</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಸತ್ತವರನ್ನು ಸುಟ್ಟು ಹಾಕುವುದೇ ಇಲ್ಲಿ ಜಾಸ್ತಿ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹೀಗಾಗಿ ಕಿಡ್ನಿ ದೊರೆಯುವುದು ಸುಲಭವಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವನು ಡಯಾಲಿಸಿಸ್ಗೆ ಮಾನಸಿಕವಾಗಿ ಮತ್ತೊಮ್ಮೆ ಸಿದ್ಧನಾಗತೊಡಗಿದ್ದ.</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಟೈಪ್-2</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ನನ್ನ ಬ್ಲಡ್ ಗ್ರೂಪ್ ಮತ್ತು ನಿಮ್ಮದು ಒಂದೇ ಅಲ್ವಾ? ಅಲ್ಲಿ ಇಲ್ಲಿ ಹುಡುಕುವುದು ಯಾಕೇ? ನನ್ನದೆ ಒಂದು ಕಿಡ್ನಿ ತೆಗೆದುಕೊಳ್ಳಿ. ಕಿಡ್ನಿ ದಾನ ಮಾಡಿದವರಿಗೆ ಏನೂ ತೊಂದರೆಯಾಗುವುದಿಲ್ಲ ಅಂತಲ್ಲಾ? ಸುಮಾರು ೨೫ ವರ್ಷಗಳ ಹಿಂದೆ ಹೃದಯವನ್ನು ಕೊಟ್ಟಿದ್ದವಳು ಈಗ ಕಿಡ್ನಿ ತೆಗೆದುಕೋ’ ಎನ್ನುತಿದ್ದಾಳೆ.ಅದೂ ಅತ್ಯಂತ ನಿರ್ಮಲ ಚಿತ್ತದಲ್ಲಿ, ಆತಂಕ ರಹಿತ ಧ್ವನಿಯಲ್ಲಿ.ಆದರೆ ನಿರ್ಣಾಯಕ ವಾಣಿಯಲ್ಲಿ. ದುಷ್ಟ ವ್ಯಾಘ್ರನೆದುರು ಖಂಡವಿದೆ ಕೋ, ಮಾಂಸವಿದೆ ಕೋ ಎಂದಿದ್ದ ಪುಣ್ಯ ಕೋಟಿಯ ಕತೆ ನೆನಪಾಗಿ ಗಳಗಳನೆ ಅಳಲು ಶುರುಮಾಡಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇವನವಳ ಗಂಡ ಇರಬಹುದು.ಆದರೆ ಅತ್ಯಂತ ಆರೋಗ್ಯವಂತಳಾಗಿರುವ ಅವಳ ಕಿಡ್ನಿ ಕತ್ತರಿಸುವ ಅಧಿಕಾರ ಇವನಿಗೆಲ್ಲಿದೇ? ಲಿಂಗ ಅಸಮಾನತೆಯ ವಿರುದ್ಧ ಇಷ್ಟು ವರ್ಷ ಹೋರಾಡಿದ್ದರ ಅಂತಿಮ ಪರಿಣಾಮ ಇದುವೆಯೇ? ಕೊನೆಯಿಲ್ಲದ ಅಸಂಖ್ಯ ಪ್ರಶ್ನೆಗಳ ಕಡಲಲ್ಲಿ ಮುಳುಗುತ್ತಲೇ ಮತ್ತೂ ಒಂದು ತಿಂಗಳು ಕಳೆದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕಿಡ್ನಿ ಕಸಿಯ ಆಸೆ ಬಿಟ್ಟ ಇವನು ಡಯಾಲಿಸಿಸ್ಗೆ ಸಜ್ಜಾಗತೊಡಗಿದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>೨೦೧೨ ರ ಜನವರಿ ತಿಂಗಳಿಗಾಗುವಾಗ ಯೂರಿನ್ ಕ್ರಿಯೇಟಿನೈನ್ ೬ಕ್ಕೆ ತಲುಪಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅದು ಹಿಮ್ಮುಖವಾಗಿ ಚಲಿಸಬಹುದೇ ಎಂಬ ಅವನ ಆಸೆ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ನಿಧಾನವಾಗಿ ಸುಳ್ಳಾಗಲಾರಂಭಿಸಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ದೇಹವಿಡೀ ನೀರೇರುತ್ತಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕಫ ಕಾಣಿಸಿಕೊಂಡಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮೂಗು ಕಟ್ಟಿಕೊಳ್ಳತೊಡಗಿತು</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ರಾತ್ರಿ ನಿದ್ರಿಸುವುದು ಕಷ್ಟವಾಗತೊಡಗಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕೈ ಬೆರಳುಗಳು ಬಾಗಲಾರದಾದುವು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಚರ್ಮದ ಮೇಲೆ ತುರಿಕೆ ಕಾಣಿಸಿಕೊಂಡು</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ದೆಹಲಿಯ ಛಳಿಯಲ್ಲೂ ಬಟ್ಟೆ ಹಾಕಲಾಗದ ಅಸಹನೀಯ ಪರಿಸ್ಥಿತಿ ನಿರ್ಮಾಣಗೊಂಡಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಯೂರಿನ್ ಕ್ರಿಯೇಟಿನೈನ್ ೭ಕ್ಕೆ ತಲುಪಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಈ ನಡುವೆ ಅಣ್ಣನ ಮಗಳ ಮದುವೆಗೆಂದು ಊರಿಗೆ ಹೋದವನು ತಂಗಿ ಗುಲಾಬಿ ಬಿಳಿಮಲೆಯ ಒತ್ತಾಯದಿಂದ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮಂಗಳೂರಿನಕಿಡ್ನಿ ಡಾಕ್ಟರರೊಬ್ಬರನ್ನು ಭೇಟಿ ಮಾಡಿದ. ಅವರು ಎಲ್ಲ ಪರೀಕ್ಷೆ ಮಾಡಿ ಸದ್ಯ ನಿಮ್ಮ ಕಿಡ್ನಿಯ ೮೯ ಭಾಗ ಕೆಲಸ ಮಾಡ್ತಾ ಇಲ್ಲ. ಸರಿಯಾದ ದಾನಿಗಳು ದೊರೆತು ಕಿಡ್ನಿ ಕಸಿ ಮಾಡಿಸಿಕೊಂಡರೆ ಮಾತ್ರ ಮುಂದಕ್ಕೆ ಕನಿಷ್ಠ ೨೦ ವರ್ಷಕ್ಕೆ ಮೋಸವಿಲ್ಲ ಅಂತ ಹೇಳಿಬಿಟ್ಟರು. ಇವನು ಹಗುರವಾದ ಕಿಡ್ನಿಯೊಂದಿಗೆ ದೆಹಲಿಗೆ ಹಿಂತಿರುಗಿದ.ಒಲವು ಗೆಳೆಯರಿಗೆ ತನ್ನ ಆತಂಕವನ್ನು ಹೇಳಿಕೊಂಡಾಗ, ಕಿಡ್ನಿ ಕಸಿ ಮಾಡಿಸಿಕೊಳ್ಳುವ ಮತ್ತು ಮಾಡಿಸಿಕೊಂಡವರ ಬಗ್ಗೆ ಹಲವು ಮಾಹಿತಿಗಳು ದೊರಕಿದವು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇವನು ಮತ್ತೊಮ್ಮೆ ಕಿಡ್ನಿ ಕಸಿಗೆ ಮಾನಸಿಕವಾಗಿ ಸಿದ್ಧನಾಗತೊಡಗಿದ್ದ! ಇದಕ್ಕೆ ಹೆಂಡತಿಯ ನಿಷ್ಟುರ ಮಾತುಗಳೇ ಕಾರಣ!</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮುತ್ತೈದೆ ಸಾವು ಇತ್ಯಾದಿ ಬಯಸಿದವಳಲ್ಲ ಶೋಭನಾ. ಇಷ್ಟು ವರ್ಷಗಳ ಕಾಲ ತನ್ನ ಜೊತೆಗಾರನಾಗಿದ್ದವನು ಮತ್ತೊಂದಷ್ಟು ವರ್ಷಗಳ ಕಾಲ ಜೊತೆಯಲ್ಲಿರಲಿ ಎಂಬ ಸಣ್ಣ [?] ಸ್ವಾರ್ಥ ಇದ್ದಿರಲೂಬಹುದು. ಆಕೆಯ ಪುಟ್ಟ ಲೋಕದಲ್ಲಿ ಗಂಡ ಮತ್ತು ಮಗ ಬಿಟ್ಟರೆ ಬೇರಾರೂ ಇದ್ದಂತಿಲ್ಲ. ಗಂಡನನ್ನು ಹೀಗೇ ಉಳಿಸಿಕೊಳ್ಳಲು ಅವಳೆದುರು ಬೇರೆ ದಾರಿ ಯಾವುದೂ ಉಳಿದಿರಲಿಲ್ಲ ಎಂಬುದಂತೂ ಸತ್ಯ. ಮಿತ ಮಾತಿನ, ಆದರೆ ಮಾತಾಡಿದಾಗಲೆಲ್ಲ ನಿರ್ಣಾಯಕವಾಗಿ ಮಾತಾಡುವ ಆಕೆಗೆದುರಾಗಿ ಆತನೆಂದೂ ವಾದಿಸಿರಲಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಒಟ್ಟಿನಲ್ಲಿ ಕೊಡುಗೆ ಕೊಡಲು ಅವಳಿಗೆ ಕಾರಣಗಳಿದ್ದವು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆದರೆ ಹೆಂಡತಿಯ ಕೊಡುಗೆ ಸ್ವೀಕರಿಸಲು ಇವನಿಗೆ ಕಾರಣಗಳಿರಲಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕಾರಣಗಳನ್ನು ಹುಟ್ಟಿಸಿಕೊಂಡು ತನ್ನದೇ ಹೃದಯವನ್ನು ಒಪ್ಪಿಸಬೇಕಾಗಿತ್ತು; ಒಪ್ಪಿಸತೊಡಗಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b><br /></b></span>
<span style="color: purple; font-size: large;"><b>ಓ.., ನನ್ನ ಪ್ರಿಯ ಹೃದಯವೇ..</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆದರೆ ನನ್ನ ಹೋರಾಟಕ್ಕೆ ಉಳಿದಿರುವುದು ಒಂದೇ ಹಾದಿ..</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮೇಲಾಗಿ ಅವಳು ನೀನು ಪ್ರೀತಿಸಿದ್ದ, ಪ್ರೀತಿಸುತ್ತಿರುವ ನನ್ನ ಪ್ರೀತಿಯ ಹೆಂಡತಿ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವಳಾಗಿಯೇ ನೀಡಿದ ಸಲಹೆ ಇದು. ನಾನವಳ ಆರೋಗ್ಯವನ್ನು ಕಿತ್ತುಕೊಳ್ಳಲು ಹೊರಟಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಈ ಕುರಿತು ಆಕೆಯಲ್ಲೂ ಯಾವುದೇ ಗೊಂದಲಗಳಿದ್ದಂತೆ ನನಗಂತೂ ಕಾಣಿಸುವುದಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮೇಲಾಗಿ ಅವಳೇ ನನ್ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಪಾಪ ಪ್ರಜ್ಞೆಯನ್ನು ಕಡಿಮೆ ಮಾಡುತ್ತಿದ್ದದ್ದು ನಿನಗೂ ಗೊತ್ತಿದೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವಳೇ ದೂರವಾಣಿಯ ಮೂಲಕ ಆಕೆಯ ತಂದೆ-ತಾಯಿ, ತಮ್ಮ ಮತ್ತು ತಂಗಿಯರಿಗೆ ಅದನ್ನು ಹೇಳಿದ್ದಳು. ನನಗೆ ತೊಂದರೆಯಾಗದೆ ಅವರಿಗೆ ಉಪಕಾರವಾಗುವುದಿದ್ದರೆ ಯಾಕೆ ಮಾಡಬಾರದು? ಈ ಹಂತದಲ್ಲಿ ನಾನವರಿಗೆ ಬೆಂಬಲವಾಗಿ ನಿಲ್ಲದೆ ಬೇರಾರು ನಿಲ್ಲಬೇಕು? ಎಂದೆಲ್ಲಾ ಆಕೆ ಹೇಳುತ್ತಿದ್ದುದನ್ನು ನೀನೂ ಕೇಳಿದ್ದೀಯಾ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವಳ ಉದಾತ್ತ ವ್ಯಕ್ತಿತ್ವ, ಉದಾರ ಮನಸು, ಗಟ್ಟಿ ನಿರ್ಧಾರಗಳ ಬಗ್ಗೆ ನಿನಗೆ ಗೊತ್ತಿದೆ.ಅವಳದ್ದು ಭಾಷೆ ಮೀರಿದ ಭಾವ. ನನ್ನ ಮುಂದೆ ಹೆಚ್ಚು ಆಯ್ಕೆಗಳಿಲ್ಲದೇ ಇದ್ದಾಗ ಬೇರೇನು ಮಾಡಲು ನನ್ನಿಂದ ಸಾಧ್ಯ?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಸಾಮಾನ್ಯವಾಗಿ ಆಸ್ಪತ್ರೆಯ ನಿಯಮಾನುಸಾರ ಬಂಧುಗಳು ಕಿಡ್ನಿ ಕೊಡಬೇಕು. ಅಣ್ಣ, ತಮ್ಮ, ತಂಗಿಹೀಗೆ ರಕ್ತ ಸಂಬಂಧಿಗಳ ನಡುವೆಯೇ ಕಿಡ್ನಿ ಕಸಿ ಯಶಸ್ವಿಯಾಗುತ್ತದಂತೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆದರೆ ನನ್ನ ಅಣ್ಣಂದಿರಿಬ್ಬರೂ ಮಧುಮೇಹಿಗಳು. ಅವರು ಕಿಡ್ನಿ ಕೊಟ್ಟರೂ ವೈದ್ಯರು ತೆಗೆದುಕೊಳ್ಳಲಾರರು. ನನ್ನ ತಂಗಿ ಗುಲಾಬಿ ಬಿಳಿಮಲೆಯ ಗಂಡ ಶ್ರೀನಿವಾಸ್ ಕಾರ್ಕಳ ಬೆನ್ನು ಮೂಳೆಯ ತೊಂದರೆಗೆ ಒಳಗಾಗಿ, ಎರಡೂ ಕಾಲುಗಳನ್ನು ಕಳೆದುಕೊಂಡು, ಕಳೆದ ೧೨ ವರ್ಷಗಳಿಂದ ಮನೆ ಬಿಟ್ಟು ಹೊರಬಾರದೇ ಉಳಿದಿರುವಾಗ ತಂಗಿಯನ್ನು ನಾನು ಕೇಳುವುದಾದರೂ ಹೇಗೆ?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ನಾನು ಕೆಲಸ ಮಾಡುವ ಕಛೇರಿಯ ಕ್ಯಾಂಟೀನ್ನಲ್ಲಿದ್ದ ಸುಮಾರು ೪೦ ವರ್ಷದ ರಮೇಶ್ ಒಂದಿನ ನನ್ನ ಕಛೇರಿಗೆ ಬಂದು ದೇವರಿಗೆ ಬಾಯಿಗೆ ಬಂದ ಹಾಗೇ ಬೈದು, ನಿಮ್ಮಂತಹವರಿಗೆ ಹೀಗಾಗ ಬಾರದಿತ್ತು, ತಗೊಳ್ಳಿ ನನ್ನ ಕಿಡ್ನಿನಾ ಅಂತ ವೀರಾವೇಶದಿಂದ ಹೇಳಿದ್ದನ್ನು ನೀನೂ ಕೇಳಿದ್ದೀಯಾ. ಅವನಿಗೆ ನಾನೇ ಸಮಾಧಾನ ಹೇಳಿದ್ದಿರಲಿಲ್ಲವೇ?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಬದುಕಿನ ಇಕ್ಕಟ್ಟಿನ ಘಳಿಗೆಗಳಲ್ಲಿ ಜೊತೆ ನಿಲ್ಲುವ ಹೆಂಡತಿಯ ಮುಂದೆ ಯಾವ ದೈವ? ಯಾವ ದೇವರು?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>೨೫ ವರ್ಷಗಳ ಹಿಂದೆ ನೀನು ಅವಳನ್ನು ಪ್ರೀತಿಸಿದ್ದರಿಂದಲ್ಲವೇ ನಾನು ಮದುವೆಯಾದದ್ದು?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ನಮ್ಮ ಮದುವೆಗೆ ಜಾತಿ ಅಡ್ಡ ಬಂದುದರಿಂದ ಸುಮಾರು ಏಳು ವರ್ಷಗಳ ಕಾಲ ನಾವು ಮೌನವಾಗಿ, ತಾಳ್ಮೆಯಿಂದ ಕಾಯಲಿಲ್ಲವೇ? ಕೊನೆಗೂ ನಿನ್ನ ಪ್ರೀತಿಯೇ ಗೆಲ್ಲಲಿಲ್ಲವೇ? ತಂದೆ ತಾಯಿ, ಬಂಧುಗಳನ್ನು ತೊರೆದು ನನ್ನೊಡನೆ ಬಂದ ಆಕೆ ನನ್ನ ಉಸಿರಾದಳು. ನಮ್ಮ ಪ್ರೀತಿ ನನ್ನ ಮನೆಯವರನ್ನೂ, ಆಕೆಯ ಮನೆಯವರನ್ನೂ ಬಹಳ ಬೇಗ ಹತ್ತಿರ ಮಾಡಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಜಾತಿ ನಮಗೆಂದೂ ಗೋಡೆಯಾಗಲಿಲ್ಲ. ಜಾತಕದ ಮೇಲೆ ತುಂಬಾ ವಿಶ್ವಾಸವಿರುವ ನನ್ನ ತಂದೆ ಬಿಳಿಮಲೆಗೆ ಹೋದಾಗಲೆಲ್ಲ ನಿನ್ನೆದುರೇ ಹೇಳಲಿಲ್ಲವೇ? ಶೋಭಾಳ ಜಾತಕ ಚೆನ್ನಾಗಿದೆ, ನಿನ್ನದು ಸಾಲದು.ಅವಳ ಜಾತಕದ ಫಲದಿಂದ ನಿನ್ನ ಜಾತಕ ನಡೆಯತ್ತಿದೆ, ಅವಳನ್ನು ಚೆನ್ನಾಗಿ ನೋಡಿಕೋ ಅಂತ?</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಮಹಾರೋಗದ ಮಜ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ದೆಹಲಿ ಕರ್ನಾಟಕ ಸಂಘದಲ್ಲಿ ಇವನೇ ಅಧ್ಯಕ್ಷನಾಗಿದ್ದಾಗ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದ ಬಾಲಚಂದ್ರರ ಹೆಂಡತಿ, ತನ್ನ ತಂಗಿಯಿಂದ ಕಿಡ್ನಿ ದಾನ ಪಡೆದು ಕಸಿ ಮಾಡಿಸಿಕೊಂಡಿದ್ದರು. ಇವನ ದೂರದ ನೆಂಟ ಪುತ್ತೂರಿನ ಶ್ರೀ ಸಿ.ಪಿ ಜಯರಾಮರಿಗೆ ಅವರ ಹೆಂಡತಿಯೇ ಕಿಡ್ನಿ ದಾನ ಮಾಡಿದ್ದರು. ಇವನು ನೇರವಾಗಿ ಅವರನ್ನೇ ಮಾತನಾಡಿಸಿದಾಗ ಅವರೂ ಧೈರ್ಯ ಹೇಳಿದ್ದರು. ನಾನು ಒಂದು ಕಿಡ್ನಿಯನ್ನು ಅವರಿಗೆ ಕೊಟ್ಟಿದ್ದೇನೆ. ಅದರಿಂದ ನನಗೇನೂ ತೊಂದರೆಯಾಗಿಲ್ಲ. ಮೇಲಾಗಿ ನಾವೆಲ್ಲ ಹಳ್ಳಿಯಲ್ಲಿ ಇರುವವರು, ಬೇರೆ ಬೇರೆ ಕೆಲಸ ಮಾಡಬೇಕಾಗುತ್ತದೆ, ನೀವು ಪೇಟೆಯಲ್ಲಿ ಇರುವವರು, ಏನೋ ತೊಂದರೆ ಆಗಲಾರದು ಎಂಬ ಅವರ ಮಾತು ಇವನಿಗೆ ವಿಶೇಷ ಬಲ ನೀಡಿತ್ತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕಿಡ್ನಿ ತೊಂದರೆಯ ಅಂತಿಮ ಹಂತದಲ್ಲಿ ಕಸಿ ಚಿಕಿತ್ಸೆ ಅನಿವಾರ್ಯ. ಕಿಡ್ನಿ ಚಿಕಿತ್ಸೆಯಂತೆಯೇ ಅದಕ್ಕಾಗಿ ನಡೆಸಬೇಕಾದ ತಯಾರಿಯೂ ಅಷ್ಟೆ ಕಾಂಪ್ಲೆಕ್ಸ್. ದಾನ ಮಾಡುವವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಗಟ್ಟಿ ಇರಬೇಕಾಗುತ್ತದೆ. ಅದಕ್ಕಾಗಿ ನಡೆಸಲಾಗುವ ಎಲ್ಲ ಪರೀಕ್ಷೆಗಳಲ್ಲೂ ಪಾಸ್ ಆಗಬೇಕಾಗುತ್ತದೆ.ಐವತ್ತು ವರ್ಷ ವಯಸ್ಸು ದಾಟಿದವರು, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇವೆರಡರ ಫ್ಯಾಮಿಲಿ ಹಿಸ್ಟರಿ ಇರುವವರು, ಧೂಮಪಾನಿಗಳು, ಅಧಿಕ ತೂಕವಿರುವವರು ಕನಿಷ್ಟ ವರ್ಷಕೊಮ್ಮೆಯಾದರೂ ತಮ್ಮ ಕಿಡ್ನಿ ಯನ್ನು ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಎಲ್ಲಿ ಕಸಿ ಮಾಡಿಸಿಕೊಳ್ಳುವುದು?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮೈಸೂರು, ಬೆಂಗಳೂರು ಮತ್ತು ಮಣಿಪಾಲಗಳಿಂದ ಮಾಹಿತಿ ತರಿಸಿಕೊಂಡ.ಕೊನೆಗೆ ದೆಹಲಿಯೇ ಒಳಿತೆಂಬ ನಿರ್ಣಯಕ್ಕೆ ಬಂದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ದೆಹಲಿಯಲ್ಲಿ ಹತ್ತಾರು ಒಳ್ಳೆಯ ಆಸ್ಪತ್ರೆಗಳಿವೆ. ಅದರಲ್ಲಿ ಇವನು ಆಯ್ದುಕೊಂಡದ್ದು ಮ್ಯಾಕ್ಸ್ ಆಸ್ಪತ್ರೆ. ಇದಕ್ಕೆ ಕಾರಣವಿಲ್ಲದೆ ಇಲ್ಲ. ಮ್ಯಾಕ್ಸ್ ಆಸ್ಪತ್ರೆಯ ನಿರ್ದೇಶಕರ ಕಾರ್ಯದರ್ಶಿಯಾಗಿರುವ ಶ್ರೀಮತಿ ಅನುರಾಧಾ ರಾವ್ ಅವರು ಮೂಲತಹ ಆಂಧ್ರ ಪ್ರದೇಶದವರು ಮತ್ತು ಅವರ ಗಂಡ ಇವನ ಒಳ್ಳೆ ಸ್ನೇಹಿತರು. ಶ್ರೀಮತಿ ಅನುರಾಧ ಅವರು ಇವನ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಒಂದು ಸೂಚನೆ ನೀಡಿ ಇವನಿಗೆ ವಿ.ಐ.ಪಿ ಸ್ಥಾನ ಮಾನ ನೀಡಲು ಕಾರಣರಾಗಿದ್ದರು. ಇದರಿಂದಾಗಿ ವೈದ್ಯರಿಂದ ಆರಂಭವಾಗಿ ದಾದಿಗಳವರಗೆ ಇವನಿಗೆ ಎಲ್ಲಿಯೂ ಯಾವ ಬಗೆಯಲ್ಲೂ ತೊಂದರೆಯಾಗಲಿಲ್ಲ. ಎಲ್ಲಿಯೂ ಕ್ಯೂ ನಿಲ್ಲುವ ಪ್ರಸಂಗ ಬರಲಿಲ್ಲ. ಇವನ ಕಾರಿನ ನಂಬರ್ ಕಂಡ ತಕ್ಷಣ ಒಳಗೆ ಸುದ್ದಿ ರವಾನೆಯಾಗುತ್ತದೆ. ಗಗನ ಸಖಿಯಂತಿರುವ ಚೆಲುವೆಯೊಬ್ಬಳು ಅವನ ಸಹಾಯಕ್ಕೆ ಬರುತ್ತಾಳೆ. ಇವನಿಗೆ ಅಲ್ಲಿಯೂ ರಾಘವಾಂಕನ ನೆನಪು-ರೋಗ ರುಜೆಯಡಸಿಕೊಂಬಲ್ಲಿ ರಂಭೆ ದೊರಕೊಂಡಲ್ಲಿ ಫಲವೇನು?. ಏನಿದ್ದರೂ ಒಂದು ಮಹಾರೋಗದ ನಡುವೆಯೇ ಅವನು ಸ್ವಲ್ಪ ಮಜ ತಗೊಂಡದ್ದು ಮಾತ್ರ ನಿಜವಂತೆ. ಅವನ ಊರಾದ ಪಂಜದ ಸರಕಾರೀ ಆಸ್ಪತ್ರೆಯೆಲ್ಲಿ? ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯೆಲ್ಲಿ? ಒಂದೇ ದೇಶದಲ್ಲಿ ಎಷ್ಟೊಂದು ತಾರತಮ್ಯ?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆಸ್ಪತ್ರೆಗೆ ಸೇರುವ ಹಿಂದಿನ ದಿನ ನಿನಗೆ ಭಯವಾಗಿದ್ದಿರಲಿಲ್ಲವೇ ಎಂದು ಪ್ರಶ್ನಿಸಿದರೆ ಅವನ ಉತ್ತರ ನಂಬುವಂತಿತ್ತು. ಅವನು ಅದಾಗಲೇ ಅಂತರ್ಜಾಲವನ್ನು ಪೂರ್ತಿ ಜಾಲಾಡಿಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ಗೆಳೆಯರಿಗೆ, ಕುಟುಂಬದವರಿಗೆ ವಿವರಿಸಿದ್ದ.ಅವನು ಮೊದಲು ತಿಳಿದುಕೊಂಡದ್ದು ಅವನ ಎರಡು ಕಿಡ್ನಿಗಳಲ್ಲಿ ಒಂದನ್ನು ತೆಗೆದು, ಹೊಸದನ್ನು ಅದಕ್ಕೆ ಜೋಡಿಸುವುದು ಅಂತ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆದರೆ ಅದು ಹಾಗಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕಿಡ್ನಿ ಕಸಿ ಆದ ನಂತರವೂ ಕಸಿ ಮಾಡಿಸಿಕೊಂಡವನ ಎರಡೂ ಕಿಡ್ನಿಗಳು ಹಾಗೆಯೇ ಇರುತ್ತವೆ. ಈ ಕಿಡ್ನಿಗಳಿಂದ ಮೂತ್ರವನ್ನು ಮೂತ್ರ ಕೋಶಕ್ಕೆ ಒಯ್ಯುವ ಎರಡು ನಾಳಗಳಲ್ಲಿ ಒಂದಕ್ಕೆ ಹೊಸ ಕಿಡ್ನಿಯನ್ನು ಜೋಡಿಸುವುದು ತಂತ್ರ.ಅಂದರೆ ಕಸಿಯ ಬಳಿಕ ಒಟ್ಟು ಮೂರು ಕಿಡ್ನಿಗಳು ದೇಹದಲ್ಲಿರುತ್ತವೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಈ ಬಗ್ಗೆ ಇವನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಏನಿದ್ದರೂ ಈ ಕೆಲಸ ಮಾಡುವವರು ವೈದ್ಯರು, ದೇಹವನ್ನು ಅವರಿಗೆ ಒಪ್ಪಿಸಿದರೆ ಆಯಿತು.ಹಾಗೆಂದುಕೊಂಡುಇವನು ನಿಶ್ಚಿಂತನಾಗಿದ್ದ; ಆಸ್ಪತ್ರೆಗೆ ಸೇರುವ ಹಿಂದಿನ ದಿನವೂ ಕಛೇರಿಯಲ್ಲಿ ತಡರಾತ್ರಿವರೆಗೂ ಕೆಲಸ ಮಾಡಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆಸ್ಪತ್ರೆಯ ಡಾಕ್ಟರರುಗಳು ಎಲ್ಲವನ್ನೂ ಸಾವಧಾನದಿಂದ ಮೊದಲೇ ವಿವರಿಸಿದ್ದರು. ವೈದ್ಯರಾದ ಡಾ.ಮೋಹಿತ್ ಕಿರ್ಬಾತ್ ಅತ್ಯಂತ ತಾಳ್ಮೆಯಿಂದ ಬಿಡಿ ಬಿಡಿಯಾಗಿ ಎಲ್ಲವನ್ನೂ ವಿವರಿಸಿ ಒಟ್ಟು ಸುಮಾರು ಆರೂವರೆ ಲಕ್ಷ ರೂಪಾಯಿಗಳ ಖರ್ಚಿನ ಬಗ್ಗೆ ಮಾಹಿತಿಯನ್ನೂ ನೀಡಿದರು.ಅದರಲ್ಲಿ ಸರ್ಜರಿಗೆ ಮುನ್ನ ಮತ್ತು ಸರ್ಜರಿಯ ಆನಂತರ ಕೊಡಬಹುದಾದ ಎರಡು ಇಂಜಕ್ಷನ್ಗಳ ಬೆಲೆಯೇ ಒಂದು ಲಕ್ಷದ ನಲುವತ್ತು ಸಾವಿರರೂಪಾಯಿಗಳಾಗಿತ್ತು. ಈ ಇಂಜಕ್ಷನ್ಗಳು ಹಳೆ ದೇಹವು ಹೊಸ ಕಿಡ್ನಿಯನ್ನು ತಿರಸ್ಕರಿಸಬಹುದಾದ ಸಾಧ್ಯತೆಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.ಹೇಗೋ ಹಣ ಜೋಡಿಸಿಕೊಂಡ. ಗೆಳೆಯರು ಚಾಚಿದ ಸಹಾಯ ಹಸ್ತವನ್ನು ಮುಕ್ತವಾಗಿರಿಸಿಕೊಂಡ.</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ದೇವರೇ ಮಾಡಿದ ಜೋಡಿಯಿದು</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕಿಡ್ನಿ ಕಸಿಯ ಬಗ್ಗೆ ಇವನು ಅಂತಿಮ ನಿರ್ಧಾರ ತೆಗೆದುಕೊಂಡದ್ದು ೨೦೧೨ರ ಎಪ್ರಿಲ್ ಮೊದಲ ವಾರದಲ್ಲಿ. ಆನಂತರ ದಂಪತಿಗಳಿಗೆ ಬಗೆಬಗೆಯ ಪರೀಕ್ಷೆಗಳು. ಮೇ ೧೫ರ ಹೊತ್ತಿಗೆ ಸುಮಾರು ೬೦ ಬಗೆಯ ಪರೀಕ್ಷೆಗಳನ್ನು ಮುಗಿಸಿದ್ದರು. ಅದರಲ್ಲಿ ಮುಖ್ಯವಾಗಿ ಇಬ್ಬರ ರಕ್ತದ ಗ್ರೂಪ್ ಒಂದೇ ಆಗಿರಬೇಕು. ಇಬ್ಬರ ರಕ್ತವನ್ನು ಮಿಶ್ರ ಮಾಡಿ ಪರೀಕ್ಷಿಸಿದಾಗ, ಅದು ನಿರೀಕ್ಷಿತ ಪರಿಣಾಮವನ್ನು ಬೀರಬೇಕು. ಜೊತೆಗೆ ಹೃದಯ, ಕಿಡ್ನಿಗಳು ಕೆಲಸ ಮಾಡುವ ಬಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಕಿಡ್ನಿಯನ್ನು ದೇಹದ ಇತರ ಭಾಗಗಳಿಗೆ ಜೋಡಿಸಿದ ರಕ್ತನಾಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಯಾವ ನಾಳವನ್ನು ಕತ್ತರಿಸಬಹುದು ಎಂಬ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಹೀಗೇ ಹತ್ತು ಹಲವು ಸಂಗತಿಗಳು. ಆ ೬೦ ಪರೀಕ್ಷೆಗಳಲ್ಲೂಅವರಿಬ್ಬರೂ ಯಾವ ತೊದರೆಯಿಲ್ಲದೆ ಪ್ಫಸ್ಟ್ ಕ್ಲಾಸಿನಲ್ಲಿ ಪಾಸಾದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಡಾ. ಮೋಹಿತ್ ಹೇಳಿದ್ದರು-ದೇವರೇ ಮಾಡಿದ ಜೋಡಿಯಿದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹೀಗೇ ಬಗೆ ಬಗೆಯ ಪರೀಕ್ಷೆಗಳಿಗೆ ಒಳಪಡುತ್ತಲೇ ಕಾನೂನಿನ ಅಗತ್ಯಗಳನ್ನೂ ಪೂರೈಸಿಕೊಳ್ಳಬೇಕಾಗುತ್ತಿತ್ತು.ಮುಖ್ಯವಾಗಿ ಯಾವ ಒತ್ತಡವೂ ಇಲ್ಲದೆ ಸ್ವ ಇಚ್ಛಯಿಂದ ಕಿಡ್ನಿಯನ್ನು ಕೊಡುತ್ತಿದ್ದೇನೆ ಅಂತ ದಾನಿ ಅಫಿದವಿತ್ ಮಾಡಬೇಕು. ಅದಕ್ಕೆ ನೋಟರಿಯ ಸಹಿ ಬೇಕು. ದಾನಿಯ ಹತ್ತಿರದ ಸಂಬಂಧಿಯ (ಇಲ್ಲಿ ಇವರಿಬ್ಬರ ಮಗ ಅನನ್ಯ) ಒಪ್ಪಿಗೆ ಬೇಕು. ಮನಶ್ಯಾಸ್ತ್ರಜ್ಞರ ಟಿಪ್ಪಣಿ ಬೇಕು. ಸ್ತ್ರೀ ರೋಗ ತಜ್ಞೆ, ಹೃದಯ ರೋಗ ತಜ್ಞರ ಒಪ್ಪಿಗೆ ಬೇಕು, ಎಲ್ಲಕ್ಕಿಂತ ಮಿಗಿಲಾಗಿ ಆಸ್ಪತ್ರೆಯಲ್ಲಿ ಕಿಡ್ನಿ ಪ್ಯಾನಲ್ ಮುಂದೆ ಹಾಜರಾಗಿ ನಿರ್ಣಯಗಳನ್ನು ಸಮರ್ಥಿಸಿಕೊಳ್ಳಬೇಕು.ಇವಕ್ಕೆಲ್ಲ ಸುಮಾರು ಒಂದು ಲಕ್ಷ ರೂಪಾಯಿಗಳ ಖರ್ಚು ತಗಲುತ್ತದೆ. ಇಂಥ ಕಠಿಣ ನಿಯಮಗಳ ಮೂಲಕ ಕಿಡ್ನಿ ಅಪಹರಣದಂಥ ಅತ್ಯಂತ ಹೇಯವಾದ ಪ್ರಕ್ರಿಯೆಗಳನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇಂದು ಆರೋಗ್ಯವಂತ ಕಿಡ್ನಿಯೊಂದರ ಬೆಲೆ ಸುಮಾರು ೫೦ ಲಕ್ಷ ರೂಪಾಯಿಗಳು. ಬಡವರಿಗೆ ೧೦ ಸಾವಿರ ರೂಪಾಯಿಗಳನ್ನು ಕೊಟ್ಟು ಲಕ್ಷಾಂತರ ರೂಪಾಯಿಗಳಿಗೆ ಕಿಡ್ನಿಗಳನ್ನು ಮಾರಾಟ ಮಾಡುವ ನೀಚರು ಇಂದಿಗೂ ಇದ್ದಾರೆ. ಜೊತೆಗೆ ಮಕ್ಕಳ ಅಪಹರಣದ ಹಿಂದೆಯೂ ಕಿಡ್ನಿ ವಂಚಕರ ಜಾಲ ಇರುವುದನ್ನು ಪತ್ತೆ ಹಚ್ಚಲಾಗಿದೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಒಂದು ವರದಿಯ ಪ್ರಕಾರ, ಹೆಂಗಸರ ಒಂದು ಕಿಡ್ನಿ ನಿಧಾನವಾಗಿ ಕಾರಣಾಂತರದಿಂದ ಬಾಡಿ, ಸುರುಟಿ ಹೋಗುವ ಪರಿಸ್ಥಿತಿಯು ದೇಹದಲ್ಲಿ ತಾನೇ ತಾನಾಗಿ ನಿರ್ಮಾಣಗೊಳ್ಳುತ್ತದಂತೆ. ಆಗ ಅದನ್ನು ಬೇರೆ ದೇಹಕ್ಕೆ ಜೋಡಿಸಿದಾಗ ಮತ್ತೊಮ್ಮೆ ಅದು ಸಕ್ರಿಯವಾಗುವುದಂತೆ.ಆಸ್ಪತ್ರೆಯಲ್ಲಿ ನಡೆಸಿದ ಒಂದು ಅತ್ಯಾಧುನಿಕವಾದ ಪರೀಕ್ಷೆಯಲ್ಲಿ ( ಆ ಪರಿಕ್ಷೆಗೆ ೧೩ ಸಾವಿರ ರೂಪಾಯಿಗಳ ಖರ್ಚು ತಗುಲಿತ್ತು) ಶೋಭನಾಳ ಎಡದ ಕಿಡ್ನಿಯು ಕ್ಷೀಣವಾಗಿರುವುದನ್ನು ವೈದ್ಯರು ಇವನಿಗೆ ತೋರಿಸಿ, ಅದನ್ನು ತೆಗೆದು ನಿಮಗೆ ಕಸಿ ಮಾಡಲಾಗುವುದು ಎಂದಿದ್ದರು. ಅತ್ಯುತ್ತಮವಾಗಿ ಕೆಲಸ ಮಾಡುವ ಕಿಡ್ನಿಯನ್ನು ಅವರು ತೆಗೆಯುವುದಿಲ್ಲ. ಇದೊಂದು ಸಮಾಧಾನ ಕೊಡುವ ಹೊಸ ವಿಷಯವಾಗಿತ್ತು ಇವನಿಗೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>೨೦೧೨ರ ಜೂನ್ ಒಂದನೇ ತಾರೀಕಿನಂದು ಶಸ್ತ್ರ ಚಿಕಿತ್ಸೆಗೆ ದಿನ ನಿಗದಿಯಾಗಿತ್ತು. ಅಂದರೆ ಮೇ ೩೧ರಂದು ಅಪರಾಹ್ನ ಎರಡು ಗಂಟೆಯ ಒಳಗೆ ಆಸ್ಪತ್ರೆಗೆ ಅವರಿಬ್ಬರೂ ಸೇರಬೇಕಾಗಿತ್ತು. ಅದೇ ಪ್ರಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಮಗ ಒಂದು ವಾರಗಳ ಅವಧಿಗೆ ರಜೆ ಹಾಕಿ ಜೊತೆಗಿರಲು ಸಿದ್ಧನಾಗಿದ್ದ. ಬೆಂಗಳೂರಿನಿಂದ ಡಾ. ಯು.ಆರ್. ಅನಂತಮೂರ್ತಿಯವರು ಫೋನ್ ಮಾಡಿ ನಿಮಗೆ ಶುಭವಾಗಲಿ, ಒಂದು ವೇಳೆ ಕಿಡ್ನಿ ಕಸಿ ವಿಫಲವಾದರೂ ಯೋಚನೆ ಬೇಡ, ಡಯಾಲಿಸಿಸ್ ಇದೆಯಲ್ಲ? ಎಂದ್ದಿದ್ದರಂತೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅಮೇರಿಕಾದ ಅಯೋವಾ ವಿಶ್ವವಿದ್ಯಾಲಯದಿಂದ ಡಾ.ಫಿಲಿಪ್, ಹಾರ್ವರ್ಡನಿಂದ ಡಾ. ನಸೀಮ್ ಹೈನ್ಸ್, ವಾಷಿಂಗ್ಟನ್ ನಿಂದ ಮೈಕ್ ಹಲವಾಚ್ಸ್, ಟೆಕ್ಸಾಸ್ ನಿಂದ ಮಾರ್ಥಾ ಸೆಲ್ಬಿ, ಇಂಡಿಯಾನದಿಂದ ರೆಬೆಕಾ, ಇಸ್ರೇಲ್ ನಿಂದ ಶುಲ್ಮನ್, ಟೋಕಿಯೋದಿಂದ ಸುಮಿಯೋ ಮೊರಿಜಿರಿ ಮತ್ತು ಮೀಕೋ ಮಿನಕವ, ಹೀಗೆ ಜಗತ್ತಿನಾದ್ಯಂತದಿಂದ ಶುಭ ಹಾರೈಕೆಗಳು ಬಂದು ತಲುಪಿದವು. ಇವರಿಗೆಲ್ಲ ಸುದ್ದಿ ತಿಳಿದದ್ದು ಹೇಗೆ? ಎಂದು ಇವನೇ ಅಚ್ಚರಿಗೊಡಿದ್ದ.</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಆಯುಷ್ಯ ಮರೆತ ಮಾವ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆಸ್ಪತ್ರೆಗೆ ಸೇರುವ ಆದಿನ ಬಂತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಭಾವನೆಗಳೇ ಇಲ್ಲದ ದಿನವದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅದರೆ!</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆದರೆ ೩೧ರ ಬೆಳಗ್ಗೆ ೬ ಗಂಟೆಯ ಸುಮಾರಿಗೆ ಇವನ ಮಾವ -ಹೆಂಡತಿಯ ಅಪ್ಪ- ಕಾಸರಗೋಡಿನ ಆಸ್ಪತ್ರೆಯಲ್ಲಿ ತೀರಿಕೊಂಡ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅಪ್ಪನನ್ನು ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುತ್ತಿದ್ದ ಶೋಭನಾಳ ಆಗಿನ ಪರಿಸ್ಥಿತಿ ಹೇಗಿರಬೇಡ? ಅವರು ಅಂತಿಂಥ ಅಪ್ಪ ಅಲ್ಲ. ಅಪರಿಮಿತ ಯಕ್ಷಗಾನ ಪ್ರೇಮಿ, ಇವನೋ ಯಕ್ಷಗಾನದ ಅಸೀಮ ಅಭಿಮಾನಿ. ಹೀಗಾಗಿ ಇವರಿಬ್ಬರು ಎಷ್ಟೋ ಬಾರಿ ಒಟ್ಟಗೇ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದುಂಟು. ಕಿಡ್ನಿ ಕಸಿಯ ವಿವರ ಕೇಳಿದ ಅವರು ಮಗಳ ಮೇಲೆ ಅಭಿಮಾನ ಪಟ್ಟದ್ದಲ್ಲದೆ, ಆಪರೇಶನ್ನ ಯಶಸ್ವಿಗೆ, ದಂಪತಿಗಳ ದೀರ್ಘಾಯುಷ್ಯಕ್ಕೆ ವಿಶೇಷಪೂಜೆಯನ್ನೂ ಮಾಡಿಸುತ್ತಿರುವಾಗ ತಮ್ಮ ಆಯುಷ್ಯದ ಬಗ್ಗೆ ಯೋಚನೆಯನ್ನೇ ಮಾಡಿದ್ದಿರಲಿಲ್ಲ. ಅವರು ಆ ದಿನವೇ ಕಣ್ಮರೆಯಾದರು. ಕಣ್ಣಿಂದ ರಕ್ತ ಒಸರತೊಡಗಿ ದೆಹಲಿಯಿಂದ ಕಾಸರಗೋಡಿನ ವರೆಗೆ ಹರಿಯತೊಡಗಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕಾಸರಗೋಡಿನವರೆಗೆ ಪಯಣಿಸುವಷ್ಟು ಆರೋಗ್ಯ ಇವನಿಗಿರಲಿಲ್ಲ. ಮಗ ಅಮ್ಮನೊಡನೆ ಹೋಗಲು ತಯಾರಾದ.ಆದರೆ ಮುಂಬ್ಯೆ ಮೂಲಕವಾಗಲೀ, ಬೆಂಗಳೂರು ಮೂಲಕವಾಗಲೀ ಕಾಸರಗೋಡು ತಲುಪಲು ಬೇಕಾದ ಅನುಕೂಲಕರ ವಿಮಾನ ದೊರೆಯಲೇ ಇಲ್ಲ. ಒಂದು ವೇಳೆ ದೊರೆತಿದ್ದರೂ ಶೋಭನಾಳನ್ನು ಆ ಸ್ಥಿತಿಯಲ್ಲಿ ಕಳುಹಿಸಿಕೊಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಮಗ ನಮ್ಮ ಸಹಾಯಕ್ಕೆ ನಿಂತ. ಈಗ ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಬೇಡ, ಸ್ವಲ್ಪ ಹೊತ್ತು ಜೊತೆಗಿರೋಣ ಎಂದು ಹೇಳಿದ ಅವನು ಪರಿಸ್ಥಿಯನ್ನು ಕೈಗೆ ತೆಗೆದುಕೊಂಡ. ಹೊತ್ತೇರುತ್ತಲೇ ಊರಿಗೆ ಫೋನ್ ಮಾಡಿ, ನಾವೀಗ ಬರುವ ಪರಿಸ್ಥಿತಿಯಲ್ಲಿ ಇಲ್ಲ, ನೀವು ಮುಂದುವರಿಸಿ ಎಂದು ಹೇಳಿಬಿಟ್ಟ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇವನು ಶೋಭನಾಗೆ ಅಂಟಿಕೊಂಡು ಮೌನವಾಗಿ ಕೊರಗುತ್ತಿದ್ದ. ಸುಮಾರು ೧೧ ಗಂಟೆಯ ಹೊತ್ತಿಗೆ ಆಸ್ಪತ್ರೆಗೆ ಫೋನ್ ಮಾಡಿ ಶಸ್ತ್ರ ಚಿಕಿತ್ಸೆಯನ್ನು ಮುಂದಕ್ಕೆ ಹಾಕಲು ಯೋಚಿಸುತ್ತಿದ್ದಾಗ ಶೋಭನಾ ಹೇಳಿದ್ದಳು ಹಾಗೆ ಮಾಡಬೇಡಿ.ಮಾಡಿದರೆ ಮತ್ತೆ ನಾವು ಅನೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಊರಿಗಂತೂ ಹೋಗಲಾಗಲಿಲ್ಲ, ಇದನ್ನಾದರೂ ಮುಗಿಸೋಣ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮುಂದಿನ ನಾಲ್ಕಾರು ಗಂಟೆಗಳ ಕಾಲ ಭಯಾನಕ ಮೌನ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಈ ಮೌನದಲ್ಲಿಯೇ ಇವರಿಬ್ಬರೂ ಆಸ್ಪತ್ರೆ ಸೇರಿದರು.ನಗು ನಗುತ್ತಾ ಇದ್ದವರು ಈಗ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾದ್ದನ್ನು ಗಮನಿಸಿದ ಡಾ.ಮೋಹಿತ್ ಸಮಾಧಾನ ಪಡಿಸಿ, ಧೈರ್ಯದಿಂದಿರಿ, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗುವುದರಲ್ಲಿ ನನಗೆ ಸಂಶಯವಿಲ್ಲ ಎಂದಿದ್ದರು. ಅವರಿಬ್ಬರೂ ಒಳಗೊಳಗೇ ರೋಧಿಸುತ್ತಿದ್ದರು. ಇವನ ವಿಶೇಷ ಕೋರಿಕೆಯನ್ನು ಮನ್ನಿಸಿದ ಆಸ್ಪತ್ರೆಯ ಅಧಿಕಾರಿಗಳು ಮೇ ೩೧ರ ರಾತ್ರಿ ಅವರಿಬ್ಬರೂ ಒಂದೇ ಕೊಠಡಿಯಲ್ಲಿರಲು ಅವಕಾಶ ಮಾಡಿಕೊಟ್ಟಿದ್ದರಂತೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮರುದಿನ ೮ ಗಂಟೆಗೆ ಸರಿಯಾಗಿ ಶೋಭನಾಳನ್ನು ಆಪರೇಶನ್ ಥಿಯೇಟರ್ಗೆ ಕರೆದೊಯ್ದರು. ೮.೧೫ಕ್ಕೆ ಇವನನ್ನೂಎಳೆದುಕೊಂಡು ಹೋದರು. ಕಣ್ಣಿಗೆ ಕಾಣುವಷ್ಟು ದೂರದವರೆಗೆ ಗೆಳೆಯ ಕೃಷ್ಣ ಭಟ್ಟರನ್ನು, ಗೆಳತಿ ವಿದ್ಯಾರನ್ನೂ ನೋಡುತ್ತಿದ್ದ. ಅವರು ಕೈಬೀಸಿದಾಗ ಇವನೂ ಮುಗುಳ್ನಕ್ಕಿದ್ದನಂತೆ. ಆಪರೇಶನ್ ಥಿಯೇಟರ್ನಲ್ಲಿ ಹೆಂಡತಿಯನ್ನು ಇವನು ಕ್ಷಣ ಮಾತ್ರ ನೋಡಿದ್ದೆ. ಅಷ್ಟರಲ್ಲಿ ಅವರು ಇವನ ಅಂಗಿಯನ್ನು ಕಳಚಿದ್ದರು. ಜೊತೆಗಿದ್ದ ವೈದ್ಯರು ಛಳಿಯಾಗುವುದೇ? ಅಂತ ಕೇಳಿದ್ದಷ್ಟೇ ನೆನಪು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮತ್ತೆ ಕಣ್ಣು ಬಿಟ್ಟಾಗ ಅಪರಾಹ್ನ ೩ ಗಂಟೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ದಾದಿಯರಿಬ್ಬರೂ ಅವನ ಸುತ್ತ ಕುಳಿತಿದ್ದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇವನು ಕಣ್ಣು ಬಿಟ್ಟೊಡನೆ ಕೈ ಹಿಡಿದು ಮುಗುಳ್ನಕ್ಕ ಅವರು ಡಾ.ಮೋಹಿತ್ ಮತ್ತು ಸರ್ಜನ್ ಡಾ. ಪಿ.ಬಿ. ಸಿಂಗ್ ಅವರಿಗೆ ಸುದ್ಧಿ ತಲುಪಿಸಿದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ನಾಲ್ಕಾರು ನಿಮಿಷಗಳಲ್ಲಿ ಅವರು ಆತನ ಕಣ್ಣೆದುರು ಹಾಜರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮಿ. ಬಿಳಿಮಲೆಯವರೇ ಹೇಗಿದ್ದೀರಿ?ಡಾ.ಸಿಂಗ್ ಕೇಳಿದ್ದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಚೆನ್ನಾಗಿದ್ದೇನೆ ಸರ್, ಆಪರೇಶನ್ ಎಷ್ಟು ಹೊತ್ತಿಗೆ? ಮುಗ್ಧವಾಗಿ ಪ್ರಶ್ನಿಸಿದ್ದ ಇವನು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಪಕ್ಕದಲ್ಲಿದ್ದ ಡಾ.ಮೋಹಿತ್ ನಗುತ್ತಾ ಹೇಳಿದ್ದರು, ಆಪರೇಶನ್ ಆಗಿದೆ, ದೇವರ ದಯದಿಂದ ಅದು ಯಾವ ತೊಂದರೆಯೂ ಇಲ್ಲದೆ ಮುಗಿದಿದೆ.ನಿಮ್ಮ ಶ್ರೀಮತಿಯವರೂ ಆರಾಮವಾಗಿದ್ದಾರೆ, ಅಭಿನಂದನೆಗಳು ಎಂದು ಕೈ ಹಿಡಿದು ದಾದಿಯರಿಗೆ ಏನೋ ಸೂಚನೆ ನೀಡಿ ಮತ್ತೆ ಬರುವೆನೆಂದು ಹೇಳಿ ಹೊರಟು ಹೋದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇವನು ಅವಕ್ಕಾಗಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮುಂದಿನ ಕೆಲವು ದಿನಗಳು ಮಹಾ ಅನಿಶ್ಚಿತತೆಯ ದಿನಗಳು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಯಾವ ಕ್ಷಣದಲ್ಲೂ, ಯಾವ ದಿನದಲ್ಲೂ ಆತನ ದೇಹ ಆ ಹೊಸ ಕಿಡ್ನಿಯನ್ನು ಒಲ್ಲೆ ಎಂದು ತಿರಸ್ಕರಿಸಬಹುದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆತ ಯೋಚಿಸುತ್ತಿದ್ದ, ಆಕೆಯೇ ಮನಸಾ ಒಲಿದಿತ್ತ ಕಿಡ್ನಿಯದು, ನನ್ನ ದೇಹ ಯಾಕಾದರೂ ತಿರಸ್ಕರಿಸುತ್ತದೆ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವನ ನಿರೀಕ್ಷೆ ಸುಳ್ಳಾಗಲಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಸರ್ಜರಿಯ ಮೂರನೇ ದಿವಸಕ್ಕೆ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ದೇಹದಲ್ಲಿನ ಅನಗತ್ಯ ನೀರೆಲ್ಲ ಆರಿ ಹೋಯಿತು,</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಬೆರಳುಗಳು ಬಾಗತೊಡಗಿದವು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಯೂರಿನ್ ಕ್ರಿಯೇಟಿನೈನ್ ೦.೮ ರಲ್ಲಿ ಸ್ಥಗಿತಗೊಂಡಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮುಂದಿನ ಐದೇ ದಿವಸದಲ್ಲಿ ಶೋಭನಾಳನ್ನು ಮನೆಗೆ ಕಳಿಸಿದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವಳು ಅವನಿಗಾಗಿ ಕಾಯತೊಡಗಿದಳು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇವನೋ ೧೨ ದಿವಸಗಳವರೆಗೆ ಆಸ್ಪತ್ರೆಯಲ್ಲಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅದು ಚಿನ್ನದ ಪಂಜರದ ವಾಸ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮಲೆಯಾಳೀ ದಾದಿಯರ ಅಕ್ಕರೆಯ ಸೇವೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವರು ಬೆಳಗ್ಗೆ ಅವನನ್ನು ಎಬ್ಬಿಸಿ ಪೂರ್ತಿ ಬೆತ್ತಲಾಗಿಸುತ್ತಾರೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇಡೀ ದೇಹವನ್ನು ಸ್ಪಂಜಿನಿಂದ ಶುದ್ಧಗೊಳಿಸುತ್ತಾರೆ. ಹೊಸ ಬಟ್ಟೆ ಹಾಕಿಸುತ್ತಾರೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವನೊಮ್ಮೆ ದಾದಿ ಟ್ರೇಸಿಗೆ ಹೇಳಿದ್ದ, ನನ್ನ ಅಮ್ಮನ ಆನಂತರ ಹೀಗೆ ನನ್ನನ್ನು ನೋಡಿದವರು ಮತ್ತು ಸೇವೆ ಮಾಡಿದವರು ನೀವು ಮಾತ್ರ. ನನಗೆ ಮದರ್ ತೆರೆಸಾ ನೆನಪಾಗುತ್ತಿದ್ದಾರೆ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಟ್ರೇಸಿ ಉತ್ತರಿಸಿದ್ದಳು ಪ್ರತಿ ರೋಗಿಯನ್ನು ನಾವು ಮಗುವಿನ ಹಾಗೆ ನೋಡುತ್ತೇವೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಬೇರೊಬ್ಬರ ದೇಹವನ್ನು ಇಷ್ಟೊಂದು ಕಾಳಜಿಯಿಂದ ನೋಡುವ ರೀತಿಗೆ ಆತ ಬೆಚ್ಚಿ ಬಿದ್ದಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮಣಿಪುರದ ದಿಮಿತಾ ದೀದಿ, ನಾಗಲ್ಯಾಂಡಿನ ತಾಯ್ ದೀದಿ, ಕೊಟ್ಟಾಯಂನ ಶನೀಶ್, ದೆಹಲಿಯ ಜಗನ್ನಾಥ್, ಎಷ್ಟೊಂದು ಸೇವೆ ಮಾಡಿದರು?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹಣಕ್ಕಾಗಿ ಕೆಲಸ ಮಾಡುವವರಿಗೆ ಇಷ್ಟೊಂದು ನಿಷ್ಠೆ ಬರಲಾರದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>೧೩ನೇ ದಿನ ಮನೆಗೆ ಅವನನ್ನು ಮನೆಗೆ ಕಳಿಸಲಾಯಿತು. ಡಾ. ಮೋಹಿತ್, ಡಾ.ಪಿ ಬಿ ಸಿಂಗ್, ಡಾ. ಜೆನ್ಸಿ ಮರಿಯಂ, ಡಾ. ಅಂಜುಮ್ ಗುಲಾಟಿ, ಡಾ. ಶಶಿ, ದಾದಿಯರು -ಹೀಗೇ ಎಲ್ಲರೂ ಕೈ ಬೀಸಿ ಅವನನ್ನು ಬೀಳ್ಕೊಟ್ಟರು. ಈ ಕಡೆಯಿಂದ ಮಗ ಅನನ್ಯ, ಗೆಳೆಯ ಕೃಷ್ಣ ಭಟ್, ವಿದ್ಯಾ ಕೋಳ್ಯೂರು ಆತನನ್ನು ಮನೆಗೆ ಕರೆದೊಯ್ಯಲು ಸಿದ್ಧರಾದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಆಸ್ಪತ್ರೆ ಮೆಟ್ಟಲಿಯಿಳಿತ್ತಲೇ ಏನೋ ಕಳಕೊಂಡ ವಿಚಿತ್ರ ದುಗುಡ!</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮನೆಗೆ ತಲುಪುತ್ತಲೇ ಅವನಿಗೆ ಮಂಗಳೂರಿನಿಂದ ಶ್ರೀನಿವಾಸ ಕಾರ್ಕಳನಿಂದ ಕರೆ, ಈ ನಡುವೆ ನಮ್ಮ ಕಕ್ಕಿಲ್ಲಾಯರು, ಏಣಗಿ ನಟರಾಜ್ ತೀರಿಕೊಂಡದ್ದು ನಿಮಗೆ ತಿಳಿಯಿತಾ?</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಅವನ ಮನಸ್ಸು ೩೨ ವರ್ಷಗಳ ಹಿಂದಿನ ಕ್ರಾಂತಿಕಾರಿ ದಿನಗಳ ಕಡೆಗೆ ಹೊರಳಿಕೊಂಡಿತು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮತ್ತೆ ಒಂದೆರಡು ದಿನಗಳಲ್ಲೇ ತನ್ನೆಲ್ಲ ಗೆಳೆಯರಿಗೆ ಆತ ಎಸ್.ಎಂ.ಎಸ್. ಕಳಿಸಿದ್ದ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಪರಶಿವನಿಗೆ ಮೂರು ಕಣ್ಣು, ನನಗೋ ಮೂರು ಕಿಡ್ನಿ. ನನ್ನ ಪತ್ನಿಯ ಒಂದು ಕಿಡ್ನಿ ನನ್ನಲ್ಲಿದೆಯಾದ್ದರಿಂದ ನಿಜವಾದ ಅರ್ಥದಲ್ಲಿ ನಾನೀಗ ಅರ್ಧನಾರೀಶ್ವರ.ಜೊತೆಗೆ ತ್ರಿ ಮೂತ್ರಪಿಂಡ ಧಾರಿ, ಭಗವಂತನಿಗೂ ಮಿಗಿಲು</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>————————</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಕತೆಯಿಂದ ನಾವು ಕಲಿಯಬೇಕಾದ ನೀತಿ:</b></span><br />
<span style="color: purple; font-size: large;"><b><br /></b></span>
<span style="color: purple; font-size: large;"><b>ಕಾಯುತಿಹುದು ಸಾವು ಇಂದು ಸಂಜೆಗೆ, ನಾಳೆ ಮುಂಜಾನೆಯೂ ಬಂದೀತು ಅದು ಮೆಲ್ಲಗೆ.</b></span><br />
<span style="color: purple; font-size: large;"><b><br /></b></span>
<span style="color: purple; font-size: large;"><b>ಇಂದೇ ಕಡೆ ರಾತ್ರಿಯೆಂದು ದೇವರೇ ಹೇಳಿದರೂ, ನೆನೆ ಹಾಕಿಡು ಉದ್ದು ನಾಳೆ ಬೆಳಗ್ಗಿನ ಇಡ್ಳಿಗೆ.</b></span></div>
B.M.BASHEERhttp://www.blogger.com/profile/14436644887076126519noreply@blogger.com4tag:blogger.com,1999:blog-3037848766175505211.post-53795245904400044232017-01-04T00:06:00.003-08:002017-01-04T00:09:22.239-08:00ದುಬಾರಿ ಬಟ್ಟೆ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhsL3ztKZ2RH6SCqgvJIKUx8jirMIrY36eUH2eeJ-4VVgByrlA584CPHyYpgBoK6MaDPXlTOnzRYHi5dUFmLEQvE43tkXKWKFqzwLlvh5K5z9nsMq7jf8IP2MmsprdoBGSgXmanU2sw6KGK/s1600/butterfly.jpg" imageanchor="1" style="margin-left: 1em; margin-right: 1em;"><span style="color: blue; font-size: large;"><b><img border="0" height="320" src="https://blogger.googleusercontent.com/img/b/R29vZ2xl/AVvXsEhsL3ztKZ2RH6SCqgvJIKUx8jirMIrY36eUH2eeJ-4VVgByrlA584CPHyYpgBoK6MaDPXlTOnzRYHi5dUFmLEQvE43tkXKWKFqzwLlvh5K5z9nsMq7jf8IP2MmsprdoBGSgXmanU2sw6KGK/s320/butterfly.jpg" width="320" /></b></span></a></div>
<div style="background-color: white; margin-bottom: 6px; text-align: left;">
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ತಾಯಿ ತೀರಿ ಹೋದ ದಿನ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಬಟ್ಟೆ ಅಂಗಡಿಗೆ ಹೋದೆ</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಕಳೆದ ಹಬ್ಬಕ್ಕೆ ಸೀರೆ ಕೊಡಿಸಿರಲಿಲ್ಲ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಬೋಳಾದ ಕೈಗಳಿಗೆ ಚಿನ್ನದ ಬಳೆ ತೊಡಿಸಲಾಗಲೇ ಇಲ್ಲ ... </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಹೀಗೆ ಏನೇನೋ ಪಾಪ ಪ್ರಜ್ಞೆಯ ಜೊತೆ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ದಫನಕ್ಕೆ ಬೇಕಾದ ಬಿಳಿ ಬಟ್ಟೆ ಕೇಳಿದೆ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಒಂದಿಷ್ಟು ಬೆಲೆ ಜಾಸ್ತಿಯದ್ದು ಇರಲಿ ಎಂದೆ</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b><br /></b></span></span>
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಅಂಗಡಿಯಾತ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>"ಯಾರು ಸರ್ ?" ಎಂದು ಕೇಳಿದ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>"ಅಮ್ಮ" ಎಂದೆ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಅವನು ಒಂದು ಕ್ಷಣ ಮೌನವಾದ ...</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b> ಬಳಿಕ ತಣ್ಣಗೆ ನುಡಿದ</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>"ಸರ್, ಹೆಣಕ್ಕೆ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಕಡಿಮೆ ದರದ ಹತ್ತಿ ಬಟ್ಟೆಯೇ ಚೆನ್ನ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ದುಬಾರಿ ಬಟ್ಟೆಯಿಂದ ಹೆಣ ಬೆಂದು ಬಿಡುತ್ತದೆ</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಅಗ್ಗದ ಬಿಳಿ ಬಟ್ಟೆ ಹೆಣವನ್ನು ತಣ್ಣಗಿಡುತ್ತದೆ"</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಎನ್ನುತ್ತಾ ಇದ್ದುದರಲ್ಲೇ ಅಗ್ಗದ </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಬಿಳಿ ಬಟ್ಟೆಯನ್ನು ನನ್ನ ಮುಂದಿಟ್ಟ ..</b></span></span><br />
<div style="font-family: helvetica, arial, sans-serif; line-height: 19.32px;">
<br /></div>
</div>
<div class="text_exposed_show" style="background-color: white; display: inline; font-family: Helvetica, Arial, sans-serif; line-height: 19.32px; text-align: left;">
</div>
</div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-16587818033632439762017-01-02T00:49:00.003-08:002017-01-02T00:49:28.741-08:00ವಿಮರ್ಶೆ: ಬಶೀರ್ ಕಾವ್ಯದ ನೆಪದಲ್ಲಿ ಆಧ್ಯಾತ್ಮ,ಭಕ್ತಿ ಮತ್ತು ರಾಜಕಾರಣ ಕುರಿತು ಒಂದು ಧ್ಯಾನ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhkXPwbFUY3i1UnFP91mCGzYmmO7em5rBct8ku72zamQCJS5eGtLTs0lPtMUagACFBBk2AXK4FjhwBKHPVWlUJBrilVZGwWotjWstc-xTXg5L0igvSWkAWfuwamsrRdxJNHV-DmwmOjtZgy/s1600/book+bm+final.jpg" imageanchor="1" style="margin-left: 1em; margin-right: 1em;"><span style="color: blue; font-size: large;"><b><img border="0" height="320" src="https://blogger.googleusercontent.com/img/b/R29vZ2xl/AVvXsEhkXPwbFUY3i1UnFP91mCGzYmmO7em5rBct8ku72zamQCJS5eGtLTs0lPtMUagACFBBk2AXK4FjhwBKHPVWlUJBrilVZGwWotjWstc-xTXg5L0igvSWkAWfuwamsrRdxJNHV-DmwmOjtZgy/s320/book+bm+final.jpg" width="211" /></b></span></a></div>
<div style="text-align: left;">
<b style="font-size: x-large;"><span style="color: #351c75;">ವಿಮರ್ಶೆ</span><span style="color: purple;">-ನೆಲ್ಲುಕುಂಟೆ ವೆಂಕಟೇಶ್</span></b></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>1</b></span></div>
<div style="text-align: left;">
<span style="color: blue; font-size: large;"><b>‘ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ …ಸೂಫಿಯ ಕಣ್ಣಲ್ಲಿ ಹನಿಗಳು’ ಎಂಬುದು ಬಿ.ಎಂ. ಬಶೀರರ ಸಣ್ಣ ಪದ್ಯಗಳ ಗುಚ್ಛ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಇದರಲ್ಲಿ 124 ಪದ್ಯಗಳಿವೆ. ಮಂಗಳೂರಿನ ಇರುವೆ’ಪ್ರಕಾಶನ 2015 ರಲ್ಲಿ ಈ ಸಂಕಲನವನ್ನು ಪ್ರಕಟಿಸಿದೆ. ಈ ಕೃತಿ ನನಗೆ ಆಕರ್ಷಕವೆನ್ನಿಸಿದ್ದು ಈ ಕಾರಣಕ್ಕೆ; ಇದನ್ನು ಒಬ್ಬ ಮೌಲ್ವಿಗೆ ಅರ್ಪಿಸಲಾಗಿದೆ. ಅರ್ಪಣೆ ಈ ರೀತಿ ಇದೆ, ‘ನನ್ನನ್ನು ಸಹಿಸಿಕೊಳ್ಳಲಾಗದ ಮೌಲ್ವಿ ಒಂದು ದಿನ ಬೆತ್ತ ಹಿಡಿದು ಬಲವಂತವಾಗಿ ಮದ್ರಸದಿಂದ ಹೊರದಬ್ಬಿದರು! ನನ್ನ ಆಧ್ಯಾತ್ಮದ ಕಲಿಕೆ ಅಲ್ಲಿಂದಲೇ ಆರಂಭವಾಯಿತು,. ಆ ಮೌಲ್ವಿಗೆ ಕೃತಜ್ಞ’ ಎನ್ನಲಾಗಿದೆ. ಇದು ಅರ್ಪಣೆಯ ರೂಢಿಗತ ಜಾಡು ಮುರಿದ ಹೊಸ ಮಾದರಿ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಧಾರ್ಮಿಕ ಸಂಸ್ಥೆಯೊಂದರಿಂದ ಹೊರದಬ್ಬಿಸಿಕೊಳ್ಳುವುದೆಂದರೆ, ಸಮುದಾಯದ ಧಾರ್ಮಿಕ ಅಸ್ಮಿತೆಯನ್ನು ನಿರಾಕರಿಸುವುದೂ ಆಗಿರುತ್ತದೆ. ಇದು ನೋವಿನ ವಿಚಾರವಾಗುವುದರ ಬದಲಿಗೆ, ಬಯಲಿಗೆ ಬಂದಾಗ ಕವಿಗೆ ನಿರಾಳ ಭಾವ ಆವರಿಸಿದಂತಾಗುತ್ತದೆ. ಹಾಗಾಗಿಯೇ ‘ಬೆತ್ತ ಹಿಡಿದು ಹೊರದಬ್ಬಿದಾತ ಕಲಿಕೆಗೆ ದಾರಿ ಕಲ್ಪಿಸಿದನೆಂಬ ಕಾರಣಕ್ಕೆ ಆಕರ್ಷಕ.</b></span></div>
<div style="text-align: left;">
<span style="color: blue; font-size: large;"><b>ಕಟ್ಟಡದಿಂದ ಬಯಲಿಗೆ ಬಂದ ಈ ಸೂಫಿ ಕವಿ ‘ಸ್ಥಾವರ ರೂಪದ’ ಧಾರ್ಮಿಕ ಆಚರಣೆಗಳ ವಿರುದ್ಧ ದಂಗೆ ಆರಂಭಿಸುತ್ತಾನೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಬಯಲಲ್ಲಿ, ಶೂನ್ಯದಲ್ಲಿ, ಬಡವನಲ್ಲಿ, ಹಸಿದವನ ಕಣ್ಣುಗಳಲ್ಲಿ ದೇವರನ್ನು ಹುಡುಕಲಾರಂಭಿಸುತ್ತಾನೆ. ಸೂಫಿ ಕವಿಗೆ ಉಳ್ಳವರು ಮಸೀದಿ, ಮಂದಿರಗಳ ಹೆಸರಲ್ಲಿ ಮೋಸ ಮಾಡುತ್ತಿದ್ದಾರೆಂದು ಅನ್ನಿಸಲಾರಂಭಿಸುತ್ತದೆ. ವ್ಯಂಗ್ಯ ಮತ್ತು ವ್ಯಥೆಗಳಲ್ಲಿ ಪದ್ಯಗಳು ಮೈದಳೆಯುತ್ತಾ ಹೋಗುತ್ತವೆ. ಎಲ್ಲಿಯೂ ಕೃತಕವೆನ್ನಿಸುವುದಿಲ್ಲ. ಕರುಳು ಸುಟ್ಟುಕೊಂಡಂತೆ ದೇವನೆಂಬ ಪ್ರೇಮಿಯನ್ನು ಹಂಬಲಿಸಿ ಹಾಡುವ, ಕಲ್ಪನೆಯ ಬೊಗಸೆಗೆ ಅವನನ್ನು ತುಂಬಿಸಿಕೊಳ್ಳುವ ಪ್ರಯತ್ನವನ್ನು ರೂಮಿ ಆದಿಯಾಗಿ ಅನೇಕ ಸೂಫಿಗಳು ಮಾಡುತ್ತಾರೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಬಶೀರರು ಬರೆಯುತ್ತಾರೆ.</b></span></div>
<div style="text-align: left;">
<span style="color: blue; font-size: large;"><b>‘ಧರ್ಮ ಪಂಡಿತರು</b></span></div>
<div style="text-align: left;">
<span style="color: blue; font-size: large;"><b>ಕಟ್ಟಿಕೊಟ್ಟ ಬುತ್ತಿಯನ್ನು</b></span></div>
<div style="text-align: left;">
<span style="color: blue; font-size: large;"><b>ಹೇಳಿಕೊಟ್ಟ ಮಾತನ್ನು</b></span></div>
<div style="text-align: left;">
<span style="color: blue; font-size: large;"><b>ಹೊತ್ತುಕೊಂಡು…ಹೊರಟೆ.</b></span></div>
<div style="text-align: left;">
<span style="color: blue; font-size: large;"><b>… …</b></span></div>
<div style="text-align: left;">
<span style="color: blue; font-size: large;"><b>ಅರ್ಧ ದಾರಿಯಲ್ಲೇ ಮುಗಿದು ಹೋಗಿವೆ</b></span></div>
<div style="text-align: left;">
<span style="color: blue; font-size: large;"><b>ನಿನ್ನ ತಲುಪಲು ದಿಕ್ಕು ತಿಳಿಯದೆ</b></span></div>
<div style="text-align: left;">
<span style="color: blue; font-size: large;"><b>ತೊಳಲಾಡುತ್ತಿದ್ದೇನೆ..’</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಪದ್ಯ ಮೇಲು ನೋಟಕ್ಕೆ ಹೊಸದೇನನ್ನು ಹೇಳುತ್ತಿಲ್ಲವೆಂದು ಅನ್ನಿಸಬಹುದು. ಆದರೆ ಪುರೋಹಿತಶಾಹಿಯೆಂಬ ಧಾರ್ಮಿಕ ಮಧ್ಯವರ್ತಿಯ ಮೂಲಕವೇ ದೇವನನ್ನು ತಲುಪಬೇಕಾದ ವ್ಯವಸ್ಥೆಯ ಕುರಿತು ವ್ಯಂಗ್ಯ ಮಾಡುವ ಪರಂಪರೆಗೆ ಸೇರುವುದರಿಂದ, ಸಾವಿರ ಗಟ್ಟಲೆ ವರ್ಷಗಳ ದೊಡ್ಡ ಶಾಲೆಗೆ ಸದಸ್ಯತ್ವವನ್ನು ಕಲ್ಪಿಸಿಕೊಳ್ಳುತ್ತದೆ. ಮಧ್ಯವರ್ತಿಗಳ ವಿರುದ್ಧ ಸಂತರು, ಅವಧೂತರು, ಸೂಫಿಗಳು ಬಂಡೆದ್ದಿದ್ದಾರೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಪುರೋಹಿತಶಾಹಿಗೆ ‘ಭಕ್ತಿಯೆಂಬುದು ತೋರುಂಬ ಲಾಭ’ವೆಂದು ವಚನಕಾರರು ನೇರ ದಾಳಿ ಮಾಡುತ್ತಾರೆ. ಅವರು ಆಕಾರಗಳನ್ನು ಒಡೆದು ಹಾಕಿ ಶೂನ್ಯವನ್ನು, ನಿರಾಕಾರಗಳನ್ನು ಕುರಿತು ಧ್ಯಾನಿಸುತ್ತಾರೆ. ದಕ್ಕಿದ ವಿವೇಚನೆಯನ್ನು ಜನರ ಕೈಗೆ ನೀಡುತ್ತಾರೆ. ಈ ವಿಚಾರದಲ್ಲಿ ಮನುಷ್ಯನಿಗೆ ಹಲವು ಮಿತಿಗಳಿವೆ. ಕಲ್ಪನೆಗಳನ್ನು ಮೂರ್ತ ರೂಪಕ್ಕಿಳಿಸಬೇಕೆಂಬ ಹಂಬಲ ಮತ್ತು ಹಠದ ಮಿತಿ ಅವು. ವೈದಿಕ ಶಾಹಿಯ ಮುಖ್ಯ ಶಕ್ತಿಯಿರುವುದೇ ಸಂಕೇತಗಳಲ್ಲಿ. ಜನರಿಗೆ ಪಟಗಳು ದೈವದಾರಿಯ ನಕಾಶೆಗಳಂತೆ ಅದು ಬಿಂಬಿಸುತ್ತದೆ. ಚೈತನ್ಯವನ್ನು ಇಲ್ಲಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸ್ಥಾವರಗೊಳಿಸಲಾಗುತ್ತದೆ. ಬುದ್ಧ ವಿಷ್ಣುವಿನ ಅವತಾರವಾಗುವುದು, ಬಸವಣ್ಣ ದೇವರಾಗಿ ಜನರ ಮಧ್ಯದಿಂದ ಪ್ರತ್ಯೇಕವಾಗುವುದು ಸಂಕೇತವಾಗುವ ಭಾಗವಾಗಿಯೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಇಂದು ರಾಜಕೀಯ,ಆರ್ಥಿಕ,ಸಾಮಾಜಿಕ,ಸಾಂಸ್ಕೃತಿಕ ಏರು-ಪೇರುಗಳ ಕಾರಣಗಳಿಂದಾಗಿ ಭೀಕರ ಕಷ್ಟಕ್ಕೆ ಸಿಲುಕಿದ ಹಳ್ಳಿಗಳು ನರಕ ಸದೃಶವಾಗುತ್ತಿದ್ದರೆ, ಊರುಗಳಲ್ಲಿನ ದೇವಸ್ಥಾನ, ಮಸೀದಿ, ಚರ್ಚುಗಳು ಅರಮನೆಗಳಂತಾಗುತ್ತಿವೆ. ಬಿದ್ದ ರೈತನ ಹೆಣದ ನಡುವೆ ಘಂಟಾನಾದ, ಆಝಾನ್ ಗಳೆಲ್ಲ ಕ್ರೂರ ವ್ಯಂಗ್ಯದಂತೆ ಕೇಳಿಸುತ್ತವೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಭಾರತದ ಪರಂಪರೆಗಳಲ್ಲಿ ಕಾವ್ಯವೆನ್ನುವುದು ಜನರ ಬದುಕಿನ ಅತಿ ಮುಖ್ಯ ಅಂಶ. ಸಂಭ್ರಮಕ್ಕೂ ಕಾವ್ಯವೇ, ಸೂತಕಕ್ಕೂ ಕಾವ್ಯವೇ! ಶತಮಾನಗಳ ಕಾಲ ವೈದಿಕ ಯಜಮಾನಿಕೆಯನ್ನು ಎದುರಿಸಿದ ಭಕ್ತಿಚಳುವಳಿಯ ಮುಖ್ಯ ಅಸ್ತ್ರ ಹಾಡು ಮತ್ತು ಕಾವ್ಯವೇ. ಇಲ್ಲಿ ನಾಸ್ತಿಕತೆ ಎಂಬುದಿಲ್ಲ. ಇಷ್ಟ ದೈವವೊಂದನ್ನು ರೂಪಿಸಿಕೊಂಡು, ಎದುರಾಳಿಯಾದ ಧಾರ್ಮಿಕ ಮಧ್ಯವರ್ತಿಯನ್ನು ಎದುರುಗೊಳ್ಳಲಾಗುತ್ತದೆ. [ಕವಿ ಬ್ರೆಕ್ಟ್ ‘ಗೆಲಿಲಿಯೋ’ನಾಟಕದಲ್ಲಿ ಪಾತ್ರವೊಂದರಿಂದ ‘ಭೂಮಿ ವಿಶ್ವದ ಕೇಂದ್ರವೆಂದು ಪಾದ್ರಿಗಳು ಯಾಕೆ ಹಠ ಮಾಡುತ್ತಾರೆ ಅಂದರೆ ; ಭೂಮಿ ಚರ್ಚುಗಳ ಸುತ್ತ ಸುತ್ತುತ್ತಿದೆ. ಚರ್ಚುಗಳು ಪಾದ್ರಿಗಳ ಸುತ್ತಾ ಸುತ್ತುತ್ತವೆ ಅದಕ್ಕೆ’ ಎಂದು ಹೇಳಿಸುತ್ತಾನೆ]..</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ವಚನಕಾರರಂತಹ ಸಾಮಾಜಿಕ ಧಾರ್ಮಿಕ, ರಾಜಕೀಯ, ಆರ್ಥಿಕ ಚಳುವಳಿಗಾರರೂ ತಮ್ಮ ಅಭಿವ್ಯಕ್ತಿಗೆ ಕಾವ್ಯದ ನೆರವು ಪಡೆಯುತ್ತಾರೆ. ನಂತರದ ಭಕ್ತಿ ಚಳುವಳಿಯ ಕವಿಗಳೂ ಇದೇ ಮಾದರಿಯನ್ನು ಅಪ್ಪಿಕೊಳ್ಳುತ್ತಾರೆ. ಈ ಮಾದರಿಯಿಂದಾಗಿ ದಾಸರು, ಮೀರಾ, ಕಬೀರ, ತತ್ವಪದಕಾರರು ಜನರ ಪ್ರಜ್ಞೆಯ ಭಾಗವಾಗಿ ಉಳಿದುಕೊಂಡಿದ್ದಾರೆ. ಈ ಮಾದರಿಯ ಪ್ರಮುಖ ಸಮಸ್ಯೆಯೆಂದರೆ ಇಷ್ಟದೈವದ ಹೆಸರಲ್ಲಿ ಏಕಮಾದರಿಯ ದೈವದ ಕಲ್ಪನೆಯನ್ನು ಪ್ರತಿಪಾದಿಸಲಾಗುತ್ತದೆ ಹಾಗೂ ಬಹುತ್ವವನ್ನು ನಿರಾಕರಿಸಲಾಗುತ್ತದೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಆಧುನಿಕ ಕಾವ್ಯದಲ್ಲಿ ಈ ಮಾದರಿ ತುಸು ತೆಳು ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ನವೋದಯದ ನಂತರ ನಾಸ್ತಿಕವಾದ ಹೆಚ್ಚು ಪ್ರಭಾವಶಾಲಿಯಾಗಿರುವಂತೆ ಕಾಣುತ್ತದೆ. ನವೋದಯದಲ್ಲಿ ಕುವೆಂಪುರವರು ಹೊಸ ದೈವದ ಕಲ್ಪನೆಯನ್ನು ಮಂಡಿಸುತ್ತಾರೆ; ಭಾರತಾಂಬೆ ಮತ್ತು ಕನ್ನಡಾಂಬೆ ಎಂಬ ದೈವಗಳು ಅವು. ಸೆಕ್ಯುಲರ್ ಎಂಬಂತಿದ್ದ ಈ ದೈವ ಕಲ್ಪನೆಗಳು ಆಳುವವರ ವಿಕೃತ ರಾಜಕಾರಣಕ್ಕೆ ಇಂದು ಸಾಧನಗಳಾಗಿವೆ. ಕುವೆಂಪು ಸಹ ಬಸವಣ್ಣನಂತೆ ಜನಸಾಮಾನ್ಯರ ದೈವಗಳು, ಜನರ ಶೋಷಣೆಯ ಸಾಧನಗಳು ಎಂದು ನಂಬಿದ್ದರು. ಬಸವಣ್ಣ ಕಲ್ಲುದೈವ, ಮಡಕೆ ದೈವಗಳೆಂದು ಅವುಗಳನ್ನು ನಿರಾಕರಿಸುತ್ತಾನೆ. ಕುವೆಂಪು ಮಹದೇಶ್ವರನ ಬೆಟ್ಟಕಂತೆ ಎಂದು ವ್ಯಂಗ್ಯ ಮಾಡುತ್ತಾರೆ ; ನೋಯುತ್ತಾರೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಏಕದೈವ ಆರಾಧನೆಯ ಸಗುಣ ನಿರಾಕಾರ ದೈವದ ಕಲ್ಪನೆ ಇಸ್ಲಾಂನದು. ಈ ಮಾದರಿಯ ಮೂಲಕ ದೇವರನ್ನು ತಲುಪಲು ಬೇಕಾದ ದಾರಿಯಲ್ಲಿ ಅಡ್ಡವಾಗುವ ಮಧ್ಯವರ್ತಿಯನ್ನು ನಿರಾಕರಿಸಿ ನಡೆಸುವ ಬಂಡಾಯಕ್ಕೆ ಇಲ್ಲಿ ಅವಕಾಶಗಳಿವೆ. ಸೂಫಿಸಂ ಇದಕ್ಕೆ ಅತ್ಯುತ್ತಮ ಮಾದರಿ. ಬಶೀರ್ ಈ ಮಾದರಿಯನ್ನು ವಿಸ್ತರಿಸುತ್ತಿದ್ದಾರೆನ್ನಿಸುತ್ತದೆ. ಇದು ಮಹತ್ವದ ಮಾದರಿ ಎಂಬ ಕಾರಣಕ್ಕೆ ವಿವರಿಸಬೇಕಾಗಿದೆ; ನಮ್ಮ ಆಧುನಿಕ ಕನ್ನಡ ಕವಿಗಳು ಈ ಮಾದರಿಯನ್ನು ತುಸು ಬಿಟ್ಟುಕೊಟ್ಟಂತೆ ಕಾಣುತ್ತದೆ. ನಾಸ್ತಿಕವಾದ ಆಧುನಿಕರ ನಿಲುವು. ಇದು ಜನರಿಂದ ಕಾವುವನ್ನು ದೂರ ಮಾಡಿದ ನಿಲುವೂ ಹೌದು. ಆದರೆ ವ್ಯಂಗ್ಯದ ಮೂಲಕ ದರ್ಶನವನ್ನು [ಸತ್ಯವನ್ನು] ಕಾಣಿಸುವ ಬಗೆ ಆಧುನಿಕರ ಕೈಯಲ್ಲಿ ಪರಿಣಾಮಕಾರಿ ಅಸ್ತ್ರವಾಗುತ್ತದೆ [‘ಮಾತೆ ಜ್ಯೋತಿರ್ಲಿಂಗ ಬೃಹನ್ನಳೆಗೆ-ಎನ್ನುವಾಗ] ಆದರೆ ಭಕ್ತಿ ಕವಿಗಳು ಸತ್ಯದ ಮೂಲಕ ವ್ಯಂಗ್ಯವನ್ನು ಕಾಣಿಸುತ್ತಾರೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಬಶೀರ್ ಕಾವ್ಯದಲ್ಲಿ ಈ ಎರಡೂ ಮಾದರಿಗಳು ಮಿಳಿತಗೊಂಡಿವೆ. ಇಲ್ಲಿ ದೇವರು ಎಂಬುದು ನಿರ್ವಿವಾದಿತ ವಿಚಾರ. ಅದು ಸ್ಥಾವರವೇ? ದಯಾರೂಪಿ ಪ್ರಕೃತಿಯ ಭಾಗವೇ? ಎಂಬುದು ಪ್ರಶ್ನೆ. ಈ ತತ್ವಕ್ಕೆ ಸಂಬಂಧಿಸಿದಂತೆ ಧರ್ಮ ಪಂಡಿತರ ಮತ್ತು ಸೂಫಿಗಳ ನಡುವಿನ ಸಂಘರ್ಷವಿದೆ. ಸೂಫಿ ಆಡಂಬರಗಳಿಂದ ಹೊರಬರಲು ಯತ್ನಿಸುತ್ತಾನೆ. ಸೂಫಿಯೂ ಗುರುವಿಗೆ ಸಂಪೂರ್ಣ ಶರಣಾಗುತ್ತಾನೆ. ಆದರೆ ಜನರ ನೋವಿನ ಜತೆ ನಿಲ್ಲುತ್ತಾನೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಬಶೀರ್ ಬರೆಯುತ್ತಾರೆ.</b></span></div>
<div style="text-align: left;">
<span style="color: blue; font-size: large;"><b>‘ಮಸೀದಿಯ ಅಮೃತಶಿಲೆಯ</b></span></div>
<div style="text-align: left;">
<span style="color: blue; font-size: large;"><b>ನೆಲದ ಹಾಸು ಕನ್ನಡಿಯಂತೆ</b></span></div>
<div style="text-align: left;">
<span style="color: blue; font-size: large;"><b>ಹೊಳೆಯುತಿತ್ತು..</b></span></div>
<div style="text-align: left;">
<span style="color: blue; font-size: large;"><b>ನನ್ನ ದೊರೆಯೇ,</b></span></div>
<div style="text-align: left;">
<span style="color: blue; font-size: large;"><b>ನಿನಗೆಂದು ಬಾಗಿದವರು</b></span></div>
<div style="text-align: left;">
<span style="color: blue; font-size: large;"><b>ಆ ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿ ಸುಖಿಸುತ್ತಿದ್ದಾರೆ’.[30]</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>‘ಮಸೀದಿಯನ್ನು</b></span></div>
<div style="text-align: left;">
<span style="color: blue; font-size: large;"><b>ಅಮೃತಶಿಲೆಯಲ್ಲಿ</b></span></div>
<div style="text-align: left;">
<span style="color: blue; font-size: large;"><b>ಬಗೆ ಬಗೆಯಾಗಿ ಅಲಂಕರಿಸಲಾಗಿದೆ</b></span></div>
<div style="text-align: left;">
<span style="color: blue; font-size: large;"><b>ಇವರು ನನ್ನ ದೊರೆಯ ಮರೆತು</b></span></div>
<div style="text-align: left;">
<span style="color: blue; font-size: large;"><b>ಮಸೀದಿಯನ್ನೇ ಆರಾಧಿಸತೊಡಗಿದ್ದಾರೆ!’[55]</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>‘ಅರಮನೆಯಂತಹ ಮಸೀದಿ!</b></span></div>
<div style="text-align: left;">
<span style="color: blue; font-size: large;"><b>ಅಮೃತಶಿಲೆಯಲ್ಲಿ</b></span></div>
<div style="text-align: left;">
<span style="color: blue; font-size: large;"><b>ದಾನಿಗಳ ಹೆಸರು ಕೆತ್ತಿದ್ದಾರೆ,</b></span></div>
<div style="text-align: left;">
<span style="color: blue; font-size: large;"><b>ರಾತ್ರಿ ನನಗೆ ನರಕದ ಕನಸು ಬಿತ್ತು</b></span></div>
<div style="text-align: left;">
<span style="color: blue; font-size: large;"><b>ನನ್ನ ದೊರೆಯೇ</b></span></div>
<div style="text-align: left;">
<span style="color: blue; font-size: large;"><b>ನರಕದ ಬಾಗಿಲಲ್ಲಿ ಆ ದಾನಿಗಳ ಹೆಸರೂ ಕೆತ್ತಲ್ಪಟ್ಟಿತ್ತು’.[53]</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>‘ಅರಮನೆಯಂತಹ ಹಂಗು</b></span></div>
<div style="text-align: left;">
<span style="color: blue; font-size: large;"><b>ಬೇಡವೆಂದು</b></span></div>
<div style="text-align: left;">
<span style="color: blue; font-size: large;"><b>ಮಸೀದಿಯೆಡೆಗೆ ನಡೆದೆ.</b></span></div>
<div style="text-align: left;">
<span style="color: blue; font-size: large;"><b>ಆದರೆ ಮಸೀದಿಯ ಪುರೋಹಿತನೋ</b></span></div>
<div style="text-align: left;">
<span style="color: blue; font-size: large;"><b>ಅರಮನೆಗೆ ಮುಖ ಮಾಡಿ</b></span></div>
<div style="text-align: left;">
<span style="color: blue; font-size: large;"><b>ಪ್ರಾರ್ಥನೆ ಸಲ್ಲಿಸುತ್ತಿದ್ದ!’[52]</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಈ ನಾಲ್ಕೂ ಪದ್ಯಗಳು ಬಹುಪಾಲು ಒಂದೇ ವಿಚಾರವನ್ನು ಧ್ಯಾನಿಸುತ್ತಿವೆ. ಅರಮನೆ ಮತ್ತು ಗುರುಮನೆಗಳು ದೇಶ, ಕಾಲ, ಧರ್ಮಗಳನ್ನು ಮೀರಿ ಸಮಾಜವನ್ನು ಹಿಂದು ಹಿಂದಕ್ಕೆ ಎಳೆದು ಕಟ್ಟಿಹಾಕಲು ನಿರಂತರ ಪ್ರಯತ್ನಿಸುತ್ತಲೇ ಇವೆ. ಪಟ್ಟಭದ್ರಪಡಿಸಿಕೊಳ್ಳಲು ಒಟ್ಟುಗೂಡುವ ಇವು ಯಾವುದೇ ಕಾಲದ ಅತ್ಯಂತ ದುಷ್ಟ ಮತ್ತು ಅಪಾಯಕಾರಿ ಶಕ್ತಿಗಳು. ನಾಡಿನ ಭೌತಿಕ ಅಭಿವೃದ್ಧಿಯ ವಿಷಯದಲ್ಲಿ ಮುಂದಕ್ಕೂ ಧರ್ಮ,ಸಂಸ್ಕೃತಿಗಳ ವಿಚಾರದಲ್ಲಿ ಮಧ್ಯಕಾಲೀನ ಕಟ್ಟಳೆಗಳಿಗೂ ಏಕಕಾಲದಲ್ಲಿ ಸೇತುವೆ ಕಟ್ಟ ಬಯಸುವ ಧಾವಂತ ಇವಕ್ಕೆ. ಎರಡು ತಲೆ, ಹಲವು ನಾಲಿಗೆಗಳ ಈ ಜೋಡಿಯನ್ನು ಪ್ರತಿಗಾಮಿಗಳೆಂದೋ, ಪುರೋಗಾಮಿಗಳೆಂದೋ ಒಂದು ಇಕ್ಕಳದಲ್ಲಿ ಸಿಲುಕಿಸದಂತೆ ಎಚ್ಚರವಹಿಸುತ್ತವೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಹಾಗಾಗಿಯೇ ಮಸೀದಿಯ ಧ್ವಂಸವೂ, ಅಣುಬಾಂಬು ಪ್ರಯೋಗವೂ ವೈರುಧ್ಯಗಳಿಲ್ಲದ ಕ್ರಿಯೆಗಳಾಗುತ್ತವೆ. ಗುರು ಮತ್ತು ಅರಸುಗಳ ಸಂಬಂಧ ದಿನೇ ದಿನೇ ಬಲಿಷ್ಠವಾಗುತ್ತಿರುವ ಈ ಸಂದರ್ಭದಲ್ಲಿ ಕವಿ ಪ್ರಾಮಾಣಿಕವಾಗಿ ಪ್ರತಿಭಟಿಸದೆ ದಾರಿಯಿಲ್ಲ. ಅದಕ್ಕೂ ಮೊದಲು ತನ್ನ ಮನೆಯ ಯಜಮಾನನ ವಿರುದ್ಧವೂ ಪ್ರತಿಭಟಿಸಬೇಕಾದ ದುರಂತ ಬಂದೊದಗಿರುವುದು ಬರೀ ವಿಪರ್ಯಾಸವಷ್ಟೇ ಅಲ್ಲ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಕಾವ್ಯವನ್ನು ಸಾಂಪ್ರದಾಯಕವಾಗಿ ಓದುವ ಪಂಡಿತರು ಮೇಲಿನ ಪದ್ಯಗಳನ್ನು ಸ್ಲೋಗನ್ನುಗಳೆಂದು ಹಾಗೂ ರೆಟರಿಕ್ಕುಗಳೆಂದು ಹೇಳಿಬಿಡಬಹುದು. ಆದರೆ ಇವು ಕಾಲದ ಅತಿರೇಕಗಳ ವಿರುದ್ಧ ನಡೆಸಿದ ಪ್ರತಿಭಟನೆ ಎನ್ನಿಸುತ್ತವೆ. ದುಡ್ಡಿರುವವನು [ಅವನು ತಲೆಹಿಡುಕ, ಕಳ್ಳ, ಕೊಲೆಗಾರ, ಭೂ ಮಾಫಿಯಾ, ಗಣಿ ಮಾಫಿಯಾದವನಾಗಿದ್ದರೂ] ಸಮುದಾಯದ ಪ್ರತಿಷ್ಠಿತ ವ್ಯಕ್ತಿಯೆನ್ನಿಸಿಕೊಳ್ಳುತ್ತಾನೆ. ಆ ಧಾರ್ಮಿಕ ಕಟ್ಟಡಕ್ಕೆ ಮುಖ್ಯಸ್ಥನಾಗುತ್ತಾನೆ. ಧರ್ಮ ಪಂಡಿತ ಕಾಬಾದೆಡೆಗೆ ತಿರುಗಿ ಪ್ರಾರ್ಥಿಸುತ್ತಿದ್ದರೂ ಬಂಡುಕೋರನಾದ ಕವಿಗೆ ಅರಮನೆಯೆಡೆಗೆ ಆತ ತಿರುಗಿರುವುದು ಕಾಣಿಸುತ್ತದೆ. ರಾಜನ ಆಸ್ಥಾನದಲ್ಲಿ ಕೂತು ಹಾಡಿದ ಕವಿಗಳು, ಸೂಫಿಗಳು ಆಳುವವರಿಗೆ ಏನನ್ನು ಬೋಧಿಸಿರಬಹುದು? ಎಂಬ ಪ್ರಶ್ನೆ ಹುಟ್ಟುತ್ತದೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>’ಕಾಯಾ ನಹೀ ತೇರಿ’ ಎಂದ ಕಬೀರ ಅರಮನೆಯೆಡೆಗೆ ತಿರುಗಲಿಲ್ಲ.’ಲೋಕದ ಕಾಳಜಿ ಮಾಡತೀನಂತಿ.. ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ’ ಎಂದು ಹಂಗಿಸಿದ ಶರೀಫನೂ ಅರಮನೆಯೆಡೆಗೆ ಹೋಗಲಿಲ್ಲ. ಮೊದಲಿನಿಂದಲೂ ಪುರೋಹಿತಶಾಹಿ ಮತ್ತು ಆಳುವವರ ಜುಗಲ್ಬಂದಿಗಳಲ್ಲಿ ಸಮುದಾಯಗಳು ಸಿಲುಕಿ ನಲುಗಿ ಹೋಗಿವೆ ಎಂಬುದು ಅರಿವಿಗೆ ಬರಲಾರಂಭಿಸುತ್ತಿದ್ದಂತೆ ಬಶೀರರ ಪದ್ಯಗಳು ಸ್ಲೋಗನ್ನುಗಳಲ್ಲ ಎನ್ನಿಸುತ್ತವೆ. ’ನರಕದ ಬಾಗಿಲಲ್ಲಿ [ ಮಸೀದಿಯ ಫಲಕದಲ್ಲಿನ] ದಾನಿಗಳ ಹೆಸರು ಕೆತ್ತಲ್ಪಟ್ಟಿತ್ತು ಎಂಬ ಪದಗಳು ಧನಾಡ್ಯರ ಕುರಿತು ಕವಿಯೊಬ್ಬ ಮಾಡುತ್ತಿರುವ ಆತ್ಯಂತಿಕ ವಿಮರ್ಶೆ. ಜೊತೆಗೆ ಕವಿಗೂ ನರಕದ ಕನಸು ಬೀಳುತ್ತದೆ ಎಂಬುದು ಸತ್ಯ ಮತ್ತು ವ್ಯಂಗ್ಯ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಬಶೀರ್ ಬದುಕುತ್ತಿರುವ ಸಮಾಜವೂ ಸೇರಿದಂತೆ ಎಲ್ಲ ಸಮಾಜಗಳೂ ಉಸಿರುಕಟ್ಟಿದ ಸ್ಥಿತಿಯಲ್ಲಿ ಒದ್ದಾಡುತ್ತಿವೆ. ಆದರೆ ಜಾತಿ ಸಮಾಜಗಳಲ್ಲಿ ಬದುಕುತ್ತಿರುವ ದಲಿತ ಮತ್ತು ದಮನಿತರಿಗೆ ಹತ್ತಿರದ ದಮನಕಾರರೆಂದರೆ ಪ್ರಬಲ ಜಾತಿಗಳೆ. ಪುರೋಹಿತಶಾಹಿಯೆಂಬುದು ಅಮೂರ್ತವಾದ ವಿಚಾರ. ಬಶೀರರಿಗೆ ಹಾಗಲ್ಲ. ಇಡೀ ಸಮಾಜವೇ ಧರ್ಮಪಂಡಿತರ ನಿರ್ದೇಶನದಂತೆ ನಡೆಯುತ್ತಿರುವ ಹಾಗೆ ಕಾಣುತ್ತಿದೆ. ಅದರ ಫಲವಾಗಿಯೇ ಐಸಿಸ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಕ್ರಿಯಾಶೀಲವಾಗುವುದು,ಮಹಿಳೆಯರು ವಿವಿಧ ರೂಪಗಳಲ್ಲಿ ಬಂಧಿಯಾಗುವುದು. ಧನಾಡ್ಯ ಶಕ್ತಿಗಳು ಮತ್ತು ಧರ್ಮಪಂಡಿತರು ಒಟ್ಟುಗೂಡಿ ಜನಸಾಮಾನ್ಯರ ಮೇಲೆ ನಡೆಸುತ್ತಿರುವ ದಾಳಿಯ ಬಲಿಪಶುಗಳ ಸಂಖ್ಯೆ ದೊಡ್ಡದು. ಆರ್ಥಿಕ ಅಸಮಾನತೆ ಮತ್ತು ಧಾರ್ಮಿಕ ಶೋಷಣೆ 21 ನೇ ಶತಮಾನದಲ್ಲಿ ಎಲ್ಲ ಸಮಾಜಗಳೂ ಎದುರಿಸುತ್ತಿರುವ ಸಮಸ್ಯೆ. ಹಾಗಾಗಿ ಬಶೀರರ ಸರಳವೆನ್ನಿಸುವ ಪ್ರಶ್ನೆಗಳು ವಿಶ್ವಸ್ಥವಾಗುತ್ತಾ ಹೋಗುತ್ತವೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಬಶೀರರ ಪದ್ಯಗಳಲ್ಲಿ ಪದೇ ಪದೇ ಬರುವ ‘ದೊರೆ’ ಕೂಡಲ ಸಂಗಮ, ಗುಹೇಶ್ವರ, ಚನ್ನಮಲ್ಲಿಕಾರ್ಜುನನಂತವನು. ಇಲ್ಲಿನ ‘ದೊರೆ’ಆಳುವವನು ಮಾತ್ರವೇ? ಆತನಿಗೆ ಪ್ರಾರ್ಥನೆ ಮತ್ತು ನಿವೇದನೆ ಮಾತ್ರ ಸಾಧ್ಯವೇ?. ವಚನಕಾರರು ‘ಒಡಲುಗೊಂಡು ನೋಡು’ ಎಂದು ಸವಾಲು ಹಾಕುತ್ತಾರೆ. ಅದು ಜನಪದರ ಸವಾಲು. ಹಾಗಾಗಿ ವಚನಗಳು ಜನಪದರ ಅಭಿವ್ಯಕ್ತಿಯೂ ಆಗಿಬಿಡುತ್ತವೆ. ಹಳ್ಳಿಯ ಹೆಂಗಸರು, ದೇವರಿಗೆ ‘ನಿನ್ ಮಕಕ್ಕೆ ಮುಳ್ಳಾಕ’ ‘ನಿನ್ ಕಣ್ಣಿಂಗಿ ಹೋಗಾ’ಎಂದು ಬೈಗುಳ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಅವರು ವಾಸ್ತವವಾದಿಗಳು ಮತ್ತು ಭೌತವಾದಿಗಳು. ಈ ರೀತಿಯ ವರ್ತನೆಗಳನ್ನು ಪಶ್ಚಿಮದ ಏಕದೇವತಾರಾಧನೆಯ ಏಕೀಕೃತ ಬುಡಕಟ್ಟುಗಳು ‘ಪೇಗನ್ ರಿಲಿಜನ್’ಎಂದು ಹಂಗಿಸುತ್ತವೆ. ಬಶೀರ್ ಹೀಗೆ ತನ್ನ ದೊರೆಯನ್ನು ಪ್ರಶ್ನಿಸಲಾಗದ, ಅವನೊಂದಿಗೆ ಸಂವಾದ ಮಾಡಲಾಗದ ಸಂಕಟದಲ್ಲಿ ಬರೆಯುತ್ತಾರೆ. ಮಧ್ಯವರ್ತಿಯೆಂಬ ಪುರೋಹಿತನನ್ನು ನಿರಾಕರಿಸದೆ, ತಾವು ನಂಬಿದ ದೇವರಿಗೂ [ಹಾಗೆ ಕರೆಯಬಹುದೇ ಎಂಬ ಅನುಮಾನದೊಂದಿಗೆ] ಸವಾಲು ಹಾಕುವ ದಿಟ್ಟತನ ವಚನಕಾರರದು.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಕಟ್ಟಡಗಳು ಎಷ್ಟು ಕಲುಷಿತವಾಗಿವೆಯೆಂದು ಕವಿ ಬರೆಯುತ್ತಾನೆ.</b></span></div>
<div style="text-align: left;">
<span style="color: blue; font-size: large;"><b>‘ಹೊರಟಾಗ ಈ ಗಾಳಿ</b></span></div>
<div style="text-align: left;">
<span style="color: blue; font-size: large;"><b>ಎಷ್ಟು ಶುದ್ಧವಾಗಿತ್ತು</b></span></div>
<div style="text-align: left;">
<span style="color: blue; font-size: large;"><b>ಮಸೀದಿ, ಮಂದಿರ, ಚರ್ಚುಗಳನ್ನು</b></span></div>
<div style="text-align: left;">
<span style="color: blue; font-size: large;"><b>ಹಾದು ಬಂದಿರಬೇಕು</b></span></div>
<div style="text-align: left;">
<span style="color: blue; font-size: large;"><b>ಉಸಿರಾಟ ಕಷ್ಟವಾಗುತ್ತಿದೆ’.[83]</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ರಾಜಕೀಯಗೊಂಡ ಧರ್ಮದ ಕೊಳೆತ ವಾಸನೆಯ ಸ್ಪರ್ಶವಿದು. ಇದರಿಂದ ತಪ್ಪಿಸಿಕೊಳ್ಳಲು ಕವಿ ಮತ್ತೆ ಮತ್ತೆ ಪ್ರಕೃತಿಯೊಂದಿಗೆ ಬೆರೆತು ನಿಜಗುರುವನ್ನು ಹುಡುಕುತ್ತಾನೆ. ಸಾಂಸ್ಥೀಕೃತಗೊಂಡ ಕಟ್ಟಡಗಳ ನಿರ್ಜೀವಿತನವನ್ನು ರಾಜಕೀಯವನ್ನು ವಿಷಾದಭರಿತ ಭಾಷೆಯಲ್ಲಿ ವಿವರಿಸುತ್ತಾನೆ. ಬಡವನ ಹಸಿವನ್ನು, ಕಣ್ಣೀರನ್ನು, ಕೊನೆಗೆ ನಾಯಿಯೊಂದರ ಹಸಿವನ್ನು ನೀಗಿಸದ ಮನುಷ್ಯನ ಸಂಪತ್ತನ್ನು ವ್ಯಂಗ್ಯ ಮಾಡುತ್ತಾನೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಆಹಾರವು ಧರ್ಮದ ಮುದ್ರೆಯೊತ್ತಿಸಿಕೊಂಡು ಸಮಾಜದ ಬಿರುಕಿಗೆ, ರಕ್ತಪಾತಕ್ಕೆ ಕಾರಣವಾಗುವುದಾದರೆ ಅದನ್ನು ಸಹಿಸುವುದು ಹೇಗೆ?</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>‘ಹಂದಿಯಿರಲಿ,ಗೋಮಾಂಸವಿರಲಿ</b></span></div>
<div style="text-align: left;">
<span style="color: blue; font-size: large;"><b>ಎಸೆಯುವುದೇನೋ ಎಸೆದು ಬಿಟ್ಟಿರಿ</b></span></div>
<div style="text-align: left;">
<span style="color: blue; font-size: large;"><b>ಮಸೀದಿ, ದೇವಸ್ಥಾನದ ಮುಂದೆ ಯಾಕೆ ಎಸೆದಿರಿ?</b></span></div>
<div style="text-align: left;">
<span style="color: blue; font-size: large;"><b>ಹಸಿದವನ ಮನೆಯ ಅಂಗಳಕ್ಕೆ ಎಸೆಯಬಹುದಿತ್ತು</b></span></div>
<div style="text-align: left;">
<span style="color: blue; font-size: large;"><b>ಬಡವನ ‘ಮನೆ’ ಉರಿಯುವ ಬದಲು</b></span></div>
<div style="text-align: left;">
<span style="color: blue; font-size: large;"><b>‘ಒಲೆ’ಉರಿಸಿದ ಪುಣ್ಯ ನಿಮ್ಮದಾಗುತಿತ್ತು’. [123]</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಎನ್ನುವಾಗ ಕವಿಯದು ಮುಗ್ಧತನವಲ್ಲ. ಅದು ರಾಜಕೀಯ, ಮಾನವೀಯ, ಧಾರ್ಮಿಕ ತಿಳುವಳಿಕೆಯ ಫಲ ಎಂದು ಅರಿವಿಗೆ ಬರುತ್ತದೆ. ಪದ್ಯಗಳಿಗಿರುವ ವರ್ತಮಾನದ ತುರ್ತಿನ ರಾಜಕಾರಣದ ಕಾರಣಕ್ಕೆ ನಮ್ಮ ನಿಟ್ಟುಸಿರುಗಳೂ ಆಗುತ್ತವೆ. ನಮ್ಮವೇ ಅನ್ನುವಷ್ಟು ಆಪ್ತವಾಗುತ್ತವೆ. ಕವಿತೆ ಓದುಗನ ಎದೆಯಲ್ಲಿ ಮೊಳಕೆ ಒಡೆಯುವ ಪರಿ ಇದು. ಕವಿತೆಗಳು ಮಂಗಳೂರಿನ ಕನ್ನಡದಲ್ಲಿ ಒಡಮೂಡಿರುವುದರಿಂದ ಅವಕ್ಕೆ ಜಾನಪದ ಸ್ಪರ್ಶದ ತುಸು ಕೊರತೆಯಿದೆ ಎನ್ನಿಸುತ್ತದೆ. ಅದರ ಹೊರತಾಗಿ ಪದ್ಯಗಳು ತಾಜಾತನದಿಂದಾಗಿ ನಮ್ಮೊಳಗೆ ಉಳಿಯುತ್ತವೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಬಶೀರ್ ಬದುಕುತ್ತಿರುವ ಸಮಾಜವೂ ಸೇರಿದಂತೆ ಭಾರತದ ಬಹುತೇಕ ಸಮಾಜಗಳು ಆಂತರಿಕ ಪ್ರಜಾಪ್ರಭುತ್ವವನ್ನು ಕಳೆದುಕೊಂಡ ಸ್ಥಿತಿಗೆ ತಲುಪಿವೆ. ಇದನ್ನು ಅನಂತಮೂರ್ತಿಯವರು ‘ಮಾತು ಸೋತ ಭಾರತ’ ಎಂದು ಕರೆದರು. ಬಶೀರ್ ಬದುಕುತ್ತಿರುವ ಸಮಾಜ ಈಗ ಇನ್ನಷ್ಟು ಅಪ್ರಜಾಪ್ರಭುತ್ವದ ಗುಣಗಳನ್ನು ಬೆಳೆಸಿಕೊಳ್ಳಲಾರಂಭಿಸಿದೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>‘ನನ್ನ ಗುರುವಿನ ಗೋರಿಯ ಮೇಲೆ</b></span></div>
<div style="text-align: left;">
<span style="color: blue; font-size: large;"><b>ಹೊದಿಸಿದ ಚಾದರಗಳನ್ನು ನೋಡುತ್ತಿರುವಾಗ</b></span></div>
<div style="text-align: left;">
<span style="color: blue; font-size: large;"><b>ಆತ ಸತ್ತಿರೋದು ದಿಟ ಎನ್ನಿಸುತ್ತದೆ</b></span></div>
<div style="text-align: left;">
<span style="color: blue; font-size: large;"><b>ಈ ಶಿಷ್ಯ ಹೀಗೆ</b></span></div>
<div style="text-align: left;">
<span style="color: blue; font-size: large;"><b>ದರ್ಗಾದ ಹೊರಗೆ</b></span></div>
<div style="text-align: left;">
<span style="color: blue; font-size: large;"><b>ಚಳಿಯಲ್ಲಿ ನಡುಗುತ್ತಿರುವಾಗ</b></span></div>
<div style="text-align: left;">
<span style="color: blue; font-size: large;"><b>ಆತ ಅಷ್ಟೂ ಚಾದರಗಳನ್ನು</b></span></div>
<div style="text-align: left;">
<span style="color: blue; font-size: large;"><b>ಒಬ್ಬನೇ ಹೊದ್ದು ಮಲಗುತ್ತಿರಲಿಲ್ಲ’.[106]</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಮದ್ರಸದಿಂದ ಹೊರಬಿದ್ದ ಕವಿಗೆ ಕೈ ಹಿಡಿದು ನಡೆಸಬೇಕಾದ ಗುರುವೂ ಸತ್ತು ಗೋರಿಯೊಳಗೆ ಮಲಗಿದ್ದಾನಲ್ಲ ಎನ್ನಿಸಿದಾಗ ಉಂಟಾಗುವ ಏಕಾಂಗಿತನ,ಅಸಹಾಯಕತೆಗಳು ಅಧೀರಗೊಳಿಸಿಬಿಡುತ್ತವೆ.ಇಲ್ಲಿ ಕವಿ ಪರೋಕ್ಷವಾಗಿ ‘ದರ್ಗಾ’ಸಂಸ್ಕೃತಿ ಸೋಲುತ್ತಿರುವುದನ್ನು ಹೇಳುತ್ತಿದ್ದಾನೆಯೇ ಎಂಬ ಗುಮಾನಿ ಹುಟ್ಟುತ್ತದೆ. ಮಸೀದಿಗಳು ವೈಭವೋಪೇತವಾಗಿ ಕಂಗೊಳಿಸುತ್ತಿರುವಾಗ, ದರ್ಗಾಗಳ ಚೈತನ್ಯವನ್ನು ಉದ್ದೇಶಪೂರ್ವಕವಾಗಿ ಕುಗ್ಗಿಸಲಾಗುತ್ತಿದೆ. ದರ್ಗಾ ಸಂಸ್ಕೃತಿಯನ್ನು ನಿರಾಕರಿಸುವುದೆಂದರೆ; ಸಮುದಾಯದ ಬಹುತ್ವವನ್ನು ನಿರಾಕರಿಸುವುದೆಂದರ್ಥ. ಏಕ ತತ್ವದ ಕೊಡೆಯ ಕೆಳಗೆ ಎಲ್ಲರನ್ನೂ ಸೇರಿಸುವ ಹಠದ ಭಾಗವೆಂಬಂತೆ ಮಸೀದಿಗಳು ಮತ್ತು ಆಚರಣೆಗಳು ಕಾಣಿಸುತ್ತವೆ. ಸಂಗೀತ, ಕಾವ್ಯ, ಕುಣಿತವನ್ನು ಸಾಧನವನ್ನಾಗಿಸಿಕೊಂಡು ಆಧ್ಯಾತ್ಮದ ಗುರಿ ತಲುಪಲೆತ್ನಿಸುವ ಆದಿಮ ಬುಡಕಟ್ಟು ಪರಂಪರೆಯಲ್ಲಿನ ಉದಾತ್ತತೆಯನ್ನು ಪ್ರಧಾನ ಇಸ್ಲಾಂ ಸಂಸ್ಕೃತಿ ಗುಮಾನಿಯಿಂದ ನೋಡುತ್ತದೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಸೂಫಿ ಮಾದರಿಯನ್ನು ಹೆಣ್ತನದ್ದು ಎಂದು ವ್ಯಾಖ್ಯಾನಿಸುತ್ತದೆ. ವೀರ್ಯವತ್ತಾದ ಸಂಸ್ಕೃತಿ ಸ್ಥಾಪನೆಯ ಕನಸಿಗೆ ಹೆಣ್ತನವೆಂಬುದು ಅವಮಾನ ಮತ್ತು ಶತ್ರು.ಬಲಪಂಥೀಯ ಸಂಸ್ಕೃತಿಗಳು ಅದನ್ನು ನಿವಾರಿಸಿಕೊಳ್ಳಲು ನಿರಂತರ ಯತ್ನಿಸುತ್ತಿವೆ. ಅದರ ಭಾಗವಾಗಿಯೇ, ಎಷ್ಟೆಲ್ಲ ಆರ್ಥಿಕ ಕಾರಣಗಳಿದ್ದರೂ ಮಧ್ಯ ಏಷ್ಯಾದಲ್ಲಿನ ಒಂದೇ ಧರ್ಮದೊಳಗಿನ ಸಾಂಸ್ಕೃತಿಕ ವೈವಿಧ್ಯತೆ ಭೀಕರ ಹತ್ಯೆಗಳು, ಅತ್ಯಾಚಾರಗಳು, ವಲಸೆಗಳು ಸಂಭವಿಸಲು ಕಾರಣ ಇರಬಹುದು ಎಂಬ ಅರಿವು ಕವಿಗಿರಬಹುದು. ಇಲ್ಲದಿದ್ದರೆ ‘ಗುರು ಸತ್ತಿರೋದು ನಿಜ’ ಕವಿ ಯಾಕೆ ಘೋಷಿಸುತ್ತಾನೆ? ಗುರುವನ್ನು, ದೊರೆಯನ್ನು, ದೇವರನ್ನು ತಲುಪಲು ‘ಶಕ್ತರು’ ಹೇಳಿದ ಮಾರ್ಗಕ್ಕೆ ವಿರುದ್ಧವಾಗಿ ನಡೆದ ಕಾರಣಕ್ಕೆ ಕೊಲೆಯಾಗುವುದಾದರೆ, ಧರ್ಮಕ್ಕೆ ದಯೆಯ ನೆರಳೆಲ್ಲಿದೆ?</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಜೀವಂತವಾದ ಕಾವ್ಯ ಕಾಲದ ಎಲ್ಲ ಅತಿರೇಕಗಳ ವಿರುದ್ಧ ಬಂಡೇಳುವ ಗುಣವನ್ನು ತನ್ನೊಳಗೆ ಉಳಿಸಿಕೊಂಡಿರುತ್ತದೆ. ಸ್ಥಾವರವನ್ನು, ಆಡಂಬರಗಳನ್ನು, ಸರ್ವಾಧಿಕಾರತ್ವವನ್ನು ಅದು ಪ್ರಶ್ನಿಸುತ್ತದೆ. ಮನುಷ್ಯನ ಮೂಲಭೂತ ಚೈತನ್ಯವನ್ನು ಹುಡುಕುತ್ತದೆ ಎಂದರೆ ಅದು ಆತ್ಮವಾದವಲ್ಲ. ವಾಸ್ತವದೊಡನೆ ವ್ಯವಹರಿಸುತ್ತದೆಯೆಂದರೆ ಅದು ಭೌತವಾದವಲ್ಲ. ಎಲ್ಲ ಅಲ್ಲಗಳ ಆಚೆಗೆ ನಿರಂತರ ಕೈಚಾಚುವ ಮಗುವಿನಂತೆ ಕಾವ್ಯ. ಸೂಫಿ ಕಾವ್ಯವೂ ಹಾಗೆಯೇ. ತಾದಾತ್ಮ್ಯವೇ ಅದರ ಆತ್ಯಂತಿಕ ಶಕ್ತಿ. ಪ್ರೇಮಿಯೊಡನೆ, ಗುರುವಿನೊಡನೆ, ನಿಸರ್ಗಸ್ಥ ದೇವರೊಡಗಿನ ತಾದಾತ್ಮ್ಯ ಅದು. ಅದು ಲಿಂಗ-ಭೇದವಿಲ್ಲದೆ ದೇಹದ ಹಂಗಿಲ್ಲದೆ ತಲ್ಲೀನವಾಗುತ್ತದೆ. ಅನೇಕ ಸೂಫಿಗಳು ವ್ಯವಸ್ಥೆಯ ಸ್ಥಾವರವನ್ನು ಪ್ರಶ್ನಿಸಿದವರು. ತತ್ವ ಪದಕಾರರೂ ಹಾಗೆಯೇ. ಆದ್ದರಿಂದಲೂ ಜನಮಾನಸದಲ್ಲಿ ಬಹುಕಾಲ ಬಾಳಿದರು.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>2</b></span></div>
<div style="text-align: left;">
<span style="color: blue; font-size: large;"><b>ಬಶೀರರ ಪದ್ಯಗಳ ಕುರಿತು ಗೆಳೆಯರೊಂದಿಗೆ ಮಾತನಾಡಿದೆ. ಸಣ್ಣ ಸಣ್ಣ ಪದ್ಯಗಳು ಚೆನ್ನಾಗಿವೆ. ಪದ್ಯ ವಿಸ್ತರಿಸುವುದಕ್ಕೆ ಧ್ಯಾನ ಅಗತ್ಯ ಎಂದರು. ಮತ್ತೆ ಓದಿದೆ.ಸಂಕಲನದಲ್ಲಿರುವ ಅಷ್ಟೂ ಪದ್ಯಗಳು ಒಂದೇ ಮರದ ರೆಂಬೆ-ಕೊಂಬೆ-ಹೂವು-ಹಣ್ಣುಗಳಂತೆ ಕಾಣಿಸಲಾರಂಭಿಸಿದವು. ಮತ್ತು ಇಡೀ ಮರವೇ ಆಘಾತಕ್ಕೆ ಸಿಕ್ಕಿ ರೋಧಿಸುತ್ತಿರುವಂತೆ ಪದ್ಯಗಳು ಕೇಳಿಸತೊಡಗಿದವು. ಕಾಲದ ದುರಂತವನ್ನು ಒಡಲೊಳಗಿಟ್ಟುಕೊಂಡು ನುಡಿಯುತ್ತಿರುವ ನುಡಿಗಳಂತೆ ಅವು ಕೇಳಿಸುತ್ತವೆ. ಅಲ್ಲದೆ ಬೇಟೆಗಾರನೊಬ್ಬನ ಬಾಣ ತಾಗಿ ಜೀವವುಳಿಸಿಕೊಳ್ಳಲು ಓಡಿ ಬಂದು ಕಕ್ಕಾಬಿಕ್ಕಿಯಾಗಿ ನಿಂತ ಎಳೆ ಜಿಂಕೆಯೊಂದರ ಹೃದಯದ ತಿದಿಯಂತೆಯೂ, ಸಿಟ್ಟು, ಹತಾಶೆ, ನೋವು ಅವಮಾನ ಏಕೀಭವಿಸಿದ ಚೋಮನ ದುಡಿಯಂತೆಯೂ ಕೇಳಿಸುತ್ತವೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಯುದ್ಧ ಭೂಮಿಯಲ್ಲಿ ವೀಣೆ ನುಡಿಸಲಾಗದು. ನುಡಿಸಿದರೆ ರುದ್ರವೀಣೆ ಮಾತ್ರ ನುಡಿಸಬಹುದೆಂಬಂತೆ ಇಸ್ಮತ್ ಚುಗ್ತಾಯಿ ಕಥೆ ಬರೆಯುತ್ತಾರೆ. ಒಡಲ ದಾಗೀನಿಗೆ ಬೆಂಕಿ ಬಿದ್ದಂತೆ ಚುಟುಕು ಮಾತುಗಳ, ಸಣ್ಣ ವಾಕ್ಯಗಳ ಕಥೆಗಳು, ದೇಶ ಇಬ್ಭಾಗದ ರಕ್ತ ಸಿಕ್ತ ಘಟನೆಗಳನ್ನು ಚುಗ್ತಾಯಿಯವರ ಕಥೆಗಳು ಹೇಳುತ್ತವೆ. ಅವು ಯಾವಾಗ ಬೇಕಾದರೂ ತನ್ನ ಒಡಲು ಸೀಳಬಹುದೆಂಬ ಏದುಬ್ಬಸದಲ್ಲಿ ಭೀತಿಯಲ್ಲಿ ಹುಟ್ಟಿದ ಹಾಡುಗಳಂತೆ ಕೇಳಿಸುತ್ತವೆ. ಒಳ್ಳೆಯ ಕಾವ್ಯ ಅದು ಸೊಗಸಿನ ಕಾರಣಕ್ಕಷ್ಟೆ ಒಳ್ಳೆಯ ಕಾವ್ಯವಾಗುವುದಿಲ್ಲ. ಅದರ ಜನಪರತೆಯ ಕಾರಣಕ್ಕೂ, ಸಂಕೀರ್ಣವಾದ ಸಂಕಟಗಳ ಅಭಿವ್ಯಕ್ತಿಯ ಕಾರಣಕ್ಕೂ ಉತ್ತಮ ಕಾವ್ಯವಾಗಬಹುದು. ನಿಜವಾದ ಕಾವ್ಯ ರಿಯಾಯಿತಿಗಳಿಂದ ಹೊರತಾಗಲು ಪ್ರಯತ್ನಿಸುತ್ತಲೇ ಇರುತ್ತದೆ.</b></span></div>
<div style="text-align: left;">
<span style="color: blue; font-size: large;"><b><br /></b></span></div>
<div style="text-align: left;">
<span style="color: blue; font-size: large;"><b>ಬಶೀರ್ ಕಾವ್ಯ ನಮ್ಮನ್ನು ಕಲಕುವುದು ಪದ್ಯಗಳ ಸೌಂದರ್ಯದ ಕಾರಣಕ್ಕಷ್ಟೇ ಅಲ್ಲ. ಅವುಗಳ ಸಾಂಸ್ಕೃತಿಕ ಮಹತ್ವ ಮತ್ತು, ಪ್ರಾಮಾಣಿಕತೆಯ ಕಾರಣಕ್ಕೂ ಕಾಡುತ್ತವೆ. ಮನುಷ್ಯನ ಘನತೆಯನ್ನು, ಸಮಾಜಗಳ ಬಹುತ್ವವನ್ನು, ಸ್ವಾತಂತ್ರ್ಯವನ್ನು ಪ್ರತಿಪಾದಿಸಬೇಕಾದ ಧರ್ಮ ಮತ್ತು ರಾಜಕೀಯಗಳೆಂಬ ಸಂಸ್ಥೆಗಳು ಕಬ್ಬಿಣದ ಕೈಗಳಾಗಿ ಕೊರಳ ಸುತ್ತ ಆವರಿಸತೊಡಗಿದಾಗ ಕವಿಯೂ ತನ್ನ ಅಸ್ತ್ರದ ಮೂಲಕ ಪ್ರತಿಭಟಿಸುತ್ತಾನಲ್ಲ ಅದೇ ತುಂಬ ಮಹತ್ವದ ವಿಚಾರ. ಕವಿ ದಯೆಯನ್ನು, ಮಾನವೀಯತೆಯನ್ನು ಒತ್ತಾಯಿಸುತ್ತಾನೆ. ಬಿ.ಎಂ.ಬಶೀರ್ ಕೂಡ ಮಾನವೀಯ ಮನಸ್ಸಿನ ಕವಿ. ಹಾಗಾಗಿ ಈ ಸಂಕಲನದಲ್ಲಿ ಅವರ ಅನೇಕ ಪದ್ಯಗಳು ಹೃದಯದಂತೆ ಮಿಡಿಯುತ್ತವೆ. ಅದರ ಮಿಡಿತ ನಮಗೂ ಕೇಳಿಸುತ್ತದೆ ಎಂಬ ಕಾರಣಕ್ಕೆ ಮುಖ್ಯ.</b></span></div>
</div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-41712074940184156882016-12-17T07:28:00.001-08:002016-12-17T07:29:43.997-08:00ಚಿಂದಿ ನೋಟು ಇನ್ನಷ್ಟು <div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhqNJW28LfWruDmwFFOJI7Jjoi4oqGlgERHIJ6o6XsPgxo0dT34zyViAs97TP62KEfW1YMk_2XdH5rPa48DTSxsJ5iN8DK-vpVdjdyur1AVHmk9u2eMj8c1Cp7DY_NkxSaEyZbN3rcDNamG/s1600/atm.jpg" imageanchor="1" style="margin-left: 1em; margin-right: 1em;"><span style="color: blue;"><img border="0" height="212" src="https://blogger.googleusercontent.com/img/b/R29vZ2xl/AVvXsEhqNJW28LfWruDmwFFOJI7Jjoi4oqGlgERHIJ6o6XsPgxo0dT34zyViAs97TP62KEfW1YMk_2XdH5rPa48DTSxsJ5iN8DK-vpVdjdyur1AVHmk9u2eMj8c1Cp7DY_NkxSaEyZbN3rcDNamG/s320/atm.jpg" width="320" /></span></a></div>
<div style="text-align: left;">
<span style="color: blue; font-size: large;"><b>1</b></span></div>
<div style="text-align: left;">
<span style="color: blue; font-size: large;"><b>ಆತನಿಗೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಬಸ್ ಚಾರ್ಜಿಗೆ ಅರ್ಜೆಂಟಾಗಿ ದುಡ್ಡು ಬೇಕಾಗಿತ್ತು. ಎಟಿಎಂ ಹುಡುಕುತ್ತಾ ಹೊರಟ. ಎರಡು ಮೂರು ಎಟಿಎಂ ಬರಿದಾಗಿತ್ತು. ಯಾರೋ ಹೇಳಿದರು ಒಂದು ಕಿಲೋ ಮೀಟರ್ ದೂರದಲ್ಲಿರುವ ಎಟಿಎಂ ನಲ್ಲಿ ಈಗಷ್ಟೇ ದುಡ್ಡು ಹಾಕಿದ್ದಾರೆ. ಸರಿ ಅಲ್ಲಿಗೆ ಧಾವಿಸಿದ. ಅಲ್ಲಿ ತಲುಪುವಷ್ಟರಲ್ಲಿ ದುಡ್ಡು ಮುಗಿದಿತ್ತು. ಸ್ವಲ್ಪ ದೂರದಲ್ಲಿ ಮತ್ತೊಂದು ಎಟಿಎಂ ಕಂಡಿತು. ನೋಡಿದರೆ ನೋ ಕ್ಯಾಶ್ ಬೋರ್ಡ್. ಮಗದೊಂದೆಡೆ ಮೈಲುದ್ದದ ಕ್ಯೂ. ಯಾರೋ ಹೇಳಿದರು ಮುಂದೆ ಇನ್ನೊಂದು ಎಟಿಎಂ ಇದೆ. ಸರಿ, ಮುಂದಕ್ಕೆ ಸಾಗಿದ. ಮುಂದಕ್ಕೆ ... ಮುಂದಕ್ಕೆ ... ಮುಂದಕ್ಕೆ ... ಹೀಗೆ ಸಾಗುತ್ತ ಸಾಗುತ್ತ ಸಾಗುತ್ತ ಕೊನೆಗೆ ತಲೆ ಎತ್ತಿ ನೋಡುತ್ತಾನೆ ಮೆಜೆಸ್ಟಿಕ್ ಕಾಣುತ್ತಿದೆ. ಆತ ಬೆಂಗಳೂರು ತಲುಪಿಯೇ ಬಿಟ್ಟಿದ್ದ. ಬಸ್ ಚಾರ್ಜ್ ಉಳಿಯಿತು.</b></span></div>
<div style="text-align: left;">
<span style="color: blue; font-size: large;"><b>2</b></span></div>
<div style="text-align: left;">
<span style="color: blue; font-size: large;"><b>ಮೋದಿ ಪ್ಲಾಸ್ಟಿಕ್ ಕಾರ್ಡ್ ಬಳಸಿ ಎಂದು ಕರೆ ಕೊಟ್ಟಿದ್ದು ಕೇಳಿ </b></span></div>
<div style="text-align: left;">
<span style="color: blue; font-size: large;"><b>ಇಲ್ಲೊಬ್ಬ ಬಡ ಮಹಿಳೆ ಪ್ಲಾಸ್ಟಿಕ್ ಅಂಗಡಿಗೆ ಹೋಗಿ "ಸ್ವಾಮೀ ಬ್ಯಾಂಕ್ ನಾಗೇ ಅದೇನೋ ಪ್ಲಾಸ್ಟಿಕ್ ಕಾರ್ಡ್ ಬಳಸ್ತಾರಂತೆ. ಅದೊಂದು ಹತ್ತು ಪ್ಲಾಸ್ಟಿಕ್ ಕಾರ್ಡ್ ಕೊಡ್ರಿ" ಎಂದು ಕೇಳಿದಳು. </b></span></div>
<div style="text-align: left;">
<span style="color: blue; font-size: large;"><b>ಅಂಗಡಿಯಾತ ಗೋಡೆಯಲ್ಲಿದ್ದ ಮೋದಿ ಫೋಟೋಗೆ ಕೈ ಮುಗಿದ.</b></span></div>
<div style="text-align: left;">
<span style="color: blue; font-size: large;"><b>೩</b></span></div>
<div style="text-align: left;">
<span style="color: blue; font-size: large;"><b><span style="background-color: white; font-family: "helvetica" , "arial" , sans-serif; line-height: 19.32px;">ಇಂದು ಕಚೇರಿಗೆ ಬರುತ್ತಿರುವಾಗ ಇನ್ನೊಬ್ಬ ರಿಕ್ಷಾ ಚಾಲಕ ನನ್ನ ಹೆಗಲೇರಿದ್ದ. </span></b></span></div>
<span style="color: blue; font-size: large;"><b><span style="background-color: white; font-family: "helvetica" , "arial" , sans-serif; line-height: 19.32px;">"ಏನ್ ಸಾರ್, ದೇಶದ ಕತೆ ಹೀಗಾಯ್ತಲ್ಲ ?" ಎಂದು ಕೇಳಿದ. </span></b></span><br />
<span style="color: blue; font-size: large;"><b><span style="background-color: white; font-family: "helvetica" , "arial" , sans-serif; line-height: 19.32px;">"ನೋಡಿ, ಸಹನೆ ತೆಗೆದು ಕೊಳ್ಳಿ. ಒಂದು ವಾರ ಮೊದಲು ಇದ್ದ ಕಷ್ಟ ಈಗ ಇದೆಯಾ ? ನಿಧಾನಕ್ಕೆ ಎಲ್ಲ ಸರಿ ಆಗತ್ತೆ" ಎಂದೆ </span></b></span><span style="color: blue; font-size: large;"><b><span style="background-color: white; font-family: "helvetica" , "arial" , sans-serif; line-height: 19.32px;">"ಸಾರ್ ನಿಮಗೊಂದು ಕತೆ ಹೇಳುತ್ತೇನೆ, ಕೇಳುತ್ತೀರಾ?" ಅಂದ. </span></b></span><span style="color: blue; font-size: large;"><b><span style="background-color: white; font-family: "helvetica" , "arial" , sans-serif; line-height: 19.32px;">"ಹೇಳಿ ಹೇಳಿ" ಎಂದು ಅನುಮತಿ ಕೊಟ್ಟೆ. ರಿಕ್ಷಾ ಮುಂದೆ ಹೋಗುತ್ತಿದ್ದ ಹಾಗೆ ಅವನು ಕತೆ ಹೇಳ ತೊಡಗಿದ. </span></b></span><br />
<span style="color: blue; font-size: large;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">"ಒಬ್ಬ ಕ್ರೂರ ಜಮೀನ್ದಾರ ಇದ್ದ. ತನ್ನ ಕೆಲಸದವನಿಗೆ ಚಾಟಿಯಲ್ಲಿ ಹೊಡೆದು ಕೆಲಸ ಮಾಡಿಸುತ್ತಿದ್ದ. </span></b></span><span style="color: blue; font-size: large;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ಹೀಗೆ ಇರುವಾಗ ಒಂದು ದಿನ ಆ ದಾರಿಯಲ್ಲಿ ಒಬ್ಬ ಸ್ವಾಮೀಜಿ ಹೋಗುತ್ತಿದ್ದರು. ಅವರು ಜಮೀನ್ದಾರನ ಕ್ರೌರ್ಯ ನೋಡಿದರು. </span></b></span><span style="color: blue; font-size: large;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ಜಮೀನ್ದಾರ ಹೋದ ಬಳಿಕ ಕೆಲಸದಾಳುವಿನಲ್ಲಿ ಕೇಳಿದರು "ಅಯ್ಯ ಇಷ್ಟು ಕ್ರೂರವಾಗಿ ಥಳಿಸುತ್ತಿದ್ದರೂ ಸಹನೆಯಿಂದ ಇದ್ದೀಯಲ್ಲ. ಪ್ರತಿಭಟಿಸಲಾಗುದಿಲ್ಲವೇ ?"</span></b></span><span style="color: blue; font-size: large;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ಕೆಲಸದಾಳು ವಿನೀತನಾಗಿ ಹೇಳಿದ "ಸ್ವಾಮೀಜಿ, ನನ್ನ ಒಡೆಯ ನಿಧಾನಕ್ಕೆ ಒಳ್ಳೆಯವನಾಗುತ್ತಿದ್ದಾನೆ. ಈ ಹಿಂದೆ ಅತ್ಯಂತ ಜೋರಾಗಿ ಥಳಿಸುತ್ತಿದ್ದ. ಈಗ ಸ್ವಲ್ಪ ಮೆದುವಾಗಿ ಥಳಿಸಲು ಆರಂಭಿಸಿದ್ದಾನೆ. ಮುಂದೆ ಇನ್ನಷ್ಟು ಮೆದುವಾಗಿ ಥಳಿಸಬಹುದು. ನಿಲ್ಲಿಸಲೂ ಬಹುದು"</span></b></span><span style="color: blue; font-size: large;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ಕೆಲಸದಾಳುವಿನ ಉತ್ತರಕ್ಕೆ ಸ್ವಾಮೀಜಿ ನಕ್ಕರು "ಎಲವೋ ಮೂರ್ಖ, ನಿನ್ನ ಒಡೆಯ ಮೆದುವಾಗಿ ಥಳಿಸುತ್ತಿಲ್ಲ. ನಿನ್ನ ದೇಹ ನಿಧಾನಕ್ಕೆ ಅದನ್ನು ಸಹಿಸಲು ಕಲಿಯುತ್ತಿದ್ದೆ.ಚಾಟಿ ಏಟಿಗೆ ನಿನ್ನ ದೇಹ ಒಗ್ಗ ತೊಡಗಿದೆ, ಅಷ್ಟೇ ... "</span></b></span><br />
<span style="color: blue; font-size: large;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ರಿಕ್ಷಾ ಚಾಲಕ ತನ್ನ ಕತೆ ನಿಲ್ಲಿಸಿ ನನ್ನ ಕಡೆ ತಿರುಗಿ ಹೇಳಿದ</span></b></span><br />
<span style="color: blue; font-size: large;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">"ಯಾವುದೂ ಸರಿಯಾಗಿಲ್ಲ, ಹಿಂದಿನ ಹಾಗೆಯೇ ಕಷ್ಟ ಇದೆ ಸಾರ್. ಅಭ್ಯಾಸ ಆಗ್ತಾ ಇದೆ... ಅಥವಾ ಅಭ್ಯಾಸ ಮಾಡ್ಕೋ ಬೇಕಾಗಿದೆ ... "</span></b></span></div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-56136165479981774472016-12-15T01:39:00.003-08:002016-12-15T01:47:42.754-08:00ನವೆಂಬರ್ ೯<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgAyrhQ89VMENEG6S3GryP1VDI4kQ-h3JklBy5euTF8X3tKQt1mub0Q4EttisjLtCpkvDF8Zy2lrTnG7pJh7fwybDQ5ds69JbFuvALpwZuGuyU-5Vbrm2VjHMeaYwzzsytdJ48M4gH1cqo6/s1600/tarakari.jpg" imageanchor="1" style="margin-left: 1em; margin-right: 1em;"><img border="0" height="213" src="https://blogger.googleusercontent.com/img/b/R29vZ2xl/AVvXsEgAyrhQ89VMENEG6S3GryP1VDI4kQ-h3JklBy5euTF8X3tKQt1mub0Q4EttisjLtCpkvDF8Zy2lrTnG7pJh7fwybDQ5ds69JbFuvALpwZuGuyU-5Vbrm2VjHMeaYwzzsytdJ48M4gH1cqo6/s320/tarakari.jpg" width="320" /></a></div>
<div style="text-align: left;">
<div style="text-align: left;">
<b style="color: blue;"><span style="background-color: white; font-family: "helvetica" , "arial" , sans-serif; line-height: 19.32px;"><span style="color: blue; font-size: large;">ನಾನು ಕಾರ್ಡ್ ಮೂಲಕ ವ್ಯವಹರಿಸ ಬಲ್ಲೆ </span></span></b></div>
<div style="text-align: left;">
</div>
<div style="text-align: left;">
<span style="font-size: large;"><span style="color: blue;"><b><span style="background-color: white; font-family: "helvetica" , "arial" , sans-serif; line-height: 19.32px;">ಕ್ಯಾಶ್ ಲೆಸ್ ಎಂದು ಮಾಲ್ ಗಳಲ್ಲಿ, ಸೂಪರ್ ಬಜಾರ್ ಗಳಲ್ಲಿ </span></b></span><span style="color: blue;"><b><span style="background-color: white; font-family: "helvetica" , "arial" , sans-serif; line-height: 19.32px;">ಕ್ಯೂ ನಿಂತು</span></b></span></span><br />
<span style="font-size: large;"><span style="color: blue;"><b><span style="background-color: white; font-family: "helvetica" , "arial" , sans-serif; line-height: 19.32px;">ನನ್ನ ದೇಶ ಪ್ರೇಮ ಸಾಬೀತು ಮಾಡ ಬಲ್ಲೆ ... </span></b></span></span><br />
<span style="font-size: large;"><span style="color: blue;"><b><span style="background-color: white; font-family: "helvetica" , "arial" , sans-serif; line-height: 19.32px;">ಆದರೆ ಮಾಲ್ ಗಳಲ್ಲಿ ಮೀನು, ತರಕಾರಿ ಖರೀದಿಸಿ </span></b></span></span><br />
<span style="font-size: large;"><span style="color: blue;"><b><span style="background-color: white; font-family: "helvetica" , "arial" , sans-serif; line-height: 19.32px;">ಬ್ರಾಂಡಡ್ ಚೀಲಗಳಲ್ಲಿ ತುಂಬಿಸಿ ಬಿಂಕದಿಂದ ಮನೆ ಕಡೆ ಸಾಗುವಾಗ </span></b></span></span><br />
<span style="font-size: large;"><span style="color: blue;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ರಸ್ತೆ ಬದಿಯಲ್ಲಿ ಮೀನಿನ ಬುಟ್ಟಿ ಜೊತೆ ಬಿಸಿಲಲ್ಲಿ ಒಣಗುತ್ತಿರುವ ಅಕ್ಕಮ್ಮ</span></b></span></span><br />
<span style="font-size: large;"><span style="color: blue;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"></span></b></span><span style="color: blue;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ತರಕಾರಿ ಅಂಗಡಿಯ ಅಣ್ಣಪ್ಪ </span></b></span></span><br />
<span style="font-size: large;"><span style="color: blue;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ದಿನಸಿ ಅಂಗಡಿಯ ಶೆಟ್ಟರು, </span></b></span></span><br />
<span style="font-size: large;"><span style="color: blue;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ಹಣ್ಣು ಮಾರುವ ಪಿಂಟೋ </span></b></span></span><br />
<span style="font-size: large;"><span style="color: blue;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ಕಬ್ಬಿನ ಹಾಲು ಮಾರುವ ಕಿಟ್ಟಪ್ಪ </span></b></span></span><br />
<span style="font-size: large;"><span style="color: blue;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ಟೀ ಸ್ಟಾಲ್ ನ ಅಬ್ಬೂ ಕಾಕಾ</span></b></span></span><br />
<span style="font-size: large;"><span style="color: blue;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;">ಇವರೆಲ್ಲರ ಕಣ್ಣ ನೋಟಗಳು</span></b></span></span></div>
<div style="text-align: left;">
<span style="color: blue; font-size: large;"><b style="background-color: white; font-family: helvetica, arial, sans-serif; line-height: 19.32px;">ನೇರ ನನ್ನ ಹೃದಯವನ್ನೇ ಇರಿದಂತಾಗುತ್ತದೆ</b><span style="font-size: small;"><span style="color: blue;"><b><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"> </span></b></span></span></span></div>
<span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b>ನವೆಂಬರ್ ೯ರಂದು </b></span></span></span></span><span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b>ನನ್ನ ದೇಶದಿಂದ </b></span></span></span></span><br />
<span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b>ಗಡಿಪಾರು ಮಾಡಲ್ಪಟ್ಟ ಪರದೇಶಿಗಳಂತೆ </b></span></span></span></span><br />
<span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b>ಇವರು ನನ್ನ ಬೀದಿಗಳಲ್ಲಿ ಧೂಳು ತಿನ್ನುತ್ತಾ </b></span></span></span></span><br />
<span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b>ತಮ್ಮ ಪ್ರಧಾನಿಯ ಭಾಷಣಗಳಿಂದ ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ</b></span></span></span></span><br />
<span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b></b></span></span></span></span><span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b>ನವೆಂಬರ್ ೯ರಿಂದ </b></span></span></span></span><span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b>ಇವರೆಲ್ಲ ಒಂದು ದೇಶವಾಗಿ ಸಿಡಿದು ನಿಂತಿದ್ದಾರೆ </b></span></span></span></span><br />
<span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b>ನನಗೆ ಸ್ಪಷ್ಟವಾಗುತ್ತಿದೆ </b></span></span></span></span><br />
<span style="color: blue;"><span style="font-size: large;"><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"><span style="color: blue;"><b>ಅದು ನನ್ನ ದೇಶವಂತೂ ಅಲ್ಲವೇ ಅಲ್ಲ... </b></span></span></span></span><br />
<br />
<br />
<div style="text-align: left;">
</div>
<br />
<div style="-webkit-text-stroke-width: 0px; color: black; font-family: 'Times New Roman'; font-size: medium; font-style: normal; font-variant: normal; font-weight: normal; letter-spacing: normal; line-height: normal; margin: 0px; orphans: auto; text-align: left; text-indent: 0px; text-transform: none; white-space: normal; widows: 1; word-spacing: 0px;">
<span style="color: blue;"><br /></span></div>
</div>
<div style="text-align: left;">
</div>
</div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-29510248381704040612016-12-03T03:22:00.000-08:002016-12-03T03:22:02.035-08:00ನೋಟಿನಲ್ಲೂ ಇರುವೆ <div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEizLtgYKPnRiTVzeRak8Os4GfzAy_9Lw-4gJW7nQwHQkJbWG-arQ8Snlvu6WgyJeLGVtkh1Vx_P46Uqh0R1bhQKt_7_dDHqil2rfXxmQzV8nit6LBKiPCU5SjS7WucO8OfthEH4DRykDdWe/s1600/note.jpg" imageanchor="1" style="margin-left: 1em; margin-right: 1em;"><img border="0" height="297" src="https://blogger.googleusercontent.com/img/b/R29vZ2xl/AVvXsEizLtgYKPnRiTVzeRak8Os4GfzAy_9Lw-4gJW7nQwHQkJbWG-arQ8Snlvu6WgyJeLGVtkh1Vx_P46Uqh0R1bhQKt_7_dDHqil2rfXxmQzV8nit6LBKiPCU5SjS7WucO8OfthEH4DRykDdWe/s320/note.jpg" width="320" /></a></div>
<b><span style="color: purple; font-size: large;">1</span></b><br />
<b><span style="color: blue; font-size: large;">ವೃದ್ಧಾಶ್ರಮದಲ್ಲಿರುವ </span></b><br />
<b><span style="color: blue; font-size: large;">ಹಳೆ ನೋಟುಗಳಿಗೆ </span></b><br />
<b><span style="color: blue; font-size: large;">ಬಂದಿದೆ ಬೆಲೆ</span></b><br />
<b><span style="color: blue; font-size: large;">ಮಗ ಬಂದ </span></b><br />
<b><span style="color: blue; font-size: large;">ಎಂದು ಸಂಭ್ರಮಿಸುತ್ತ </span></b><br />
<b><span style="color: blue; font-size: large;">ಹಣ್ಣೆಲೆ ಕಾರು ಹತ್ತಿತು</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">ಕಾರಿನಿಂದ ಇಳಿದಾಗ </span></b><br />
<b><span style="color: blue; font-size: large;">ಹಳೆನೋಟಿಗೆ ಹೊಳೆಯಿತು </span></b><br />
<b><span style="color: blue; font-size: large;">ಮನೆಯಂತೂ ಅಲ್ಲ </span></b><br />
<b><span style="color: blue; font-size: large;">ಸಾಲು ಸಾಲು ಸವೆದ ಜೀವಗಳು </span></b><br />
<b><span style="color: blue; font-size: large;">ಪಕ್ಕದಲ್ಲೇ ನಿಂತ</span></b><br />
<b><span style="color: blue; font-size: large;">ಮಕ್ಕಳ ಕೈಯಲ್ಲಿ ಹಳೆ ನೋಟುಗಳು </span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">ತಾಯಿ - ಮಗನ ವಿನಿಮಯ </span></b><br />
<b><span style="color: blue; font-size: large;">ಮುಗಿಯಿತು </span></b><br />
<b><span style="color: blue; font-size: large;">ಹಳೆ ನೋಟು </span></b><br />
<b><span style="color: blue; font-size: large;">ಮತ್ತೆ ವೃದ್ಧಾಶ್ರಮ ಸೇರಿತು</span></b><br />
<b><span style="color: purple; font-size: large;">2</span></b><br />
<b><span style="color: blue; font-size: large;">ಬಾಕಿ ಇಟ್ಟ ಕೂಲಿಯನ್ನೆಲ್ಲ </span></b><br />
<b><span style="color: blue; font-size: large;">ಧಣಿ ಒಟ್ಟಿಗೇ ಕೊಟ್ಟಾಗ </span></b><br />
<b><span style="color: blue; font-size: large;">ಅವನ ಕರುಣೆಗೆ ಚೋಮ ಕಣ್ಣೀರಾದ </span></b><br />
<b><span style="color: blue; font-size: large;">ದಿನಸಿಗೆಂದು ಅಂಗಡಿಗೆ ಹೋದಾಗ </span></b><br />
<b><span style="color: blue; font-size: large;">ದಣಿಯ ಕರುಣೆಯ ಗುಟ್ಟು ಗೊತ್ತಾಯಿತು </span></b><br />
<b><span style="color: blue; font-size: large;">ನೋಟಿನಲ್ಲಿರುವ ಗಾಂಧಿ ಯಾಕೋ ಅಳುತ್ತಿದ್ದ</span></b><br />
<b><span style="color: purple; font-size: large;">3</span></b><br />
<b><span style="color: blue; font-size: large;">ಬೆಳ್ಳಬೆಳಗ್ಗೆ ಎದ್ದು ನೋಡುತ್ತೇನೆ </span></b><br />
<b><span style="color: blue; font-size: large;">ಸಾಲು ಸಾಲಾಗಿ ಸಾಗುತ್ತಿವೆ ಇರುವೆಗಳು </span></b><br />
<b><span style="color: blue; font-size: large;">ಬಹುಶಃ ಬ್ಯಾಂಕಿಗೆ ಹೊರಟಿರಬೇಕು</span></b><br />
<b><span style="color: purple; font-size: large;">4</span></b><br />
<b><span style="color: blue; font-size: large;">೨೦೦೦- ೫೦೦ ರೂಗಳ ನೋಟು </span></b><br />
<b><span style="color: blue; font-size: large;">ನಿಷೇಧದ ಲವಲೇಶ ಆತಂಕವಿಲ್ಲದೆ </span></b><br />
<b><span style="color: blue; font-size: large;">ಇರುವೆ, ಚಿಟ್ಟೆ, ಜಿಂಕೆ, ಹುಲಿ </span></b><br />
<b><span style="color: blue; font-size: large;">ಲಕ್ಷಾಂತರ ಜೀವಚರಗಳು </span></b><br />
<b><span style="color: blue; font-size: large;">ಬದುಕುತ್ತಿರೋದೇ ಮನುಷ್ಯನ ಪಾಲಿಗೆ </span></b><br />
<b><span style="color: blue; font-size: large;">ಇಂದಿನ ಸೋಜಿಗ</span></b><br />
<b><span style="color: purple; font-size: large;">5</span></b><br />
<b><span style="color: blue; font-size: large;">ಮಗುವಿನ ಕೈಗೆ</span></b><br />
<b><span style="color: blue; font-size: large;">ಒಂದು ಸಾವಿರ ರೂ. ನೋಟುಗಳ </span></b><br />
<b><span style="color: blue; font-size: large;">ಕಟ್ಟು ಕೊಟ್ಟ ತಂದೆ </span></b><br />
<b><span style="color: blue; font-size: large;">ಅದರ ಕೈಯಲ್ಲಿದ್ದ ಪಿಗ್ಮಿ ಡಬ್ಬ ಒಡೆದು </span></b><br />
<b><span style="color: blue; font-size: large;">ನಾಣ್ಯ ಎಣಿಸುತ್ತಿದ್ದಾನೆ</span></b><br />
<b><span style="color: purple; font-size: large;">6</span></b><br />
<b><span style="color: blue; font-size: large;">ಸದಾ ನನ್ನ ಮುಂದೆ </span></b><br />
<b><span style="color: blue; font-size: large;">ಸಾವಿರದ ನೋಟುಗಳನ್ನು ಎಣಿಸುತ್ತಾ </span></b><br />
<b><span style="color: blue; font-size: large;">ಪರೋಕ್ಷವಾಗಿ ಹಂಗಿಸುವ </span></b><br />
<b><span style="color: blue; font-size: large;">ಗೆಳೆಯನ ಮುಂದೆ </span></b><br />
<b><span style="color: blue; font-size: large;">ಇದೇ ಮೊದಲ ಬಾರಿ, </span></b><br />
<b><span style="color: blue; font-size: large;">ನನ್ನಲ್ಲಿರುವ ನೂರರ </span></b><br />
<b><span style="color: blue; font-size: large;">ಆ ಸವೆದ ನೋಟೊಂದನ್ನು</span></b><br />
<b><span style="color: blue; font-size: large;">ಹೆಮ್ಮೆಯಿಂದ ಹೊರ ತೆಗೆದೆ.</span></b><br />
<b><span style="color: purple; font-size: large;">7</span></b><br />
<b><span style="color: blue; font-size: large;">ಮದುವೆ ಖರ್ಚಿಗೆಂದು ತಂದಿಟ್ಟಿದ್ದ </span></b><br />
<b><span style="color: blue; font-size: large;">ಸಾವಿರದ ಕಟ್ಟುಗಳನ್ನು </span></b><br />
<b><span style="color: blue; font-size: large;">ತೋರಣಗಳಿಗೆ ಕಟ್ಟಿ </span></b><br />
<b><span style="color: blue; font-size: large;">ಮದುವೆ ಮನೆಯನ್ನು </span></b><br />
<b><span style="color: blue; font-size: large;">ಶೃಂಗರಿಸಲಾಗಿದೆ</span></b><br />
<b><span style="color: purple; font-size: large;">8</span></b><br />
<b><span style="color: blue; font-size: large;">ಕಪ್ಪು ಹಣದ ದೊರೆಗಳೆಲ್ಲ </span></b><br />
<b><span style="color: blue; font-size: large;">ನೋಟು ನಿಷೇಧಗಳನ್ನು </span></b><br />
<b><span style="color: blue; font-size: large;">ಸ್ವಾಗತಿಸುತ್ತಿದ್ದಾರೆ </span></b><br />
<b><span style="color: blue; font-size: large;">ಶ್ರೀ ಸಾಮಾನ್ಯ ಬಿಸಿಲಲ್ಲಿ </span></b><br />
<b><span style="color: blue; font-size: large;">ಬ್ಯಾಂಕಿನ ಮುಂದೆ ನಿಂತು </span></b><br />
<b><span style="color: blue; font-size: large;">ಕಪ್ಪಾಗುತ್ತಿದ್ದಾನೆ</span></b></div>
B.M.BASHEERhttp://www.blogger.com/profile/14436644887076126519noreply@blogger.com1tag:blogger.com,1999:blog-3037848766175505211.post-79541146041243704952016-11-29T05:29:00.002-08:002016-11-29T05:30:21.547-08:00ಚಿಂದಿ ನೋಟುಗಳು: ದೇವಲೋಕದ ಬಟ್ಟೆ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhPD0ztODL5C27nYEQfu00E3fkmX6845oXYz1FCIReoF5jPT-A3nICTW0xxBSXws-r5KT7SpHNVolblM0Y_FLo9Vgyd909d4bwhyphenhyphenBfdozeMFdrPTPtZuIHN3UXFNxHS4Y2jsqN9KUO9ahhh/s1600/king-a.jpg" imageanchor="1" style="margin-left: 1em; margin-right: 1em;"><img border="0" height="242" src="https://blogger.googleusercontent.com/img/b/R29vZ2xl/AVvXsEhPD0ztODL5C27nYEQfu00E3fkmX6845oXYz1FCIReoF5jPT-A3nICTW0xxBSXws-r5KT7SpHNVolblM0Y_FLo9Vgyd909d4bwhyphenhyphenBfdozeMFdrPTPtZuIHN3UXFNxHS4Y2jsqN9KUO9ahhh/s320/king-a.jpg" width="320" /></a></div>
<b style="color: blue;"><span style="font-size: large;">ನೋಟು ನಿಷೇಧದ ಬಳಿಕ ನನ್ನ ಎಂದಿನ ತರಕಾರಿ ಅಂಗಡಿಗೆ ಇದೇ ಮೊದಲ ಬಾರಿ ಭೇಟಿ ನೀಡಿದ್ದೆ. ತರಕಾರಿ ಅಂಗಡಿಯವ ನೊಣ ಹೊಡೆಯುತ್ತಿದ್ದ.</span></b><br />
<span style="color: blue; font-size: large;"><b>‘‘ಸಾರ್, ಎಂತ ವ್ಯಾಪಾರ ಇಲ್ಲವಾ?’’ ಕೇಳಿದೆ.</b></span><br />
<span style="color: blue; font-size: large;"><b>ಸಿಟ್ಟಿನಿಂದ ಅವನು ಉತ್ತರಿಸಿದ ‘‘ಸ್ವಇಪ್ ಮಾಡ್ಲಿಕ್ಕೆ ಕಾರ್ಡ್ ಉಂಟಾ ಕೇಳ್ತಾರೆ...ನನ್ನಲ್ಲಿ ತೂಕ ಮಾಡ್ಲಿಕ್ಕೆ ಸರಿಯಾದ ತಕ್ಕಡಿಯೇ ಇಲ್ಲ....ಎಲ್ಲರ ಬದುಕೂ ಈ ಕಾರ್ಡ್ನ ಹೆಸರಲ್ಲಿ ಎಕ್ಕುಟ್ಟಿ ಹೋಗುವುದು ಖಂಡಿತಾ...’’ </b></span><br />
<span style="color: blue; font-size: large;"><b>‘‘ಆದರೂ ಭವಿಷ್ಯಕ್ಕೆ ಈ ಕಾರ್ಡ್ ಒಳ್ಳೆಯದೇ... ಜನ ಎಲ್ಲ ಸಂಭ್ರಮದಲ್ಲಿದ್ದಾರೆ....ಇವತ್ತಿನ ದಿನವನ್ನು ಬಿಜೆಪಿಯೋರು ಸಂಭ್ರಮದ ದಿನ ಅಂತ ಆಚರಿಸುತ್ತಾ ಇದ್ದಾರೆ...ಸಂಭ್ರಮ ಇಲ್ಲದೆ ಸುಮ್ಮಗೆ ಆಚರಿಸ್ತಾರಾ....ರಿಕ್ಷಾದ ಡ್ರೈವರಲ್ಲಿ ನಾನು ಕೇಳಿದೆ...ಅವನೂ ಸಂಭ್ರಮದಲ್ಲೇ ಇದ್ದ....’’ ಸಮಾಧಾನ ಹೇಳಿದೆ </b></span><br />
<span style="color: blue; font-size: large;"><b>ತರಕಾರಿ ಅಂಗಡಿಯವ ಅದಕ್ಕೆ ಉತ್ತರಿಸದೆ ಸ್ವಲ್ಪ ಹೊತ್ತು ವೌನವಾಗಿದ್ದ. </b></span><br />
<span style="color: blue; font-size: large;"><b>ಬಳಿಕ ಇದ್ದಕ್ಕಿದ್ದಂತೆಯೇ ಕೇಳಿದ ‘‘ವ್ಯಾಪಾರ ಹೇಗೂ ಇಲ್ಲ. ಒಂದು ಕತೆ ಹೇಳ್ತೇನೆ ಕೇಳ್ತೀರಾ?’’ </b></span><br />
<span style="color: blue; font-size: large;"><b>ಹೇಳಿದರೆ ಹೇಳಲಿ. ಅದಕ್ಕೇನು ದುಡ್ಡು ಕೊಡಬೇಕಾ?</b></span><br />
<span style="color: blue; font-size: large;"><b> ‘ಹೇಳು’ ಎಂದೆ.</b></span><br />
<span style="color: blue; font-size: large;"><b>ಅವನು ಕತೆ ಹೇಳಲು ಶುರು ಮಾಡಿದ</b></span><br />
<span style="color: blue; font-size: large;"><b>‘‘ಒಂದು ಊರಲ್ಲಿ ಒಬ್ಬ ಸರ್ವಾಧಿಕಾರಿ ರಾಜನಿದ್ದ. ಪ್ರಜೆಗಳ ಸಂಪತ್ತನ್ನೆಲ್ಲ ದೋಚಿ ಖಜಾನೆಯಲ್ಲಿಟ್ಟಿದ್ದ. ತನ್ನದೇ ವೈಭವದ ಲೋಕದಲ್ಲಿ ಕಾಲ ಕಳೆಯುತ್ತಿದ್ದ. ಜಗತ್ತಿನ ಶ್ರೇಷ್ಠವಾದುದೆಲ್ಲ ತನ್ನ ಅರಮನೆಯಲ್ಲಿ ಇರಬೇಕು, ತನ್ನ ಆಸ್ತಿಯಾಗಬೇಕು ಎನ್ನುವುದು ಅವನ ಆಸೆ. ಹೀಗಿರುವಾಗ ಅವನ ಅರಮನೆಗೆ ಅರೇಬಿಯಾದ ಶ್ರೇಷ್ಠ ಬಟ್ಟೆ ವ್ಯಾಪಾರಿಗಳು ಬಂದರು...’’</b></span><br />
<span style="color: blue; font-size: large;"><b> ‘‘...ರಾಜ ಅವರನ್ನು ಕುಳ್ಳಿರಿಸಿ ‘ತನ್ನ ಶ್ರೇಷ್ಠತೆಗೆ ತಕ್ಕ ಬಟ್ಟೆ ನಿಮ್ಮಲ್ಲಿದೆಯೇ?’ ಎಂದು ಕೇಳಿದ. ‘ಹೌದು, ಮಹಾರಾಜರೇ’ ಎಂದು ಆ ಬಟ್ಟೆ ವ್ಯಾಪಾರಿಗಳು ತಮ್ಮ ಪೆಟ್ಟಿಗೆಯಲ್ಲಿದ್ದ ಬಗೆ ಬಗೆಯ ಬಟ್ಟೆಗಳನ್ನು ಬಿಚ್ಚಿ ತೋರಿಸಿದರು. ಯಾವುದೂ ರಾಜನಿಗೆ ಇಷ್ಟವಾಗಲಿಲ್ಲ. ‘ಇದು ನನ್ನ ಸೌಂದರ್ಯ, ಶ್ರೇಷ್ಠತೆಗೆ ತಕ್ಕುದಾಗಿಲ್ಲ’ ಎಂದು ಒಂದೊಂದನ್ನೇ ತಿರಸ್ಕರಿಸುತ್ತಾ ಹೋದ. ವ್ಯಾಪಾರಿಗಳು ತಮ್ಮಲ್ಲಿರುವ ಅತಿ ದುಬಾರಿ, ಶ್ರೇಷ್ಠ ನೂಲುಗಳಿಂದ ತಯಾರಿಸಿದ ಬಟ್ಟೆಯನ್ನು ತೋರಿಸಿದರು. ‘ಇಲ್ಲ, ಇದೂ ನನ್ನ ಶ್ರೇಷ್ಠತೆಗೆ ತಕ್ಕುದಾಗಿಲ್ಲ....’ ಎಂದು ರಾಜ ಅದನ್ನೂ ತಿರಸ್ಕರಿಸಿಯೇ ಬಿಟ್ಟ....’’</b></span><br />
<span style="color: blue; font-size: large;"><b>‘‘....ಬಟ್ಟೆ ವ್ಯಾಪಾರಿಗಳಿಗೆ ಇದರಿಂದ ತೀವ್ರ ಅವಮಾನವಾಯಿತು. ಈ ರಾಜನಿಗೆ ಒಂದು ಪಾಠ ಕಲಿಸಿಯೇ ತೀರಬೇಕು ಎಂದು ಅವರು ನಿರ್ಧರಿಸಿದರು. ಈಗ ಅವರು ಒಂದು ಸುಂದರ ಬಣ್ಣ ಪೆಟ್ಟಿಗೆಯನ್ನು ರಾಜನ ಮುಂದಿಟ್ಟರು ‘ಮಹಾರಾಜ...ಈ ಪೆಟ್ಟಿಗೆಯಲ್ಲಿರುವ ವಿಶಿಷ್ಟ ಬಟ್ಟೆಯನ್ನು ಈ ಜಗತ್ತಿನ ಸರ್ವಶ್ರೇಷ್ಠ ರಾಜನಿಗೆ ಅರ್ಪಿಸಬೇಕು ಎಂದು ನಾವು ತೆಗೆದಿಟ್ಟುಕೊಂಡಿದ್ದೆವು. ಇದೀಗ ಆ ರಾಜ ನೀವೇ ಎನ್ನುವುದು ನಮಗೆ ಮನವರಿಕೆಯಾಯಿತು. ಆದುದರಿಂದ ನಿಮಗೇ ಅರ್ಪಿಸಬೇಕು ಎಂದಿದ್ದೇವೆ...ಆದರೆ ಇದೊಂದು ವಿಶಿಷ್ಟ ದೇವಲೋಕದ ಬಟ್ಟೆ...ಇದನ್ನು ಉಡುವವನಿಗೆ ಕೆಲವು ಪ್ರಮುಖ ಅರ್ಹತೆಯಿರಬೇಕು....’ ಎಂದರು. ರಾಜನೋ ಕುತೂಹಲಗೊಂಡ ‘ಕೊಡಿ ಕೊಡಿ. ನಾನೇ ಸರ್ವ ಅರ್ಹತೆಯುಳ್ಳ ರಾಜ. ಏನಿದರ ವೈಶಿಷ್ಟ?’ ಅತ್ಯಾತುರದಿಂದ ಕೇಳಿದ. ವ್ಯಾಪಾರಿಗಳು ನುಡಿದರು ‘ಸ್ವಾಮಿ...ಇದು ದೇವಲೋಕದ ಮಾಯದ ಬಟ್ಟೆ. ಈ ಬಟ್ಟೆಯನ್ನು ಬಂಗಾರದ ನೂಲುಗಳಿಂದ ನೇಯಲಾಗಿದೆ. ವಜ್ರದ ಹರಳುಗಳಿಂದ ಅಲಂಕರಿಸಲಾಗಿದೆ. ದೇವಲೋಕದ ವರ್ಣಮಯ ಬಣ್ಣಗಳು ಇದರಲ್ಲಿ ಕಂಗೊಳಿಸುತ್ತಿವೆ...ಆದರೆ ಈ ಬಟ್ಟೆಯ ಸರ್ವ ಗುಣಗಳು ಕಾಣಬೇಕಾದರೆ ನೋಡುವವರಿಗೂ ಅರ್ಹತೆಯಿರಬೇಕಾಗುತ್ತದೆ....’ ರಾಜ ಇನ್ನಷ್ಟು ಕುತೂಹಲಗೊಂಡ ‘ಏನದು ಅರ್ಹತೆ? ಹೇಳಿರಿ...‘ ಬಟ್ಟೆ ವ್ಯಾಪಾರಿಗಳು ಒಳಗೊಳಗೆ ನಗುತ್ತಾ ಹೇಳಿದರು ‘ಈ ಬಟ್ಟೆ ಯಾರ ಕಣ್ಣಿಗಾದರೂ ಕಾಣಬೇಕಾದರೆ ಅವನು ಸತ್ಯಸಂಧನಾಗಿರಬೇಕು. ದೇಶಭಕ್ತನಾಗಿರಬೇಕು. ಯಾವತ್ತೂ ರಾಜದ್ರೋಹಿಯಾಗಿರಬಾರದು. ಸದ್ಗುಣಿಯಾಗಿರಬೇಕು. ಅಂತಹ ಎಲ್ಲರಿಗೂ ಈ ಬಟ್ಟೆ ಕಾಣುತ್ತದೆ. ತಾವಂತೂ ಈ ಎಲ್ಲ ಗುಣಗಳನ್ನು ಹೊಂದಿರುವವರು. ಆದರೆ ನಿಮ್ಮ ಆಸ್ಥಾನದಲ್ಲಿರುವವರಿಗೆ ಈ ಗುಣಗಳು ಇವೆಯೇ ಎನ್ನುವುದು ಮುಖ್ಯವಾಗುತ್ತದೆ....’ ರಾಜ ಆಸ್ಥಾನಿಗರ ಕಡೆಗೆ ನೋಡಿದ. ಅವರೆಲ್ಲರೂ ವ್ಯಾಪಾರಿಗಳಿಗೆ ಒಕ್ಕೊರಲಲ್ಲಿ ಹೇಳಿದರು ‘ಆ ಬಟ್ಟೆಯನ್ನು ತೋರಿಸಿರಿ...’</b></span><br />
<span style="color: blue; font-size: large;"><b>‘‘....ವ್ಯಾಪಾರಿಗಳು ಈಗ ಆ ವರ್ಣಮಯ ಪೆಟ್ಟಿಗೆಯನ್ನು ತೆರೆದರು. ತೆರೆದಾಕ್ಷಣ ಅವರು ಒಮ್ಮೆಲೆ ಕಣ್ಣು ಮುಚ್ಚಿಕೊಂಡು ಹೇಳಿದರು ‘ಕ್ಷಮಿಸಿ ದೊರೆಗಳೇ...ಇದರ ಬೆಳಕಿಗೆ ಕಣ್ಣು ಕೋರೈಸಿದಂತಾಗುತ್ತದೆ. ಜಗತ್ತಿನ ಅಪರೂಪದ ವಜ್ರಗಳ ಬೆಳಕು ಅದು....’ ಎಂದು ಮೆಲ್ಲನೆ ಪೆಟ್ಟಿಗೆಯಿಂದ ಬಟ್ಟೆಯನ್ನು ಹೊರ ತೆಗೆದಂತೆ ನಟಿಸಿದರು. ಇಬ್ಬರು ವ್ಯಾಪಾರಿಗಳು ಕೈಯಲ್ಲಿ ಬಟ್ಟೆಗಳ ಎರಡು ತುದಿಗಳನ್ನು ಹಿಡಿದಂತೆ ನಟಿಸಿದರೆ, ಉಳಿದ ವ್ಯಾಪಾರಿಗಳು ಅದರ ಅಂಚನ್ನು, ಅದರ ಬಣ್ಣವನ್ನು, ಅದರ ಗುಣಮಟ್ಟವನ್ನು ವರ್ಣಿಸತೊಡಗಿದರು....ರಾಜನಿಗೆ ಅಲ್ಲೇನೂ ಕಾಣಿಸಲಿಲ್ಲ. ಆದರೆ ಆ ಬಟ್ಟೆ ಸತ್ಯಸಂಧರಿಗೆ, ದೇಶಭಕ್ತರಿಗೆ, ಗುಣವಂತರಿಗೆ, ರಾಜಭಕ್ತರಿಗೆ ಮಾತ್ರ ಕಾಣುತ್ತದೆ ಎನ್ನುವ ಅಂಶ ಅವನಿಗೆ ನೆನಪಾಯಿತು. ತಕ್ಷಣ ಅವನು ಆಸ್ಥಾನದ ತನ್ನ ಮಂತ್ರಿಯೆಡೆಗೆ ನೋಡಿದ. ಮಂತ್ರಿಗೆ ಅಲ್ಲೇನೂ ಕಾಣುತ್ತಿರಲಿಲ್ಲ. ಕಾಣುತ್ತಿಲ್ಲ ಎಂದರೆ ರಾಜದ್ರೋಹಿ, ಅಸತ್ಯವಂತನಾಗುತ್ತಾನೆ....ತಕ್ಷಣ ಮಂತ್ರಿ ಬಟ್ಟೆಯನ್ನು ನೋಡಿದಂತೆ ನಟಿಸಿ ರೋಮಾಂಚನಗೊಂಡ ‘‘ಮಹಾರಾಜರೇ...ನಾನು ಇಂತಹ ಬಟ್ಟೆಯನ್ನು ನನ್ನ ಜೀವಮಾನದಲ್ಲಿ ನೋಡಿಲ್ಲ....ಎಂತಹ ಅತ್ಯದ್ಭುತ ಗುಣಗಳುಳ್ಳ ಬಟ್ಟೆಯಿದು...ಆಹಾ ...ಓಹೋ...ಅದರ ಬಣ್ಣವೋ...ಅದರ ಗುಣಮಟ್ಟವೋ...ಅದರ ಬಲಭಾಗದಲ್ಲಿರುವ ನೀಲ ವಜ್ರವಂತೂ ಅಪರೂಪವಾದುದು....’ ಮಂತ್ರಿ ಹೊಗಳಿ ಮುಗಿಸುವಷ್ಟರಲ್ಲಿ ಸೇನಾಪತಿ ಬಾಯಿ ತೆರೆದ ‘ಮಂತ್ರಿಗಳೇ ನೀವು ಅದರ ಅಂಚಿನಲ್ಲಿರುವ ಬಂಗಾರದ ಬಣ್ಣದ ನವಿಲಿನ ಚಿತ್ರದ ಬಗ್ಗೆ ಏನೂ ಹೇಳಲಿಲ್ಲ....ಆ ಚಿತ್ರವನ್ನು ದೇವಲೋಕದ ಕಲಾವಿದನೇ ಹೆಣೆದಿರಬೇಕು....’ ಅಷ್ಟರಲ್ಲಿ ಆಸ್ಥಾನ ಪಂಡಿತ ಬಾಯಿ ತೆರೆದ ‘ಈ ಬಟ್ಟೆಗೆ ರೇಶ್ಮೆಯನ್ನು ಬಳಸಿದ್ದಾರಾದರೂ ಇದು ಈ ಲೋಕದ ರೇಶ್ಮೆಯಂತಿಲ್ಲ...ಹಾಗೆಯೇ...ಮಧ್ಯದಲ್ಲಿರುವ ಹೂವುಗಳೂ ದೇವಲೋಕದ ಹೂವುಗಳಂತಿವೆ...’ ಈಗ ವ್ಯಾಪಾರಿಗಳೇ ಅಚ್ಚರಿ ಪಡುವಂತೆ ಆಸ್ಥಾನದಲ್ಲಿರುವ ಒಬ್ಬೊಬ್ಬರೇ ಬಟ್ಟೆಯ ಒಂದೊಂದು ಹೆಗ್ಗಳಿಕೆಯನ್ನು ರಾಜನಿಗೆ ವರ್ಣಿಸತೊಡಗಿದರು. ರಾಜನೂ ಆ ಬಟ್ಟೆಯ ಸೌಂದರ್ಯವನ್ನು ಆಸ್ವಾದಿಸತೊಡಗಿದ. ವ್ಯಾಪಾರಿಗಳು ಇದೇ ಸುಸಮಯ ಎಂದು ‘ರಾಜರೇ...ನಾವೇ ಈ ಬಟ್ಟೆಯನ್ನು ವಿಶಿಷ್ಟ ರೀತಿಯಲ್ಲಿ ನಿಮಗೆ ಉಡಿಸುತ್ತೇವೆ....’ ಎಂದರು. ಅಂತೆಯೇ ರಾಜ ಒಳಹೋಗಿ ತನ್ನ ಬಟ್ಟೆಯನ್ನೆಲ್ಲ ಕಳಚಿದ. ವ್ಯಾಪಾರಿಗಳು ಈ ಮಾಯದ ಬಟ್ಟೆಯನ್ನು ರಾಜನಿಗೆ ಉಡಿಸಿ, ಅವನನ್ನು ಆಸ್ಥಾನಕ್ಕೆ ಕರೆದುಕೊಂಡು ಬಂದರು. ಬರುವಾಗ ಅವರು ರಾಜನ ಸೌಂದರ್ಯ ಈ ಬಟ್ಟೆಯಿಂದ ಹೇಗೆ ಹೆಚ್ಚಿದೆ ಎನ್ನುವುದನ್ನು ವರ್ಣಿಸುತ್ತಾ ಬರುತ್ತಿದ್ದರು. ಆಸ್ಥಾನಿಗರೆಲ್ಲ ನೋಡುತ್ತಾರೆ....ತಮ್ಮ ಮುಂದೆ ರಾಜ ಬೆತ್ತಲೆಯಾಗಿ ನಿಂತಿದ್ದಾನೆ. ಆದರೆ ಯಾರೂ ಅದನ್ನು ಹೇಳುವಂತಿಲ್ಲ. ಒಬ್ಬೊಬ್ಬರಾಗಿ ಎಲ್ಲರೂ ರಾಜನ ಸೌಂದರ್ಯವನ್ನು ಹೊಗಳತೊಡಗಿದರು. ಬಟ್ಟೆಯ ಮಹಿಮೆಯನ್ನು ವರ್ಣಿಸತೊಡಗಿದರು. ವ್ಯಾಪಾರಿಗಳು ಅಪಾರ ಹಣವನ್ನು, ಚಿನ್ನದ ವರಹಗಳನ್ನು ಹಿಡಿದುಕೊಂಡು ತಮ್ಮ ಉಳಿದ ಅಸಲಿ ಬಟ್ಟೆಗಳೊಂದಿಗೆ ಅಲ್ಲಿಂದ ಪರಾರಿಯಾದರು....’’</b></span><br />
<span style="color: blue; font-size: large;"><b>‘‘...ಇದೇ ಸಂದರ್ಭದಲ್ಲಿ ಯಾರೋ ಸಲಹೆ ನೀಡಿದರು ‘ರಾಜರು ಈ ಬಟ್ಟೆಯ ಜೊತೆಗೆ ರಾಜಮಾರ್ಗದಲ್ಲಿ ಮೆರವಣಿಗೆ ಹೋಗಿ ತಮ್ಮ ಪ್ರಜೆಗಳನ್ನೂ ಧನ್ಯರಾಗಿಸಬೇಕು...’ ಎಲ್ಲರೂ ಅದೇ ಸರಿಯೆಂದರು. ತಕ್ಷಣ ರಾಜನ ಬಹತ್ ಮೆರವಣಿಗೆ ನಡೆಯಿತು. ಜನರೆಲ್ಲ ದೇವಲೋಕದ ಮಾಯದ ಬಟ್ಟೆ ಧರಿಸಿರುವ ರಾಜನ ಸ್ವಾಗತಕ್ಕೆ ಅಣಿಯಾಗಿ ನಿಂತರು. ಅವರೆಲ್ಲರಿಗೂ ಮೊದಲೇ ಹೇಳಲಾಗಿತ್ತು ‘ಬಟ್ಟೆ ಸತ್ಯಸಂಧರಿಗೆ, ಸದ್ಗುಣಿಗಳಿಗೆ, ದೇಶಭಕ್ತರಿಗೆ, ರಾಜಭಕ್ತರಿಗೆ ಮಾತ್ರ ಕಾಣುತ್ತದೆ...’. ರಾಜ ಆಗಮಿಸಿದ. ನೋಡಿದರೆ ‘ಬೆತ್ತಲೆ ರಾಜ!’ ಆದರೆ ಅವರೆಲ್ಲರೂ ‘ತಮಗೆ ಮಾತ್ರ ಬಟ್ಟೆ ಕಾಣಿಸುತ್ತಿಲ್ಲ, ಉಳಿದವರಿಗೆ ಕಾಣಿಸುತ್ತಿರಬೇಕು...’ ಎಂದು ಭಾವಿಸಿ ರಾಜನ ಬಟ್ಟೆಯನ್ನು ಒಬ್ಬೊಬ್ಬರಾಗಿ ಹೊಗಳತೊಡಗಿದರು. ಆದರೆ ಮನದೊಳಗೆ ರಾಜನನ್ನು ನೋಡಿ ನಗುತ್ತಿದ್ದರು, ಅಸಹ್ಯ ಪಡುತ್ತಿದ್ದರು. ಎಲ್ಲರೂ ರಾಜನ ಬಟ್ಟೆಗೆ ಭೋ ಪರಾಕ್ ಹೇಳುವವರೆ. ಹೀಗಿರುವಾಗ, ಆ ಜನರ ನಡುವೆ ಒಂದು ಪುಟ್ಟ ಮಗು ರಾಜನನ್ನು ನೋಡಿ ಜೋರಾಗಿ ಕೂಗಿ ಹೇಳಿತು ‘‘ಹೇ...ರಾಜ ಬಟ್ಟೆಯೇ ಹಾಕಿಲ್ಲ....’’. ತಕ್ಷಣ ಸೈನಿಕರು ಆ ‘ರಾಜದ್ರೋಹಿ, ದೇಶದ್ರೋಹಿ, ಸುಳ್ಳುಬುರುಕ’ ಮಗುವನ್ನು ಬಂಧಿಸಿ ಜೈಲಿಗೆ ತಳ್ಳಿದರು. ಉಳಿದಂತೆ ರಾಜನೀಗ ಅದೇ ಬಟ್ಟೆಯಲ್ಲಿ ತಿರುಗಾಡುತ್ತಿದ್ದಾನೆ....ಜನರು ರಾಜನನ್ನೂ ಅವನು ಧರಿಸಿದ ಬಟ್ಟೆಯನ್ನು ಹೊಗಳುತ್ತಲೇ ಇದ್ದಾರೆ....’’</b></span><br />
<span style="color: blue; font-size: large;"><b>ಹೀಗೆ ತನ್ನ ಕತೆ ಮುಗಿಸಿದ ತರಕಾರಿ ಅಂಗಡಿಯವ ಹೇಳಿದ ‘‘ನಿನ್ನೆ ಸಂಭ್ರಮ ಆಚರಿಸಿದ ಜನರಿಗೂ, ಆ ರಾಜನ ಪ್ರಜೆಗಳಿಗೂ ಯಾವುದಾದರೂ ವ್ಯತ್ಯಾಸವಿದೆಯೆ?....ಆದರೆ ಆತ ಬಟ್ಟೆಯನ್ನೇ ಧರಿಸಿಲ್ಲ ಎನ್ನುವುದು ಒಂದಲ್ಲ ಒಂದು ದಿನ ಗೊತ್ತಾಗದೇ ಇರುತ್ತದೆಯೆ?’’ ಎಂದು ನನ್ನನ್ನು ಪ್ರಶ್ನಿಸಿದ.</b></span><br />
<span style="color: blue; font-size: large;"><b>ನಾನು ಉತ್ತರಿಸಲಿಲ್ಲ. ಅರ್ಧ ಕೆಜಿ ಟೊಮೆಟೋ ಖರೀದಿಸಿ, ಅಳಿದುಳಿದ ಚಿಲ್ಲರೆಯನ್ನು ಆತನಿಗೆ ಕೊಟ್ಟು ಮನೆಯ ದಾರಿ ಹಿಡಿದೆ.</b></span></div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-57845430192966342572016-11-28T10:01:00.000-08:002016-11-28T10:01:54.619-08:00ಚಿಂದಿ ನೋಟುಗಳು: ಅಮ್ಮನ ಕತೆ....!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEitbxG58_dAfQvJFBXrl-fA2CIyOKf-GAYlcdwxmaTEu1scxzY8TREV-V5echdTQMqq8iPDCFcQPJ7QXTigdeHaDaa-IpeCWlyIQ2uJrpogo-JamFntMddwyVJ2oMdrN4bS7tXqPkr_uJ-E/s1600/icu-a.jpg" imageanchor="1" style="margin-left: 1em; margin-right: 1em;"><span style="font-size: large;"><img border="0" height="231" src="https://blogger.googleusercontent.com/img/b/R29vZ2xl/AVvXsEitbxG58_dAfQvJFBXrl-fA2CIyOKf-GAYlcdwxmaTEu1scxzY8TREV-V5echdTQMqq8iPDCFcQPJ7QXTigdeHaDaa-IpeCWlyIQ2uJrpogo-JamFntMddwyVJ2oMdrN4bS7tXqPkr_uJ-E/s320/icu-a.jpg" width="320" /></span></a></div>
<div style="background-color: white; font-family: Helvetica, Arial, sans-serif; line-height: 19.32px; margin-bottom: 6px;">
<div style="line-height: 19.32px; margin-bottom: 6px;">
<b style="color: blue; line-height: 19.32px;"><span style="font-size: large;">ನೋಟು ನಿಷೇಧದ ಬಳಿಕ ಪ್ರತಿ ದಿನ ಈ ರಿಕ್ಷಾ ಚಾಲಕರ ಗೋಳು ಕೇಳಿ ನಿಜಕ್ಕೂ ಸುಸ್ತಾಗಿ ಹೋಗಿದ್ದೆ. ಆದುದರಿಂದ ಈ ಬಾರಿ ಸಿಟಿ ಬಸ್ನಲ್ಲೇ ಕಚೇರಿಗೆ ಹೋಗಲು ನಿರ್ಧರಿಸಿದೆ. ನನ್ನ ಕಚೇರಿಯ ಕಡೆ ಹೋಗುವ ಬಸ್ ಸಿಕ್ಕಿದ್ದೇ ಉಸ್ಸಪ್ಪಾ ಎಂದು ಹತ್ತಿ, ಕಿಟಕಿ ಪಕ್ಕದ ಸೀಟ್ ಹಿಡಿದೆ. ರಿಕ್ಷಾ ಬಾಡಿಗೆಯೂ ಉಳಿಯಿತು. ಈ ರಿಕ್ಷಾ ಚಾಲಕರ ಗೋಳೂ ತಪ್ಪಿತು ಎಂದು ನಿಟ್ಟುಸಿರಿಡುವಷ್ಟರಲ್ಲಿ, ನನ್ನ ಪಕ್ಕದಲ್ಲೇ ಒಬ್ಬ ಬಂದು ಕುಳಿತ. ಕುಳಿತವನು ಸುಮ್ಮನೇ ಕೂತನಾ? ಅದೂ ಇಲ್ಲ. ‘‘ಸಾರ್...ಎರಡು ಸಾವಿರ ರೂಪಾಯಿಯ ಚಿಲ್ಲರೆ ಇದೆಯಾ?’’ ಎಂದು ಕೇಳಿದ. ‘‘ಇಲ್ಲ ಕಣ್ರೀ...ನಾನೇ ಚಿಲ್ಲರೆ ಇಲ್ಲದೆ ಒದ್ದಾಡುತ್ತಿದ್ದೇನೆ....’’ ಎಂದೆ. ಅಷ್ಟೇ...ಅವನು ತನ್ನ ಗೋಳನ್ನು ಹೇಳ ತೊಡಗಿದ. ‘‘ಹೀಗಾದರೆ ನಮ್ಮಂಥವರು ಬದುಕುವುದು ಹೇಗೆ?’’ ಎಂದು ಕೇಳಿದ.</span></b></div>
<div style="display: inline; line-height: 19.32px; margin-top: 6px;">
<span style="color: blue; font-size: large;"><b>ನಾನು ಎಂದಿನಂತೆ ಮೋದಿಯ ಪರವಾಗಿ ಮಾತನಾಡ ತೊಡಗಿದೆ ‘‘ನೋಡಿ, ಒಂದು ದೊಡ್ಡ ರೋಗಕ್ಕೆ ಮದ್ದು ಕೊಡುವಾಗ ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಆಗತ್ತೆ...ಸ್ವಲ್ಪ ಸಹಿಸಬೇಕಾಗುತ್ತದೆ...’’ ಸಮಾಧಾನಿಸಿದೆ.<br />‘‘ನಿಮಗೆ ನನ್ನ ತಾಯಿಯ ಕತೆ ಹೇಳಲಾ?’’ ಅವನು ಒಮ್ಮೆಲೆ ನನ್ನ ಕಡೆ ತಿರುಗಿ ಕೇಳಿದ.<br />ಬೇಡಾ ಎಂದರೆ ಅವನಿಗೆ ಬೇಜಾರು. ‘‘ಸರಿ ಹೇಳಿ...’’ ಎಂದೆ. ಬಸ್ಸು ಸಾಗುತ್ತಿತ್ತು. ಅವನು ತನ್ನ ತಾಯಿಯ ಕತೆ ಹೇಳ ತೊಡಗಿದ.<br />‘‘ಅರವತ್ತು ವರ್ಷ ಕಳೆದಿರುವ ನನ್ನ ತಾಯಿ ಆಗಾಗ ಸಣ್ಣ ಪುಟ್ಟ ಬಿಪಿ, ಶುಗರ್ ಕಾಯಿಲೆಯಿಂದ ನರಳುತ್ತಿದ್ದರು. ಆದರೂ ಆರೋಗ್ಯವಾಗಿಯೇ ಇದ್ದರು. ಇದ್ದಕ್ಕಿದ್ದಂತೆಯೇ ಆಕೆಗೆ ಹೊಟ್ಟೆ ನೋವು ಆರಂಭವಾಯಿತು. ಜೊತೆಗೆ ಹಸಿವಿಲ್ಲ. ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ಗೊತ್ತಾಯಿತು, ಆಕೆಗೆ ಕ್ಯಾನ್ಸರ್ ಎನ್ನುವುದು. ಡಾಕ್ಟರ್ ನೇರವಾಗಿಯೇ ಹೇಳಿದರು ‘‘ಘಟ್ಟ ಅಪಾಯವನ್ನು ತಲುಪಿದೆ. ನಿಮ್ಮ ತಾಯಿ ಹೆಚ್ಚೆಂದರೆ ಇನ್ನು ಮೂರು-ನಾಲ್ಕು ವರ್ಷ ಬದುಕಬಹುದು’’. ನನಗೆ ತಾಯಿಯ ಜೊತೆಗೆ ಇನ್ನಷ್ಟು ವರ್ಷಗಳ ಕಾಲ ಬದುಕುವ ಆಸೆ. ತಾಯಿಯನ್ನು ಉಳಿಸಲೇಬೇಕು ಎಂದು ನಾನು ನಗರದ ಅತಿ ದೊಡ್ಡ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದೆ. ಬೃಹತ್ ಆಸ್ಪತ್ರೆ ಅದು. ಆ ಆಸ್ಪತ್ರೆಯ ಗಾತ್ರ ನೋಡಿಯೇ ನನ್ನ ತಾಯಿ ಬದುಕುತ್ತಾಳೆ ಎಂಬ ಭರವಸೆ ಮೂಡಿತು ನನಗೆ...’’<br />‘‘....ಡಾಕ್ಟರ್ ಪರೀಕ್ಷಿಸಿದ್ದೇ ಘೋಷಿಸಿದರು ‘‘ಕೀಮೋ ಥೆರಪಿ’’ ಆಗಬೇಕು. ನಾನು ಸರಿ ಎಂದೆ. ಡಾಕ್ಟರ್ ಕೀಮೋ ಥೆರಪಿ ಆರಂಭಿಸಿದರು. ಆದರೆ ನನ್ನ ದುರದಷ್ಟ. ಒಂದೆರಡು ದಿನ ಚೆನ್ನಾಗಿಯೇ ಇದ್ದ ತಾಯಿ ನಾಲ್ಕನೆ ದಿನಕ್ಕೆ ಸಂಪೂರ್ಣ ಆರೋಗ್ಯ ಕಳೆದುಕೊಂಡರು. ಕಾಲು ಬಾತತೊಡಗಿತು. ಅರೆಪ್ರಜ್ಞಾವಸ್ಥೆ ತಲುಪಿಸಿದರು. ಪ್ರತಿ ದಿನ ನನ್ನ ತಾಯಿಯನ್ನು ನೋಡಲು ಬರುತ್ತಿದ್ದ ಡಾಕ್ಟರ್ ನಾಲ್ಕನೇ ದಿನ ಒಮ್ಮೆಲೆ ಮುಳುಗಿದರು. ನರ್ಸ್ನ ಬಳಿ ವಿಚಾರಿಸಿದರೂ ಡಾಕ್ಟರ್ ರೋಗಿಯನ್ನು ನೋಡಲು ಬರುತ್ತಿಲ್ಲ. ನಾನೇ ಕಿಮೋಥೆರಪಿ ಡಾಕ್ಟರನ್ನು ಹುಡುಕಿಕೊಂಡು ಹೋದೆ. ಅವರು ನನ್ನನ್ನು ಪ್ರಶ್ನಾರ್ಹವಾಗಿ ನೋಡಿದರು. ನಾನು ತಾಯಿಯ ಸ್ಥಿತಿ ವಿವರಿಸಿದೆ. ಡಾಕ್ಟರ್ ನಿರ್ಲಿಪ್ತವಾಗಿ ಹೇಳಿದರು ‘‘ನೋಡಿ, ನಿಮ್ಮ ತಾಯಿಯ ಎರಡೂ ಕಿಡ್ನಿ ಹೋಗಿದೆ. ಮೊದಲು ಅದಕ್ಕೊಂದು ವ್ಯವಸ್ಥೆ ಆಗಬೇಕು. ಈ ವಿಭಾಗದಲ್ಲಿ ಕಿಡ್ನಿ ಡಾಕ್ಟರ್ ಇದ್ದಾರೆ. ಅವರಲ್ಲಿ ಮೊದಲು ಮಾತನಾಡಿ....’’<br />‘‘....ನಾನು ಕಿಡ್ನಿ ಡಾಕ್ಟರ ಬಳಿಗೆ ಓಡಿದೆ. ಅವರು ಹೇಳಿದರು ‘ನೋಡಿ, ನಿಮ್ಮ ತಾಯಿಗೆ ವಯಸ್ಸಾಗಿತ್ತು. ಜೊತೆಗೆ ಬೇರೆ ಕೆಲವು ರೋಗಗಳಿದ್ದವು. ಕಿಮೋಥೆರಪಿಯನ್ನು ತಾಳಿಕೊಳ್ಳುವ ಶಕ್ತಿ ಅವಳಿಗಿರಲಿಲ್ಲ. ಆದುದರಿಂದಲೇ ಅವಳ ಎರಡೂ ಕಿಡ್ನಿ ನಾಶವಾಗಿದೆ. ಈಗ ಏನೂ ಮಾಡುವ ಹಾಗಿಲ್ಲ...ಡಯಾಲಿಸಿಸ್ನ್ನು ತಾಳಿಕೊಳ್ಳುವ ಶಕ್ತಿ ನಿಮ್ಮ ತಾಯಿಯ ದೇಹಕ್ಕಿಲ್ಲ.... ನೀವು ಅವಸರದಿಂದ ಕೀಮೋಥೆರಪಿಯನ್ನು ಮಾಡಿಸಬಾರದಿತ್ತು...’. ನಾನು ಮತ್ತೆ ಕಿಮೋಥೆರಪಿ ಡಾಕ್ಟರಲ್ಲಿ ಹೋಗಿ ಹೇಳಿದೆ. ಅವರು ಸೆಡವಿನಿಂದ ಹೇಳಿದರು ‘‘ನೋಡ್ರಿ...ಕ್ಯಾನ್ಸರ್ ರೋಗಕ್ಕೆ ಬೇಕಾದ ಔಷಧಿಯನ್ನು ನಾವು ಕೊಟ್ಟಿದ್ದೇವೆ. ಅವರ ಕಿಡ್ನಿ ಅದನ್ನು ತಾಳಿಕೊಳ್ಳಲಿಲ್ಲ. ಅದಕ್ಕೆ ನಾವೇನೂ ಮಾಡುವ ಹಾಗಿಲ್ಲ....’’<br />‘‘....ಆರನೇ ದಿನ ನನ್ನ ತಾಯಿ ಆಸ್ಪತ್ರೆಯಲ್ಲೇ ತೀರಿ ಹೋದರು. ಆಸ್ಪತ್ರೆಯ ಬಿಲ್ ಎರಡೂವರೆ ಲಕ್ಷ ರೂ. ಆಗಿತ್ತು. ನನ್ನ ಮನೆಯಿರುವ ಪುಟ್ಟ ಜಮೀನನ್ನು ಮಾರಿ, ಆಸ್ಪತ್ರೆಯ ಬಿಲ್ ಕಟ್ಟಿ ತಾಯಿಯ ಹೆಣವನ್ನು ಬಿಡಿಸಿಕೊಂಡು ಬಂದೆ....’’ ಎನ್ನುತ್ತಾ ಅವನು ಮೌನವಾದ.<br />ನಾನು ಅವನ ಮುಖ ನೋಡಿದರೆ ಅವನ ಕಣ್ಣಂಚಲ್ಲಿ ಹನಿಯಿತ್ತು. ಅವನ ಕೈಯನ್ನು ಹಿಸುಕಿ ಸಮಾಧಾನಿಸಿದೆ.<br />ಇದೀಗ ಅವನು ಬಾಯಿ ತೆರೆದ ‘‘ಮೋದಿ ಮಾಡಿರುವ ಈ ಕೀಮೋಥೆರಪಿಯಲ್ಲಿ ನನ್ನ ಈ ತಾಯಿಯ ಕಿಡ್ನಿ ನಾಶವಾಗದಿದ್ದರೆ ಅಷ್ಟು ಸಾಕಾಗಿದೆ. ಯಾಕೆಂದರೆ, ತಾಯಿಯ ಹೆಣವನ್ನು ಬಿಡಿಸಿಕೊಳ್ಳಲು ನನ್ನಲ್ಲಿ ಮಾರುವುದಕ್ಕೀಗ ಜಮೀನು ಕೂಡ ಇಲ್ಲ....’’<br />ಅಷ್ಟರಲ್ಲಿ ಕಂಡಕ್ಟರ್ ನಾನು ಇಳಿಯುವ ಸ್ಟಾಪ್ನ ಹೆಸರು ಕೂಗುತ್ತಿರುವುದು ಕೇಳಿಸಿತು. ಭಾರವಾದ ಮನಸ್ಸಿನಿಂದ ಎದ್ದು ನಿಂತೆ.</b></span></div>
</div>
</div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-44757639719153463722016-11-27T04:24:00.000-08:002016-11-27T04:24:19.489-08:00ನೋಟಿನ ಚಿಂದಿ ಕತೆಗಳು <div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh67ti-DELhH_9NgeiN5RUhI0AEyJOlZBVMYAQQ-Cdw46bse6Z2ZiHwffgnIYpyvDrATNlPDGQIiNNJ5Bw9B2lxqoudcAfQ2NUBNs3gY2UOIIk-NNmdsgqH_GuId8SPA4VUcSfYhB37N4Wt/s1600/note-a.jpeg" imageanchor="1" style="margin-left: 1em; margin-right: 1em;"><img border="0" height="240" src="https://blogger.googleusercontent.com/img/b/R29vZ2xl/AVvXsEh67ti-DELhH_9NgeiN5RUhI0AEyJOlZBVMYAQQ-Cdw46bse6Z2ZiHwffgnIYpyvDrATNlPDGQIiNNJ5Bw9B2lxqoudcAfQ2NUBNs3gY2UOIIk-NNmdsgqH_GuId8SPA4VUcSfYhB37N4Wt/s320/note-a.jpeg" width="320" /></a></div>
<b><span style="color: blue; font-size: large;">1</span></b><br />
<b><span style="color: purple; font-size: large;">ರೂಪಾಯಿ ಬರ್ತಾ ಇಲ್ಲ</span></b><br />
<b><span style="color: blue; font-size: large;">ಇವತ್ತು ಎಟಿಎಂ ಕ್ಯೂನಲ್ಲಿ ಒಂದು ತಮಾಷೆಯಾಯಿತು</span></b><br />
<b><span style="color: blue; font-size: large;">ಒಬ್ಬ ಎಟಿಎಂ ಒಳಗೆ ಹೋಗಿ ಹತ್ತು ನಿಮಿಷದ ಬಳಿಕ ಹೊರಬಂದು ಮುಖ ಬಾಡಿಸಿ ಹೇಳಿದ "ಇಲ್ಲಾರಿ, ಎರಡು ಸಾವಿರ ರೂಪಾಯಿ ಬರ್ತಾ ಇಲ್ಲ"</span></b><br />
<b><span style="color: blue; font-size: large;">ನೋಟು ಮುಗಿಯಿತೇನೋ ಎಂದು ನಾನು ಬೆಚ್ಚಿ ಬಿದ್ದೆ. </span></b><br />
<b><span style="color: blue; font-size: large;">ಅಷ್ಟರಲ್ಲಿ ಒಬ್ಬ ಒಳ ಹೋಗಿ ಎರಡು ಸಾವಿರ ನೋಟಿನೊಂದಿಗೆ ಹೊರ ಬಂದ </span></b><br />
<b><span style="color: blue; font-size: large;">"ಅರೆ ನೋಟು ಬರ್ತಾ ಇದೆಯಲ್ಲ?" ನಾನು ಮತ್ತೆ ಆ ವ್ಯಕ್ತಿಯ ಬಳಿ ಕೇಳಿದೆ. </span></b><br />
<b><span style="color: blue; font-size: large;">"ಇಲ್ಲ, ನಾನು ಎರಡೆರಡು ಬಾರಿ ಪ್ರಯತ್ನಿಸಿದೆ" ಹಣೆ ಒರೆಸಿ ಕೊಳ್ಳುತ್ತಾ ಹೇಳಿದ. </span></b><br />
<b><span style="color: blue; font-size: large;">ನಾನು ಅನುಮಾನದಿಂದ ಕೇಳಿದೆ "ನಿಮ್ಮ ಅಕೌಂಟ್ ನಲ್ಲಿ ಹಣ ಇದೆಯೇ ?"</span></b><br />
<b><span style="color: blue; font-size: large;">"ನನ್ನ ಎಕೌಂಟ್ ನಲ್ಲಿ ಹಣ ಇಲ್ಲ. ಆದರೆ ಮೋದಿ ಹೇಳಿದ್ದಾರಂತಲ್ಲ, ನವೆಂಬರ್ 10ರಿಂದ ಎಟಿಎಂ ನಲ್ಲಿ 2೦೦೦ ರೂಪಾಯಿ ಬರುತ್ತದೆ ಅಂತ. ಮೋದಿಯವರ ಘೋಷಣೆ ಕೇಳಿ ನಾನು ನನ್ನ 2೦೦೦ ರೂಪಾಯಿ ತೆಗೆದು ಕೊಳ್ಳಲು ಬಂದದ್ದು... ಆದರೆ ನನ್ನ ಎಕೌಂಟಿಗೆ ಎರಡು ಸಾವಿರ ಬೀಳಲೇ ಇಲ್ಲ ... "</span></b><br />
<b><span style="color: blue; font-size: large;">ಪಾಪ ಅನ್ನಿಸಿತು. ಸಮಾಧಾನಿಸಿದೆ "ನೋಡಿ ಹಾಗೇನಿಲ್ಲ, ನೀವು ಬ್ಯಾಂಕಿಗೆ ನಾಲ್ಕು ಸಾವಿರ ಹಾಕಿದರೆ ಎರಡು ಸಾವಿರ ರೂಪಾಯಿ ತೆಗೆದು ಕೊಳ್ಳ ಬಹುದು, ಅಷ್ಟೇ ... "</span></b><br />
<b><span style="color: blue; font-size: large;">ಅವನು ಅರ್ಥವಾಗದೆ ಏನೋ ಗೊಣಗುತ್ತಾ ಹೋದ. </span></b><br />
<b><span style="color: blue; font-size: large;">ಪಾಪ, ಯಾರೋ ಮೋದಿ ಭಕ್ತ ಈತನನ್ನು ಏಮಾರಿಸಿರಬೇಕು.</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">2</span></b><br />
<b><span style="color: purple; font-size: large;">ಗಂಡನ ಹೊಸ ಬಟ್ಟೆ</span></b><br />
<b><span style="color: blue; font-size: large;">ಇವತ್ತು ಕಚೇರಿಗೆ ಹೊರಟಾಗ ಇನ್ನೊಬ್ಬ ರಿಕ್ಷಾ ಚಾಲಕರೊಬ್ಬರ ಜೊತೆ ಮಾತುಕತೆ. </span></b><br />
<b><span style="color: blue; font-size: large;">ಉದ್ದಕ್ಕೂ ನೋಟು ನಿಷೇಧದಿಂದ ತನಗಾಗಿರುವ ಸಮಸ್ಯೆ ಹೇಳುತ್ತಿದ್ದರು. </span></b><br />
<b><span style="color: blue; font-size: large;">ಎಲ್ಲ ಕೇಳಿಸಿಕೊಂಡ ನಾನು ಅವರಿಗೆ ಭರವಸೆ ನೀಡಿದೆ "ತಲೆ ಬಿಸಿ ಮಾಡಬೇಡಿ. ಇನ್ನೊಂದು ಎರಡು ವರ್ಷದಲ್ಲಿ ದೇಶಕ್ಕೆ ಭಾರಿ ಒಳ್ಳೆಯದಾಗುತ್ತೆ. ಸ್ವಲ್ಪ ಸಹನೆ ತೆಗೆದು ಕೊಳ್ಳಿ "</span></b><br />
<b><span style="color: blue; font-size: large;">ರಿಕ್ಷಾ ಚಾಲಕ ಮುಖಕ್ಕೆ ಹೊಡೆದಂತೆ ಹೇಳಿದರು "ಇದು, ಗಂಡ ಹೊಸ ಬಟ್ಟೆ ತರ್ತಾನೆ ಎಂದು ನಂಬಿ, ಹೆಂಡತಿ ಇರುವ ಹಳೆ ಬಟ್ಟೆಗೆ ಬೆಂಕಿ ಕೊಟ್ಟು ಬೆತ್ತಲೆಯಾಗಿ ಕಾದು ಕುಳಿತ ಕತೆಯಾಯಿತು"</span></b><br />
<b><span style="color: blue; font-size: large;">ಮತ್ತೆ ಅವನ ಮುಖ ನೋಡುವ ಧೈರ್ಯ ನನಗೆ ಬರಲಿಲ್ಲ.</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">3</span></b><br />
<b><span style="color: purple; font-size: large;">ಕೋತಿ ಮತ್ತು ಅದರ ಮುದ್ದಿನ ಮರಿ</span></b><br />
<b><span style="color: blue; font-size: large;">ನಿನ್ನೆ ಆಟೋ ರಿಕ್ಷಾ ಒಂದರಲ್ಲಿ ಕಚೇರಿ ಕಡೆ ಸಾಗುತ್ತಿದ್ದಾಗ ಚಾಲಕ ನೋಟು ನಿಷೇಧದಿಂದಾದ ಸಮಸ್ಯೆಯನ್ನು ತೋಡಿ ಕೊಳ್ಳುತ್ತಿದ್ದರು. ಮಾತು ನೋಟು ನಿಷೇಧಕ್ಕಾಗಿ ಮೋದಿಯನ್ನು ಬೆಂಬಲಿಸುತ್ತಿರುವ ಭಕ್ತರ ಕಡೆ ಮಾತು ತಿರುಗಿತು. </span></b><br />
<b><span style="color: blue; font-size: large;">"ಮೋದಿಯ ಅಭಿಮಾನಿಗಳು ನೋಟು ನಿಷೇಧವನ್ನು ಉತ್ತಮ ಕೆಲಸ ಎನ್ನುತ್ತಿದ್ದಾರೆ. ಮೋದಿಯನ್ನು ತಲೆ ಮೇಲೆ ಹೊತ್ತು ತಿರುಗುತ್ತಿದ್ದಾರೆ. ಹಾಗಾದರೆ ನೋಟಿನ ಬಿಸಿ ಅವರಿಗೆ ತಾಗಿಲ್ಲವೇ ? ತಾಗಿದ್ದಿದ್ದರೆ ಈ ವರ್ಗ ಮೋದಿಯನ್ನು ಹೇಗೆ ಹೊತ್ತು ಮೆರೆಯುತ್ತದೆ ?" ರಿಕ್ಷಾ ಚಾಲಕನಲ್ಲಿ ನಾನು ಕೇಳಿದೆ. </span></b><br />
<b><span style="color: blue; font-size: large;">ಆಟೋ ಚಾಲಕ ನಗುತ್ತಾ "ಸಾರ್, ನಾನೊಂದು ಕತೆ ಹೇಳ್ತೇನೆ, ಕೇಳ್ತೀರಾ?" ಎಂದರು. </span></b><br />
<b><span style="color: blue; font-size: large;">ನಾನೂ ಕುತೂಹಲದಿಂದ "ಹೇಳಿ ಹೇಳಿ" ಎಂದೆ. ಆಟೋ ಮುಂದೆ ಸಾಗುತ್ತಿತ್ತು. </span></b><br />
<b><span style="color: blue; font-size: large;">"ಸರ್, ಒಂದು ಖಾಲಿ ಸ್ವಿಮ್ಮಿಂಗ್ ಟ್ಯಾಂಕ್ ನಲ್ಲಿ ಒಂದು ಕೋತಿ ಮತ್ತು ಅದರ ಮುದ್ದಿನ ಮರಿ ಆಡುತ್ತಿತ್ತು. ಅಷ್ಟರಲ್ಲಿ ಸ್ವಿಮ್ಮಿಂಗ್ ಟ್ಯಾಂಕ್ ಗೆ ನೀರು ತುಂಬಿಸ ತೊಡಗಿದರು. ಮೊದಲು ಕೋತಿ ತನ್ನ ಮರಿಯ ಜೊತೆ ಆ ನೀರಲ್ಲಿ ಆಡ ತೊಡಗಿತು. ನೀರಿನ ಮಟ್ಟ ಏರುತ್ತಿದ್ದ ಹಾಗೆ ಕೋತಿ ತನ್ನ ಮರಿಯನ್ನು ಎತ್ತಿ ಸೊಂಟದಲ್ಲಿ ಇಟ್ಟುಕೊಂಡಿತು. ನೀರು ಮತ್ತೆ ಏರತೊಡಗಿತು. ಈಗ ಕೋತಿ ತನ್ನ ಮರಿಯನ್ನು ಹೆಗಲ ಮೇಲೆ ಇಟ್ಟು ರಕ್ಷಿಸಿತು. ನೀರಿನ ಮಟ್ಟ ಮತ್ತೆ ಏರಿತು. ನೀರು ಎದೆಯ ಮಟ್ಟಕ್ಕೆ ಬಂತು. ಈಗ ಕೋತಿ ತನ್ನ ಮರಿಯನ್ನು ತಲೆಯ ಮೇಲೆ ಇಟ್ಟಿತು. ನೀರು ಇನ್ನೂ ಏರ ತೊಡಗಿತು. ಕುತ್ತಿಗೆಗೆ ಬಂತು. ಕೋತಿ ತುದಿಗಾಲಲ್ಲಿ ನಿಂತಿತು. ಈಗ ನೀರು ಕೋತಿಯ ಮೂಗಿನ ಮಟ್ಟಕ್ಕೆ ಬಂತು.... " ಎಂದವನೇ ಚಾಲಕ ನನ್ನ ಮುಖ ನೋಡಿದರು. </span></b><br />
<b><span style="color: blue; font-size: large;">"ಮತ್ತೇನಾಯಿತು ಹೇಳಿ?" ಕುತೂಹಲದಿಂದ ಕೇಳಿದೆ. </span></b><br />
<b><span style="color: blue; font-size: large;">"ಈಗ ಕೋತಿ ತನ್ನ ಮರಿಯನ್ನು ಕಾಲ ಕೆಳಗೆ ತಳ್ಳಿ, ಅದರ ಮೇಲೆ ನಿಂತು, ಟ್ಯಾಂಕ್ ನಿಂದ ಹೊರಗೆ ಹಾರಿತು. ಸರ್, ಸದ್ಯ ನೀರು ಸೊಂಟದವರೆಗಷ್ಟೇ ಬಂದಿದೆ. ನೀರು ಅವರ ಮೂಗಿನವರೆಗೆ ಬರುವವರೆಗೆ ಕಾಯಿರಿ."</span></b><br />
<b><span style="color: blue; font-size: large;">ಅಷ್ಟರಲ್ಲಿ ನನ್ನ ಸ್ಟಾಪ್ ಬಂತು. ಇಳಿದೆ. ರಿಕ್ಷಾ ಚಾಲಕ ಹೇಳಿದ ಕತೆ ಈಗಲೂ ನನ್ನ ತಲೆಯಲ್ಲಿ ಬೇರೆ ಬೇರೆ ಆಯಾಮಗಳನ್ನು ಪಡೆದು ಕೊಳ್ಳುತ್ತಾ ಬೆಳೆಯುತ್ತಿದೆ,.</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">4</span></b><br />
<b><span style="color: purple; font-size: large;">ಮಾಯದ ಬಟ್ಟೆ</span></b><br />
<b><span style="color: blue; font-size: large;">ಅಂಬಾನಿ ಹೊಲಿದ ಮಾಯದ ಬಟ್ಟೆ ಧರಿಸಿ ಮೋದಿ ಸಂಭ್ರಮಿಸುತ್ತಿದ್ದಾರೆ. ಭಕ್ತರು ಇಲ್ಲದ ಬಟ್ಟೆಯ ವರ್ಣನೆ ಮಾಡುತ್ತಿದ್ದಾರೆ. ಎಳೆ ಮಗುವೊಂದು ಬೆತ್ತಲೆ ರಾಜನ ನೋಡಿ ಕಿಸಕ್ಕನೆ ನಕ್ಕಿದೆ. ಇದೀಗ ಆ ಮಗುವಿನ ಮೇಲೆ ರಾಜ ದ್ರೋಹದ ಆರೋಪ ಹೊರಿಸಲಾಗಿದೆ</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">5</span></b><br />
<b><span style="color: purple; font-size: large;">ನೀನೆಲ್ಲಿದ್ದೀಯ ?</span></b><br />
<b><span style="color: blue; font-size: large;">"ದೇಶಕ್ಕಾಗಿ ಇಷ್ಟಾದರೂ ಮಾಡೋಕ್ಕಾಗಲ್ವಾ ಜನರಿಗೆ ? "</span></b><br />
<b><span style="color: blue; font-size: large;">"ಅದಿರ್ಲಿ ನೀನೆಲ್ಲಿದ್ದೀಯ ? "</span></b><br />
<b><span style="color: blue; font-size: large;">"ನಾನು ಅಮೇರಿಕ ಟೂರಲ್ಲಿದ್ದೇನೆ ... ಎಲ್ಲ ಸರಿಯಾದ ಮೇಲೆ ಬರೋಣ ಅಂತ .... "</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">6</span></b><br />
<b><span style="font-size: large;"><span style="color: purple;">ನಂಬಿಕೆ </span></span></b><br />
<b><span style="color: blue; font-size: large;">ಹೊಸ 2000 ನೋಟಿಗೆ ಬೆಂಕಿ ಹಚ್ಚಿದ್ರೆ ಬೆಂಕಿ ಹತ್ತೋದೇ ಇಲ್ಲ ಎಂಬ ಮೋದಿ ಭಕ್ತನ ಮಾತನ್ನು ನಂಬಿ, ಪರೀಕ್ಷಿಸಲು ಹೋಗಿ ಇಲ್ಲೊಬ್ಬ ತನ್ನ ಹೊಸ 2000 ರು ನೋಟನ್ನು ಕಳೆದು ಕೊಂಡಿದ್ದಾನೆ </span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">7</span></b><br />
<b><span style="color: purple; font-size: large;">ಸ್ವಾಗತ </span></b><br />
<b><span style="color: blue; font-size: large;">ಅಂದ ಹಾಗೆ ನಿಮಗೆ ಗೊತ್ತಾ, ನೋಟು ನಿಷೇಧವನ್ನು ಜನಾರ್ದನ ರೆಡ್ಡಿಯವರು ಸ್ವಾಗತಿಸಿದ್ದಾರೆ!!!</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">8</span></b><br />
<b><span style="font-size: large;"><span style="color: purple;">ಮೋದಿ ಫೋಟೋ </span></span></b><br />
<b><span style="color: blue; font-size: large;">ಮಂಗಳೂರಿನ ವೇಲೆನ್ಸಿಯಾ ಪಕ್ಕದಲ್ಲಿರುವ ಈತ ಪುಟ್ಟದೊಂದು ಹೋಟೆಲು ಇಟ್ಟಿದ್ದಾನೆ. ಮೋದಿಯ ಅಭಿಮಾನಿ. ಗೋಡೆಯ ಮೇಲೆ ಮೋದಿಯ ಫೋಟೋ ತೂಗು ಹಾಕಿದ್ದ. </span></b><br />
<b><span style="color: blue; font-size: large;">ಯಾವಾಗ ಮೋದಿಯವರು ಕಾರ್ಡ್ ಉಪಯೋಗಿಸಿ ಎಂದು ಕರೆ ಕೊಟ್ಟರೋ, ಅವನ ಗೋಡೆಯಲ್ಲಿರುವ ಮೋದಿ ಫೋಟೋ ಮಾಯವಾಗಿದೆ.</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">9</span></b><br />
<b><span style="color: purple; font-size: large;">ಗೊತ್ತಾ ?</span></b><br />
<b><span style="color: blue; font-size: large;">"ಏ .. ಎರಡು ಸಾವಿರ ನೋಟಿನ ಮೇಲೆ ಮೊಬೈಲ್ ಇಟ್ರೆ ಮೋದಿ ಭಾಷಣ ಮಾಡೋದು ಕಾಣಿಸತ್ತೆ, ಗೊತ್ತಾ?"</span></b><br />
<b><span style="color: blue; font-size: large;">"ನನಗೆ ಬೇಕಾಗಿರೋದು ಭಾಷಣ ಅಲ್ಲ, ಎರಡು ಸಾವಿರ ರುಪಾಯಿಯ ಚಿಲ್ರೆ ... "</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">10</span></b><br />
<b><span style="font-size: large;"><span style="color: purple;">ಮತ್ತೆ ಅಮೃತಮತಿ </span></span></b><br />
<b><span style="color: blue; font-size: large;">ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ನಾಯಕನಿಗಾಗಿ ಹಂಬಲಿಸೋ ಮತದಾರ, ಪತಿ ಯಶೋಧರನನ್ನು ತಿರಸ್ಕರಿಸಿ ಅಷ್ತಾವಕ್ರನ ಹಿಂಸಾರತಿಗಾಗಿ ಹಂಬಲಿಸೋ ಅಮೃತ ಮತಿಯಂತೆ ಭಾಸವಾಗುತ್ತಾನೆ. ಅತ್ಯಂತ ಕ್ರೂರಿಯೂ, ವಿಕಾರಿಯೂ ಆಗಿರುವ ಅಷ್ಟಾವಕ್ರ ಚಾಟಿಯಿಂದ ಬಾರಿಸುವಾಗ, ಅಮೃತಮತಿ ಕಾಮನೆಯಿಂದ ಸುಖಿಸುತ್ತಾ "... ಇನ್ನಷ್ಟು ಹೊಡಿ, ಆದರೆ ನನ್ನನ್ನು ತಿರಸ್ಕರಿಸಬೇಡ" ಎಂದು ದೀನವಾಗಿ ಬೇಡಿಕೊಳ್ಳುವ ಮನಸ್ಥಿತಿ ಮೋದಿಗಾಗಿ ಇನ್ನೂ ಹಪಹಪಿಸುತ್ತಿರುವ ಜನರಲ್ಲಿ ಆಳವಾಗಿ ಬಚ್ಚಿಟ್ಟು ಕೊಂಡಿದೆಯೇ ? ಜನ್ನನ 'ಯಶೋಧರ ಚರಿತೆ'ಯನ್ನು ಓದುತ್ತಿರುವಾಗ ಹೀಗೊಂದು ಆಲೋಚನೆ ಬಂದು ಬಿಟ್ಟಿತು ....</span></b><br />
<b><span style="color: blue; font-size: large;"><br /></span></b>
<b><span style="color: blue; font-size: large;">11</span></b><br />
<b><span style="font-size: large;"><span style="color: purple;">ಅಂಬಿಗ ಮತ್ತು ಅವನ ಮಗ </span></span></b><br />
<b><span style="color: blue; font-size: large;">ಇದೂ ರಿಕ್ಷಾ ಚಾಲಕನೇ ಹೇಳಿದ ಕತೆ. ಕಚೇರಿ ಕಡೆ ರಿಕ್ಷಾದಲ್ಲಿ ಸಾಗುತ್ತಿರುವಾಗ "ಮೋದಿಯ ನೋಟು ನಿಷೇಧದ ಅವಾಂತರಗಳ" ಬಗ್ಗೆ ಈ ಚಾಲಕ ಗೊಣಗುತ್ತಿದ್ದ. ಚಾಲಕ ವಯಸ್ಸಲ್ಲಿ ತುಂಬಾ ಹಿರಿಯ. ಜೊತೆಗೆ ತುಂಬಾ ತಿಳುವಳಿಕೆ ಉಳ್ಳವರಂತೆಯೂ ಕಾಣುತ್ತಿದ್ದರು. </span></b><br />
<b><span style="color: blue; font-size: large;">"ಸ್ವಾಮೀ, ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂತಹದೇ ಸ್ಥಿತಿ ಇತ್ತು ಗೊತ್ತಾ ? ಒಮ್ಮೊಮ್ಮೆ ಹಾಗೆ ಆಗ್ತದೆ" ನಾನು ಚಾಲಕನನ್ನು ಸಮಾಧಾನಿಸಿದೆ. </span></b><br />
<b><span style="color: blue; font-size: large;">ಚಾಲಕ ನಿಟ್ಟುಸಿರಿಟ್ಟು ಹೇಳಿದ "ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭ ನನಗೆ ಇಪ್ಪತ್ತು ವರ್ಷ. ನೀವಾಗ ಹುಟ್ಟಿರಲಿಕ್ಕೆ ಇಲ್ಲ. ಆಗ ದುಡಿಯುವ ಜನ ಹೀಗೆ ಬೀದಿಗೆ ಬಿದ್ದಿರಲಿಲ್ಲ.... ದೊಡ್ಡವರನ್ನೆಲ್ಲ ಹಿಡಿದು ಜೈಲಿಗೆ ಹಾಕಿದಳು ಆಕೆ ... ನಿಮಗೆ ದೋಣಿಯವನ ಕತೆ ಗೊತ್ತಾ? " ಎಂದು ಕೇಳಿದರು </span></b><br />
<b><span style="color: blue; font-size: large;">"ಗೊತ್ತಿಲ್ಲ ಹೇಳಿ ... " ಎಂದೆ. </span></b><br />
<b><span style="color: blue; font-size: large;">ಅವನು ಕತೆ ಹೇಳ ತೊಡಗಿದ. </span></b><br />
<b><span style="color: blue; font-size: large;">"ಒಂದು ಊರು. ನದಿ ದಾಟಿಯೇ ಆ ಊರಿಗೆ ಹೋಗಬೇಕು. ಆ ಊರಿಗೆ ಒಂದೇ ದೋಣಿ. ಒಬ್ಬನೇ ಅಂಬಿಗ. ಹೆಂಗಸರ ವಿಷಯದಲ್ಲಿ ಈ ಅಂಬಿಗನ ವರ್ತನೆ ಅಷ್ಟು ಸರಿ ಇರಲಿಲ್ಲ ... ದೋಣಿಯನ್ನು ಆತ ಪೂರ್ತಿ ದಡದ ಸಮೀಪ ನಿಲ್ಲಿಸುತ್ತಿರಲಿಲ್ಲ. ಮೊಣಕಾಲಿಗಿಂತ ಜಾಸ್ತಿ ನೀರು ಇರುವಲ್ಲಿ ದೋಣಿ ನಿಲ್ಲಿಸುತ್ತಿದ್ದ. ಇದರಿಂದ ಮಹಿಳೆಯರು ತಮ್ಮ ಸೀರೆಯನ್ನು ಮೊಣಕಾಲಿಗಿಂತ ಮೇಲೆ ಮಾಡಿ ದಡ ಸೇರಬೇಕಾಗಿತ್ತು. ಈ ಮೂಲಕ ಅಂಬಿಗನಿಗೆ ಹೆಂಗಸರ ಕಾಲು ನೋಡುವ ಚಪಲ. ಹೆಂಗಸರು ಅಂಬಿಗನಿಗೆ ಶಾಪ ಹಾಕುತ್ತ, ಸೀರೆ ಮೇಲೆತ್ತಿ ದಡ ಸೇರುತ್ತಿದ್ದರು. ಇದು ಹೀಗೆ ನಡೆಯುತ್ತಲೇ ಇತ್ತು. ಸದಾ ಹೆಂಗಸರಿಗೆ ಅಂಬಿಗನನ್ನು ಬೈಯೋದೆ ಕೆಲಸ ... "</span></b><br />
<b><span style="color: blue; font-size: large;">"... ಹೀಗಿರುವಾಗ ಅಂಬಿಗನಿಗೆ ವಯಸ್ಸಾಯಿತು. ಸಾಯುವ ಸಮಯವಾಯಿತು. ಆಗ ಮಗನಿಗೆ ದೋಣಿ ಬಿಡುವ ಹೊಣೆಗಾರಿಕೆ ಕೊಟ್ಟು ಹೇಳಿದ 'ಮಗನೆ ನಿನ್ನ ತಂದೆಯ ಹೆಸರು ಉಳಿಸಬೇಕು. ಊರವರೆಲ್ಲ ನಿನ್ನಿಂದಾಗಿ ನನ್ನನ್ನು ಹೊಗಳುವಂತಾಗಬೇಕು'</span></b><br />
<b><span style="color: blue; font-size: large;">ಮಗ ಮಾತು ಕೊಟ್ಟ. ಸರಿ, ತಂದೆಯ ಹೆಸರು ಉಳಿಸೋದು ಹೇಗೆ ? ಒಂದು ಉಪಾಯ ಮಾಡಿದ. </span></b><br />
<b><span style="color: blue; font-size: large;">ತಂದೆ ಮೊಣಕಾಲು ನೀರಿನಲ್ಲಿ ದೋಣಿ ನಿಲ್ಲಿಸೋದು ಅವನಿಗೆ ಗೊತ್ತಿತ್ತು. ಇದೀಗ ಮಗನೋ ಸೊಂಟದವರೆಗೆ ನೀರಿನಲ್ಲಿ ದೋಣಿ ನಿಲ್ಲಿಸ ತೊಡಗಿದ. ಮಹಿಳೆಯರಿಗೆ ಮತ್ತಷ್ಟು ಪೀಕಲಾಟ. ಈಗ ಸೀರೆಯನ್ನು ಇನ್ನಷ್ಟು ಮೇಲಕ್ಕೆತ್ತಬೇಕಾಗಿತ್ತು. 'ಇವನಿಗಿಂತ ಇವನ ತಂದೆ ಎಷ್ಟೋ ಒಳ್ಳೆಯವನು. ಇವನಿಗಿಂತ ಅವನೇ ಆಗಬಹುದು' ಎಂದು ಹಳೆಯ ಅಂಬಿಗನನ್ನು ಜನರು ಹೊಗಳ ತೊಡಗಿದರು. ಹೀಗೆ ಮಗ ತಂದೆಯ ಹೆಸರನ್ನು ಉಳಿಸಿದ......"</span></b><br />
<b><span style="color: blue; font-size: large;">ಹೀಗೆ ತನ್ನ ಕತೆಯನ್ನು ಮುಗಿಸಿದ ರಿಕ್ಷಾ ಚಾಲಕ ಹೇಳಿದರು "ಮೋದಿಯಿಂದಾಗಿ ಇಂದಿರಾಗಾಂಧಿಯ ಹೆಸರು ಉಳಿಯಿತು ನೋಡಿ ... "</span></b><br />
<b><span style="color: blue; font-size: large;">ಅಷ್ಟರಲ್ಲಿ ನಾನು ಇಳಿಯುವ ಸ್ಟಾಪ್ ಬಂತು. </span></b></div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-26723292033146727372016-09-23T03:35:00.001-07:002016-09-23T09:09:20.124-07:00ನನ್ನದೇ ಧ್ವನಿಯಲ್ಲಿ .... ಹನಿಗಳು<div dir="ltr" style="text-align: left;" trbidi="on">
<div dir="ltr" style="text-align: left;" trbidi="on">
<b><span style="color: blue; font-size: large;">"ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು" ಕೃತಿಯ ಕೆಲವು ಹನಿಗಳು, ನನ್ನದೇ ಕಣ್ಣಲ್ಲಿ- ನನ್ನದೇ ಧ್ವನಿಯಲ್ಲಿ ....</span></b><br />
</div>
<iframe allowfullscreen="true" allowtransparency="true" frameborder="0" height="315" scrolling="no" src="https://www.facebook.com/plugins/video.php?href=https%3A%2F%2Fwww.facebook.com%2Fbasheerbm.bm%2Fvideos%2F10205300282946209%2F&show_text=0&width=560" style="border: none; overflow: hidden;" width="450"></iframe></div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-22245096443406184002016-09-16T02:11:00.000-07:002016-09-16T02:13:01.087-07:00ಮಿನಿ ಕತೆ: ಆದೇಶ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEj9S8pIj1nbz1QhVzCeLFQ6OEG0lCcKoGBjKTXQyZ708g66V5BjQpuiJGdagpmf3T4Qo8LxXZCCpLidwDN54RAwXOiBfpCSu1vMNgYF6ThyphenhyphenWu5wngxdyIC1lWp3uHXmpq-ahHX7x1vTg5Td/s1600/court-1.jpg" imageanchor="1" style="margin-left: 1em; margin-right: 1em;"><span style="color: blue; font-size: large;"><b><img border="0" height="155" src="https://blogger.googleusercontent.com/img/b/R29vZ2xl/AVvXsEj9S8pIj1nbz1QhVzCeLFQ6OEG0lCcKoGBjKTXQyZ708g66V5BjQpuiJGdagpmf3T4Qo8LxXZCCpLidwDN54RAwXOiBfpCSu1vMNgYF6ThyphenhyphenWu5wngxdyIC1lWp3uHXmpq-ahHX7x1vTg5Td/s320/court-1.jpg" width="320" /></b></span></a></div>
<div style="background-color: white; font-family: helvetica, arial, sans-serif; line-height: 19.32px; margin-bottom: 6px;">
<span style="color: blue; font-size: large;"><b><span style="line-height: 19.32px;">ವಿಶ್ವ ವಿದ್ಯಾಲಯದ ಮಹಿಳಾ ಶೌಚಾಲಯದಲ್ಲಿ ಕ್ಯಾಮರ ಪತ್ತೆಯಾಯಿತು.</span><span style="line-height: 19.32px;"> </span></b></span></div>
<div style="background-color: white; font-family: helvetica, arial, sans-serif; line-height: 19.32px; margin-bottom: 6px;">
<span style="color: blue; font-size: large;"><b><span style="line-height: 19.32px;">ಯಾರು? ಏನು? ಹೇಗೆ? ಗುಲ್ಲೆ ಗುಲ್ಲು.</span><span style="line-height: 19.32px;"> </span></b></span></div>
<div style="background-color: white; font-family: helvetica, arial, sans-serif; line-height: 19.32px; margin-bottom: 6px; margin-top: 6px;">
<span class="text_exposed_show" style="display: inline;"><span style="color: blue; font-size: large;"><b>ಕೊನೆಗೂ ಜನರ ಆಕ್ರೋಶಕ್ಕೆ ಮಣಿದು ನಿಜವಾದ ಆರೋಪಿಯನ್ನು ಪತ್ತೆ ಮಾಡಲಾಯಿತು.<br />ಆದರೆ ಬಂಧಿಸಿದ ಸಂಜೆಯೇ ಆರೋಪಿಗೆ ಜಾಮೀನು ನೀಡಲಾಯಿತು.<br />ಜಾಮೀನಿಗಾಗಿ ಮಂಡಿಸಿದ ಕಾರಣಗಳು ಕೆಳಗಿನಂತಿದ್ದವು.<br />೧. ಮಾಂಸಾಹಾರ ಮಾತ್ರ ತಾಮಸ ಗುಣಗಳನ್ನು ಸೃಷ್ಟಿಸುತ್ತವೆ. ಈ ಕುರಿತು ಪೇಜಾವರರ ಪ್ರಮಾಣ ಪತ್ರವೂ ಇದೆ. ಹುಡುಗ ಹುಟ್ಟಿನಿಂದಲೇ ಸಸ್ಯಾಹಾರಿ ಆದುದರಿಂದ ಅವನಲ್ಲಿ ತಾಮಸ ಗುಣಗಳು ಇರುವ ಸಾಧ್ಯತೆ ಇಲ್ಲ. ಆದುದರಿಂದ ಅವನು ಕ್ಯಾಮರ ಇಟ್ಟಿರೋದು ಹುಡುಗಾಟಿಕೆಗೆ ಎನ್ನೋದು ಗೊತ್ತಾಗುತ್ತದೆ<br />೨. ಹುಡುಗ ಗೋಮಾಂಸ ವಿರೋಧಿಯಾಗಿದ್ದಾನೆ. ಆದುದರಿಂದ ಅವನಲ್ಲಿ ರಾಕ್ಷಸ ಗುಣ ಇಲ್ಲ ಎನ್ನೋದು ರಾಘವೇಶ್ವರ ಶ್ರೀ ಗಳ ಪ್ರಮಾಣ ಪತ್ರದಿಂದ ತಿಳಿದು ಬಂದಿದೆ. ಮಹಿಳೆಯರ ವಿಷಯದಲ್ಲಿ ಹುಡುಗ ರಾಘವೇಶ್ವರ ಶ್ರೀಗಳಷ್ಟೇ ಅಮಾಯಕನಾಗಿದ್ದಾನೆ.<br />೩. ಆರೋಪಿಗೆ ಆರೆಸ್ಸೆಸ್ ಹಿನ್ನೆಲೆ ಇರೋದರಿಂದ, ಹಿಂದೂ ಮಾತೆಯರ ರಕ್ಷಣೆಗಾಗಿ ಆ ಕ್ಯಾಮರಾ ವನ್ನು ಶೌಚಾಲಯದಲ್ಲಿ ಇಟ್ಟಿದ್ದಾನೆ ಎಂದೂ ಪರಿಗಣಿಸ ಬಹುದು.<br />ಮೇಲಿನೆಲ್ಲ ಸಾಕ್ಷ್ಯಾಧಾರಗಳನ್ನ ಪರಿಗಣಿಸಿದ ನ್ಯಾಯಾಧೀಶರು ಇಂತೆಂದು ತೀರ್ಪು ನೀಡಿದರು;<br />"ಆರೋಪಿಗೆ ತಕ್ಷಣ ನ್ಯಾಯಾಲಯ ಜಾಮೀನು ನೀಡಿದೆ. ಹಾಗು ಪೊಲೀಸರು ನ್ಯಾಯಯುತವಾದ ತನಿಖೆ ನಡೆಸಿ ತಕ್ಷಣ ಗೋಮಾಂಸಾಹಾರಿಯೊಬ್ಬನನ್ನು ಬಂಧಿಸಿ, ಅವನ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ನ್ಯಾಯ ನೀಡಬೇಕು ಎಂದು ಆದೇಶಿಸುತ್ತದೆ"</b></span></span></div>
</div>
B.M.BASHEERhttp://www.blogger.com/profile/14436644887076126519noreply@blogger.com1tag:blogger.com,1999:blog-3037848766175505211.post-26551711434225454002016-09-11T10:45:00.002-07:002016-09-11T10:46:27.917-07:00ಹನಿ ಕತೆಗಳು: ಗೋಮಾಂಸ ಮತ್ತು ರಕ್ತ <div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh_8972j8f4uqvB_mA1WCowBae1VYC6rmDtqiuwxp30ajbIR6n_JgORPhZ5myBDb6Q4ZLCNa_LDe2YinIwMcwsNbVVVGplHWj6VSpiw9Yk8EPiOr41PjE-lQTEiPzgIe7V9d-WxY1is3cyq/s1600/beef.jpg" imageanchor="1" style="margin-left: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEh_8972j8f4uqvB_mA1WCowBae1VYC6rmDtqiuwxp30ajbIR6n_JgORPhZ5myBDb6Q4ZLCNa_LDe2YinIwMcwsNbVVVGplHWj6VSpiw9Yk8EPiOr41PjE-lQTEiPzgIe7V9d-WxY1is3cyq/s320/beef.jpg" width="306" /></a></div>
<b style="color: blue; font-size: x-large;">1</b><br />
<span style="color: purple; font-size: large;"><b>ಗೋರಕ್ಷಕರು</b></span><br />
<span style="color: blue; font-size: large;"><b>ಆ ಮನೆಯಲ್ಲಿ 50 ವರ್ಷಗಳಿಂದ ಗೋವು ಸಾಕುತ್ತಿದ್ದರು. </b></span><br />
<span style="color: blue; font-size: large;"><b>ಒಂದು ಗುಂಪು ಮನೆಗೆ ನುಗ್ಗಿತು </b></span><br />
<span style="color: blue; font-size: large;"><b>"ನೀವು ನಿಮ್ಮ ಗೋವನ್ನು ಮಾರಿದ್ದೀರಾ?''</b></span><br />
<span style="color: blue; font-size: large;"><b>"ಹೌದು" ಮನೆ ಮಾಲಕ ಉತ್ತರಿಸಿದ. </b></span><br />
<span style="color: blue; font-size: large;"><b>ಮನೆಯ ಮೇಲೆ ಗುಂಪು ದಾಳಿ ಮಾಡಿತು. ಮನೆ ಮಾಲಕನನ್ನು ಸಾಯುವಂತೆ ಬಡಿಯಲಾಯಿತು. </b></span><br />
<span style="color: blue; font-size: large;"><b>ಮಹಿಳೆಯರನ್ನು ಅರೆ ಬೆತ್ತಲೆ ಮಾಡಲಾಯಿತು. </b></span><br />
<span style="color: blue; font-size: large;"><b>ಹಟ್ಟಿಯಲ್ಲಿದ್ದ ದನಗಳನ್ನೆಲ್ಲ ಎಳೆದೊಯ್ಯಲಾಯಿತು. </b></span><br />
<span style="color: blue; font-size: large;"><b>ಯಾರೋ ಗುಂಪಿನ ಜೊತೆ ಕೇಳಿದರು "ಯಾರು ನೀವು ?"</b></span><br />
<span style="color: blue; font-size: large;"><b>ಗುಂಪು ಜೋರಾಗಿ ಹೇಳಿತು "ನಾವು ಗೋರಕ್ಷಕರು''</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>2</b></span><br />
<span style="color: purple; font-size: large;"><b>ವೆಜಿಟೇರಿಯನ್ ರಕ್ತ</b></span><br />
<span style="color: blue; font-size: large;"><b>ಗೆಳೆಯನೊಬ್ಬನಿಂದ ದೂರವಾಣಿ ಕರೆ "ನನ್ನ ತಂದೆಯ ಜೀವ ಅಪಾಯದಲ್ಲಿದೆ. ತುರ್ತಾಗಿ ಬಿ ನೆಗೆಟಿವ್ ರಕ್ತ ಬೇಕಾಗಿದೆ. ವೆಜಿಟೇರಿಯನ್ ರಕ್ತ ಆಗಿದ್ದರೆ ತುಂಬಾ ಉಪಕಾರ. ದಯವಿಟ್ಟು ಪ್ರಯತ್ನಿಸಿ"</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>3</b></span><br />
<span style="color: purple; font-size: large;"><b>ಪರೀಕ್ಷೆ</b></span><br />
<span style="color: blue; font-size: large;"><b>ಬೀಫ್ ಪರೀಕ್ಷೆಯಲ್ಲಿ ವಿಫಲ:</b></span><br />
<span style="color: blue; font-size: large;"><b>ಭಾರತೀಯ ಒಲಿಂಪಿಕ್ಸ್ ಆಟಗಾರ ನಾಲ್ಕು ವರ್ಷ ಅಮಾನತು</b></span><br />
<span style="color: blue; font-size: large;"><b>ಪೋಲೀಸರ ವಶಕ್ಕೆ ಆಟಗಾರ</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>4</b></span><br />
<span style="color: purple; font-size: large;"><b>ಫಲಕ</b></span><br />
<span style="color: blue; font-size: large;"><b>ಆಸ್ಪತ್ರೆಯೊಂದರ ಬ್ಲಡ್ ಬ್ಯಾಂಕ್ ನಲ್ಲಿ ಹೀಗೊಂದು ಸೂಚನಾ ಫಲಕ: </b></span><br />
<span style="color: blue; font-size: large;"><b>ಬೀಫ್ ತಿಂದವರ ರಕ್ತವನ್ನು ಸ್ವೀಕರಿಸಲಾಗೂದಿಲ್ಲ </b></span><br />
<span style="color: blue; font-size: large;"><b>ನಿಮ್ಮ ರಕ್ತದಲ್ಲಿ ಬೀಫ್ ಅಂಶ ಪತ್ತೆಯಾದರೆ ನಿಮ್ಮನ್ನು ಪೊಲೀಸರಿಗೆ ಒಪ್ಪಿಸಲಾಗೂದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>5</b></span><br />
<span style="color: purple; font-size: large;"><b>ಚರ್ಚೆ</b></span><br />
<span style="color: blue; font-size: large;"><b>ಬೀಫ್ ತಿಂದರೆಂದು ಆ ಮನೆಯ ಯಜಮಾನನ ಕೊಂದು ಮಹಿಳೆಯರ ಮೇಲೆ ಗುಂಪು ಅತ್ಯಾಚಾರವೆಸಗಿತು. </b></span><br />
<span style="color: blue; font-size: large;"><b>ಮಾಧ್ಯಮಗಳಲ್ಲಿ ಈಗ ದಿನ ಪೂರ್ತಿ ಚರ್ಚೆ. </b></span><br />
<span style="color: blue; font-size: large;"><b>"ತಿಂದದ್ದು ಬೀಫ್ ಹೌದೋ? ಅಲ್ಲವೋ?"</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>6</b></span><br />
<span style="color: purple; font-size: large;"><b>ಭರವಸೆ</b></span><br />
<span style="color: blue; font-size: large;"><b>ಇದೀಗ ಬಂದ ಸುದ್ದಿ:</b></span><br />
<span style="color: blue; font-size: large;"><b>ರೋಗಿಗೆ ನೀಡಿದ ರಕ್ತದಲ್ಲಿ ಗೋಮಾಂಸದ ಅಂಶ ಪತ್ತೆ. </b></span><br />
<span style="color: blue; font-size: large;"><b>ರಕ್ತ ದಾನದ ಸಂದರ್ಭದಲ್ಲಿ ಆದ ಎಡವಟ್ಟು. </b></span><br />
<span style="color: blue; font-size: large;"><b>ಬ್ಲಡ್ ಬ್ಯಾಂಕಿನ ಪರವಾನಿಗೆ ವಜಾ. </b></span><br />
<span style="color: blue; font-size: large;"><b>ಆಸ್ಪತ್ರೆ ಸಿಬ್ಬಂದಿಗಳ ಬಂಧನ. </b></span><br />
<span style="color: blue; font-size: large;"><b>ಇನ್ನೆರಡು ದಿನಗಳಲ್ಲಿ ರಕ್ತ ದಾನ ಮಾಡಿದ ವ್ಯಕ್ತಿಯನ್ನು ಬಂಧಿಸುತ್ತೇವೆ : ಪೋಲೀಸರ ಭರವಸೆ</b></span></div>
B.M.BASHEERhttp://www.blogger.com/profile/14436644887076126519noreply@blogger.com2tag:blogger.com,1999:blog-3037848766175505211.post-10556209371496931502016-09-04T04:33:00.001-07:002016-09-04T04:36:44.478-07:00ದೇಶ ಕಟ್ಟುವುದಕ್ಕೆ ರಿಲಯನ್ಸ್ ಸಿಮೆಂಟ್...!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjaXJkjmsujxtlV9dCR81aQY4vqJpjw-_eoQECXDjxAhHV55P4asZNre_O0d8x1hdDD26RXd2KbaUiLUlENwlBAXMpPWQIzL2trOEL_NPCbcht9lahy30KQBkbY-L1FGs-EsCcjUR38Re4L/s1600/narendra+modi+caricature.png" imageanchor="1" style="margin-left: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEjaXJkjmsujxtlV9dCR81aQY4vqJpjw-_eoQECXDjxAhHV55P4asZNre_O0d8x1hdDD26RXd2KbaUiLUlENwlBAXMpPWQIzL2trOEL_NPCbcht9lahy30KQBkbY-L1FGs-EsCcjUR38Re4L/s320/narendra+modi+caricature.png" width="313" /></a></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<b style="color: blue; font-family: tunga; letter-spacing: 0.133333px; line-height: 19.2px; text-indent: 11.3333px;"><span style="font-size: large;">ಮೋದಿ ವಿಶ್ವಕ್ಕೇ ಮೋಡೆಲ್ ಪ್ರಧಾನಿಯಾಗುತ್ತಾರೆ ಎಂದು ಸಂಘಪರಿವಾರ ಸಹಿತ ಮೋದಿ ಭಕ್ತರು ಹೇಳಿಕೆ ನೀಡುತ್ತಲೇ ಇದ್ದರು. ಇದೀಗ ಅದನ್ನು ಸಾಬೀತು ಪಡಿಸುವಂತೆ ಅವರು ಮೋಡೆಲ್ ಆಗಿಯೇ ಬಿಟ್ಟಿರುವುದು ನೋಡಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡು ನೇರವಾಗಿ ಅನಿಲ್ ಅಂಬಾನಿಯವರ ಮನೆಯ ಬಾಗಿಲು ತಟ್ಟಿದ. </span></b><br />
<b style="color: blue; font-family: tunga; letter-spacing: 0.133333px; line-height: 19.2px; text-indent: 11.3333px;"><span style="font-size: large;">‘‘ಯಾರು ಬೇಕಾಗಿತ್ತು?’’ ವಾಚ್ಮೆನ್ ಕೇಳಿದ.</span></b></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ನರೇಂದ್ರ ಮೋದಿಯವರು ಬೇಕಾಗಿತ್ತು’’ ಕಾಸಿ ಹೇಳಿ ಹಲ್ಲು ಕಿರಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಅದಕ್ಕೆ ನರೇಂದ್ರ ಮೋದಿಯವರ ಮನೆಗೆ ಹೋಗಬೇಕಾಗಿತ್ತು...’’ ವಾಚ್ಮೆನ್ ಹೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಅಲ್ಲಿ ಹೋದ್ರೆ ಅನಿಲ್ ಅಂಬಾನಿ ಮನೆಯಲ್ಲಿದ್ದಾರೆ ಎಂದು ಹೇಳಿದರು. ಅದಕ್ಕೆ ಇಲ್ಲಿಗೆ ಬಂದೆ...’’</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಆದ್ರೆ ಅವರು ಸ್ಟುಡಿಯೋದಲ್ಲಿ ಶೂಟಿಂಗ್ನಲ್ಲಿದ್ದಾರೆ...’’ ವಾಚ್ಮೆನ್ ಮುಖಕ್ಕೆ ಹೊಡೆದಂತೆ ಹೇಳಿದ. ‘‘ಸಿನೆಮಾದಲ್ಲಿ ನಟಿಸುತ್ತಿದ್ದಾರಾ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಇಲ್ಲಾರಿ. ಈಗ ಅವರು ವಿಶ್ವಕ್ಕೇ ಮೋಡೆಲ್ ಆಗಲು ಹೊರಟಿದ್ದಾರೆ...’’ ವಾಚ್ಮೆನ್ ಹೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಅದಕ್ಕೆ ಇಲ್ಲೇನು ಮಾಡುತ್ತಿದ್ದಾರೆ ?’’</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಅದೇರಿ. ಅನಿಲ್ ಅಂಬಾನಿ ಪ್ರಾಡಕ್ಟ್ಗಳಿಗೆ ವಿಶ್ವದ ಎಲ್ಲ ದೇಶಗಳಿಗೂ ಇವರೇ ಮೋಡೆಲ್ ಆಗಲಿದ್ದಾರೆ’’ ವಾಚ್ಮೆನ್ ಹೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಸಾರ್...ಅವರ ಒಂದು ಇಂಟರ್ಯೂ ಬೇಕಾಗಿತ್ತು’’ ಕಾಸಿ ಮನವಿ ಮಾಡಿದ. ‘‘ಅವರು ದೇಶ ಕಟ್ಟುವಲ್ಲಿ ಬಿಜಿಯಾಗಿದ್ದಾರೆ ಕಣ್ರೀ...ಈಗ ವಿಶ್ವಕ್ಕೇ ಮೋಡೆಲ್ ಬೇರೆ. ಬೇಕಾದ್ರೆ ನನ್ನದೇ ಇಂಟರ್ಯೂ ತೆಗೆದುಕೊಳ್ಳಿ...’’</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಅಂದರೆ ದೇಶ ಕಟ್ಟುವುದಕ್ಕೂ ಅಂಬಾನಿಗೂ ಏನು ಸಂಬಂಧ?’’ ಕಾಸಿ ಅರ್ಥವಾಗದೆ ಕೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ದೇಶ ಕಟ್ಟಬೇಕಾದರೆ ಅದಕ್ಕೆ ಭಾರೀ ಪ್ರಮಾಣದಲ್ಲಿ ಸಿಮೆಂಟ್ ಬೇಕಲ್ವಾ...ಈ ನಿಟ್ಟಿನಲ್ಲಿ ರಿಲಯನ್ಸ್ ಸಿಮೆಂಟಿನಿಂದಲೇ ದೇಶ ಕಟ್ಟುವ ಬಗ್ಗೆ ಅವರು ಯೋಚಿಸುತ್ತಿದ್ದಾರೆ. ಈ ಬಗ್ಗೆ ಮಾತುಕತೆಯೂ ನಡೆಯುತ್ತಿದೆ....ಮೋದಿಯ ದೇಶ ನಿರ್ಮಾಣದಲ್ಲಿ ರಿಲಯನ್ಸ್ ಸಿಮೆಂಟಿನ ಮಹತ್ವದ ಬಗ್ಗೆ ಈಗಾಗಲೇ ಸಂಘಪರಿವಾರ ನಾಯಕರೆಲ್ಲ ತಮ್ಮ ತಮ್ಮ ಶಾಖೆಗಳಲ್ಲಿ ಭಾಷಣ ಮಾಡುತ್ತಿದ್ದಾರೆ. ನಿಮಗೆ ಗೊತ್ತಿಲ್ಲವೆ?’’ ವಾಚ್ಮೆನ್ ಪ್ರಶ್ನಿಸಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಸಿಮೆಂಟು ರಿಲಯನ್ಸಿನದ್ದಾದರೆ ಮರಳು ಯಾವ ಕಂಪೆನಿಯಿಂದ ಬಳಸುತ್ತಾರೆ ಸಾರ್....’’ ಕಾಸಿ ವಾಚ್ಮೆನ್ಗೆ ತುಸು ಮರ್ಯಾದೆ ನೀಡಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಮರಳು ಮಾಫಿಯಾದವರಿಗೆ ಪೂರ್ಣ ಸ್ವಾತಂತ್ರವನ್ನು ನೀಡಲಾಗಿದೆ. ದೇಶಕಟ್ಟುವುದಕ್ಕಾಗಿ ಎಷ್ಟು ಬೇಕಾದರೂ ಅಕ್ರಮವಾಗಿ ಮರಳನ್ನು ನದಿಯಿಂದ ಎತ್ತಿರಿ ಎಂದು ಈಗಾಗಲೇ ಮೋದಿ ಸೂಚನೆ ನೀಡಿದ್ದಾರೆ. ರಿಲಯನ್ಸ್ ಸಿಮೆಂಟಿಗೆ ಅಕ್ರಮ ಮರಳು ಸೇರಿಸಿ ದೇಶವನ್ನು ಅತಿ ಬೇಗನೇ ಕಟ್ಟಲಾಗುತ್ತದೆ...’’ ವಾಚ್ಮೆನ್ ವಿವರಗಳನ್ನು ನೀಡಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ರಿಲಯನ್ಸ್ನ ಡಾಟಾಗಳು ಅಗ್ಗವಾಗಿವೆ...ಆದರೆ ಜನರ ರೇಶನ್ಗಳ ಬೆಲೆ ಏರುತ್ತಿದೆಯಲ್ಲ...ಇದರ ಬಗ್ಗೆ ಏನು ಹೇಳುತ್ತಾರೆ ಮೋದಿಯವರು?’’ ಕಾಸಿ ಅತ್ಯಾಸಕ್ತಿಯಿಂದ ಕೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b> ‘‘ರೇಷನ್ ಅಂಗಡಿಯಲ್ಲಿ ಇನ್ನು ಮುಂದೆ ರಿಲಯನ್ಸ್ ಡಾಟಾಗಳು ಬಿಪಿಎಲ್, ಎಪಿಎಲ್ ಕಾರ್ಡ್ಗಳಿಗೆ ವಿತರಿಸುವ ಯೋಜನೆಯೊಂದು ನಡೆಯುತ್ತಿದೆ. ರಿಲಯನ್ಸ್ನವರಿಗೆ ಸಬ್ಸಿಡಿಯನ್ನು ನೀಡಿ ಅಗ್ಗವಾಗಿ ಡಾಟಾಗಳನ್ನು ಜನರಿಗೆ ರೇಷನ್ ಅಂಗಡಿಯಲ್ಲೇ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಇದರ ಹೊರೆ ಸರಕಾರಕ್ಕೆ ಬೀಳುವುದರಿಂದ ವಿಶೇಷ ಡಾಟಾ ತೆರಿಗೆಯನ್ನು ಜನರ ಮೇಲೆ ವಿಧಿಸಲಾಗುತ್ತದೆ...’’ ವಾಚ್ಮೆನ್ ಇನ್ನಷ್ಟು ವಿವರಗಳನ್ನು ನೀಡಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಆದರೆ ಜನರಿಗೆ ಆಹಾರಕ್ಕೆ ಏನು ಮಾಡುವುದು?’’ ಕಾಸಿ ಆತಂಕದಿಂದ ಕೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ನೋಡ್ರಿ....ಮೊಬೈಲ್ಗಳಲ್ಲೇ ವಿವಿಧ ಬಗೆಯ ಆಹಾರಗಳನ್ನು ಶೇರ್ ಮಾಡಿ ಹಂಚುವ ವ್ಯವಸ್ಥೆಯನ್ನು ಮಾಡಲಾಗುತ್ತದೆ...ಎಲ್ಲ ಬಡವರಿಗೆ ಬಿರಿಯಾನಿ(ಕಡ್ಡಾಯವಾಗಿ ಚಿಕನ್ ಮಾತ್ರ) ಇನ್ನಿತರ ಆಹಾರಗಳನ್ನು ಮೊಬೈಲ್ ಮೂಲಕವೇ ರಿಲಯನ್ಸ್ ಡಾಟಾಗಳಲ್ಲಿ ದೇಶಾದ್ಯಂತ ವಿತರಿಸಲಾಗುತ್ತದೆ’’ ವಾಚ್ಮೆನ್ ಹೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ರಿಲಯನ್ಸ್ ಮೊಬೈಲ್ಗಳ ಮುಖಾಂತರ ಆಹಾರ ವಿತರಣೆಯೇ...’’ ಕಾಸಿ ಅಚ್ಚರಿಯಿಂದ ಕೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಹೌದ್ರೀ....ಡಾಟಾಗಳಿಗಷ್ಟೇ ಚಾರ್ಜಾಗತ್ತೆ. ಆದರೆ ಆಹಾರ ಮಾತ್ರ ಪುಕ್ಕಟೆಯಾಗಿ ವಿತರಣೆಯಾಗುತ್ತೆ...’’ ವಾಚ್ಮೆನ್ ಹೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಅಂದರೆ...’’ ಕಾಸಿಗೆ ಅರ್ಥವಾಗಲಿಲ್ಲ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಅದೇರಿ...ಮೊಬೈಲ್ನಲ್ಲೇ ವಾಟ್ಸ್ಆ್ಯಪ್ ಮೂಲಕ ಬಗೆ ಬಗೆಯ ಆಹಾರಗಳನ್ನು ಶೇರ್ ಮಾಡಲಾಗುತ್ತೆ. ಮೊಬೈಲ್ಗಳಲ್ಲೇ ಬೇರೆ ಬೇರೆ ಆಹಾರಗಳನ್ನು ಡೌನ್ಲೋಡ್ ಮಾಡಬಹುದು...ಇದರಿಂದಾಗಿ ಆಹಾರ ಬೇಯಿಸುವ ಸಮಸ್ಯೆಯೇ ಇರುವುದಿಲ್ಲ. ಸಬ್ಸಿಡಿ ಸಿಲಿಂಡರ್ಗಳನ್ನೆಲ್ಲ ರದ್ದು ಮಾಡಲಾಗುತ್ತದೆ’’ ವಾಚ್ಮೆನ್ ಹೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಅಲ್ಲಾರಿ...ಮೊಬೈಲ್ಗಳಲ್ಲಿ ಆಹಾರಗಳ ಚಿತ್ರಗಳನ್ನ ಡೌನ್ಲೋಡ್ ಮಾಡಿ ಅದನ್ನು ತಿನ್ನೋಕ್ಕಾಗತ್ತ?’’ ಕಾಸಿ ಅಚ್ಚರಿಯಿಂದ ಕೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b> ‘‘ಏನ್ರೀ...ಮೋದಿ ಸರಕಾರ ಯಾವ ಯೋಜನೆಗಳನ್ನು ಹಾಕಿದರೂ ಅದನ್ನು ಟೀಕೆ ಮಾಡುವುದೇ ನಿಮಗೆ ಅಭ್ಯಾಸವಾಗಿ ಹೋಗಿದೆ. ಪೌಷ್ಟಿಕ ಆಹಾರಗಳನ್ನು ರಿಲಯನ್ಸ್ ಮೊಬೈಲ್ಗಳ ಮೂಲಕವೇ ನಾವು ಸುಲಭವಾಗಿ, ಉಚಿತವಾಗಿ ತಲುಪಿಸಲು ಯತ್ನಿಸಿದರೆ ನೀವು ಅದಕ್ಕೂ ಅಡ್ಡಗಾಲು ಹಾಕುತ್ತಿದ್ದೀರಲ್ಲ...ನಮ್ಮದು ಇ ಸರಕಾರ. ಆದುದರಿಂದ ಮೊಬೈಲ್ಗಳ ಮೂಲಕವೇ ಆಹಾರವನ್ನು ವಿತರಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅತ್ಯಗತ್ಯ ವಸ್ತುಗಳನ್ನು ಅಂದರೆ ಬೇಳೆ, ಟೊಮೆಟೊ, ಇವೆಲ್ಲವನ್ನೂ ಮೊಬೈಲ್ಗಳಲ್ಲೇ ಡೌನ್ಲೋಡ್ ಮಾಡುವ ಮೂಲಕ ಜನರಿಗೆ ತಲುಪಿಸಲಿದ್ದೇವೆ’’ ವಾಚ್ಮೆನ್ ತನ್ನ ಜೇಬಿನೊಳಗಿರುವ ಐಫೋನ್ ತೆಗೆದು ಡೌನ್ಲೋಡ್ ಮಾಡಿ ತೋರಿಸಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಹಾಗಾದರೆ ಮುಂದಿನ ದಿನಗಳಲ್ಲಿ ನೀರಾವರಿ ವ್ಯವಸ್ಥೆಯನ್ನು ಮೊಬೈಲ್ ಮೂಲಕವೇ ಮಾಡಬಹುದಲ್ಲ?’’ ಕಾಸಿಯೂ ಸಲಹೆ ನೀಡಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>ವಾಚ್ಮೆನ್ ಗಂಭೀರವಾಗಿ ತಲೆಯಾಡಿಸಿದ ‘‘ಹೌದು. ಅದಕ್ಕಾಗಿ ರಿಲಯನ್ಸ್ ಇನ್ನೊಂದು ವಿಶೇಷ ಡಾಟಾವನ್ನು ಹೊರ ತರುತ್ತಿದೆ. ಇದರಿಂದಾಗಿ ಜನರು ನೀರು ಬೇಕಾದಾಗೆಲ್ಲ ಮೊಬೈಲ್ನಿಂದಲೇ ಡೌನ್ಲೋಡ್ ಮಾಡಬಹುದು. ವಿಶ್ವದ ಎಲ್ಲ ನದಿಗಳನ್ನೂ ಈ ಮೊಬೈಲ್ ಮೂಲಕ ನಮ್ಮ ದೇಶದ ಹಳ್ಳಿ ಹಳ್ಳಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಕಾರಣದಿಂದಲೇ ಹಳ್ಳಿಹಳ್ಳಿಗಳಲ್ಲಿ ರಿಲಯನ್ಸ್ ಟವರ್ಗಳು ತಲೆಯೆತ್ತಲು ವಿಶೇಷ ಯೋಜನೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಪಶ್ಚಿಮಘಟ್ಟದಲ್ಲಿರುವ ಬೃಹತ್ ಮರಗಳನ್ನೆಲ್ಲ ಕಡಿದು ಅಲ್ಲಿ ಟವರ್ಗಳನ್ನು ನೆಡುವ ಯೋಜನೆಗಳಿಗೂ ನಾವು ಚಾಲನೆ ನೀಡಲಿದ್ದೇವೆ...’’ </b></span></span><br />
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>ಕಾಸಿ ಆತಂಕದಿಂದ ಕೇಳಿದ ‘‘ಮರಗಳು ಕಡಿದರೆ ಮಳೆ ಬರುವುದಿಲ್ಲ ಎಂದು ಹೇಳುತ್ತಾರಲ್ಲ...’’</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>ವಾಚ್ಮೆನ್ ನಕ್ಕ ‘‘ಹೇ...ಎಂತದ್ರೀ ನೀವು. ತಲೆಯಲ್ಲಿ ಮೆದುಳು ಇಲ್ಲವೆ....ಮಳೆಯನ್ನೂ ನಾವು ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡಬಹುದು. ಮಳೆಗಾಗಿ ಮಳೆಗಾಲಕ್ಕೆ ಕಾಯಬೇಕಾಗಿಲ್ಲ. ವಿಶೇಷ ಮೊಬೈಲ್ ಫೋನ್ಗಳನ್ನು ಸಬ್ಸಿಡಿಯಲ್ಲಿ ವಿತರಿಸುವ ಯೋಜನೆಯನ್ನೂ ಹಮ್ಮಿಕೊಂಡಿದ್ದೇವೆ....’’</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>ಕಾಸಿಗೆ ಸಮಾಧಾನವಾಯಿತು. ‘‘ಸಾರ್....ಸೈನಿಕರಿಗೆ ಒಂದೊಂದು ರೂಪಾಯಿ ಕೊಡಿ ಎಂದು ಜನರನ್ನು ಕೇಳಿದ್ದಾರಲ್ಲ...ಸರಿಯಾ ಸಾರ್?’’ ಮತ್ತೆ ಕೇಳಿದ ಕಾಸಿ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ದೇಶಕಾಯುವ ಸೈನಿಕರಿಗೆ ಒಂದೊಂದು ರೂಪಾಯಿ ಕೊಡಲು ಸಾಧ್ಯವಿಲ್ಲದವರು ದೇಶದ್ರೋಹಿಗಳು...’’ ವಾಚ್ಮೆನ್ ಘೋಷಿಸಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಅಲ್ಲ ಸಾರ್...ತೆರಿಗೆ ಕಟ್ಟುತ್ತೇವೆ...ಅದರಲ್ಲಿ ಬರುವ ಹಣ....’’ ತಡವರಿಸಿ ಕೇಳಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b> ‘‘ನೋಡ್ರೀ...ನಿಮಗೆ ಪುಕ್ಕಟೆ ಆಹಾರ, ಪುಕ್ಕಟೆ ನೀರು, ಪುಕ್ಕಟೆ ಮಳೆ ಎಲ್ಲವನ್ನೂ ಒದಗಿಸಿ ಕೊಟ್ಟ ರಿಲಯನ್ಸ್ನವರಿಗೆ ಏನಾದರೂ ಕೊಡಬೇಡವೇ? ಮುಂದಿನ ದಿನಗಳಲ್ಲಿ ಪೊಲೀಸರಿಗಾಗಿ ಎರಡು ರೂಪಾಯಿ, ಗೋರಕ್ಷಕರನ್ನು ಸಾಕಲು ಐದು ರೂಪಾಯಿ, ಆರೆಸ್ಸೆಸ್ನ ಪ್ಯಾಂಟ್ಗಾಗಿ ಎಂಟಾನೆ, ಇವೆಲ್ಲವನ್ನೂ ಸಂಗ್ರಹಿಸಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ದೇಶದ ಭಿಕ್ಷುಕರನ್ನೆಲ್ಲ ಜೈಲಿಗೆ ತಳ್ಳಿ, ನಮ್ಮ ಸರಕಾರ ಭಿಕ್ಷೆ ಬೇಡುವುದಕ್ಕಾಗಿಯೇ ವಿಶೇಷ ಕಚೇರಿ, ಸಚಿವಾಲಯ, ಸಿಬ್ಬಂದಿಯನ್ನು ನೇಮಕ ಮಾಡುತ್ತದೆ. ಭಿಕ್ಷೆ ಬೇಡುವ ತಟ್ಟೆಗಳಿಗಾಗಿ ತಲಾ ನಾಲ್ಕಾನೆಯನ್ನು ಜನರಿಂದಲೇ ಸಂಗ್ರಹಿಸಲಾಗುತ್ತದೆ....’’</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>ಕಾಸಿಗೆ ತಲೆ ಧಿಂ ಎಂದಿತು.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>ಅಷ್ಟರಲ್ಲಿ ಒಳಗಿನಿಂದ ಅಂಬಾನಿಯವರ ಕೂಗು ‘‘ರೀ...ಅಮಿತ್ ಶಾ ಅವರೇ...ಒಮ್ಮೆ ಇಲ್ಲಿಗೆ ಬನ್ನಿ. ಮೋದಿಯವರ ಮೇಕಪ್ ಹೇಗಾಗಿದೆ ನೋಡಿ...’’</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b>‘‘ಇಗೋ ಬಂದೆ ಸಾರ್...’’ ಎಂದವನೇ ವಾಚ್ಮೆನ್ ಒಳಗೆ ಓಡಿದ.</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: blue; font-family: "tunga"; font-size: large;"><span style="letter-spacing: 0.133333px; line-height: 19.2px;"><b><br /></b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="color: purple; font-family: "tunga"; font-size: large;"><span style="letter-spacing: 0.133333px; line-height: 19.2px;"><b>ಚೇಳಯ್ಯ</b></span></span></div>
<div align="center" class="MsoNormal" style="margin-bottom: 0.0001pt; text-align: justify; text-indent: 11.3333px;">
<span style="font-family: "tunga"; font-size: large;"><span style="letter-spacing: 0.133333px; line-height: 19.2px;"><b><span style="color: purple;">ಕೃಪೆ-ವಾರ್ತಾ ಭಾರತಿ</span><span style="color: blue;"> </span><span style="color: blue;"> </span></b></span></span></div>
</div>
B.M.BASHEERhttp://www.blogger.com/profile/14436644887076126519noreply@blogger.com2tag:blogger.com,1999:blog-3037848766175505211.post-76081143648464011842016-08-14T02:28:00.000-07:002016-08-14T02:28:00.572-07:00ಭಾರತದ ವರ್ತಮಾನದ ದುರಂತಕ್ಕೆ ಕನ್ನಡಿ; ‘ಮೊಹೆಂಜೋದಾರೋ’<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEg-3jPjyqQj_a6NJGd0Dn7EWVN5EweJDJFhZXrVT4a2GX3abxJE4Krg_C1vTgd8Lt9FFPZ8_q804LMDZ-_JiPbqRIFW5rs4Ka2pjpTpUh-Hsn76sxDcdwfIINVIlmdGLux-u9UlDbfU5Jc5/s1600/mohenjoseal.gif" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEg-3jPjyqQj_a6NJGd0Dn7EWVN5EweJDJFhZXrVT4a2GX3abxJE4Krg_C1vTgd8Lt9FFPZ8_q804LMDZ-_JiPbqRIFW5rs4Ka2pjpTpUh-Hsn76sxDcdwfIINVIlmdGLux-u9UlDbfU5Jc5/s1600/mohenjoseal.gif" /></a></div>
<span style="color: blue; font-size: large;"><b><br /></b></span>
<span style="color: blue; font-size: large;"><b>ಅಶುತೋಶ್ ಗೋವಾರಿಕರ್ ಸದಾ ವಿಭಿನ್ನವಾಗಿ ಯೋಚಿಸುವ ನಿರ್ದೇಶಕ. ಜನಪ್ರಿಯ ಆದರ್ಶಗಳನ್ನು ಸರಳ ನಿರೂಪಣೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಕಲೆ ಇವರಿಗೆ ಸಿದ್ಧಿಸಿದೆ. ಈ ಹಿನ್ನೆಲೆಯಲ್ಲಿ, ಇವರು ಯಾವುದೇ ಚಿತ್ರದಲ್ಲಿ ತೊಡಗಿದರೂ ಅದರ ಕುರಿತಂತೆ ಜನರು ಬಹು ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಆಮಿರ್ ಖಾನ್ ಅವರು ನಟಿಸಿದ ಲಗಾನ್ ಚಿತ್ರ ಇವರ ದೆಸೆಯನ್ನೇ ಬದಲಿಸಿತು. ಅದು ಬಾಲಿವುಡ್ನಲ್ಲಿ ಮಾಡಿದ ದಾಖಲೆಗಳೇ, ಗೋವಾರಿಕರ್ ಪಾಲಿಗೆ ಮುಳುವಾಯಿತೇನೋ? ಆ ಬಳಿಕ ಅವರ ಪ್ರತಿ ಚಿತ್ರಗಳ ಕುರಿತಂತೆಯೂ ಜನರ ನಿರೀಕ್ಷೆ ಹಿರಿದಾಯಿತು. ಈ ನಿರೀಕ್ಷೆಗಳು ಹುಸಿಯಾದಾಗಲೆಲ್ಲ ಗೋವಾರಿಕರ್ ಚಿತ್ರಗಳು ಮುಗ್ಗರಿಸತೊಡದವು. ಲಗಾನ್ನ ಕನವರಿಕೆಯಲ್ಲಿದ್ದ ಪ್ರೇಕ್ಷಕರಿಗೆ ಶಾರುಕ್ಖಾನ್ ನಟಿಸಿದ ‘ಸ್ವದೇಶ್’ ಚಿತ್ರ ಇಷ್ಟವಾಗಲಿಲ್ಲ. ಸರಳ ಕತೆಯನ್ನು ಹೊಂದಿರುವ ದೇಶಪ್ರೇಮದ ಕುರಿತ ಅಪ್ಪಟ ಸದಭಿರುಚಿಯ ಚಿತ್ರವಾಗಿತ್ತು ಸ್ವದೇಶ್. ಆದರೆ ಕ್ರಿಕೆಟ್ ಮೂಲಕವೇ ದೇಶಪ್ರೇಮವನ್ನು ಅರ್ಥಮಾಡಿಕೊಳ್ಳುವ ಮಂದಿಗೆ ‘ಸ್ವದೇಶ್’ ಪ್ರತಿಪಾದಿಸುವ ಹಳ್ಳಿ, ನೀರು, ವಿದ್ಯುತ್ನ ದೇಶಪ್ರೇಮ ನೀರಸ ಎನಿಸಿತು. ‘ಜೋಧಾ ಅಕ್ಬರ್’ ಕೂಡ ಒಳ್ಳೆಯ ಸಂದೇಶವನ್ನು ವಸ್ತುವಾಗಿಟ್ಟುಕೊಂಡು ಮಾಡಿದ ಐತಿಹಾಸಿಕ ಚಿತ್ರ. ಆದರೆ ಲಗಾನ್ ಚಿತ್ರವನ್ನು ತಲುಪಲು ಸಾಧ್ಯವಾಗಲಿಲ್ಲ. ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಅವರ ಅಭಿನಯ ಈ ಚಿತ್ರವನ್ನು ಎತ್ತರಕ್ಕೇರಿಸಿತ್ತು. ಸಂಗೀತವೂ ಎಲ್ಲರ ಎದೆಯೊಳಗೆ ಹೊಸ ಅಲೆಯನ್ನು ಎಬ್ಬಿಸಿತ್ತು. ಆದರೆ ಬಾಕ್ಸ್ಆಫೀಸ್ನಲ್ಲಿ ಅಕ್ಬರ್ ಸೋಲಬೇಕಾಯಿತು. ಈ ಕಾರಣದಿಂದಲೋ ಏನೋ, ತನ್ನ ಇಮೇಜನ್ನೇ ಬದಲಿಸುವ ಉದ್ದೇಶದಿಂದ ‘ವಾಟ್ ಇಸ್ ಯುವರ್ ರಾಶಿ’ ಚಿತ್ರವನ್ನು ನಿರ್ದೇಶಿದರು. ಇದು ಹಾಸ್ಯ ಚಿತ್ರವಾಗಿತ್ತು. ಆದರೆ ಈ ಅಪ್ಪಟ ಸದಭಿರುಚಿಯ ಚಿತ್ರದಲ್ಲೂ ಅವರು ಯಶಸ್ವಿಯಾಗಲಿಲ್ಲ. ಖೇಲೇ ಹಮ್ ಜೀ ಜಾನೇ ಸೇ ಮತ್ತೆ ದೇಶಭಕ್ತಿಯನ್ನೊಳಗೊಂಡ ಚಿತ್ರವಾಗಿತ್ತು. ಆದರೆ ಅದು ವಿಫಲವಾಯಿತು. ಆದರೆ ಅವರ ಪ್ರತಿ ಚಿತ್ರಗಳು ಈ ನೆಲಕ್ಕೆ ಬದ್ಧವಾದವುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಚಿತ್ರಗಳು ಸದಭಿರುಚಿಯಿಂದ ಕೂಡಿರುತ್ತವೆ. ಹಾಗೆಯೇ ಜೀವಪರವಾದ ಆಶಯವನ್ನು ಹೊಂದಿರುತ್ತದೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b> ‘ಮೊಹೆಂಜೋದಾರೋ’ ಚಿತ್ರದ ಹೆಸರೇ ವಿಭಿನ್ನ ಮತ್ತು ವಿಶಿಷ್ಟವಾದುದು. ಸಿಂಧೂ ದಡದ ನಾಗರಿಕತೆಯನ್ನು ಹಿನ್ನೆಲೆಯಾಗಿಟ್ಟು ಗೋವಾರಿಕರ್ರಂತಹ ಅತ್ಯುತ್ತಮ ನಿರ್ದೇಶಕ ಚಿತ್ರ ಮಾಡುತ್ತಾರೆಂದರೆ ನಿರೀಕ್ಷೆಗಳು ಹುಟ್ಟುವುದು ಸಹಜ ಕೂಡ. ಗೋವಾರಿಕರ್ ಜೊತೆಗೆ ಎರಡನೆ ಬಾರಿಗೆ ಹೃತಿಕ್ ರೋಷನ್ ಕೈ ಜೋಡಿಸುತ್ತಾರೆ ಎಂದರೆ ಅದು ಪ್ರೇಕ್ಷಕ ವಲಯವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತದೆ. ‘ಮೊಹೆಂಜೋದಾರೋ’ ಇತಿಹಾಸಕ್ಕೆ ಬದ್ಧವಾಗಿರಬೇಕು ಎಂದು ನಾವು ಗೋವಾರಿಕರ್ ಮೂಲಕ ನಿರೀಕ್ಷಿಸುವುದು ದುಬಾರಿಯಾಗುತ್ತದೆ. ಸಿಂಧೂ ನಾಗರಿಕತೆಯ ಕುರಿತಂತೆ ಚರ್ಚೆಗಳು ಬಹಳಷ್ಟು ನಡೆದಿವೆ. ಈ ದೇಶಕ್ಕೆ ಮಧ್ಯ ಪ್ರಾಚ್ಯದಿಂದ ಆರ್ಯನ್ನರು ಕಾಲಿಡುವ ಮೊದಲೇ ಹೇಗೆ ನಾಗರಿಕತೆಯೊಂದು ಸಿಂಧೂ ನದೀ ತಟದಲ್ಲಿ ಹರಡಿತ್ತು ಎನ್ನುವುದನ್ನು ಇತಿಹಾಸ ನಮಗೆ ತಿಳಿಸಿಕೊಡುತ್ತದೆ. ಆದರೆ ಇತಿಹಾಸದ ಚರ್ಚೆ, ಶೋಧನೆಗಳನ್ನು ಒಂದು ಜನಪ್ರಿಯ ಚಿತ್ರದಲ್ಲಿ ನಿರೀಕ್ಷಿಸುವುದೇ ತಪ್ಪು. ತನ್ನ ಮಿತಿಯಲ್ಲಿ ಗೋವಾರಿಕರ್ ‘ಮೊಹೆಂಜೋದಾರೋ’ ಚಿತ್ರವನ್ನು ಎಷ್ಟರಮಟ್ಟಿಗೆ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ ಎನ್ನುವುದಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಕನಿಷ್ಟ ಮನರಂಜನೆಗಾದರೂ ಈ ಚಿತ್ರ ಬದ್ಧವಾಗಿದೆಯೇ ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡು ನೋಡಬೇಕಾಗುತ್ತದೆ. ಈ ನೆಲೆಯಲ್ಲಿ ನಾವು ನೋಡಿದರೂ, ಗೋವಾರಿಕರ್ ಅದರಲ್ಲಿ ಭಾಗಶಃ ವಿಫಲರಾಗಿದ್ದಾರೆ. ಒಂದು ಒಳ್ಳೆಯ ಆಶಯವನ್ನು ಚಿತ್ರ ಪ್ರತಿಪಾದಿಸುತ್ತದೆಯಾದರೂ, ದುರ್ಬಲ ಕತೆಯಿಂದಾಗಿ ಚಿತ್ರ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುವುದಿಲ್ಲ. </b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಚಿತ್ರದ ಕತೆ 2016 ಬಿಸಿ(ಬಿಫೋರ್ ಕ್ರೈಸ್ಟ್) ಕಾಲದ್ದಾಗಿದ್ದರೂ, ಅದರ ನಾಯಕನ ಕತೆ ಮಾತ್ರ 70 ದಶಕದ ಬಾಲಿವುಡ್ನ ಹಳಸಲು ವಸ್ತು. ತಂದೆಯ ಕೊಲೆ. ಬೇರೆಯಾಗುವ ಮಗ. ಮತ್ತೆ ಅರಿಯದೇ ತನ್ನ ತಂದೆ ಆಳುತ್ತಿದ್ದ ನಾಡಿಗೆ ವಾಪಾಸಾಗುವುದು, ಅಲ್ಲಿ ತನ್ನ ತಂದೆ ಕೊಲೆಯಾಗಿರುವುದು ಅವನ ಅರಿವಿಗೆ ಬರುವುದು. ಮತ್ತು ಶತ್ರುವಿನ ವಿರುದ್ಧ ಸೇಡು ತೀರಿಸುವುದು. ಈ ಕತೆ ಬಾಲಿವುಡ್ನಲ್ಲಿ ಅದೆಷ್ಟೋ ಬಾರಿ ಬಂದು ಹೋಗಿದೆ. ಇಂತಹದೊಂದು ಬಬಲ್ಗಮ್ನ್ನು ಜಗಿಯಲು ಮೊಹೆಂಜೋದಾರೋ ಎನ್ನುವ 2016 ಕಾಲಘಟ್ಟವನ್ನು ಬಳಸುವ ಅಗತ್ಯವಿತ್ತೆ? ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಏಳುವುದು ಸಹಜ. ಅಂತೆಯೇ ರಾಜಮೌಳಿಯ ‘ಬಾಹುಬಲಿ’ ಮತ್ತು ಹಾಲಿವುಡ್ನ ಖ್ಯಾತ ಚಿತ್ರ ‘ಗ್ಲಾಡಿಯೇಟರ್’ ಎರಡರ ಕಲಬೆರಕೆಯ ವಾಸನೆ ನಿಮ್ಮ ಮೂಗಿಗೆ ಬಡಿದರೆ ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಚಿತ್ರದ ಮೊದಲರ್ಧ ಬಾಹುಬಲಿ ಚಿತ್ರಕ್ಕೆ ಹೋಲಿಕೆಯಾದರೆ ಇನ್ನರ್ಧ ‘ಗ್ಲಾಡಿಯೇಟರ್’ನ್ನು ಹೋಲುತ್ತದೆ. ಇದೇ ಸಂದರ್ಭದಲ್ಲಿ ಬಾಹುಬಲಿ ಒಂದು ಚಂದಮಾಮ ಕತೆ. ಅದಕ್ಕೆ ಯಾವುದೇ ಗುರಿ, ಆಶಯ ಇದ್ದಿರಲಿಲ್ಲ. ಆದರೆ ಗೋವಾರಿಕರ್ ಅವರ ‘ಮೊಹೆಂಜೋದಾರೋ’ ನಾಯಕನ ಕತೆಯನ್ನು ಹೇಳುತ್ತಲೇ ಇನ್ನೊಂದು ದುರಂತವನ್ನೂ ಹೇಳುವ ಸಣ್ಣ ಪ್ರಯತ್ನ ಮಾಡುತ್ತದೆ. ಆ ಆಶಯವೇ ಈ ಚಿತ್ರದ ಹೆಗ್ಗಳಿಕೆ. ಅದನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಚಿತ್ರ ಮಾಡಿದ್ದರೂ ಗೋವಾರಿಕರ್ ಯಶಸ್ವಿಯಾಗುತ್ತಿದ್ದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b> ಹರಪ್ಪ ನಾಗರಿಕತೆಯ ಮೇಲೆ ದಾಳಿ ಮಾಡಿ, ಅದರ ತಳಹದಿಯ ಮೇಲೆ ಮೊಹೆಂಜೋದಾರೋ ನಗರ ನಾಗರಿಕತೆ ತಲೆಯೆತ್ತಿತ್ತು ಎಂದು ನಿರ್ದೇಶಕರು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಾರೆ. ಲಾಲಸೆ, ಲೋಭ, ಸ್ವಾರ್ಥ ತುಂಬಿದ ನಗರ ಲಾಲಸೆಯ ತಳಹದಿಯ ಮೇಲೆ ಮೊಹೆಂಜೋದಾರೋ ನಿಂತಿದೆ. ಸಿಂಧೂ ನದಿಯನ್ನು ಅವಲಂಬಿಸಿದ ಈ ನೆಲದ ಕಷಿಕರ ಹಿತಾಸಕ್ತಿಯನ್ನು ಬಲಿಕೊಟ್ಟು ಮೊಹೆಂಜೋದಾರೋ ನಗರವನ್ನು ಇನ್ನಷ್ಟು ವಿಸ್ತರಿಸುವ ಭಾರೀ ಕನಸನ್ನು ಅದರ ಪ್ರಧಾನ ಮಾಹಂ(ಕಬೀರ್ ಬೇಡಿ) ಕಾಣುತ್ತಾನೆ. ಸಿಂಧೂನದಿಗೆ ಬಹತ್ ಅಣೆಕಟ್ಟು ಕಟ್ಟಿ, ಅದರಲ್ಲಿ ಹರಿದು ಬರುವ ಚಿನ್ನದ ಗಟ್ಟಿಗಳನ್ನು ತಡೆದು, ಅಪಾರ ಸಂಪತ್ತನ್ನು ಸಂಗ್ರಹಿಸುವ ದುರಾಸೆ ಅವನದು. ಇದನ್ನು ವಿರೋಧಿಸಿದವರನ್ನೆಲ್ಲ ಸದೆಬಡಿಯುತ್ತಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗಿರುವ ‘ವಿರಾಟ್’ನ್ನು ತನ್ನ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಾನೆ. ಅದಕ್ಕೆ ಬಲಿಯಾದವನಲ್ಲಿ ನಾಯಕ ಶರ್ಮನ್(ಹೃತಿಕ್ ರೋಷನ್)ನ ತಂದೆ ಸುರ್ಜನ್ ಕೂಡ ಒಬ್ಬ. ಈತ ಮೊಹೆಂಜೋದಾರೋದ ಪ್ರಧಾನನಾಗಿದ್ದ. ಆದರೆ ಮಾಹಂನ ಲೋಭದ ಮಾತುಗಳಿಗೆ ಮರುಳಾಗುವ ವಿರಾಟ್ ಸದಸ್ಯರೆಲ್ಲ ಮಾಹಂ ಪರವಾಗುತ್ತಾರೆ. ಅಣೆಕಟ್ಟನ್ನು ತಡೆಯಲು ಕಟ್ಟಕಡೆಯವರೆಗೆ ಪ್ರಯತ್ನಿಸುವ ಸುರ್ಜನ್ ಅಂತಿಮವಾಗಿ ಮಾಹಂನ ಮೋಸಕ್ಕೆ ಬಲಿಯಾಗಿ ಮರಣದಂಡನೆ ಶಿಕ್ಷೆ ಎದುರಿಸುತ್ತಾನೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b> ಅಣೆಕಟ್ಟಿನ ಪರಿಣಾಮವಾಗಿ ಸಿಂಧೂ ನದಿ ತನ್ನ ದಿಕ್ಕನ್ನು ಬದಲಿಸಿಕೊಳ್ಳುತ್ತದೆ. ಪರಿಣಾಮವಾಗಿ ಕೃಷಿಕರು ಭಾರೀ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೃಷಿಗಿಂತ ಚಿನ್ನ ಮುಖ್ಯ ಎಂದು ಮಾಹಂ ಪ್ರತಿಪಾದಿಸುತ್ತಾನೆ. ಅದರಿಂದ ಇಡೀ ಮೊಹೆಂಜೋದಾರೋ ಅತ್ಯಾಧುನಿಕವಾಗುತ್ತದೆ, ಜನರೆಲ್ಲ ಈ ನಗರದ ಕಡೆಗೆ ಆಗಮಿಸುತ್ತಾರೆ, ಸಂಪತ್ತು ಅಧಿಕವಾಗುತ್ತದೆ ಎನ್ನುತ್ತಾನೆ. ಆದರೆ ರೈತರ ಕಷ್ಟಗಳು ಅಧಿಕವಾಗುತ್ತದೆ. ಸಿಂಧೂನದಿಯ ಅಣೆಕಟ್ಟಿನಿಂದ ರಾಜನಿಗೆ ಚಿನ್ನ ದೊರಕುತ್ತದೆ. ಆದರೆ ಜನರ ಸಮಸ್ಯೆ ಅದರಲ್ಲೂ ರೈತರ ಸಮಸ್ಯೆ ಭೀಕರವಾಗುತ್ತದೆ. ಇಂತಹ ಸಂದರ್ಭದಲ್ಲೇ ಮಳೆಗಾಲದಲ್ಲಿ ಸಿಂಧೂನದಿ ತುಂಬಿ ಹರಿದು, ಇಡೀ ಅಣೆಕಟ್ಟು ಒಡೆದು ಮೊಹೆಂಜೋದಾರೋ ನಗರವನ್ನು ಸರ್ವನಾಶ ಮಾಡುತ್ತದೆ. ನಾಯಕನ ಪ್ರವೇಶ, ಇಲ್ಲಿನ ರೈತರನ್ನು ಬದುಕಿಸುತ್ತದೆ. ನಾಶವಾದ ಮೊಹೆಂಜೋದಾರೋವನ್ನು ಬಿಟ್ಟು ಇವರು ಗಂಗಾ ನದಿಯ ಕಡೆಗೆ ವಲಸೆ ಬರುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮೊಹೆಂಜೋದಾರೋ ನಾಶದ ಕತೆಯನ್ನು ಹೇಳುವ ಮೂಲಕ ಗೋವಾರಿಕರ್ ವರ್ತಮಾನದ ಭಾರತಕ್ಕೆ ಕನ್ನಡಿ ಹಿಡಿದಿದ್ದಾರೆ. ಅಭಿವದ್ಧಿಯ ಕುರಿತಂತೆ ಕನಸು ಕಾಣುವ, ಲಾಲಸೆ, ಲೋಭಕ್ಕೆ ಸಿಲುಕಿ ಮೊಹೆಂಜೋದಾರೋವನ್ನು ಬಲಿಕೊಟ್ಟ ಮಾಹಂ ಮತ್ತು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿ ಇಡೀ ದೇಶವನ್ನು ತನ್ನ ಸ್ವಾರ್ಥ, ಲಾಲಸೆ, ಲೋಭಗಳ ಸಂತೃಪ್ತಿಗಾಗಿ ದುರಂತಕ್ಕೆ ತಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಸಮೀಕರಣವೊಂದು ಚಿತ್ರದಲ್ಲಿ ನಡೆಯುತ್ತದೆ. ಮೊಹೆಂಜೋದಾರೋ ದುರಂತ ಮತ್ತು ಇಂದಿನ ದುರಂತಗಳ ಸಾಮ್ಯತೆಯನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b><br /></b></span>
<span style="color: blue; font-size: large;"><b><br /></b></span>
<span style="color: blue; font-size: large;"><b><br /></b></span>
<br /></div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-19892019318440729572016-07-16T04:19:00.001-07:002016-07-17T03:06:22.820-07:00ಕಾಡಂಕಲ್ಲ್ ಮನೆ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEizFAIVhJ-kMAe-_4KK5YoXzxS4jy2KHYtz5nKuktkTyguEmKghclihEkx9zlD-Z6FL6h-e6eCC-TsxyTlb1dJdTUQn81_hrHEGcS7iQU3kPCnvcte_NWFR5hu2oJEpS0JWO2l1oh4Rnp-S/s1600/kadankallu+mane22.jpg" imageanchor="1" style="margin-left: 1em; margin-right: 1em;"><span style="color: blue; font-size: large;"><b><img border="0" height="222" src="https://blogger.googleusercontent.com/img/b/R29vZ2xl/AVvXsEizFAIVhJ-kMAe-_4KK5YoXzxS4jy2KHYtz5nKuktkTyguEmKghclihEkx9zlD-Z6FL6h-e6eCC-TsxyTlb1dJdTUQn81_hrHEGcS7iQU3kPCnvcte_NWFR5hu2oJEpS0JWO2l1oh4Rnp-S/s320/kadankallu+mane22.jpg" width="320" /></b></span></a></div>
<div style="background-color: white; margin-bottom: 6px; text-align: left;">
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಈ ವರ್ಷ ನನ್ನ "ಇರುವೆ ಪ್ರಕಾಶನ''ದಿಂದ ನನ್ನದೇ ಕಾದಂಬರಿ "ಯುದ್ಧ" ಪ್ರಕಟಿಸ ಬೇಕು ಎಂದು ಯೋಜನೆ ರೂಪಿಸಿದ್ದೆ. </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಆದರೆ ಇನ್ನೂ ಶೇಕಡಾ ೨೫ರಷ್ಟು ಬರೆಯುವ ಕೆಲಸ ಉಳಿದು ಬಿಟ್ಟಿದೆ. ಕಾದಂಬರಿ ಪೂರ್ತಿ ಮಾಡಿ ಮತ್ತೊಮ್ಮೆ ಅದನ್ನು ತಿದ್ದಿ ತೀಡುವಷ್ಟರಲ್ಲಿ ಈ ವರ್ಷ ಮುಗಿದೇ ಹೋಗಿ ಬಿಡಬಹುದು ಎನ್ನುವ ಭಯ ಇದೆ.</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b><br /></b></span></span>
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಆದುದರಿಂದ ಈ ವರ್ಷ ನನ್ನ ಆತ್ಮೀಯರು, ಹಿರಿಯ ಕತೆಗಾರರು ಆಗಿರುವ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ಲ್ ಮನೆ" ಕಾದಂಬರಿಯನ್ನು "ಇರುವೆ ಪ್ರಕಾಶನ''ದಿಂದ ಹೊರ ತರುವ ಆಲೋಚನೆ ಇದೆ. ಎಣಿಸಿದಂತೆ ಆದರೆ ನವೆಂಬರ್ ಹೊತ್ತಿನಲ್ಲಿ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ ಮನೆ''ಯೊಳಗೆ ನೀವಿರುತ್ತೀರಿ. </b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>***</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಇರುವೆ ಪ್ರಕಾಶನದಿಂದ ಈಗಾಗಲೇ ಹೊರ ಬಂದಿರುವ ಎರಡು ಕೃತಿಗಳು</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ.</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b><br /></b></span></span>
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಎಂದಿನಂತೆ ನಿಮ್ಮ ಪ್ರೀತಿ, ವಿಶ್ವಾಸವನ್ನು ನಿರೀಕ್ಷಿಸುವೆ.</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b><br /></b></span></span>
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಸಹೃದಯರು ಈ ಕೆಳಗಿನ ವಿಳಾಸಕ್ಕೆ ಎಂ ಓ ಮಾಡಿ ಪುಸ್ತಕ ತರಿಸಿ ಕೊಳ್ಳ ಬಹುದು.ತಮ್ಮ ವಿಳಾಸವನ್ನು ಕೆಳಗಿನ ಇಮೇಲ್ iruveprakashana@gmail.com ಅಥವಾ ಮೊಬೈಲ್ ಗೆ ಮೆಸ್ಸೇಜ್ ಮಾಡಬಹುದು.ಕೊರಿಯರ್ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b><br /></b></span></span>
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>B.M. BASHEER</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>MARVEL APARTMENT,</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>FLAT NO. 301,</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>1ST CROSS, SHIVA NAGARA,</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>OPP. SHRINIVAS COLLAGE,</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>PANDESHWARA,</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>MANGALORE-575 001</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>MOBILE- 944 8835 621</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>*****</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಅಥವಾ ......</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>B.M. BASHEER</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>A/C-NO-3 0 9 2 8 2 4 1 6 9 9</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>STATE BANK OF INDIA</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>PORT ROAD, MANGALORE BRANCH</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>IFSC CODE-SBIN 0 0 0 0 8 7 1</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>MOBILE-944 8835 621</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>iruveprakashana@gmail.com</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b><br /></b></span></span>
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b><br /></b></span></span>
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!</b></span></span><br />
<span style="color: blue; font-family: helvetica, arial, sans-serif; font-size: large;"><span style="line-height: 19.32px;"><b>ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.</b></span></span><br />
<div style="font-family: helvetica, arial, sans-serif; line-height: 19.32px;">
<span style="line-height: 19.32px;"><span style="color: blue; font-size: large;"><b></b></span></span><br /></div>
</div>
<div class="text_exposed_show" style="background-color: white; display: inline; font-family: helvetica, arial, sans-serif; line-height: 19.32px;">
<span style="color: blue; font-size: large;"><b>
</b></span></div>
</div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-10533431142315956342016-07-13T05:37:00.001-07:002016-07-13T05:37:32.105-07:00ಝಾಕಿರ್ ನಾಯ್ಕ್ ನಿಷೇಧ ಯಾಕೆ ಬೇಡ?<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEji1LC_7bg4YNxwLN9g4M9mR4amixkerobhV0dDWOsAYHMKlzlVj_x4ip2GhJN9F9XHaIZXusVjDXzJ5hkvFrBTBguarlKQeO9nLOy-kba3MKolMaJhgNLII-jY4yP6uA68H9CM64LI36nm/s1600/zakir-naik-and-sri-sri.jpg" imageanchor="1" style="margin-left: 1em; margin-right: 1em;"><img border="0" height="158" src="https://blogger.googleusercontent.com/img/b/R29vZ2xl/AVvXsEji1LC_7bg4YNxwLN9g4M9mR4amixkerobhV0dDWOsAYHMKlzlVj_x4ip2GhJN9F9XHaIZXusVjDXzJ5hkvFrBTBguarlKQeO9nLOy-kba3MKolMaJhgNLII-jY4yP6uA68H9CM64LI36nm/s320/zakir-naik-and-sri-sri.jpg" width="320" /></a></div>
<b><span style="color: blue; font-size: large;">ಝಾಕಿರ್ ನಾಯ್ಕ್ ಪ್ರಕಾರ ನಾನು ನರಕಕ್ಕೆ ಅರ್ಹ ವ್ಯಕ್ತಿ. ಇರಲಿ. ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ರಂಥವರು ಇರುವ ಸ್ವರ್ಗ ನನಗೆ ಬೇಕಾಗಿಲ್ಲ. ಆದರೂ ನಾನು ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ರನ್ನು ನಿಷೇಧಿಸಬೇಕು ಎಂದು ಒತ್ತಾಯಿಸೋದಿಲ್ಲ. ಯಾಕೆಂದರೆ, ನಾನು ನರಕಕ್ಕೆ ಅರ್ಹ ವ್ಯಕ್ತಿ ಎಂದು ಹೇಳುತ್ತಿರುವವರು ಕೇವಲ ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;"> ಮಾತ್ರವೇ ಅಲ್ಲ. ಎಲ್ಲ ಧರ್ಮಗಳೂ ಹೇಳುವುದು "ನಾನೇ ನಿಜ. ಉಳಿದವರು ಸುಳ್ಳು. ನಾನೇ ಶ್ರೇಷ್ಟ. ಆದುದರಿಂದ ನಮ್ಮನ್ನು ಸೇರಿಸಿಕೊಳ್ಳಿ" ಎಂದೇ ಆಗಿದೆ. "ಬೌದ್ಧ ಧರ್ಮವೇ ಜನರಿಗೆ ಇರುವ ಪರಿಹಾರ" ಎಂದು ನನ್ನ ಗೆಳೆಯರು ಹೇಳುವಾಗ ನನಗೆ ಅದರಲ್ಲಿರುವ ಧನಾತ್ಮಕ ಅಂಶ ನೆನಪಾಗುತ್ತದೆಯೇ ಹೊರತು, ಶ್ರೀಲಂಕಾ, ರೊಹಿಂಗ್ಯಾದಲ್ಲಿ ಹಿಂಸಾಚಾರ ನಡೆಸುತ್ತಿರುವ ಬೌದ್ಧ ಬಿಕ್ಕುಗಳು ನೆನಪಾಗುವುದಿಲ್ಲ. ಅದೆಷ್ಟೋ ಕ್ರಿಶ್ಚಿಯನ್ ಧಾರ್ಮಿಕ ಚಾನೆಲ್ಗಳು ಪ್ರತಿ ದಿನ ತನ್ನ ತನ್ನ ದೇವರ ಶ್ರೇಷ್ಠತೆಗಳನ್ನು, ಪವಾಡಗಳನ್ನು ಘೋಷಿಸುತ್ತಿರುತ್ತವೆ. ಅವೆಲ್ಲ ಪಕ್ಕಕ್ಕಿರಲಿ. ನಾವು ಬಾಲ್ಯದಲ್ಲೇ ಓದಿ ಹಾಡಿದ, ಪುರಂಧರ ದಾಸರೇ ಹೇಳುತ್ತಾರೆ ‘‘ಹರಿಯನ್ನು ಜಪಿಸದೇ ಮೋಕ್ಷ ಇಲ್ಲ’’ ಎಂದು. ಆದರೂ ನಾನು ಪುರಂಧರ ದಾಸರ ಹಾಡುಗಳನ್ನು ಇಷ್ಟ ಪಡುತ್ತೇನೆ. ಮಧ್ವಚಾರ್ಯರಂತೂ ಶೂದ್ರರನ್ನು ‘ನಿತ್ಯ ನಾರಕಿಗಳು’ ಎಂದು ಕರೆಯುತ್ತಾರೆ. ಇದರ ಅರ್ಥ, ಶೂದ್ರರಿಗೆ ಸ್ವರ್ಗಕ್ಕೆ ಹೋಗಲು ಯಾವ ದಾರಿಯೂ ಇಲ್ಲ. ಇನ್ನು ನನ್ನಂತಹ ಮ್ಲೇಚ್ಛನ ಬಗ್ಗೆ ಮಧ್ವರ ಅಭಿಪ್ರಾಯ ಹೇಗಿರಬಹುದು ಎಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ನ ಪ್ರಕಾರ, ಅವರ ಚಿಂತನೆಗಳನ್ನು ನಾವು ಅಳವಡಿಸಿಕೊಂಡರೆ ನಮಗೆ ಸ್ವರ್ಗ ಸಿಗುತ್ತದೆ. ಮಧ್ವರಲ್ಲಿ ಆ ಅವಕಾಶವೂ ನಮಗಿಲ್ಲ. ಈ ಜಗತ್ತಿನಲ್ಲಿ ಎಲ್ಲ ಧರ್ಮಗಳು ನಮ್ಮದು ಶ್ರೇಷ್ಟ, ನಮ್ಮನ್ನು ಸೇರಿಕೊಳ್ಳಿ ಎಂದರೆ ಬ್ರಾಹ್ಮಣ ಧರ್ಮ ಮಾತ್ರ, ನಾವೇ ಶ್ರೇಷ್ಠ, ನಮ್ಮಿಂದ ದೂರ ಇರಿ ಎಂದು ಹೇಳುತ್ತದೆ. ಇಂತಹ ಬ್ರಾಹ್ಮಣ ಧರ್ಮವನ್ನೇ ನಾವು ಒಪ್ಪಿಕೊಳ್ಳುತ್ತಿರುವಾಗ, ಅದನ್ನು ಪ್ರಸಾರಿಸಲು ನೂರಾರು ಟಿವಿ ಚಾನೆಲ್ಗಳು ಇರುವಾಗ, ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;"> ಅವರನ್ನು, ಅವರ ಚಾನೆಲ್ಗಳನ್ನು ನಿಷೇಧಿಸಬೇಕು ಎನ್ನುವುದು ಸಂವಿಧಾನ ವಿರೋಧಿಯಾಗುತ್ತದೆ. ಈ ದೇಶದಲ್ಲಿ ರಾಮ್ದೇವ್, ರವಿಶಂಕರ್ ಸಹಿತ ನೂರಾರು ಸತ್ಸಂಗಿಗಳಿಗೆ ತಮ್ಮ ತಮ್ಮ ಟಿವಿ ಚಾನೆಲ್ಗಳಲ್ಲಿ ತಮ್ಮ ತಮ್ಮ ಧರ್ಮದ ಶ್ರೇಷ್ಟತೆಯನ್ನು ಬೋಧಿಸುವುದಕ್ಕೆ ಅವಕಾಶವಿದೆ ಎಂದಾದರೆ, ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ಗೂ ಇದೆ. ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;"> ತನ್ನನ್ನು ದೇವರು ಎಂದು ಘೋಷಿಸಿಲ್ಲ. ಅದೆಷ್ಟೋ ದೇವಮಾನವರು, ಅಂದರೆ ತಮ್ಮನ್ನು ತಾವು ದೇವರ ಅವತಾರ ಎಂದು ಘೋಷಿಸಿಕೊಂಡು ಲೂಟಿ ಮಾಡುವವರಿಗೆ, ಜನರನ್ನು ಮೋಸ ಗೊಳಿಸುವವರಿಗೆ ಇಲ್ಲಿ ಅವಕಾಶವಿದೆ ಎಂದ ಮೇಲೆ ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ಗೂ ಅವಕಾಶ ಇರಬೇಕು ಎಂದು ನಾನು ಹೇಳುತ್ತೇನೆ.</span></b><br />
<span style="color: blue; font-size: large;"><b><br /></b></span>
<b><span style="color: blue; font-size: large;">ಎಲ್ಲ ಧಾರ್ಮಿಕ ಚಾನೆಲ್ಗಳಂತೆಯೇ ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;"> ಕೂಡ ತನ್ನದೇ ಆಗಿರುವ ‘ಪೀಸ್ ಟಿವಿ’ಯನ್ನು ಹೊಂದಿದ್ದಾರೆ. ವಿಶೇಷವೆಂದರೆ, ಇವರು ಸೂಟುಬೂಟು ಧರಿಸುತ್ತಾರೆ. ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಗವದ್ಗೀತೆಯನ್ನು, ಬೈಬಲ್ಗಳನ್ನು ಕಂಠಪಾಠ ಮಾಡಿಕೊಂಡಿರುವ ಇವರು, ತನ್ನ ವಾದಕ್ಕೆ ಪೂರಕವಾಗಿ ಅವುಗಳನ್ನು ನಿರರ್ಗಳವಾಗಿ, ಅಧ್ಯಾಯ, ಅಂಕಿ ಸಂಕಿಗಳ ಜೊತೆಗೆ ಮಂಡಿಸುತ್ತಾರೆ. ಈ ಹಿಂದೆ ರವಿಶಂಕರ್ ಸಹಿತ ಹತ್ತು ಹಲವು ಹಿಂದೂ ಧಾರ್ಮಿಕ ನಾಯಕರ ಜೊತೆಗೆ ವೇದಿಕೆ ಹಂಚಿಕೊಂಡು ಚರ್ಚೆ, ವಿಚಾರವಿನಿಮಯ ಮಾಡಿಕೊಂಡ ಖ್ಯಾತಿಯೂ ಇವರಿಗಿದೆ. ಧಾರ್ಮಿಕ ಚಾನೆಲ್ಗಳಿರುವುದೇ ತನ್ನ ಧರ್ಮ ಶ್ರೇಷ್ಟ ಎಂದು ನಂಬಿ, ಅದರ ಕುರಿತಂತೆ ಪ್ರಚಾರ ಮಾಡುವುದಕ್ಕೆ. ಹೀಗಿರುವಾಗ, ಝಾಕಿರ್ </span><span style="color: blue; font-size: large;">ನಾಯ್ಕ್ ತನ್ನ ಧರ್ಮಕ್ಕೆ ಮೀಸಲಾಗಿರುವ ತನ್ನ ಟಿವಿಯಲ್ಲಿ </span><span style="color: blue; font-size: large;"> ಅದನ್ನೇ ಮಂಡಿಸುತ್ತಾ ಇದ್ದರೆ ಅದನ್ನು ಅತಿರೇಕ ಎಂದು ಹೇಳುವುದು ಹೇಗೆ?</span></b><br />
<span style="color: blue; font-size: large;"><b><br /></b></span>
<b><span style="color: blue; font-size: large;">ಹೀಗಿರುವಾಗ ನಮಗೆ ಎರಡು ಮಾರ್ಗಗಳು ಇವೆ. ಒಂದು, ಎಲ್ಲ ಧಾರ್ಮಿಕ ಚಾನೆಲ್ಗಳನ್ನು ನಿಷೇಧಿಸಲು ಒತ್ತಾಯಿಸೋದು. ಅಥವಾ ಝಾಕಿರ್ ಮಂಡಿಸುವ ಇಸ್ಲಾಂ ಹೇಗೆ ಸುಳ್ಳು ಎನ್ನುವುದನ್ನು ಸಾಬೀತು ಮಾಡುವುದು. ಅದರ ಬದಲಿಗೆ ನಾವು ಝಾಕಿರ್ನನ್ನೇ ನಿಷೇಧಿಸಿದರೆ, ಅದು ನಮ್ಮ ಸೋಲು ಮತ್ತು ಝಾಕಿರ್ನ ಗೆಲುವಾಗುತ್ತದೆ. ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ನ ಮಾತುಗಳಿಗೆ ಉತ್ತರಕೊಡಲು ಸಾಧ್ಯವಿಲ್ಲದೆ ಮಾಡಿದ ಹತಾಶೆಯ ಪ್ರಯತ್ನ ಎಂದೂ ಅವರ ಅಭಿಮಾನಿಗಳು ಹೇಳಬಹುದು. ಇದು ಝಾಕಿರ್ಗೆ ಇನ್ನಷ್ಟು ಅಭಿಮಾನಗಳನ್ನು ಸೃಷ್ಟಿಸುತ್ತದೆ. ಕಳೆದ ಒಂದು ವಾರಗಳಿಂದ ಝಾಕಿರ್ ಕುರಿತಂತೆ ನಡೆಯುತ್ತಿರುವ ಚರ್ಚೆಯ ಪರಿಣಾಮ ಏನೂ ಎಂದರೆ, ಅವನ ಬಗ್ಗೆ ಗೊತ್ತೇ ಇಲ್ಲದ ಯುವಕರೂ ‘ಪೀಸ್’ ಟಿವಿಯನ್ನು ನೋಡುತ್ತಿದ್ದಾರೆ. ಅಂದರೆ ಪೀಸ್ ಟಿವಿಯ ವೀಕ್ಷಕರು ಅಧಿಕಗೊಂಡಿದ್ದಾರೆ. </span></b><br />
<span style="color: blue; font-size: large;"><b><br /></b></span>
<b><span style="color: blue; font-size: large;">ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;"> ಮೇಲಿರುವ ಬಹುದೊಡ್ಡ ಆರೋಪ ಅಂದರೆ, ಆತ ಸಾಮೂಹಿಕವಾಗಿ ಮತಾಂತರ ಮಾಡುತ್ತಾನೆ. ಅವರಲ್ಲಿ ಯುವಕರೇ ಅಧಿಕ. ಮತಾಂತರವನ್ನು ಆತ ಕೋವಿ ಹಿಡಿದೋ, ಬಲವಂತವಾಗಿಯೋ ಮಾಡುತ್ತಿಲ್ಲ. ಅಥವಾ ಹಣದ ಆಮಿಷಗಳಿಂದಲೂ ಈತ ಮತಾಂತರ ಮಾಡುತ್ತಿಲ್ಲ. ತನ್ನ ಮಾತುಗಳಿಂದ ಅವರನ್ನು ಒಲಿಸಿ ಅಥವಾ ಮರುಳು ಮಾಡಿಯೇ ಮಾಡುತ್ತಾನೆ. ಮತಾಂತರ ಆಗುತ್ತಿರುವವರೆಲ್ಲ ವಿದ್ಯಾವಂತ ಯುವಕರೇ ಆಗಿದ್ದಾರೆ. ಒಬ್ಬನ ಮಾತು ಸರಿ ಅನ್ನಿಸಿದ ಬಳಿಕವೇ ಇನ್ನೊಬ್ಬ ಮತಾಂತರ ಆಗುತ್ತಾನೆ. ಹೀಗಿರುವಾಗ ಅದನ್ನು ನಾವು ತಪ್ಪು ಎನ್ನುವುದು ಹೇಗೆ? ಕೃಷ್ಣ ಮಠದಲ್ಲಿ ಶೂದ್ರರನ್ನು ತಮ್ಮ ಪಂಕ್ತಿಯಲ್ಲಿ ಸ್ವೀಕರಿಸದೇ ಇರುವುದನ್ನು ವ್ಯವಸ್ಥೆ ಧಾರ್ಮಿಕ ಅಭಿವ್ಯಕ್ತಿಯಾಗಿ ಸ್ವೀಕರಿಸಿಕೊಂಡಿರುವಾಗ, ಝಾಕಿರ್</span><span style="color: blue; font-size: large;">ನಾಯ್ಕ್</span><span style="color: blue; font-size: large;"> ತನ್ನ ಧರ್ಮಕ್ಕೆ ಬಂದವರನ್ನು ಸ್ವೀಕರಿಸುತ್ತಾನೆ ಎನ್ನುವುದು ಆಕ್ಷೇಪಾರ್ಹವಾಗುವುದು ಹೇಗೆ? ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ರನ್ನು ತೊಗಾಡಿಯಾ, ಪ್ರಮೋದ್ ಮುತಾಲಿಕ್ ಜೊತೆಗೆ ಸಮೀಕರಿಸುವುದನ್ನು ನಾನು ಒಪ್ಪುವುದಿಲ್ಲ. ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ನನ್ನು ನಾನು ಮಧ್ವ ಸಿದ್ಧಾಂತಗಳಿಗೆ ಮುಡಿಪಾಗಿರುವ ಪೇಜಾವರ ಶ್ರೀ, ಅಥವಾ ಇತರ ನೂರಾರು ಸತ್ಸಂಗಿಗಳ ಜೊತೆಗೆ ಸಮೀಕರಿಸಬಹುದು.</span></b><br />
<span style="color: blue; font-size: large;"><b><br /></b></span>
<b><span style="color: blue; font-size: large;">ಝಾಕಿರ್</span><span style="color: blue; font-size: large;">ನಾಯ್ಕ್</span><span style="color: blue; font-size: large;"> ಭಯೋತ್ಪಾದನೆಯನ್ನು ಸಮರ್ಥಿಸುತ್ತಾರೆ ಎನ್ನುವುದು ಬರೇ ಮಾಧ್ಯಮಗಳ ಆರೋಪ. ಆ ಕುರಿತಂತೆ ಯಾವುದೇ ದಾಖಲೆಗಳಿದ್ದಿದ್ದರೆ ಇಷ್ಟರಲ್ಲೇ ಅವರ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ಇಸ್ಲಾಮಿಗೂ ಭಯೋತ್ಪಾದನೆಗೂ ಸಂಬಂಧವಿಲ್ಲ ಎನ್ನುವುದನ್ನು ಆತ ತನ್ನ ಭಾಷಣಗಳಲ್ಲಿ ಪದೇ ಪದೇ ಘೋಷಿಸುತ್ತಿರುತ್ತಾರೆ. ಇನ್ನೊಂದು ಧರ್ಮವನ್ನು ಝಾಕಿರ್ ತಮ್ಮ ಭಾಷಣದಲ್ಲಿ ವಿಮರ್ಶಿಸಿದ್ದನ್ನು, ಟೀಕಿಸಿದ್ದನ್ನು ಹಾಗೂ ಆ ಮೂಲಕ ತನ್ನ ಧರ್ಮವನ್ನು ಸಮರ್ಥಿಸಿಕೊಂಡಿದ್ದನ್ನು ನಾನು ಕೇಳಿದ್ದೇನೆ. ಆದರೆ ಇನ್ನೊಂದು ಧರ್ಮವನ್ನು ಯಾವತ್ತೂ ನಿಂದಿಸಿಲ್ಲ. ಬಹಿರಂಗವಾಗಿ ಇನ್ನೊಂದು ಧರ್ಮದ ಬಗ್ಗೆ ಪ್ರಚೋದನಕಾರಿ ಮಾತನಾಡಿಲ್ಲ. ಆದರೆ ತೊಗಾಡಿಯಾದಿಗಳು ಇದನ್ನು ಮಾಡುತ್ತಿದ್ದಾರಾದರೂ ಈವರೆಗೆ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಹೀಗಿರುವಾಗ ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ನ್ನು ನಿಷೇಧಿಸಲು ಹೊರಡುವ ಸರಕಾರದ ಪ್ರಯತ್ನ, ಆತನಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗದ ಕೆಲವು ಧಾರ್ಮಿಕ ಹಿತಾಸಕ್ತಿಗಳ ಹತಾಶೆಯ ಪ್ರಯತ್ನ ಎಂದೇ ನಾನು ಭಾವಿಸುತ್ತೇನೆ. </span></b><br />
<span style="color: blue; font-size: large;"><b><br /></b></span>
<b><span style="color: blue; font-size: large;">ಧಾರ್ಮಿಕ ಚಾನೆಲ್ಗಳು ಇರಬಹುದು. ಅಥವಾ ಅದನ್ನು ಸಾಮೂಹಿಕವಾಗಿ ನಿಷೇಧಿಸಬಹುದು. ಧಾರ್ಮಿಕ ಚಾನೆಲ್ಗಳು ಪ್ರತ್ಯೇಕವಾಗಿರುವುದರಿಂದ ಅದರಲ್ಲಿ ಆಸಕ್ತಿಯಿದ್ದವರಷ್ಟೇ ಅದನ್ನು ನೋಡುತ್ತಾರೆ. ನಾನಂತೂ ಒಂದೆರಡು ಬಾರಿಯಷ್ಟೇ ಆ ಚಾನೆಲ್ನ್ನು ನೋಡಿದ್ದೇನೆ. ದೇವರನ್ನು ತಲುಪುವ ದಾರಿಯನ್ನು ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;"> ಮೂಲಕ ಕಲಿಯುವ ಅಗತ್ಯವಿಲ್ಲ ಎನ್ನುವುದು ನನಗೆ ಯಾವತ್ತೋ ಮನವರಿಕೆಯಾಗಿದೆ. ಆದರೆ ಇದೀಗ ನಡೆಯುತ್ತಿರುವ ಬೆಳವಣಿಗೆ ಝಾಕಿರ್</span><span style="color: blue; font-size: large;">ನಾಯ್ಕ್</span><span style="color: blue; font-size: large;">ಗೆ ಸಿಕ್ಕಿರುವ ಪುಕ್ಕಟೆ ಜಾಹೀರಾತುಗಳೇ ಹೊರತು ಇನ್ನೇನು ಅಲ್ಲ. ನನ್ನ ಸಮಸ್ಯೆ ಇಂತಹ ಧಾರ್ಮಿಕ ಚಾನೆಲ್ಗಳಲ್ಲ. ನಾವು ದಿನ ನಿತ್ಯ ನ್ಯೂಸ್ ಚಾನೆಲ್ಗಳು ಎಂದು ನಂಬಿಕೊಂಡು ಬಂದಿರುವ ಕನ್ನಡವೂ ಸೇರಿದಂತೆ ದೇಶದ ಚಾನೆಲ್ಗಳು ಧಾರ್ಮಿಕ ವಿಷಯಗಳನ್ನು, ಮೌಢ್ಯದ ವಿಷಯಗಳನ್ನು ಹರಡುತ್ತಿರುವುದು. ಎಲ್ಲ ವರ್ಗದ ಜನರೂ ನೋಡುವ ಚಾನೆಲ್ಗಳು ಬ್ರಾಹ್ಮಣ್ಯದ ಮೌಢ್ಯಗಳನ್ನು, ವಾಸ್ತುಗಳನ್ನು, ಜ್ಯೋತಿಷ್ಯಗಳನ್ನು ತೋರಿಸಿ ಜನರನ್ನು ಮೋಸ ಗೊಳಿಸುತ್ತಿರುವುದು. ಮೊದಲು ನ್ಯೂಸ್ಚಾನೆಲ್ಗಳಲ್ಲಿರುವ ಈ ಭಯೋತ್ಪಾದಕರಿಗೆ ತಡೆ ಬೀಳಬೇಕಾಗಿದೆ. ಹಾಗೆಯೇ ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;"> ತನ್ನ ಬೋಧನೆಯಲ್ಲಿ ಭಯೋತ್ಪಾದನೆಗೆ, ಉಗ್ರಗಾಮಿಗಳಿಗೆ ಬೆಂಬಲ ನೀಡಿದ್ದು ಹೌದು ಎಂದಾದರೆ ಆತನ ಮೇಲೆ ಮೊಕದ್ದಮೆ ಹೂಡಬಹುದು. ಬಂಧಿಸಬಹುದು. ಆದರೆ ಅಂತಹ ಯಾವ ಸಾಕ್ಷಿಯೂ ಇಲ್ಲದೆ, ಬರೇ ಮಾಧ್ಯಮಗಳ ವದಂತಿಗಳನ್ನು ಮುಂದಿಟ್ಟು ಝಾಕಿರ್ </span><span style="color: blue; font-size: large;">ನಾಯ್ಕ್</span><span style="color: blue; font-size: large;">ನ್ನು ನಿಷೇಧಿಸಿದರೆ ಅದರಿಂದ ಇನ್ನಷ್ಟು ಅಪಾಯವಿದೆ. ಝಾಕಿರ್ ತನ್ನ ಅಭಿಮಾನಿಗಳನ್ನು ಆ ಮೂಲಕ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಅದು ನಡೆಯುತ್ತಿದೆ ಕೂಡ.</span></b><br />
<br /></div>
B.M.BASHEERhttp://www.blogger.com/profile/14436644887076126519noreply@blogger.com4tag:blogger.com,1999:blog-3037848766175505211.post-13691068882196054782016-05-27T09:51:00.005-07:002016-05-27T09:54:30.268-07:00ಯು ಟರ್ನ್: ತಿರುಗಿ ಹೊಡೆವ ಕರ್ಮ ಫಲ!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh6lg2rEiGuxhfPFWDb8D3q8rQCGPGEHVf1MfxhdhutzgLvmx6s93HWrK9U_NODhjCuXM9CLoP6WJ9ShPjYovIfXQvr5Q9GSjuqwH-TI_R3kaBCgOoHPrQhK8yPCZ-fAiHXNegdlwwk4W2z/s1600/u+turn.jpg" imageanchor="1" style="margin-left: 1em; margin-right: 1em;"><b><span style="color: blue; font-size: large;"><img border="0" src="https://blogger.googleusercontent.com/img/b/R29vZ2xl/AVvXsEh6lg2rEiGuxhfPFWDb8D3q8rQCGPGEHVf1MfxhdhutzgLvmx6s93HWrK9U_NODhjCuXM9CLoP6WJ9ShPjYovIfXQvr5Q9GSjuqwH-TI_R3kaBCgOoHPrQhK8yPCZ-fAiHXNegdlwwk4W2z/s1600/u+turn.jpg" /></span></b></a></div>
<span style="background-color: white; font-family: "helvetica" , "arial" , sans-serif; line-height: 19.32px;"><b><span style="color: blue; font-size: large;">‘ಯೂ ಟರ್ನ್’ ಚಿತ್ರ ನೋಡಿದೆ.</span></b></span><br />
<b><span style="color: blue; font-size: large;"><span style="background-color: white; font-family: "helvetica" , "arial" , sans-serif; line-height: 19.32px;">ಇದರ ಕುರಿತಂತೆ ಕೆಲವು ಮಾತುಗಳನ್ನು ಹಂಚಿಕೊಳ್ಳಲೇಬೇಕಾಗಿದೆ.</span><br style="background-color: white; font-family: helvetica, arial, sans-serif; line-height: 19.32px;" /><span style="background-color: white; font-family: "helvetica" , "arial" , sans-serif; line-height: 19.32px;">ಮೂರು ನಿಮಿಷದ ಒಂದು ಕಿರು ಚಿತ್ರವಾಗಬಹುದಾದ ವಸ್ತುವನ್ನು ಎರಡೂವರೆ ಗಂಟೆಯ ಥ್ರಿಲ್ಲರ್ ಚಿತ್ರವನ್ನಾಗಿಸಿದ ನಿರ್ದೇಶಕರ ಸಾಹಸಕ್ಕೆ ಭಲೇ ಎನ್ನಲೇ ಬೇಕು. ಹೌದು, ಚಿತ್ರದ ಉದ್ದೇಶವನ್ನು ಹೇಳಲು, ನಿಜವಾದ ಕತೆಯನ್ನು ಹೇಳಲು ಮೂರು ನಿಮಿಷ ಧಾರಾಳ ಸಾಕು. ಮೂರು ಪಾತ್ರಗಳನ್ನಷ್ಟೇ ಇಟ್ಟುಕೊಂಡು ಈ ಕಿರು ಚಿತ್ರವನ್ನು ಮುಗಿಸಿ ಬಿಡಬಹುದು. ಹಾಗೆಂದು ಚಿತ್ರವನ್ನು ನಿರ್ದೇಶಕ ಎಲ್ಲೂ ವಿನಾಕಾರಣ ಎಳೆದಿಲ್ಲ. ಚಿತ್ರದ ನಿರೂಪಣೆಯಲ್ಲಿ ಯಾವುದೂ ಅನಗತ್ಯ ಅನ್ನಿಸುವುದಿಲ್ಲ.</span><br style="background-color: white; font-family: helvetica, arial, sans-serif; line-height: 19.32px;" /><span style="background-color: white; font-family: "helvetica" , "arial" , sans-serif; line-height: 19.32px;">ಚಿತ್ರ ಆರಂಭದಿಂದ ಕೊನೆಯವರೆಗೂ ನಮ್ಮನ್ನು</span><span class="text_exposed_show" style="background-color: white; display: inline; font-family: "helvetica" , "arial" , sans-serif; line-height: 19.32px;"> ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.</span></span></b><br />
<b><span style="color: blue; font-size: medium;"><span class="text_exposed_show" style="background-color: white; display: inline; font-family: "helvetica" , "arial" , sans-serif; font-size: large; line-height: 19.32px;"><br />ನಾವು ದಿನ ನಿತ್ಯ, ತೀರಾ ಸಣ್ಣ ತಪ್ಪು ಎಂದು ಭಾವಿಸಿ ಮಾಡುವ ಕೃತ್ಯವನ್ನು ಇಟ್ಟುಕೊಂಡು ನಿರ್ದೇಶಕ ಸಿನಿಮಾ ಮಾಡಿದ್ದು ಅಭಿನಂದನೀಯ. ಒಂದು ಥ್ರಿಲ್ಲರ್ ಚಿತ್ರದ ಮೂಲಕವೂ ಅದ್ಭುತವಾದ ಮಾನವೀಯ ಸಂದೇಶವನ್ನು ನೀಡಬಹುದು ಎಂದು ಯೋಚಿಸಿದ ಪವನ್ ಕುಮಾರ್ ಅವರಿಗೆ ಅಭಿನಂದನೆಗಳು. ಚಿತ್ರ ಆಮಿರ್ ಖಾನ್ನ ‘ತಲಾಶ್’ನ್ನು ಎಲ್ಲೋ ಹೋಲುತ್ತದೆ. ಆದರೆ ತಲಾಶ್ ಚಿತ್ರ ಥ್ರಿಲ್ಲರ್ ಚಿತ್ರದ ಬಿಗಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು. ‘ಯೂ ಟರ್ನ್’ ಚಿತ್ರ ಆಮಿರ್ ಖಾನ್ನ ತಲಾಶ್ಗಿಂತ ಹಲವು ಪಟ್ಟು ಚೆನ್ನಾಗಿದೆ. ಕ್ಲೆೃಮಾಕ್ಸ್ನ ರಹಸ್ಯವನ್ನು ಉಳಿಸಿಕೊಳ್ಳುವಲ್ಲಿಯೂ ನಿರ್ದೇಶಕ ಯಶಸ್ವಿಯಾಗಿದ್ದಾರೆ. ಕ್ಲೆೃಮಾಕ್ಸ್ ಬಹಿರಂಗವಾಗುವಾಗ ಅದು ಇನ್ನಷ್ಟು ತೀವ್ರವಾಗಿರಬೇಕಾಗಿತ್ತು. ಇಡೀ ಚಿತ್ರದಲ್ಲಿ ಗಮನಾರ್ಹವಾದುದು, ಸಬ್ಇನ್ಸ್ಪೆಕ್ಟರ್ ನಾಯಕ್ ಪಾತ್ರದಲ್ಲಿ ರೋಜರ್ ನಾರಾಯಣ್ ಅಭಿನಯ. ಒಬ್ಬ ಸಹೃದಯಿ ಯುವ ಪೊಲೀಸ್ ವ್ಯಕ್ತಿತ್ವವನ್ನು ಅವರು ಪರಿಣಾಮಕಾರಿಯಾಗಿ ತಮ್ಮ ನಟನೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪತ್ರಕರ್ತೆ ರಚನಾ ಪಾತ್ರದಲ್ಲಿ ಶೃದ್ಧಾ ಶ್ರೀನಾಥ್ ಅಭಿನಯವೂ ಪರವಾಗಿಲ್ಲ. ರಾಧಿಕಾ ಚೇತನ್ ಅವರ ಮಾಯಾ ಪಾತ್ರ ಅಷ್ಟೇನೂ ತೀವ್ರವಾಗಿ ತಟ್ಟುವುದಿಲ್ಲ.</span></span></b><br />
<b><span style="color: blue; font-size: medium;"><span class="text_exposed_show" style="background-color: white; display: inline; font-family: "helvetica" , "arial" , sans-serif; font-size: large; line-height: 19.32px;"><br /></span></span></b>
<b><span style="color: blue; font-size: medium;"><span class="text_exposed_show" style="background-color: white; display: inline; font-family: "helvetica" , "arial" , sans-serif; font-size: large; line-height: 19.32px;"> ಪವನ್ ಕುಮಾರ್ ಅವರದು ಇದು ಮೂರನೇ ಚಿತ್ರ. ಲೈಫ್ ಇಷ್ಟೇನೆ...ಒಬ್ಬ ಯುವಕನ ಒಳಗಿನ ಪ್ರಾಯದ ತಳಮಳನ್ನು ವಿಭಿನ್ನವಾಗಿ ನಿರೂಪಿಸಿದ ಚಿತ್ರ. ಲೂಸಿಯಾ ಕುರಿತಂತೆ ಹೇಳಲೇ ಬೇಕಾಗಿಲ್ಲ. ರಾಜ್ಯದಾಚೆಗೂ ಚರ್ಚೆಗೊಳಗಾದ ಚಿತ್ರ. ಇದೀಗ ‘ಯೂ ಟರ್ನ್’ನಲ್ಲೂ ಅವರು ಯಶಸ್ವಿಯಾಗಿದ್ದಾರೆ. ಒಂದು ಚಿತ್ರದ ಗೆಲುವಿನ ಹ್ಯಾಂಗೋವರ್ನಲ್ಲಿ ಸಿಲುಕಿಕೊಳ್ಳದೇ ವಿಭಿನ್ನವಾಗಿ ಚಿತ್ರ ಮಾಡುತ್ತಾ ಹೋಗುವುದು ನಿರ್ದೇಶಕನ ಪಾಲಿಗೆ ಒಂದು ಸವಾಲೇ ಸರಿ. ಈ ಸವಾಲನ್ನು ಪವನ್ ಕುಮಾರ್ ಗೆದ್ದಿರುವುದು ನೆಮ್ಮದಿಯ ವಿಷಯ. ಇವರಿಂದ ಕನ್ನಡ ಚಿತ್ರರಂಗ ಇನ್ನಷ್ಟು ನಿರೀಕ್ಷಿಸುತ್ತಿದೆ.</span></span></b></div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-81886663158432399602016-04-28T06:56:00.002-07:002016-04-28T06:56:22.449-07:00ಆದರ್ಶ ಮತ್ತು ಇತರ ಕತೆಗಳು<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhWlB1Qm5LR9CoMB1RXH4x4pPmna_UPCZh6gm-nnAyasPH59KO8PE7Ufnqjpc0n9DJtUpsQnwFMRKVu4N7EavQirkmllBPlr_wOwLqJ3LJA3M1MQ9NY6Wb7OaSxNfrpasXN0En4_p-P0FTB/s1600/paint.jpg" imageanchor="1" style="margin-left: 1em; margin-right: 1em;"><span style="color: blue; font-size: large;"><b><img border="0" height="320" src="https://blogger.googleusercontent.com/img/b/R29vZ2xl/AVvXsEhWlB1Qm5LR9CoMB1RXH4x4pPmna_UPCZh6gm-nnAyasPH59KO8PE7Ufnqjpc0n9DJtUpsQnwFMRKVu4N7EavQirkmllBPlr_wOwLqJ3LJA3M1MQ9NY6Wb7OaSxNfrpasXN0En4_p-P0FTB/s320/paint.jpg" width="286" /></b></span></a></div>
<span style="color: purple; font-size: large;"><b>ಯಾವಾಗ?</b></span><br />
<span style="color: blue; font-size: large;"><b>ಇಬ್ಬರು ನಟ ನಟಿಯರು ಮದುವೆಯಾದರು.</b></span><br />
<span style="color: blue; font-size: large;"><b>ಮಾಧ್ಯಮದವರು ಪ್ರಶ್ನಿಸಿದರು.</b></span><br />
<span style="color: blue; font-size: large;"><b>‘‘ಶುಭಾಶಯಗಳು ಸಾರ್...ಡೈವರ್ಸ್ ಯಾವಾಗ ಇಟ್ಕೊಂಡಿದ್ದೀರಾ?</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಗಾಬರಿ</b></span><br />
<span style="color: blue; font-size: large;"><b>‘‘ಯಾರೇ ಅದು ನಿನ್ನೊಟ್ಟಿಗೊಬ್ಬ ಹುಡುಗ’’</b></span><br />
<span style="color: blue; font-size: large;"><b>ಅಜ್ಜಿ ಗಾಬರಿಯಿಂದ ಕೇಳಿದಳು.</b></span><br />
<span style="color: blue; font-size: large;"><b>‘‘ಗಾಬರಿ ಪಡಬೇಡ...ನನ್ನ ಕ್ಲಾಸ್ಮೇಟ್...’’</b></span><br />
<span style="color: blue; font-size: large;"><b>‘‘ಗಾಬರಿ ನಿನ್ನ ಬಗ್ಗೆ ಅಲ್ಲ, ಪಾಪ ಆ ಮುಗ್ಧ ಹುಡುಗನ ಬಗ್ಗೆ...’’ ಅಜ್ಜಿ ಗೊಣಗುತ್ತಾ ಒಳ ಹೋದಳು. </b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ರಕ್ತ</b></span><br />
<span style="color: blue; font-size: large;"><b>ನಿನ್ನೆ ಸಂಜೆ ಆ ಬೀದಿಯಲ್ಲಿ ಗಲಭೆ ನಡೆದಿತ್ತು.</b></span><br />
<span style="color: blue; font-size: large;"><b>ಬೆಳ್ಳಂಬೆಳಗ್ಗೆ ಎಂದಿನಂತೆ ಕಸ ಗುಡಿಸುವ ಹೆಂಗಸು ರಸ್ತೆ ಗುಡಿಸ ತೊಡಗಿದಳು.</b></span><br />
<span style="color: blue; font-size: large;"><b>ಗುಡಿಸುತ್ತಾ ಹೋದಂತೆ ರಸ್ತೆಯ ಅಲ್ಲಲ್ಲಿ ರಕ್ತ ಚೆಲ್ಲಿತ್ತು.</b></span><br />
<span style="color: blue; font-size: large;"><b>ಅದ ನೋಡಿ ಅವಳ ಕಸಬರಿಕೆ ಸ್ತಬ್ಧವಾಯಿತು.</b></span><br />
<span style="color: blue; font-size: large;"><b>ನಿನ್ನೆ ರಾತ್ರಿಯಿಂದ ಅವಳ ಮಗ ಮನೆಗೆ ಬಂದಿರಲಿಲ್ಲ.</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಹಕ್ಕು</b></span><br />
<span style="color: blue; font-size: large;"><b>‘‘ಅಷ್ಟು ಜೋರಾಗಿ ನಗಬೇಡವೆ?</b></span><br />
<span style="color: blue; font-size: large;"><b>‘‘ಯಾಕಮ್ಮ...’’</b></span><br />
<span style="color: blue; font-size: large;"><b>‘‘ಜೋರಾಗಿ ನಗುವುದು ಹುಡುಗರ ಹಕ್ಕು. ಬೇಕಾದರೆ ಜೋರಾಗಿ ಅಳು. ಅದು ನಿನ್ನ ಹಕ್ಕು’’</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ದನ</b></span><br />
<span style="color: blue; font-size: large;"><b>ಬಡ ಮಗು ತಾಯಿಯಲ್ಲಿ ಅಚ್ಚರಿಯಿಂದ ಕೇಳಿತು ‘‘ದನ ಹಾಲು ಕೊಡತ್ತಂತೆ ಹೌದೇನಮ್ಮ?’’</b></span><br />
<span style="color: blue; font-size: large;"><b>ತಾಯಿ ಒಲೆ ಊದುತ್ತಾ ಹೇಳಿದಳು ‘‘ಶ್ರೀಮಂತರಿಗೆ ದನ ಹಾಲು ಕೊಡತ್ತೆ. ಬಡವರಿಗೆ ಮಾಂಸ ಕೊಡತ್ತೆ...ರಾಜಕಾರಣಿಗಳಿಗೆ ಓಟು ಕೊಡತ್ತೆ ಕಂದಾ...’’</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಆದರ್ಶ</b></span><br />
<span style="color: blue; font-size: large;"><b>‘‘ಅವರದು ಅಂತರ್ಜಾತಿ ವಿವಾಹವಂತೆ...’’ ಅವನು ಹೇಳಿದ.</b></span><br />
<span style="color: blue; font-size: large;"><b>‘‘ಛೆ...ಲವ್ ಜಿಹಾದ್...’’ ಅವನು ಆಕ್ರೋಶಗೊಂಡ.</b></span><br />
<span style="color: blue; font-size: large;"><b>‘‘ಹುಡುಗಿ ಆ ಧರ್ಮದವಳಂತೆ...ಹುಡುಗ ನಮ್ಮವನಂತೆ...’’</b></span><br />
<span style="color: blue; font-size: large;"><b>‘‘ಓಹ್ ಆದರ್ಶ ವಿವಾಹ...’’ ಅವನು ಸಂಭ್ರಮ ಪಟ್ಟ.</b></span><br />
<br /></div>
B.M.BASHEERhttp://www.blogger.com/profile/14436644887076126519noreply@blogger.com0tag:blogger.com,1999:blog-3037848766175505211.post-28687513131923633442016-04-02T10:42:00.002-07:002016-04-07T04:34:05.091-07:00ಘೋಷಣೆ...!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEglFNN4p_ZRN1DWrJsI1WujcSzBsHMDl9Bv03mcIRVD8QAx19u8gHlyGYfaFid5uvIzo70qcnTJ95NSmXKMrNv0XLZleA1iXhcTjUx0foy2aX2zgvM7lOhSzsmy_t-R4zrccFW21gjyW5j8/s1600/wound.jpg" imageanchor="1" style="margin-left: 1em; margin-right: 1em;"><span style="font-size: large;"><img border="0" src="https://blogger.googleusercontent.com/img/b/R29vZ2xl/AVvXsEglFNN4p_ZRN1DWrJsI1WujcSzBsHMDl9Bv03mcIRVD8QAx19u8gHlyGYfaFid5uvIzo70qcnTJ95NSmXKMrNv0XLZleA1iXhcTjUx0foy2aX2zgvM7lOhSzsmy_t-R4zrccFW21gjyW5j8/s1600/wound.jpg" /></span></a></div>
<b style="color: blue;"><span style="font-size: large;">‘‘ನಿನ್ನ ಹೆಸರೇನು?’’</span></b><br />
<span style="color: blue; font-size: large;"><b>ಹುಡುಗ ಮೌನವಾಗಿದ್ದ.</b></span><br />
<span style="color: blue; font-size: large;"><b>‘‘ತಲೆಯ ಟೋಪಿ ನೋಡಿದಾಗಲೇ ನಮಗೆ ನಿನ್ನ ಹೆಸರು ಗೊತ್ತಾಯಿತು...ಹೇಳು ಭಾರತ ಮಾತಾಕಿ ಜೈ....’’</b></span><br />
<span style="color: blue; font-size: large;"><b>ಹುಡುಗ ಅವರನ್ನೇ ನೋಡಿದ.</b></span><br />
<span style="color: blue; font-size: large;"><b>‘‘ಹೇಳು ‘ಭಾರತ ಮಾತಾಕಿ ಜೈ...ವಂದೇ ಮಾತರಂ...’’</b></span><br />
<span style="color: blue; font-size: large;"><b>ಹುಡುಗ ಏನನ್ನೋ ಹೇಳಲು ಬಾಯಿ ತೆರೆದ.</b></span><br />
<span style="color: blue; font-size: large;"><b>ಕೇಸರಿ ನಾಮಧಾರಿಯೊಬ್ಬ ಛಟೀರನೇ ಅವನ ಕೆನ್ನೆಗೆ ಬಾರಿಸಿದ ‘‘ಭಾರತ ಮಾತಾಕೀ ಜೈ ಎನ್ನಲು ನಿನಗೆ ಕಷ್ಟವಾಗುವುದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು...ಇಲ್ಲಿ ಯಾಕೆ ಬಾಕಿಯಾಗಿದ್ದೀಯ...ಅಲ್ಲಿ ನಿನಗೆ ಬೇಕಾದ ಘೋಷಣೆ ಕೂಗಬಹುದು...ಹೇಳು ‘ಭಾರತ್ ಮಾತಾಕಿ ಜೈ...’’</b></span><br />
<span style="color: blue; font-size: large;"><b>ಹುಡುಗ ಏನೋ ಹೇಳಲು ಕೈ ಮುಂದೆ ಮಾಡಿದ.</b></span><br />
<span style="color: blue; font-size: large;"><b>‘‘ನೋಡೋ...ಕೈ ಮೇಲೆ ಮಾಡುತ್ತಾನೆ...’’ ಇನ್ನೊಬ್ಬ ಇನ್ನೊಂದು ಕೆನ್ನೆಗೆ ಛಟೀರನೇ ಬಾರಿಸಿದ.</b></span><br />
<span style="color: blue; font-size: large;"><b> ಅಷ್ಟರಲ್ಲಿ ಜನ ಸೇರಿದರು. ಒಬ್ಬರು ಸದ್ಗೃಹಸ್ಥರು ಮಧ್ಯ ಪ್ರವೇಶಿಸಿದರು.</b></span><br />
<span style="color: blue; font-size: large;"><b> ‘‘ನೋಡಿ...ನೀವು ಹೀಗೆ ವ್ಯವಹರಿಸಿದರೆ ಹೇಗೆ? ಅವರ ಮನವೊಲಿಸುವುದು ಮುಖ್ಯ. ಮಾತಿಗೆ ಮುಂಚೆ ತೋಳ್ಬಲ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಯಲ್ಲ. ಮಹಾತ್ಮಗಾಂಧೀಜಿಯ ನೆಲ. ನೀವು ಪಕ್ಕಕ್ಕೆ ಸರಿಯಿರಿ. ನಾನು ಅವನಿಗೆ ವಿವರಿಸುತ್ತೇನೆ...ನೋಡಪ್ಪ ಭಾರತ ಮಾತೆ ನಮ್ಮೆಲ್ಲರ ತಾಯಿ. ನಮಗೆ ಅನ್ನಕೊಡುವ ತಾಯಿ ನೆಲ ಇದು. ಇದಕ್ಕೆ ಜೈ ಎನ್ನುವುದು ನಮ್ಮ ಕರ್ತವ್ಯ. ನಮ್ಮ ತಾಯಿಗೆ ನಾವು ನಮಿಸದೆ ಇನ್ಯಾರಿಗೆ ನಮಿಸಬೇಕು...? ಹೇಳು ...ಭಾರತ್ ಮಾತಾಕಿ ಜೈ ಎಂದು ಜೋರಾಗಿ ಕೂಗಿ ನಿನ್ನ ದೇಶಪ್ರೇಮವನ್ನು ಇಲ್ಲಿರುವ ಎಲ್ಲರಿಗೂ ಸಾಬೀತು ಪಡಿಸು...ನಾವು ಕೂಡ ನಿನ್ನ ಜೊತೆಗೆ ಜೋರಾಗಿ ಜೈ ಎಂದು ಕೂಗುತ್ತೇವೆ....’’</b></span><br />
<span style="color: blue; font-size: large;"><b>ಹುಡುಗ ಆ ಗೃಹಸ್ಥರನ್ನೇ ದಿಟ್ಟಿಸಿ ನೋಡಿದ. ಅವನ ಕಣ್ಣಂಚಲ್ಲಿ ಹನಿ ತುಳುಕಿತು. ಅವನು ಏನೋ ಹೇಳಲು ಪ್ರಯತ್ನಿಸಿದ. ಕೇಸರಿ ಶಾಲು ಹೊದ್ದವನೊಬ್ಬ ಗೃಹಸ್ಥರನ್ನು ಅಣಕಿಸಿದ ‘‘ನೋಡಿ...ನಿಮ್ಮನ್ನು ಅವನು ಹೇಗೆ ಕೆಕ್ಕರಿಸಿ ನೋಡುತ್ತಿದ್ದಾನೆ...ನಿಮಗೆ ಹಾಗೆ ಆಗಬೇಕು. ನಿಮ್ಮಿಂದಲೇ ಅವರು ಕೊಬ್ಬಿರುವುದು. ನಾನು ಇನ್ನೊಂದು ಏಟು ಬಿಟ್ಟಿದ್ದರೆ ಅವನು ಈಗಾಗಲೇ ‘ಭಾರತ್ ಮಾತಾಕಿ ಜೈ’ ಎಂದು ಘೋಷಿಸಿಯೂ ಆಗುತ್ತಿತ್ತು...’’</b></span><br />
<span style="color: blue; font-size: large;"><b>ಅಷ್ಟರಲ್ಲಿ ಹಣೆಯಲ್ಲಿ ಅಷ್ಟು ದೊಡ್ಡ ಕುಂಕುಮವನ್ನೂ, ಕುತ್ತಿಗೆಯಲ್ಲಿ ಇಷ್ಟು ಭಾರದ ತಾಳಿಯನ್ನು ಧರಿಸಿದ ಸದ್ಗೃಹಿಣಿಯೊಬ್ಬರು ಆತಂಕದಿಂದ ಕೇಳಿದರು ‘‘ಅದೇನು ಅವನ ಕೈಯಲ್ಲಿ...ಚೀಲ ನೋಡಿ...ಸ್ವಲ್ಪ ತನಿಖೆ ಮಾಡಿ...ಮಕ್ಕಳ ಕಿವಿಗೆ ಜಿಹಾದ್ ತುಂಬಿಸುತ್ತಾರಂತೆ...ಈಗ ಯಾರನ್ನೂ ನಂಬಲು ಬರುವುದಿಲ್ಲವಲ್ಲ...’’</b></span><br />
<span style="color: blue; font-size: large;"><b>‘‘ಹೌದು... ಹೌದು...’’</b></span><br />
<span style="color: blue; font-size: large;"><b>ಯಾರೋ ಅವನ ಚೀಲ ಎಳೆದುಕೊಂಡರು. ಚೀಲದಲ್ಲಿ ಪುಸ್ತಕ. ಪುಸ್ತಕದಲ್ಲಿ ಅರಬೀ ಅಕ್ಷರಗಳು...‘‘ಇದೇನು ಪುಸ್ತಕ..ಅರ್ಥವಾಗದ ಭಾಷೆಯಲ್ಲಿ ಬರೆದಿದೆ...’’ ಒಬ್ಬ ಕೇಳಿದ.</b></span><br />
<span style="color: blue; font-size: large;"><b>‘‘ಅರ್ಥವಾಗದ ಭಾಷೆಯಲ್ಲಿ ಮತ್ತೇನಿರುತ್ತದೆ? ಜಿಹಾದ್...ದೇಶದ್ರೋಹ...’’</b></span><br />
<span style="color: blue; font-size: large;"><b>ಯಾರೋ ಹುಡುಗನ ಹೊಟ್ಟೆಗೆ ತುಳಿದರು. ಹುಡುಗ ಚಿಟಾರನೇ ಚೀರುತ್ತಾ ಅಷ್ಟು ದೂರ ಬಿದ್ದ.</b></span><br />
<span style="color: blue; font-size: large;"><b>ಸದ್ಗೃಹಸ್ಥ ಹೇಳಿದ ‘‘ಶಾಂತಿ...ಶಾಂತಿ...ನೀವು ಅವಸರ ಮಾಡಬೇಡಿ...ಅವನು ನನ್ನ ಮಾತನ್ನು ಆಲಿಸುತ್ತಿದ್ದ. ಇನ್ನೇನು ಘೋಷಣೆ ಕೂಗುವುದರಲ್ಲಿದ್ದ. ಅವರೂ ಕೂಡ ನಮ್ಮಂತೆಯೇ ಮನುಷ್ಯರು ತಾನೆ....ಏನೋ ಕೆಲವರು ಸಂಸ್ಕಾರದ ಕಾರಣದಿಂದ ದಾರಿ ತಪ್ಪಿರುತ್ತಾರೆ...ನಾವು ಸರಿ ಪಡಿಸಬೇಕು....ಹೇಳಪ್ಪ...ಘೋಷಣೆ ಕೂಗಿ ಒಮ್ಮೆ ನಿನ್ನ ದೇಶಪ್ರೇಮವನ್ನು ನಮಗೆಲ್ಲ ಸಾಬೀತು ಮಾಡಿ ಬಿಡು...’’</b></span><br />
<span style="color: blue; font-size: large;"><b>ಹುಡುಗ ತಡವರಿಸುತ್ತಾ ಎದ್ದವನು ಚದುರಿ ಬಿದ್ದ ಪುಸ್ತಕವನ್ನು ಎತ್ತಿಕೊಂಡು ಕಣ್ಣಿಗೊತ್ತಿದ.</b></span><br />
<span style="color: blue; font-size: large;"><b>‘‘ನೋಡಿ...ನೋಡಿ ಅವನನ್ನು...ಭಾರತ್ ಮಾತಾಕಿ ಜೈ ಹೇಳು ಎಂದರೆ ಅವನ ಉದ್ಧಟತನ ನೋಡಿ...ನಮ್ಮನ್ನು ಅಣಕಿಸಲೆಂದೇ .ಆ ಪುಸ್ತಕವನ್ನು ಕಣ್ಣಿಗೊತ್ತುತ್ತಿದ್ದಾನೆ...’’ ಯಾರೋ ತೋರಿಸಿದರು.</b></span><br />
<span style="color: blue; font-size: large;"><b>ಒಬ್ಬ ಅವನನ್ನು ಎತ್ತಿ ಕುಕ್ಕಿದ. ಇನ್ನೊಬ್ಬ ಅವನ ಬಟ್ಟೆಯನ್ನು ಹರಿದ. ಎಲ್ಲೆಲ್ಲಿಂದಲೂ ತಟಪಟನೆ ಏಟುಗಳ ಮಳೆ. ಅವನ ಹಣೆಯಲ್ಲಿ ರಕ್ತ ಒಸರಿತು.</b></span><br />
<span style="color: blue; font-size: large;"><b>ಒಟ್ಟಿನಲ್ಲಿ ಒಂದು ದೇಶಪ್ರೇಮದ ಘೋಷಣೆಯನ್ನು ಅವನಿಂದ ಹೊರಡಿಸಲು ಅವರೆಲ್ಲ ಹರ ಸಾಹಸ ಪಡುತ್ತಿದ್ದರು. ಒಂದು ರೀತಿ ನೋಡಿದರೆ ಅವರೆಲ್ಲ ಸುಸ್ತಾಗಿದ್ದರು. ಆ ಹುಡುಗನ ಮುಂದೆ ಅಸಹಾಯಕರಾಗಿದ್ದರು. ಆ ಅಸಹಾಯಕತೆ, ಹತಾಶೆ ಅವರನ್ನು ಇನ್ನಷ್ಟು ಕ್ರೂರಿಗಳನ್ನಾಗಿಸುತ್ತಿತ್ತು.</b></span><br />
<span style="color: blue; font-size: large;"><b>‘‘ಹೇಳುತ್ತೀಯ ಇಲ್ಲವಾ?’’ ನಾಮಧಾರಿ ಕೊನೆಯ ಅವಕಾಶ ಎಂಬಂತೆ ಅಬ್ಬರಿಸಿದ. ಅದೆಲ್ಲಿತ್ತೋ, ಅವನ ಕೈಯಲ್ಲಿ ಚೂರಿಯೊಂದು ಪಳಪಳನೇ ಹೊಳೆಯುತ್ತಿತ್ತು. ಹುಡುಗ ಮಂಜುಗಣ್ಣಿನಿಂದ ಆ ಚೂರಿಯನ್ನೇ ನೋಡುತ್ತಿದ್ದ. </b></span><br />
<span style="color: blue; font-size: large;"><b>ನಾಮಧಾರಿಯ ಕೈಯಲ್ಲಿ ಚೂರಿ ಕಂಡದ್ದೇ, ನೆರೆದ ಸದ್ ಗೃಹಸ್ಥರು, ಸುಸಂಸ್ಕೃತ ಗೃಹಿಣಿಯರೆಲ್ಲ ಅಲ್ಲಿಂದ ಜಾಗ ಖಾಲಿ ಮಾಡತೊಡಗಿದರು. ಜನರೆಲ್ಲ ಚದುರಿ ಹೋಗುತ್ತಿರುವುದು ನಾಮಧಾರಿಯನ್ನು ಕೆರಳಿಸಿತ್ತು. ಅವನು ಚೂರಿಯನ್ನು ಹುಡುಗನ ಹೊಟ್ಟೆಗೆ ಇಳಿಸಿಯೇ ಬಿಟ್ಟ. ಹುಡುಗ ವಿಲ ವಿಲ ಒದ್ದಾಡುತ್ತಿದ್ದಂತೆಯೇ ನಾಮಧಾರಿ ಸಹಿತ ಎಲ್ಲರೂ ಅಲ್ಲಿಂದ ಕರಗಿದರು. ಅಷ್ಟರಲ್ಲಿ ಪೊಲೀಸ್ ಜೀಪೊಂದು ಬಂತು. ಅಂಬ್ಯುಲೆನ್ಸ್ ಸದ್ದು ಮಾಡತೊಡಗಿತು.</b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b>ಮಹಿಳೆಯೊಬ್ಬಳು ಚೀರುತ್ತಲೇ ಸರಕಾರಿ ಅಸ್ಪತ್ರೆಯ ಹೊರಗೆ, ಒಳಗೆ ಓಡಾಡುತ್ತಿದ್ದಳು.</b></span><br />
<span style="color: blue; font-size: large;"><b>ಪೊಲೀಸರು ಕೇಳಿದರು ‘‘ಆ ಹುಡುಗನಿಗೆ ನೀನೇನಾಗಬೇಕಮ್ಮ...?’’</b></span><br />
<span style="color: blue; font-size: large;"><b>‘‘ನನ್ನ ಮಗ ಕಣಪ್ಪ....ಮದ್ರಸಕ್ಕೆಂದು ಹೋಗಿದ್ದ ಕಣಪ್ಪ...ಅಯ್ಯೋ ಅವನಿಗೆ ಚೂರಿಯಿಂದ ಇರಿದು ಬಿಟ್ಟಿದ್ದಾರಪ್ಪ....’’</b></span><br />
<span style="color: blue; font-size: large;"><b>‘‘ನೋಡಮ್ಮ ನಿಮ್ಮ ಮಗನ ಮೇಲೆ ಕೇಸು ದಾಖಲಾಗಿದೆ...’’ ಪೊಲೀಸರು ಹೇಳಿದರು.</b></span><br />
<span style="color: blue; font-size: large;"><b>ಮಹಿಳೆ ಸ್ತಬ್ಧಳಾಗಿ ಪೊಲೀಸರನ್ನೇ ನೋಡತೊಡಗಿದಳು.</b></span><br />
<span style="color: blue; font-size: large;"><b>‘‘ದೂರಿನ ಪ್ರಕಾರ ನಿನ್ನ ಮಗ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಲು ನಿರಾಕರಿಸಿದ್ದನಂತೆ....ನಿನ್ನ ಮಗನ ಮೇಲೆ ದೇಶದ್ರೋಹದ ಕೇಸು ದಾಖಲಾಗಿದೆ...’’ ಪೊಲೀಸ್ ಸಿಬ್ಬಂದಿ ಹೇಳಿದ.</b></span><br />
<span style="color: blue; font-size: large;"><b>ಮಹಿಳೆ ಮತ್ತೆ ತಲೆ ಚಚ್ಚಿ ರೋದಿಸತೊಡಗಿದಳು</b></span><br />
<span style="color: blue; font-size: large;"><b> ‘‘ನನ್ನ ಮಗ ಹುಟ್ಟು ಮೂಗ ಕಣಪ್ಪ...ಹುಟ್ಟಿದಂದಿನಿಂದ ಈವರೆಗೆ ಒಂದು ಮಾತೂ ಆಡಿದವನಲ್ಲ ಕಣಪ್ಪ...ಬಾಯಿ ಬಾರದ ನನ್ನ ಮಗನಿಗೇ ಚೂರಿಯಿಂದ ಇರಿದರು ಕಣಪ್ಪ.....’’</b></span><br />
<span style="color: blue; font-size: large;"><b>ಪೊಲೀಸರು ಅರೆಕ್ಷಣ ಮೌನವಾದರು. ಬಳಿಕ ‘‘ನೋಡೋಣ...ಅದು ನಿಜ ಅಂತ ಸಾಬೀತಾದರೆ ನಿನ್ನ ಮಗನನ್ನು ಬಿಟ್ಟು ಬಿಡುತ್ತೇವೆ...ನ್ಯಾಯ ದೇವತೆ ಕೈ ಬಿಡುವುದಿಲ್ಲ. ಚಿಂತೆ ಮಾಡಬೇಡ...ಬಾಯಿ ಬಾರದವರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುವ ಅಗತ್ಯವಿಲ್ಲ...ನಿನ್ನ ಮಗನ ಮೇಲಿನ ಕೇಸು ಒಂದೆರಡು ತಿಂಗಳಲ್ಲೇ ಬಿದ್ದು ಹೋಗುತ್ತದೆ...ಹೆದರಬೇಡ’’ ಎಂದು ಮಹಿಳೆಯನ್ನು ಸಮಾಧಾನಿಸತೊಡಗಿದರು.</b></span><br />
<span style="color: blue; font-size: large;"><b>ಅಷ್ಟರಲ್ಲಿ ಅಲ್ಲಿಗೆ ಪ್ರವೇಶಿಸಿದ ವೈದ್ಯರು ಮಹಿಳೆಯ ಮುಂದೆ ಘೋಷಿಸಿದರು ‘‘ನಿನ್ನ ಮಗನನ್ನು ಬದುಕಿಸಲಾಗಲಿಲ್ಲ. ರಕ್ತ ತುಂಬಾ ಹೋಗಿತ್ತು. ಆತ ಸತ್ತಿದ್ದಾನೆ. ಹೆಣ ಸಾಗಿಸುವ ವ್ಯವಸ್ಥೆಯನ್ನು ಆದಷ್ಟು ಬೇಗ ಮಾಡು’’</b></span></div>
B.M.BASHEERhttp://www.blogger.com/profile/14436644887076126519noreply@blogger.com1